<p>ಬೆಂಗಳೂರು: ಕಳ್ಳನಿಂದ ವಶಪಡಿಸಿಕೊಂಡ ಹಣವನ್ನು ವಾರಸುದಾರರಿಗೆ ನೀಡದೆ ವಂಚಿಸಿದ ಆರೋಪದ ಮೇಲೆ ರಾಜಗೋಪಾಲನಗರ ಠಾಣೆಯ ಇನ್ಸ್ಪೆಕ್ಟರ್ ಎಂ.ಕೆ.ಗಣಪತಿ ಅವರನ್ನು ಅಮಾನತು ಮಾಡಿ ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಆದೇಶ ಹೊರಡಿಸಿದ್ದಾರೆ.<br /> <br /> ಸ್ನೇಹಿತನ ಮನೆಯಲ್ಲಿ ₨ 1 ಕೋಟಿ ರೂಪಾಯಿ ಹಣ ಕಳವಾಗಿದೆ ಎಂದು 2013ರ ಅಕ್ಟೋಬರ್ನಲ್ಲಿ ಉದ್ಯಮಿ ರಂಗಸ್ವಾಮಿ ಎಂಬುವರು ರಾಜಗೋಪಾಲನಗರ ಠಾಣೆಗೆ ದೂರು ಕೊಟ್ಟಿದ್ದರು. ಆಗ ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಗಣಪತಿ, ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ಐಆರ್) ₨ 24 ಲಕ್ಷ ಕಳವಾಗಿದೆ ಎಂದಷ್ಟೇ ನಮೂದಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ನಂತರ ತನಿಖಾ ತಂಡ ಆರೋಪಿ-ಯನ್ನು ಪತ್ತೆ ಮಾಡಿ, ಕಳವು ಮಾಡಿದ್ದ ಹಣವನ್ನು ವಶಪಡಿಸಿಕೊಂಡಿತ್ತು. ಆದರೆ, ಗಣಪತಿ ಅವರು ವಾರಸುದಾರರಿಗೆ ₨ 64 ಲಕ್ಷ ಹಣ ಹಿಂದಿರುಗಿಸಿ, ಉಳಿದ ಹಣವನ್ನು ನೀಡದೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತು. ಈ ಸಂಬಂಧ ರಂಗಸ್ವಾಮಿ ಉತ್ತರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರಿಗೆ ದೂರು ಸಲ್ಲಿಸಿದ್ದರು.<br /> <br /> ದೂರನ್ನು ಪರಿಶೀಲಿಸಿದ ಡಿಸಿಪಿ, ಪ್ರಕರಣ ಸಂಬಂಧ ಇಲಾಖಾ ಮಟ್ಟದ ತನಿಖೆ ನಡೆಸುವಂತೆ ಮಲ್ಲೇಶ್ವರ ಉಪ–ವಿಭಾಗದ ಎಸಿಪಿ ಸಾರಾ ಫಾತಿಮಾ ಅವರಿಗೆ ಸೂಚಿಸಿದ್ದರು. ಅವರು ಸಲ್ಲಿಸಿದ ವರದಿ ಆಧರಿಸಿ ಕಮಿಷನರ್ ಈ ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಕಳ್ಳನಿಂದ ವಶಪಡಿಸಿಕೊಂಡ ಹಣವನ್ನು ವಾರಸುದಾರರಿಗೆ ನೀಡದೆ ವಂಚಿಸಿದ ಆರೋಪದ ಮೇಲೆ ರಾಜಗೋಪಾಲನಗರ ಠಾಣೆಯ ಇನ್ಸ್ಪೆಕ್ಟರ್ ಎಂ.ಕೆ.ಗಣಪತಿ ಅವರನ್ನು ಅಮಾನತು ಮಾಡಿ ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಆದೇಶ ಹೊರಡಿಸಿದ್ದಾರೆ.<br /> <br /> ಸ್ನೇಹಿತನ ಮನೆಯಲ್ಲಿ ₨ 1 ಕೋಟಿ ರೂಪಾಯಿ ಹಣ ಕಳವಾಗಿದೆ ಎಂದು 2013ರ ಅಕ್ಟೋಬರ್ನಲ್ಲಿ ಉದ್ಯಮಿ ರಂಗಸ್ವಾಮಿ ಎಂಬುವರು ರಾಜಗೋಪಾಲನಗರ ಠಾಣೆಗೆ ದೂರು ಕೊಟ್ಟಿದ್ದರು. ಆಗ ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಗಣಪತಿ, ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ಐಆರ್) ₨ 24 ಲಕ್ಷ ಕಳವಾಗಿದೆ ಎಂದಷ್ಟೇ ನಮೂದಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ನಂತರ ತನಿಖಾ ತಂಡ ಆರೋಪಿ-ಯನ್ನು ಪತ್ತೆ ಮಾಡಿ, ಕಳವು ಮಾಡಿದ್ದ ಹಣವನ್ನು ವಶಪಡಿಸಿಕೊಂಡಿತ್ತು. ಆದರೆ, ಗಣಪತಿ ಅವರು ವಾರಸುದಾರರಿಗೆ ₨ 64 ಲಕ್ಷ ಹಣ ಹಿಂದಿರುಗಿಸಿ, ಉಳಿದ ಹಣವನ್ನು ನೀಡದೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತು. ಈ ಸಂಬಂಧ ರಂಗಸ್ವಾಮಿ ಉತ್ತರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರಿಗೆ ದೂರು ಸಲ್ಲಿಸಿದ್ದರು.<br /> <br /> ದೂರನ್ನು ಪರಿಶೀಲಿಸಿದ ಡಿಸಿಪಿ, ಪ್ರಕರಣ ಸಂಬಂಧ ಇಲಾಖಾ ಮಟ್ಟದ ತನಿಖೆ ನಡೆಸುವಂತೆ ಮಲ್ಲೇಶ್ವರ ಉಪ–ವಿಭಾಗದ ಎಸಿಪಿ ಸಾರಾ ಫಾತಿಮಾ ಅವರಿಗೆ ಸೂಚಿಸಿದ್ದರು. ಅವರು ಸಲ್ಲಿಸಿದ ವರದಿ ಆಧರಿಸಿ ಕಮಿಷನರ್ ಈ ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>