<p>ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ಇಡಗುಂಜಿಗೆ ಹೋಗುವ ದಾರಿ ಮಧ್ಯೆ ಅರಣ್ಯ ಇಲಾಖೆ `ವಿನಾಯಕ ಧನ್ವಂತರಿ ವನ~ ವನ್ನು ನಿರ್ಮಿಸಿದ್ದು ತಾಲ್ಲೂಕಿನ ಪ್ರವಾಸಿ ತಾಣಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ.<br /> <br /> ಹೊನ್ನಾವರದಿಂದ 10 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 17ರ ಪಕ್ಕದಲ್ಲಿರುವ ಈ ವನ ತನ್ನ ಸೌಂದರ್ಯ ಹಾಗೂ ವೈಶಿಷ್ಠ್ಯಗಳಿಂದ ಗಮನ ಸೆಳೆದಿದ್ದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಡಿ.ಉದಪುಡಿ ಅವರ ದೂರದೃಷ್ಟಿಗೆ ಮತ್ತೊಂದು ಸಾಕ್ಷಿಯಾಗಿದೆ.<br /> <br /> ಕಟ್ಟಿಗೆ ಡಿಪೋ ಒಳಗೊಂಡ ವಿಸ್ತಾರವಾದ ಕಿರು ಅರಣ್ಯ ಪ್ರದೇಶದ ಒಂದು ಭಾಗವನ್ನು ವನ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದ್ದು ಸುಮಾರು ಆರು ಎಕರೆಯಷ್ಟು ಜಾಗದ ಸುತ್ತ ಬೇಲಿಯನ್ನು ನಿರ್ಮಿಸಲಾಗಿದೆ.<br /> <br /> ಪ್ರವೇಶ ದ್ವಾರದಲ್ಲಿರುವ ಎರಡು ದೀಪಸ್ತಂಭಗಳು ಪರಿಸರದ ಕುರಿತ ಜ್ಞಾನದ ದೀಪವನ್ನು ಬೆಳಗಿಸುವ ಸಂಕೇತದಂತಿವೆ. ವನದೊಳಗಿನ ಮಾನವ ನಿರ್ಮಿತ ಕಲಾಕೃತಿಗಳು ದೇವರ ಕಲ್ಪನೆಯನ್ನು ಸಾಕಾರಗೊಳಿಸಿದ್ದು ಸಸ್ಯ ಸಂಕುಲಗಳಲ್ಲಿ ದೈವತ್ವದ `ಭಾವ~ ಪ್ರತಿಫಲಿಸುವಂತೆ ಮಾಡಿವೆ. ದೇವರ ಶಿಖರವುಳ್ಳ `ದೇವಸ್ಥಾನ ಪ್ರಾಕಾರ~ದ ಮಾದರಿ, ಒಳಗೆ ಕಾಣುವ ಗಣೇಶನ ಮೂರ್ತಿ ವನಕ್ಕೆ ಗುಡಿಯ ಗಾಂಭೀರ್ಯವನ್ನು ನೀಡಿವೆ. ವನದ ಪ್ರಾಂಗಣದಲ್ಲಿ ನಿರ್ಮಿಸಲಾಗಿರುವ ದೃಶ್ಯಾವಳಿಗಳು ಗಣೇಶ ಪುರಾಣದ ಹಲವು ಕಥೆಗಳನ್ನು ಹೇಳುತ್ತಿದ್ದು ವಿನಾಯಕ ವನವನ್ನು ಅನ್ವರ್ಥವಾಗಿಸಿವೆ. ಅಲಮಟ್ಟಿಯ ರಮೇಶ ಹಾಗೂ ಅಶೋಕ ಅವರನ್ನೊಳಗೊಂಡ ಮೂರ್ತಿ ಶಿಲ್ಪಿಗಳ ತಂಡದ ಪ್ರಯತ್ನವನ್ನು ಸಾರ್ಥಕವಾಗಿಸಿದೆ.<br /> <br /> ವಿನಾಯಕ ಧನ್ವಂತರಿ ವನದಲ್ಲಿ ಸರ್ಪಗಂಧಿ, ಲೋಳೆಸರ, ಶತಾವರಿ, ಏಕನಾಯಕ, ವಾಯು ವಿಳಂಗ, ಮದರಂಗಿ, ಕೊಡಸಗ ಹೀಗೆ ವಿವಿಧ ಜಾತಿಯ ಔಷಧಿ ಸಸ್ಯಗಳು ಚಿಗುರೊಡೆಯುತ್ತಿದ್ದು ವನಕ್ಕೆ ಹಸಿರಿನ ಉಡುಗೆಯುಡಿಸುತ್ತಿವೆ.<br /> <br /> ಧಾರ್ಮಿಕ ನಂಬುಗೆ, ವೈಜ್ಞಾನಿಕ ಸತ್ಯಗಳ ನೆರಳಿನಲ್ಲಿ ಸೌಂದರ್ಯೋಪಾಸನೆಯ ವಿವಿಧ ಆಯಾಮಗಳನ್ನು ತರೆದಿಡುವ ಈ ವಿನಾಯಕ ಧನ್ವಂತರಿ ವನದಿಂದ ನಾಲ್ಕು ಕಿ.ಮೀ. ದೂರದಲ್ಲಿ ಪುರಾಣ ಪ್ರಸಿದ್ಧ ಇಡಗುಂಜಿಯ ವಿಘ್ನೇಶ್ವರ ದೇವಸ್ಥಾನವಿದೆ. `ದೇವಸ್ಥಾನಕ್ಕೆ ಪ್ರತಿನಿತ್ಯ ಬರುವ ಹಲವಾರು ಯಾತ್ರಾರ್ಥಿಗಳಿಗೆ ಒಂದು ವಿಶ್ರಾಂತಿ ಧಾಮವಾಗಿ, ಔಷಧಿ ಸಸ್ಯಗಳ ಅಧ್ಯಯನ ಕೇಂದ್ರವಾಗಿ ಪ್ರಸ್ತುತ ವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.ಇದುವರೆಗೆ ಸುಮಾರು 20 ಲಕ್ಷ ರೂಪಾಯಿ ವನ ನಿರ್ಮಾಣಕ್ಕೆ ಖರ್ಚು ಮಾಡಲಾಗಿದ್ದು ಇನ್ನೂ ಕೆಲವು ಕೆಲಸ-ಕಾರ್ಯಗಳು ಬಾಕಿ ಇವೆ. ವನದ ನಿರ್ವಹಣೆಯನ್ನು ಸ್ಥಳೀಯ ಗ್ರಾಮ ಅರಣ್ಯ ಸಮಿತಿಗೆ ವಹಿಸಲಾಗುವುದು.ಪ್ರವಾಸಿ ತಾಣವಾಗುವ ಈ ವನದಿಂದ ಬಂದ ಆದಾಯದ ಹೆಚ್ಚಿನ ಪಾಲನ್ನು ಈ ಸಮಿತಿಗೆ ನೀಡಲಾಗುತ್ತದೆ~ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಉದಪುಡಿ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ಇಡಗುಂಜಿಗೆ ಹೋಗುವ ದಾರಿ ಮಧ್ಯೆ ಅರಣ್ಯ ಇಲಾಖೆ `ವಿನಾಯಕ ಧನ್ವಂತರಿ ವನ~ ವನ್ನು ನಿರ್ಮಿಸಿದ್ದು ತಾಲ್ಲೂಕಿನ ಪ್ರವಾಸಿ ತಾಣಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ.<br /> <br /> ಹೊನ್ನಾವರದಿಂದ 10 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 17ರ ಪಕ್ಕದಲ್ಲಿರುವ ಈ ವನ ತನ್ನ ಸೌಂದರ್ಯ ಹಾಗೂ ವೈಶಿಷ್ಠ್ಯಗಳಿಂದ ಗಮನ ಸೆಳೆದಿದ್ದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಡಿ.ಉದಪುಡಿ ಅವರ ದೂರದೃಷ್ಟಿಗೆ ಮತ್ತೊಂದು ಸಾಕ್ಷಿಯಾಗಿದೆ.<br /> <br /> ಕಟ್ಟಿಗೆ ಡಿಪೋ ಒಳಗೊಂಡ ವಿಸ್ತಾರವಾದ ಕಿರು ಅರಣ್ಯ ಪ್ರದೇಶದ ಒಂದು ಭಾಗವನ್ನು ವನ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದ್ದು ಸುಮಾರು ಆರು ಎಕರೆಯಷ್ಟು ಜಾಗದ ಸುತ್ತ ಬೇಲಿಯನ್ನು ನಿರ್ಮಿಸಲಾಗಿದೆ.<br /> <br /> ಪ್ರವೇಶ ದ್ವಾರದಲ್ಲಿರುವ ಎರಡು ದೀಪಸ್ತಂಭಗಳು ಪರಿಸರದ ಕುರಿತ ಜ್ಞಾನದ ದೀಪವನ್ನು ಬೆಳಗಿಸುವ ಸಂಕೇತದಂತಿವೆ. ವನದೊಳಗಿನ ಮಾನವ ನಿರ್ಮಿತ ಕಲಾಕೃತಿಗಳು ದೇವರ ಕಲ್ಪನೆಯನ್ನು ಸಾಕಾರಗೊಳಿಸಿದ್ದು ಸಸ್ಯ ಸಂಕುಲಗಳಲ್ಲಿ ದೈವತ್ವದ `ಭಾವ~ ಪ್ರತಿಫಲಿಸುವಂತೆ ಮಾಡಿವೆ. ದೇವರ ಶಿಖರವುಳ್ಳ `ದೇವಸ್ಥಾನ ಪ್ರಾಕಾರ~ದ ಮಾದರಿ, ಒಳಗೆ ಕಾಣುವ ಗಣೇಶನ ಮೂರ್ತಿ ವನಕ್ಕೆ ಗುಡಿಯ ಗಾಂಭೀರ್ಯವನ್ನು ನೀಡಿವೆ. ವನದ ಪ್ರಾಂಗಣದಲ್ಲಿ ನಿರ್ಮಿಸಲಾಗಿರುವ ದೃಶ್ಯಾವಳಿಗಳು ಗಣೇಶ ಪುರಾಣದ ಹಲವು ಕಥೆಗಳನ್ನು ಹೇಳುತ್ತಿದ್ದು ವಿನಾಯಕ ವನವನ್ನು ಅನ್ವರ್ಥವಾಗಿಸಿವೆ. ಅಲಮಟ್ಟಿಯ ರಮೇಶ ಹಾಗೂ ಅಶೋಕ ಅವರನ್ನೊಳಗೊಂಡ ಮೂರ್ತಿ ಶಿಲ್ಪಿಗಳ ತಂಡದ ಪ್ರಯತ್ನವನ್ನು ಸಾರ್ಥಕವಾಗಿಸಿದೆ.<br /> <br /> ವಿನಾಯಕ ಧನ್ವಂತರಿ ವನದಲ್ಲಿ ಸರ್ಪಗಂಧಿ, ಲೋಳೆಸರ, ಶತಾವರಿ, ಏಕನಾಯಕ, ವಾಯು ವಿಳಂಗ, ಮದರಂಗಿ, ಕೊಡಸಗ ಹೀಗೆ ವಿವಿಧ ಜಾತಿಯ ಔಷಧಿ ಸಸ್ಯಗಳು ಚಿಗುರೊಡೆಯುತ್ತಿದ್ದು ವನಕ್ಕೆ ಹಸಿರಿನ ಉಡುಗೆಯುಡಿಸುತ್ತಿವೆ.<br /> <br /> ಧಾರ್ಮಿಕ ನಂಬುಗೆ, ವೈಜ್ಞಾನಿಕ ಸತ್ಯಗಳ ನೆರಳಿನಲ್ಲಿ ಸೌಂದರ್ಯೋಪಾಸನೆಯ ವಿವಿಧ ಆಯಾಮಗಳನ್ನು ತರೆದಿಡುವ ಈ ವಿನಾಯಕ ಧನ್ವಂತರಿ ವನದಿಂದ ನಾಲ್ಕು ಕಿ.ಮೀ. ದೂರದಲ್ಲಿ ಪುರಾಣ ಪ್ರಸಿದ್ಧ ಇಡಗುಂಜಿಯ ವಿಘ್ನೇಶ್ವರ ದೇವಸ್ಥಾನವಿದೆ. `ದೇವಸ್ಥಾನಕ್ಕೆ ಪ್ರತಿನಿತ್ಯ ಬರುವ ಹಲವಾರು ಯಾತ್ರಾರ್ಥಿಗಳಿಗೆ ಒಂದು ವಿಶ್ರಾಂತಿ ಧಾಮವಾಗಿ, ಔಷಧಿ ಸಸ್ಯಗಳ ಅಧ್ಯಯನ ಕೇಂದ್ರವಾಗಿ ಪ್ರಸ್ತುತ ವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.ಇದುವರೆಗೆ ಸುಮಾರು 20 ಲಕ್ಷ ರೂಪಾಯಿ ವನ ನಿರ್ಮಾಣಕ್ಕೆ ಖರ್ಚು ಮಾಡಲಾಗಿದ್ದು ಇನ್ನೂ ಕೆಲವು ಕೆಲಸ-ಕಾರ್ಯಗಳು ಬಾಕಿ ಇವೆ. ವನದ ನಿರ್ವಹಣೆಯನ್ನು ಸ್ಥಳೀಯ ಗ್ರಾಮ ಅರಣ್ಯ ಸಮಿತಿಗೆ ವಹಿಸಲಾಗುವುದು.ಪ್ರವಾಸಿ ತಾಣವಾಗುವ ಈ ವನದಿಂದ ಬಂದ ಆದಾಯದ ಹೆಚ್ಚಿನ ಪಾಲನ್ನು ಈ ಸಮಿತಿಗೆ ನೀಡಲಾಗುತ್ತದೆ~ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಉದಪುಡಿ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>