<p><strong>ಬೆಳಗಾವಿ: </strong>ಕಳೆದ ಕೆಲ ದಿನಗಳಿಂದ ಗೋಹತ್ಯೆ ಮಾಡಲಾಗುತ್ತದೆ ಎಂದು ವಿವಾದಕ್ಕೆ ಸಿಲುಕಿದ್ದ `ಇಸ್ತೇಮಾ~ ಉತ್ಸವದಲ್ಲಿ ಸೋಮವಾರ ಸಂಪೂರ್ಣವಾಗಿ ಶುದ್ಧ ಸಸ್ಯಹಾರವನ್ನೇ ಮಾಡಲಾಗಿದೆ. ಇಲ್ಲಿ ಯಾವುದೇ ರೀತಿಯ ಪ್ರಾಣಿಯ ಬಲಿಯನ್ನು ನೀಡಲಾಗಿಲ್ಲ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ತಿಳಿಸಿದರು. <br /> <br /> ನಗರದ ಸಾಂಬ್ರಾ ರಸ್ತೆಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ `ಇಸ್ತೇಮಾ~ ಉತ್ಸವಕ್ಕೆ ಸೋಮವಾರ ಭೇಟಿ ನೀಡಿದ ದಯಾನಂದ ಸ್ವಾಮೀಜಿ ಮುಸ್ಲಿಂ ಬಾಂಧವರೊಂದಿಗೆ ಸಹಪಂಕ್ತಿ ಭೋಜನ ಮಾಡಿದರು. ಊಟದಲ್ಲಿ ಗೋಮಾಂಸ, ಮೊಟ್ಟೆ ಸೇರಿದಂತೆ ಯಾವುದೇ ತರಹದ ಮಾಂಸಾಹಾರ ಇಲ್ಲದಿರುವುದನ್ನು ಕಂಡು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. <br /> <br /> ಭೋಜನಕ್ಕೆ ಮುನ್ನ ಮುಸ್ಲಿಂ ಮುಖಂಡರೊಂದಿಗೆ ಚರ್ಚಿಸಿದ ಸ್ವಾಮೀಜಿ, ಪ್ರಾಣಿ ಬಲಿ- ಗೋಹತ್ಯೆ ಮಾಡುವುದರಿಂದ ಉಂಟಾಗುವ ಪರಿಣಾಮದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಅಹಿಂಸಾ ತತ್ವವನ್ನು ಪಾಲಿಸುವಂತೆ ಸಲಹೆ ನೀಡಿದರು. <br /> <br /> ಮುಸ್ಲಿಂ ಮುಖಂಡರಾದ ಅಮಾನುಲ್ಲಾ ಖಾನ್ ಪಠಾಣ, ಮಜೀದ್ ಬಾಗಲಕೋಟೆ, ಅಬ್ದುಲ್ ಗಫಾರ್ ಘೀವಾಲ, ಮೂರುಬ್ಬಾಯಿ ಸುಂದರವಾಲೆ, ಕುತುಬುದ್ದೀನ್ ಮತ್ತಿತರ ಮುಸ್ಲಿಂ ಮುಖಂಡರು ಹಾಜರಿದ್ದರು. <br /> <br /> ಸ್ವಾಮೀಜಿಯೊಂದಿಗೆ ಜೈನ ಸಮಾಜ ದ ಮುಖಂಡರಾದ ಸಂಪತ ರಾಜ್ ಬಾಗ್ರೇಚ, ಮಂಡಳಿಯ ರಾಜ್ಯ ಮಹಿಳಾ ಸಂಚಾಲಕಿ ಸುನಂದಾದೇವಿ, ಕಿಶೋರ ಮಿಠಾರಿ, ಚಂದ್ರಶೇಖರ ತಡಸದ, ಆದಿಲಬ್ದಿ ಜೀವ ದಯಾ ಸಂಸ್ಥಾನದ ಮಹಾವೀರಚಂದ ಚೌದರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ಕಳೆದ ಕೆಲ ದಿನಗಳಿಂದ ಗೋಹತ್ಯೆ ಮಾಡಲಾಗುತ್ತದೆ ಎಂದು ವಿವಾದಕ್ಕೆ ಸಿಲುಕಿದ್ದ `ಇಸ್ತೇಮಾ~ ಉತ್ಸವದಲ್ಲಿ ಸೋಮವಾರ ಸಂಪೂರ್ಣವಾಗಿ ಶುದ್ಧ ಸಸ್ಯಹಾರವನ್ನೇ ಮಾಡಲಾಗಿದೆ. ಇಲ್ಲಿ ಯಾವುದೇ ರೀತಿಯ ಪ್ರಾಣಿಯ ಬಲಿಯನ್ನು ನೀಡಲಾಗಿಲ್ಲ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ತಿಳಿಸಿದರು. <br /> <br /> ನಗರದ ಸಾಂಬ್ರಾ ರಸ್ತೆಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ `ಇಸ್ತೇಮಾ~ ಉತ್ಸವಕ್ಕೆ ಸೋಮವಾರ ಭೇಟಿ ನೀಡಿದ ದಯಾನಂದ ಸ್ವಾಮೀಜಿ ಮುಸ್ಲಿಂ ಬಾಂಧವರೊಂದಿಗೆ ಸಹಪಂಕ್ತಿ ಭೋಜನ ಮಾಡಿದರು. ಊಟದಲ್ಲಿ ಗೋಮಾಂಸ, ಮೊಟ್ಟೆ ಸೇರಿದಂತೆ ಯಾವುದೇ ತರಹದ ಮಾಂಸಾಹಾರ ಇಲ್ಲದಿರುವುದನ್ನು ಕಂಡು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. <br /> <br /> ಭೋಜನಕ್ಕೆ ಮುನ್ನ ಮುಸ್ಲಿಂ ಮುಖಂಡರೊಂದಿಗೆ ಚರ್ಚಿಸಿದ ಸ್ವಾಮೀಜಿ, ಪ್ರಾಣಿ ಬಲಿ- ಗೋಹತ್ಯೆ ಮಾಡುವುದರಿಂದ ಉಂಟಾಗುವ ಪರಿಣಾಮದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಅಹಿಂಸಾ ತತ್ವವನ್ನು ಪಾಲಿಸುವಂತೆ ಸಲಹೆ ನೀಡಿದರು. <br /> <br /> ಮುಸ್ಲಿಂ ಮುಖಂಡರಾದ ಅಮಾನುಲ್ಲಾ ಖಾನ್ ಪಠಾಣ, ಮಜೀದ್ ಬಾಗಲಕೋಟೆ, ಅಬ್ದುಲ್ ಗಫಾರ್ ಘೀವಾಲ, ಮೂರುಬ್ಬಾಯಿ ಸುಂದರವಾಲೆ, ಕುತುಬುದ್ದೀನ್ ಮತ್ತಿತರ ಮುಸ್ಲಿಂ ಮುಖಂಡರು ಹಾಜರಿದ್ದರು. <br /> <br /> ಸ್ವಾಮೀಜಿಯೊಂದಿಗೆ ಜೈನ ಸಮಾಜ ದ ಮುಖಂಡರಾದ ಸಂಪತ ರಾಜ್ ಬಾಗ್ರೇಚ, ಮಂಡಳಿಯ ರಾಜ್ಯ ಮಹಿಳಾ ಸಂಚಾಲಕಿ ಸುನಂದಾದೇವಿ, ಕಿಶೋರ ಮಿಠಾರಿ, ಚಂದ್ರಶೇಖರ ತಡಸದ, ಆದಿಲಬ್ದಿ ಜೀವ ದಯಾ ಸಂಸ್ಥಾನದ ಮಹಾವೀರಚಂದ ಚೌದರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>