<p><strong>ಮೈಸೂರು:</strong> `ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಎಂದು ಹೇಳಿಕೊಂಡಿರುವ ಇನ್ಫೋಸಿಸ್ ನಾರಾಯಣಮೂರ್ತಿ ಅವರನ್ನು ಯಾವ ಪಕ್ಷವೂ ಬೆಂಬಲಿಸಬಾರದು. ಅವರು ರಾಷ್ಟ್ರದ್ರೋಹಿ~ ಎಂದು ಸಂಸದ ಎ.ಎಚ್.ವಿಶ್ವನಾಥ್ ಇಲ್ಲಿ ಕಿಡಿಕಾರಿದರು.<br /> <br /> `ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ನಡೆದ ಸಮಾರಂಭವೊಂದರಲ್ಲಿ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಮೂರ್ತಿ ಸೇರಿದಂತೆ ಸಿಬ್ಬಂದಿ ಗೌರವ ಸಲ್ಲಿಸದೆ ಅಗೌರವ ತೋರಿದ್ದಾರೆ. ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸದ ಕೊಳಕು ಮನಸ್ಸಿನ ಮೂರ್ತಿ ರಾಷ್ಟ್ರದ್ರೋಹಿಗಳು~ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.<br /> <br /> `ಸಂವಿಧಾನಿಕವಾಗಿ ಮೂರ್ತಿ ಅವರು ಯಾವುದೇ ಹುದ್ದೆ ಅಲಂಕರಿಸಿಲ್ಲ. ಅವರ ನಡವಳಿಕೆ ಪ್ರಜಾತಂತ್ರ ವ್ಯವಸ್ಥೆಗೆ ವಿರೋಧಿಯಾಗಿದೆ. ಉದ್ಯಮಿಯಾದ ಮೂರ್ತಿ ಮೀಸಲಾತಿ ವಿರೋಧಿ. ಅವರ ಕಂಪೆನಿಯಲ್ಲಿ ಮೀಸಲಾತಿಯಡಿ ಯಾರಿಗೂ ಉದ್ಯೋಗ ನೀಡಿಲ್ಲ. ಕನ್ನಡಿಗರಿಗೆ ಅನ್ಯಾಯ ಮಾಡಿರುವ ಅವರು ಕನ್ನಡ ವಿರೋಧಿಗಳು~ ಎಂದು ಗುಡುಗಿದರು.<br /> <br /> `ರಾಜಸ್ತಾನದ ಕೋಟಾ ಮತ್ತು ಬನ್ಸಾಲ್ ಐಐಟಿಯಿಂದ ಸುಮಾರು 50-60 ಸಾವಿರ ಹಿಂದುಳಿದ ವರ್ಗದ ಅಭ್ಯರ್ಥಿಗಳು ತರಬೇತಿ ಪಡೆದು ಹೊರಬರುತ್ತಾರೆ. ಈ ಸಂಸ್ಥೆಯಿಂದ ಹೊರಬಂದ ಪ್ರತಿಭಾನ್ವಿತರನ್ನು ಸತ್ವವಿಲ್ಲದ ಬೇರುಗಳು, ಸಂಸ್ಥೆ ಮುಚ್ಚುವಂತೆ ಮೂರ್ತಿ ಹೇಳಿರುವುದು ಸರಿಯಲ್ಲ. ಬಡವರು ಬುದ್ಧಿವಂತರಾದರೆ ಇವರು ಸಹಿಸುವುದಿಲ್ಲ. ಇವರು ಪ್ರಜಾತಂತ್ರ ವಿರೋಧಿ~ ಎಂದು ದೂರಿದರು.<br /> <br /> `ಮೈಸೂರು, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಇವರು ಐಟಿ ಉದ್ಯಮಕ್ಕೆ ನೂರಾರು ಎಕರೆ ಭೂಮಿ ಪಡೆದಿದ್ದಾರೆ. 20 ಎಕರೆ ಭೂಮಿಯಲ್ಲಿ ಸಾಕಷ್ಟು ವ್ಯವಹಾರ ಮಾಡಬಹುದು. ಹೆಲಿಕಾಪ್ಟರ್ ಸಹ ತಂದು ಇಳಿಸಬಹುದು. ಚಿಪ್ಗಳನ್ನು ತಯಾರಿಸಲು ಇನ್ಫೋಸಿಸ್ಗೆ ಇಷ್ಟು ದೊಡ್ಡ ಪ್ರಮಾಣದ ಭೂಮಿ ಬೇಕಿತ್ತೆ?~ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> `ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಎಂದು ಹೇಳಿಕೊಂಡಿರುವ ಇನ್ಫೋಸಿಸ್ ನಾರಾಯಣಮೂರ್ತಿ ಅವರನ್ನು ಯಾವ ಪಕ್ಷವೂ ಬೆಂಬಲಿಸಬಾರದು. ಅವರು ರಾಷ್ಟ್ರದ್ರೋಹಿ~ ಎಂದು ಸಂಸದ ಎ.ಎಚ್.ವಿಶ್ವನಾಥ್ ಇಲ್ಲಿ ಕಿಡಿಕಾರಿದರು.<br /> <br /> `ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ನಡೆದ ಸಮಾರಂಭವೊಂದರಲ್ಲಿ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಮೂರ್ತಿ ಸೇರಿದಂತೆ ಸಿಬ್ಬಂದಿ ಗೌರವ ಸಲ್ಲಿಸದೆ ಅಗೌರವ ತೋರಿದ್ದಾರೆ. ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸದ ಕೊಳಕು ಮನಸ್ಸಿನ ಮೂರ್ತಿ ರಾಷ್ಟ್ರದ್ರೋಹಿಗಳು~ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.<br /> <br /> `ಸಂವಿಧಾನಿಕವಾಗಿ ಮೂರ್ತಿ ಅವರು ಯಾವುದೇ ಹುದ್ದೆ ಅಲಂಕರಿಸಿಲ್ಲ. ಅವರ ನಡವಳಿಕೆ ಪ್ರಜಾತಂತ್ರ ವ್ಯವಸ್ಥೆಗೆ ವಿರೋಧಿಯಾಗಿದೆ. ಉದ್ಯಮಿಯಾದ ಮೂರ್ತಿ ಮೀಸಲಾತಿ ವಿರೋಧಿ. ಅವರ ಕಂಪೆನಿಯಲ್ಲಿ ಮೀಸಲಾತಿಯಡಿ ಯಾರಿಗೂ ಉದ್ಯೋಗ ನೀಡಿಲ್ಲ. ಕನ್ನಡಿಗರಿಗೆ ಅನ್ಯಾಯ ಮಾಡಿರುವ ಅವರು ಕನ್ನಡ ವಿರೋಧಿಗಳು~ ಎಂದು ಗುಡುಗಿದರು.<br /> <br /> `ರಾಜಸ್ತಾನದ ಕೋಟಾ ಮತ್ತು ಬನ್ಸಾಲ್ ಐಐಟಿಯಿಂದ ಸುಮಾರು 50-60 ಸಾವಿರ ಹಿಂದುಳಿದ ವರ್ಗದ ಅಭ್ಯರ್ಥಿಗಳು ತರಬೇತಿ ಪಡೆದು ಹೊರಬರುತ್ತಾರೆ. ಈ ಸಂಸ್ಥೆಯಿಂದ ಹೊರಬಂದ ಪ್ರತಿಭಾನ್ವಿತರನ್ನು ಸತ್ವವಿಲ್ಲದ ಬೇರುಗಳು, ಸಂಸ್ಥೆ ಮುಚ್ಚುವಂತೆ ಮೂರ್ತಿ ಹೇಳಿರುವುದು ಸರಿಯಲ್ಲ. ಬಡವರು ಬುದ್ಧಿವಂತರಾದರೆ ಇವರು ಸಹಿಸುವುದಿಲ್ಲ. ಇವರು ಪ್ರಜಾತಂತ್ರ ವಿರೋಧಿ~ ಎಂದು ದೂರಿದರು.<br /> <br /> `ಮೈಸೂರು, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಇವರು ಐಟಿ ಉದ್ಯಮಕ್ಕೆ ನೂರಾರು ಎಕರೆ ಭೂಮಿ ಪಡೆದಿದ್ದಾರೆ. 20 ಎಕರೆ ಭೂಮಿಯಲ್ಲಿ ಸಾಕಷ್ಟು ವ್ಯವಹಾರ ಮಾಡಬಹುದು. ಹೆಲಿಕಾಪ್ಟರ್ ಸಹ ತಂದು ಇಳಿಸಬಹುದು. ಚಿಪ್ಗಳನ್ನು ತಯಾರಿಸಲು ಇನ್ಫೋಸಿಸ್ಗೆ ಇಷ್ಟು ದೊಡ್ಡ ಪ್ರಮಾಣದ ಭೂಮಿ ಬೇಕಿತ್ತೆ?~ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>