<p><strong>ನವದೆಹಲಿ:</strong> ಸಬ್ಸಿಡಿ ದರದ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ಗಳ ಪೂರೈಕೆ ಮಿತಿಯನ್ನು ವರ್ಷಕ್ಕೆ 6ಕ್ಕೆ ನಿಗದಿಗೊಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಪೆಟ್ರೊಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯವು ಪ್ರಮಾದ ಎಸಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಸ್ಥಾಯಿ ಸಮಿತಿಯ ಸದಸ್ಯರಿಗೆ ಕ್ಷಮಾಪಣೆ ಪತ್ರವೊಂದನ್ನು ಬರೆದಿದೆ.<br /> <br /> ಮಂಗಳವಾರ ನಡೆಯಲಿರುವ ಪೆಟ್ರೊಲಿಯಂ ಹಾಗೂ ನೈಸರ್ಗಿಕ ಅನಿಲ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಪತ್ರದ ವಿಚಾರವೂ ಚರ್ಚೆಗೆ ಬರಲಿದೆ. ಮಂಗಳವಾರ ಸಭೆ ನಡೆಯವುದನ್ನು ಸಮಿತಿಯ ಅಧ್ಯಕ್ಷರೂ ಆದ ಕಾಂಗ್ರೆಸ್ ಸಂಸದ ವಿ. ಅರುಣ ಕುಮಾರ್ ಖಚಿತಪಡಿಸಿದ್ದಾರೆ. <br /> <br /> ಸಬ್ಸಿಡಿ ದರದ ಸಿಲಿಂಡರ್ ಮಿತಿಯನ್ನು ವರ್ಷಕ್ಕೆ 6ಕ್ಕೆ ನಿಗದಿಗೊಳಿಸಿ ಸಚಿವಾಲಯ ಇತ್ತೀಚೆಗೆ ಜಾಹೀರಾತು ಹೊರಡಿಸಿದ್ದು, ಇದು ಸ್ಥಾಯಿ ಸಮಿತಿ ಶಿಫಾರಸಿಗೆ ವ್ಯತಿರಿಕ್ತವಾಗಿತ್ತು. <br /> <br /> <strong>ಯಾಕಿ ಕ್ಷಮಾಪಣೆ ಪತ್ರ ?:</strong> ವಾರ್ಷಿಕ ರೂಪಾಯಿ 6 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಆದಾಯ ಇರುವ ಕುಟುಂಬಗಳಿಗೆ ಮಾತ್ರ ಸಬ್ಸಿಡಿ ದರದ ಸಿಲಿಂಡರ್ಗಳನ್ನು ಮಿತಿಗೊಳಿಸಬೇಕು ಎಂದು ಸ್ಥಾಯಿ ಸಮಿತಿ ಸಲಹೆ ನೀಡಿತ್ತು. ಆದರೆ ಸರ್ಕಾರ ಇದನ್ನು ಸರಿಯಾಗಿ ಗಮನಿಸದೆ ಎಲ್ಪಿಜಿ ಹೊಂದಿರುವ ಎಲ್ಲ ವರ್ಗದವರಿಗೂ ಇದನ್ನು ಅನ್ವಯಿಸಿ ಜಾಹೀರಾತು ಹೊರಡಿಸಿ ಪ್ರಮಾದ ಎಸಗಿದೆ ಎಂದು ಸಮಿತಿಯ ಸದಸ್ಯರೂ ಆದ ಸಿಪಿಎಂ ಸಂಸದ ತಪನ್ ಸೇನ್ ತಿಳಿಸಿದ್ದಾರೆ.<br /> <br /> ಸಿಲಿಂಡರ್ ಮಿತಿಗೊಳಿಸುವ ಸರ್ಕಾರದ ಈ ನಿರ್ಧಾರ ವಿರೋಧ ಪಕ್ಷಗಳ ತೀವ್ರ ಟೀಕೆಗೆ ಅಷ್ಟೆ ಅಲ್ಲ, ಕಾಂಗ್ರೆಸ್ ಪಕ್ಷದ ಒಳಗಡೆಯೂ ಅಸಮಾಧಾನಕ್ಕೆ ಕಾರಣವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸಬ್ಸಿಡಿ ದರದ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ಗಳ ಪೂರೈಕೆ ಮಿತಿಯನ್ನು ವರ್ಷಕ್ಕೆ 6ಕ್ಕೆ ನಿಗದಿಗೊಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಪೆಟ್ರೊಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯವು ಪ್ರಮಾದ ಎಸಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಸ್ಥಾಯಿ ಸಮಿತಿಯ ಸದಸ್ಯರಿಗೆ ಕ್ಷಮಾಪಣೆ ಪತ್ರವೊಂದನ್ನು ಬರೆದಿದೆ.<br /> <br /> ಮಂಗಳವಾರ ನಡೆಯಲಿರುವ ಪೆಟ್ರೊಲಿಯಂ ಹಾಗೂ ನೈಸರ್ಗಿಕ ಅನಿಲ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಪತ್ರದ ವಿಚಾರವೂ ಚರ್ಚೆಗೆ ಬರಲಿದೆ. ಮಂಗಳವಾರ ಸಭೆ ನಡೆಯವುದನ್ನು ಸಮಿತಿಯ ಅಧ್ಯಕ್ಷರೂ ಆದ ಕಾಂಗ್ರೆಸ್ ಸಂಸದ ವಿ. ಅರುಣ ಕುಮಾರ್ ಖಚಿತಪಡಿಸಿದ್ದಾರೆ. <br /> <br /> ಸಬ್ಸಿಡಿ ದರದ ಸಿಲಿಂಡರ್ ಮಿತಿಯನ್ನು ವರ್ಷಕ್ಕೆ 6ಕ್ಕೆ ನಿಗದಿಗೊಳಿಸಿ ಸಚಿವಾಲಯ ಇತ್ತೀಚೆಗೆ ಜಾಹೀರಾತು ಹೊರಡಿಸಿದ್ದು, ಇದು ಸ್ಥಾಯಿ ಸಮಿತಿ ಶಿಫಾರಸಿಗೆ ವ್ಯತಿರಿಕ್ತವಾಗಿತ್ತು. <br /> <br /> <strong>ಯಾಕಿ ಕ್ಷಮಾಪಣೆ ಪತ್ರ ?:</strong> ವಾರ್ಷಿಕ ರೂಪಾಯಿ 6 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಆದಾಯ ಇರುವ ಕುಟುಂಬಗಳಿಗೆ ಮಾತ್ರ ಸಬ್ಸಿಡಿ ದರದ ಸಿಲಿಂಡರ್ಗಳನ್ನು ಮಿತಿಗೊಳಿಸಬೇಕು ಎಂದು ಸ್ಥಾಯಿ ಸಮಿತಿ ಸಲಹೆ ನೀಡಿತ್ತು. ಆದರೆ ಸರ್ಕಾರ ಇದನ್ನು ಸರಿಯಾಗಿ ಗಮನಿಸದೆ ಎಲ್ಪಿಜಿ ಹೊಂದಿರುವ ಎಲ್ಲ ವರ್ಗದವರಿಗೂ ಇದನ್ನು ಅನ್ವಯಿಸಿ ಜಾಹೀರಾತು ಹೊರಡಿಸಿ ಪ್ರಮಾದ ಎಸಗಿದೆ ಎಂದು ಸಮಿತಿಯ ಸದಸ್ಯರೂ ಆದ ಸಿಪಿಎಂ ಸಂಸದ ತಪನ್ ಸೇನ್ ತಿಳಿಸಿದ್ದಾರೆ.<br /> <br /> ಸಿಲಿಂಡರ್ ಮಿತಿಗೊಳಿಸುವ ಸರ್ಕಾರದ ಈ ನಿರ್ಧಾರ ವಿರೋಧ ಪಕ್ಷಗಳ ತೀವ್ರ ಟೀಕೆಗೆ ಅಷ್ಟೆ ಅಲ್ಲ, ಕಾಂಗ್ರೆಸ್ ಪಕ್ಷದ ಒಳಗಡೆಯೂ ಅಸಮಾಧಾನಕ್ಕೆ ಕಾರಣವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>