<p>ತಾಯಿ ಚೌಡೇಶ್ವರಿ ದೇವಿಯ ಪ್ರೇರೇಪಣೆಯೇ `ಶ್ರೀ ಚೌಡೇಶ್ವರಿ ದೇವಿ ಮಹಾತ್ಮೆ~ ಚಿತ್ರ ನಿರ್ಮಾಣಕ್ಕೆ ಕಾರಣ ಎಂದರು ನಿರ್ದೇಶಕ ಮ.ರಾಮಣ್ಣ. <br /> <br /> ರೋಜಾ ಅವರನ್ನು ಚೌಡೇಶ್ವರಿಯಾಗಿ ಬಿಂಬಿಸಲು ಕೂಡ `ತಾಯಿ~ ಪ್ರೇರಣೆಯೇ ಕಾರಣವಂತೆ! ಚಿತ್ರ ನಿರ್ಮಿಸಬೇಕು ಎಂದು ದೇವಿಯ ಅಪ್ಪಣೆ ಕೇಳಿದಾಗ ಆಕೆ ಮೊದಲು ನನ್ನ ಚಿತ್ರ ಮಾಡು ಆಮೇಲೆ ಮಿಕ್ಕಿದ್ದು ಎಂದಳಂತೆ. ಸರಿ ಚಿತ್ರ ನಿರ್ಮಿಸಲು ಅವರಿಗೆ ಹತ್ತು ವರ್ಷ ಹಿಡಿಯಿತು. ಒಂದಿಡೀ ದಶಕ ದೇವಿಯ ಮೂಲ ಕುರಿತು ಅಧ್ಯಯನ ಮಾಡಿದ್ದರು. <br /> <br /> ಹಾಡುಗಳ ಧ್ವನಿಮುದ್ರಿಕೆ ಬಿಡುಗಡೆ ಮಾಡಿದ ನಟ ಶ್ರೀನಗರ ಕಿಟ್ಟಿ `ಚೌಡೇಶ್ವರಿ ಮಹಿಮೆ ಅರಿಯಲು ಬಯಸುವವರಿಗೆ ಚಿತ್ರ ಸಹಕಾರಿಯಾಗಲಿದೆ. ದೇವರ ಕುರಿತ ಚಿತ್ರಗಳು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ `ಚೌಡೇಶ್ವರಿ~ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. <br /> <br /> ಅಂದಹಾಗೆ ಕತೆಯ ಎಳೆ ಭಕ್ತಿಪ್ರಧಾನವಾಗಿದ್ದರೂ ಪ್ರೀತಿ ಹೊಡೆದಾಟ ಎಲ್ಲವೂ ಇದೆ ಎಂಬುದನ್ನು ಚಿತ್ರದ ಪೋಸ್ಟರ್ಗಳು ಸಾರುತ್ತಿದ್ದವು. `ಕೆಡುಕು ಬಯಸಿದವರಿಗೆ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರ ಎಲ್ಲರನ್ನೂ ತಲುಪಬೇಕು ಎಂಬ ನಿಟ್ಟಿನಲ್ಲಿ ಪ್ರೇಮದ ಎಳೆಯನ್ನೂ ಬೆರೆಸಲಾಗಿದೆ~ ಎಂದರು ನಿರ್ದೇಶಕರು. <br /> <br /> ಚಿತ್ರಕ್ಕೆ ಸಂಗೀತ ನೀಡಿರುವುದು `ದೇವಿ ಸ್ಪೆಷಲಿಸ್ಟ್~ ಲಕ್ಷ್ಮೀ ನಾರಾಯಣ ಗೂಚಿ. ಒಟ್ಟು 21 ಹಾಡುಗಳಿರುವ ಚಿತ್ರದಲ್ಲಿ ನಾಲ್ಕು ಕಂದಪದ್ಯಗಳಿವೆ. ಭಕ್ತಿಗೀತೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಗೂಚಿ ಕೆಲವು ಗೀತೆಗಳನ್ನು ಸ್ವತಃ ಹಾಡಿ ತೋರಿಸಿದರು. <br /> <br /> ಚಿತ್ರಕ್ಕೆ ಈಗ ಡಿಎಎಸ್ ಹಾಗೂ ಗ್ರಾಫಿಕ್ ಅಳವಡಿಕೆ ಕಾರ್ಯ ಮಾತ್ರ ಬಾಕಿ ಉಳಿದಿದೆ. ಕನ್ನಡದಲ್ಲಿ ಮಾತ್ರ ಚಿತ್ರ ಮೂಡಿಬರುತ್ತಿದ್ದು ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲಿ ತಯಾರಿಸಲು ನಿರ್ಧರಿಸಲಾಗಿದೆ.<br /> <br /> ಭವ್ಯಶ್ರೀ ರೈ, ರಮೇಶ್ ಪಂಡಿತ್, ರೇಖಾದಾಸ್ ಸೇರಿದಂತೆ ಸುಮಾರು 78 ಕಲಾವಿದರ ಬೃಹತ್ ತಾರಾಗಣ ಇರುವ ಚಿತ್ರಕ್ಕೆ ಗಿರೀಶ್ ಕುಮಾರ್ ಹಾಗೂ ನವ್ಯಾ ನಾಯಕ ನಾಯಕಿಯರು.ಕೃಪಾನಿಧಿ ಸ್ವಾಮೀಜಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಾಯಿ ಚೌಡೇಶ್ವರಿ ದೇವಿಯ ಪ್ರೇರೇಪಣೆಯೇ `ಶ್ರೀ ಚೌಡೇಶ್ವರಿ ದೇವಿ ಮಹಾತ್ಮೆ~ ಚಿತ್ರ ನಿರ್ಮಾಣಕ್ಕೆ ಕಾರಣ ಎಂದರು ನಿರ್ದೇಶಕ ಮ.ರಾಮಣ್ಣ. <br /> <br /> ರೋಜಾ ಅವರನ್ನು ಚೌಡೇಶ್ವರಿಯಾಗಿ ಬಿಂಬಿಸಲು ಕೂಡ `ತಾಯಿ~ ಪ್ರೇರಣೆಯೇ ಕಾರಣವಂತೆ! ಚಿತ್ರ ನಿರ್ಮಿಸಬೇಕು ಎಂದು ದೇವಿಯ ಅಪ್ಪಣೆ ಕೇಳಿದಾಗ ಆಕೆ ಮೊದಲು ನನ್ನ ಚಿತ್ರ ಮಾಡು ಆಮೇಲೆ ಮಿಕ್ಕಿದ್ದು ಎಂದಳಂತೆ. ಸರಿ ಚಿತ್ರ ನಿರ್ಮಿಸಲು ಅವರಿಗೆ ಹತ್ತು ವರ್ಷ ಹಿಡಿಯಿತು. ಒಂದಿಡೀ ದಶಕ ದೇವಿಯ ಮೂಲ ಕುರಿತು ಅಧ್ಯಯನ ಮಾಡಿದ್ದರು. <br /> <br /> ಹಾಡುಗಳ ಧ್ವನಿಮುದ್ರಿಕೆ ಬಿಡುಗಡೆ ಮಾಡಿದ ನಟ ಶ್ರೀನಗರ ಕಿಟ್ಟಿ `ಚೌಡೇಶ್ವರಿ ಮಹಿಮೆ ಅರಿಯಲು ಬಯಸುವವರಿಗೆ ಚಿತ್ರ ಸಹಕಾರಿಯಾಗಲಿದೆ. ದೇವರ ಕುರಿತ ಚಿತ್ರಗಳು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ `ಚೌಡೇಶ್ವರಿ~ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. <br /> <br /> ಅಂದಹಾಗೆ ಕತೆಯ ಎಳೆ ಭಕ್ತಿಪ್ರಧಾನವಾಗಿದ್ದರೂ ಪ್ರೀತಿ ಹೊಡೆದಾಟ ಎಲ್ಲವೂ ಇದೆ ಎಂಬುದನ್ನು ಚಿತ್ರದ ಪೋಸ್ಟರ್ಗಳು ಸಾರುತ್ತಿದ್ದವು. `ಕೆಡುಕು ಬಯಸಿದವರಿಗೆ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರ ಎಲ್ಲರನ್ನೂ ತಲುಪಬೇಕು ಎಂಬ ನಿಟ್ಟಿನಲ್ಲಿ ಪ್ರೇಮದ ಎಳೆಯನ್ನೂ ಬೆರೆಸಲಾಗಿದೆ~ ಎಂದರು ನಿರ್ದೇಶಕರು. <br /> <br /> ಚಿತ್ರಕ್ಕೆ ಸಂಗೀತ ನೀಡಿರುವುದು `ದೇವಿ ಸ್ಪೆಷಲಿಸ್ಟ್~ ಲಕ್ಷ್ಮೀ ನಾರಾಯಣ ಗೂಚಿ. ಒಟ್ಟು 21 ಹಾಡುಗಳಿರುವ ಚಿತ್ರದಲ್ಲಿ ನಾಲ್ಕು ಕಂದಪದ್ಯಗಳಿವೆ. ಭಕ್ತಿಗೀತೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಗೂಚಿ ಕೆಲವು ಗೀತೆಗಳನ್ನು ಸ್ವತಃ ಹಾಡಿ ತೋರಿಸಿದರು. <br /> <br /> ಚಿತ್ರಕ್ಕೆ ಈಗ ಡಿಎಎಸ್ ಹಾಗೂ ಗ್ರಾಫಿಕ್ ಅಳವಡಿಕೆ ಕಾರ್ಯ ಮಾತ್ರ ಬಾಕಿ ಉಳಿದಿದೆ. ಕನ್ನಡದಲ್ಲಿ ಮಾತ್ರ ಚಿತ್ರ ಮೂಡಿಬರುತ್ತಿದ್ದು ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲಿ ತಯಾರಿಸಲು ನಿರ್ಧರಿಸಲಾಗಿದೆ.<br /> <br /> ಭವ್ಯಶ್ರೀ ರೈ, ರಮೇಶ್ ಪಂಡಿತ್, ರೇಖಾದಾಸ್ ಸೇರಿದಂತೆ ಸುಮಾರು 78 ಕಲಾವಿದರ ಬೃಹತ್ ತಾರಾಗಣ ಇರುವ ಚಿತ್ರಕ್ಕೆ ಗಿರೀಶ್ ಕುಮಾರ್ ಹಾಗೂ ನವ್ಯಾ ನಾಯಕ ನಾಯಕಿಯರು.ಕೃಪಾನಿಧಿ ಸ್ವಾಮೀಜಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>