<p><strong> ಬೆಂಗಳೂರು: `</strong>ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿನ ಬಿಎ ದ್ವಿತೀಯ ಸೆಮಿಸ್ಟರ್ನ ಇತಿಹಾಸ ಪಠ್ಯ ಪುಸ್ತಕದಲ್ಲಿರುವ `ರಾಜ ನೀತಿ ವಿವೇಚಕರು~ ಎಂಬ ಪಾಠದಲ್ಲಿ ಊಹೆಗೂ ನಿಲುಕದ ಅಪರಿಮಿತ ವಾಕ್ಯ ರಚನೆಯ ದೋಷಗಳು ಮತ್ತು ತಪ್ಪು ಮಾಹಿತಿಗಳಿದ್ದು, ಈ ಪುಸ್ತಕವನ್ನು ಕೂಡಲೇ ಹಿಂದಕ್ಕೆ ಪಡೆದು ಪುನರ್ ಮುದ್ರಿಸಬೇಕು~ ಎಂದು ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಆಗ್ರಹಿಸಿದರು. <br /> <br /> `ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಕುರಿತು ತಪ್ಪು ಮಾಹಿತಿ ಪ್ರಕಟವಾಗಿದ್ದು, ಅವರ ಕಾಲ ಕಿ.ಶ. 1131-1167 ಎಂದು ನಮೂದಿಸಲಾಗಿದೆ. ಆದರೆ ಬಸವಣ್ಣನವರ ಜನ್ಮ ಮತ್ತು ಐಕ್ಯವಾದ ವರ್ಷ ಈವರೆಗೆ ಯಾವುದೆಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. 12ನೇ ಶತಮಾನದ ಮಧ್ಯಭಾಗದಲ್ಲಿ ಇದ್ದರು ಎಂಬುದು ವಾಸ್ತವಕ್ಕೆ ಹತ್ತಿರವಾದುದು. ಪಠ್ಯ ರಚಿಸುವವರು ಮೂಲ ಆಕರವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. <br /> <br /> ಈ ವಿಚಾರವನ್ನು ವಿ.ವಿ.ಕುಲಪತಿ ಗಂಭೀರವಾಗಿ ಪರಿಗಣಿಸಬೇಕು~ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. <br /> `ಪಠ್ಯ ಪುಸ್ತಕದ ಪ್ರತಿ ಪುಟದಲ್ಲೂ ಅಚ್ಚಿನ ದೋಷ ಹಾಗೂ ವಾಕ್ಯ ರಚನೆಯ ತಪ್ಪುಗಳು ಹೇರಳವಾಗಿವೆ. ಇದರೊಂದಿಗೆ ಬಸವಣ್ಣನವರು ವೀರಶೈವ ಧರ್ಮವನ್ನು ಸ್ಥಾಪಿಸಿದರು ಎಂದು ತಪ್ಪು ಮಾಹಿತಿ ನೀಡಲಾಗಿದೆ. <br /> <br /> ಬಸವಣ್ಣ ಅವರು ಜನಿಸುವ ಮೊದಲೇ ವೀರಶೈವ ಧರ್ಮವಿತ್ತು. ಆದರೆ, ಅದು ಅವರಿಂದ ಜನಪ್ರಿಯಗೊಂಡಿತ್ತು ಎಂಬುದು ಸತ್ಯವಾದ ವಿಚಾರ. `ಅಮಾನವೀಯತೆಯ ಉತ್ಪಾದನೆಯ ಫಲವನ್ನು ಪರಸ್ಪರ ಹಂಚಿಕೊಂಡು ಬಾಳುವ ಕಲೆ ದಾಸೋಹ ತತ್ವವಾಗಿದೆ~ ಎಂಬ ವಾಕ್ಯವಿದೆ. ಇದರಲ್ಲಿ ವ್ಯತಿರಿಕ್ತ ವಾಕ್ಯರಚನೆ ಮತ್ತು ತಪ್ಪು ಅರ್ಥಗಳನ್ನೇ ಕಾಣಬಹುದು~ ಎಂದು ಉದಾಹರಿಸಿದರು.<br /> <br /> `ಇನ್ನು ಪ್ರಥಮ ಪಿಯುಸಿ ಇತಿಹಾಸ ಪಠ್ಯ ಪುಸ್ತಕದಲ್ಲೂ `ಬಸವಣ್ಣ~ ಪಾಠದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಪಿಯುಸಿ ಪಠ್ಯ ಸಮಿತಿಯು `ಬಸವಣ್ಣ~ ಎಂಬ ಹೆಸರಿನ ಪಾಠವನ್ನು ಅರ್ಹರಿಂದ ಪರಿಶೀಲಿಸಿ ಮರು ಮುದ್ರಿಸಬೇಕು. ಇಲ್ಲದಿದ್ದರೆ ಪಠ್ಯದಲ್ಲಿನ ತಪ್ಪು ಮಾಹಿತಿಯನ್ನೇ ನಿಜವೆಂದು ಭಾವಿಸಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಾರೆ~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong> ಬೆಂಗಳೂರು: `</strong>ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿನ ಬಿಎ ದ್ವಿತೀಯ ಸೆಮಿಸ್ಟರ್ನ ಇತಿಹಾಸ ಪಠ್ಯ ಪುಸ್ತಕದಲ್ಲಿರುವ `ರಾಜ ನೀತಿ ವಿವೇಚಕರು~ ಎಂಬ ಪಾಠದಲ್ಲಿ ಊಹೆಗೂ ನಿಲುಕದ ಅಪರಿಮಿತ ವಾಕ್ಯ ರಚನೆಯ ದೋಷಗಳು ಮತ್ತು ತಪ್ಪು ಮಾಹಿತಿಗಳಿದ್ದು, ಈ ಪುಸ್ತಕವನ್ನು ಕೂಡಲೇ ಹಿಂದಕ್ಕೆ ಪಡೆದು ಪುನರ್ ಮುದ್ರಿಸಬೇಕು~ ಎಂದು ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಆಗ್ರಹಿಸಿದರು. <br /> <br /> `ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಕುರಿತು ತಪ್ಪು ಮಾಹಿತಿ ಪ್ರಕಟವಾಗಿದ್ದು, ಅವರ ಕಾಲ ಕಿ.ಶ. 1131-1167 ಎಂದು ನಮೂದಿಸಲಾಗಿದೆ. ಆದರೆ ಬಸವಣ್ಣನವರ ಜನ್ಮ ಮತ್ತು ಐಕ್ಯವಾದ ವರ್ಷ ಈವರೆಗೆ ಯಾವುದೆಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. 12ನೇ ಶತಮಾನದ ಮಧ್ಯಭಾಗದಲ್ಲಿ ಇದ್ದರು ಎಂಬುದು ವಾಸ್ತವಕ್ಕೆ ಹತ್ತಿರವಾದುದು. ಪಠ್ಯ ರಚಿಸುವವರು ಮೂಲ ಆಕರವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. <br /> <br /> ಈ ವಿಚಾರವನ್ನು ವಿ.ವಿ.ಕುಲಪತಿ ಗಂಭೀರವಾಗಿ ಪರಿಗಣಿಸಬೇಕು~ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. <br /> `ಪಠ್ಯ ಪುಸ್ತಕದ ಪ್ರತಿ ಪುಟದಲ್ಲೂ ಅಚ್ಚಿನ ದೋಷ ಹಾಗೂ ವಾಕ್ಯ ರಚನೆಯ ತಪ್ಪುಗಳು ಹೇರಳವಾಗಿವೆ. ಇದರೊಂದಿಗೆ ಬಸವಣ್ಣನವರು ವೀರಶೈವ ಧರ್ಮವನ್ನು ಸ್ಥಾಪಿಸಿದರು ಎಂದು ತಪ್ಪು ಮಾಹಿತಿ ನೀಡಲಾಗಿದೆ. <br /> <br /> ಬಸವಣ್ಣ ಅವರು ಜನಿಸುವ ಮೊದಲೇ ವೀರಶೈವ ಧರ್ಮವಿತ್ತು. ಆದರೆ, ಅದು ಅವರಿಂದ ಜನಪ್ರಿಯಗೊಂಡಿತ್ತು ಎಂಬುದು ಸತ್ಯವಾದ ವಿಚಾರ. `ಅಮಾನವೀಯತೆಯ ಉತ್ಪಾದನೆಯ ಫಲವನ್ನು ಪರಸ್ಪರ ಹಂಚಿಕೊಂಡು ಬಾಳುವ ಕಲೆ ದಾಸೋಹ ತತ್ವವಾಗಿದೆ~ ಎಂಬ ವಾಕ್ಯವಿದೆ. ಇದರಲ್ಲಿ ವ್ಯತಿರಿಕ್ತ ವಾಕ್ಯರಚನೆ ಮತ್ತು ತಪ್ಪು ಅರ್ಥಗಳನ್ನೇ ಕಾಣಬಹುದು~ ಎಂದು ಉದಾಹರಿಸಿದರು.<br /> <br /> `ಇನ್ನು ಪ್ರಥಮ ಪಿಯುಸಿ ಇತಿಹಾಸ ಪಠ್ಯ ಪುಸ್ತಕದಲ್ಲೂ `ಬಸವಣ್ಣ~ ಪಾಠದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಪಿಯುಸಿ ಪಠ್ಯ ಸಮಿತಿಯು `ಬಸವಣ್ಣ~ ಎಂಬ ಹೆಸರಿನ ಪಾಠವನ್ನು ಅರ್ಹರಿಂದ ಪರಿಶೀಲಿಸಿ ಮರು ಮುದ್ರಿಸಬೇಕು. ಇಲ್ಲದಿದ್ದರೆ ಪಠ್ಯದಲ್ಲಿನ ತಪ್ಪು ಮಾಹಿತಿಯನ್ನೇ ನಿಜವೆಂದು ಭಾವಿಸಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಾರೆ~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>