<p><strong>ಭದ್ರಾವತಿ:</strong> ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವ ಸಲುವಾಗಿ ಗುತ್ತಿಗೆ ಪ್ರಕಟಣೆಯನ್ನು `ಇ~ ಆಡಳಿತ ಮೂಲಕ ನಡೆಸಬೇಕೆಂಬ ನಿಯಮವಿದ್ದರೂ ಸಹ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯೇ ಅದನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವ ಉದಾಹರಣೆ ಇಲ್ಲಿದೆ!<br /> <br /> ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಸರ್ಕಾರಿ ಸ್ವಾಮ್ಯದ ಕಾರ್ಖಾನೆ. ಇಲ್ಲಿಯ ಎಲ್ಲಾ ವ್ಯವಹಾರವು ಸರ್ಕಾರದ ನಿರ್ದೇಶನ ರೀತಿಯ್ಲ್ಲಲೇ ನಡೆಯುವುದು ಸಹಜ ಪ್ರಕ್ರಿಯೆ. ಆದರೆ. ಟೆಂಡರಿಂಗ್ ವ್ಯವಸ್ಥೆಯಲ್ಲಿ ಮಾತ್ರ ಇದರ ಪಾಲನೆಯ ಸ್ಪಷ್ಟ ಉಲ್ಲಂಘನೆ ನಡೆದಿದೆ.<br /> <br /> ಸುಮಾರು ಒಂದು ಕೋಟಿ ವ್ಯವಹಾರದ ಭದ್ರತಾ ವ್ಯವಸ್ಥೆಯ ಟೆಂಡರ್ ಪ್ರಕ್ರಿಯೆ ಸಹ `ಇ~ ಪ್ರಕ್ರಿಯೆಯಲ್ಲಿ ನಡೆದಿಲ್ಲ ಎಂಬ ಕೂಗು ಈಚೆಗೆ ಕಾರ್ಖಾನೆಯಲ್ಲಿ ಪ್ರತಿಧ್ವನಿಸಿತು. ಇದರತ್ತ ಗಮನಿಸಿದಾಗ ಸ್ವತಃ ಆಡಳಿತ ಮಂಡಳಿಯೇ ತನ್ನ ತಪ್ಪನ್ನು ಒಪ್ಪಿಕೊಂಡು ಅದಕ್ಕೆ ಸಮಜಾಯಿಷಿ ನೀಡುವ ಯತ್ನ ಮಾಡಿದೆ.<br /> <br /> ಈ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಅಡಗಿಲ್ಲ. ಸರಿಯಾದ ರೀತಿಯಲ್ಲಿ ಪ್ರಕಟಣೆ ನೀಡಿಲ್ಲ, ನಿಬಂಧನೆಗಳ ಉಲ್ಲಂಘನೆ ನಡೆದಿದೆ. ಕಡಿಮೆ ಮೊತ್ತಕ್ಕೆ ಕೋಟ್ ಮಾಡಿದ ವರದಿಯನ್ನು ನೋಟಿಸ್ ಬೋರ್ಡ್ನಲ್ಲಿ ಹಾಕಿಲ್ಲವೆಂಬ ಆರೋಪ ಕೇಳಿಬಂತು.<br /> <br /> <strong>ಟೆಂಡರ್ ಹಿನ್ನೆಲೆ: </strong>ಮುಂದಿನ ಎರಡು ವರ್ಷಗಳ ಅವಧಿಗೆ ಕಾರ್ಖಾನೆ ಭದ್ರತಾ ವಹಿವಾಟಿನ ಟೆಂಡರ್ ಕರೆಯಲಾಯಿತು. ಇದರನ್ನು ಸರ್ಕಾರದ ಆದೇಶ ಪ್ರಕಾರ `ಇ~ ಪ್ರಕ್ರಿಯೆಯಲ್ಲಿ ನಡೆಸದ ಆಡಳಿತ ಮಂಡಳಿ ಪ್ರಕಟಣೆ ಮೂಲಕ ಆಹ್ವಾನ ನೀಡಿತ್ತು.<br /> <br /> ಈ ಪ್ರಕ್ರಿಯೆಯಲ್ಲಿ ಹೈದ್ರಾಬಾದ್ ಮೂಲದ `ಹಾಕ್ ಸೆಕ್ಯೂರಿಟಿ ಸರ್ವೀಸಸ್~ ಹಾಗೂ ಪುಣೆ ಮೂಲದ `ಬೆಸ್ಟ್ ಸೆಕ್ಯೂರಿಟಿ ಸರ್ವೀಸಸ್~ ಭಾಗವಹಿಸಿದ್ದವು. ಇವರಿಬ್ಬರನ್ನು ಕರೆಸಿ ಮಾತುಕತೆ ಮಾಡಿದ ಕಾರ್ಖಾನೆ ಆಡಳಿತ ವರ್ಗ ಅಂತಿಮವಾಗಿ ಪುಣೆ ಮೂಲದ ಬಿಡ್ದಾರರಿಗೆ ಸೆಕ್ಯೂರಿಟಿ ಕೆಲಸವನ್ನು ಗುತ್ತಿಗೆ ನೀಡಿದೆ. <br /> <br /> <strong>ಹಲವು ಬಾರಿ ನೋಟಿಸ್: </strong>ಕಾರ್ಖಾನೆಯಲ್ಲಿ ಯಾವುದೇ ಟೆಂಡರ್ ಪ್ರಕ್ರಿಯೆಯನ್ನು `ಇ~ ವ್ಯವಸ್ಥೆ ಮೂಲಕ ಕರೆಯಲು ಸಾಧ್ಯವಾಗಿಲ್ಲ. ಈ ವ್ಯವಸ್ಥೆಯಲ್ಲಿ ಹೆಚ್ಚಿನ ಬಿಡ್ದಾರರು ಭಾಗವಹಿಸುವುದಿಲ್ಲ. ಹಾಗಾಗಿ, ಸರ್ಕಾರಿ ಸಂಸ್ಥೆಯಾದರೂ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಇದನ್ನು ಪ್ರಶ್ನಿಸಿ ಸರ್ಕಾರದಿಂದ ನಮಗೆ ಸಾಕಷ್ಟು ನೋಟಿಸ್ ಬಂದಿದೆ ಎನ್ನುತ್ತಾರೆ ಎಂಪಿಎಂ ಜನರಲ್ ಮ್ಯಾನೇಜರ್ ಬಿ.ಎನ್. ಶ್ರೀನಿವಾಸ್.<br /> <br /> ಪ್ರತಿ ಟೆಂಡರ್ ಕರೆದಾಗ ಅದನ್ನು ಸಂಪೂರ್ಣವಾಗಿ ವಿಶ್ಲೇಷಣೆ ಮಾಡಿ ವರದಿ ಪಡೆದು, ಸೂಕ್ತ ಆಯ್ಕೆ ಕುರಿತಾಗಿ ತೀರ್ಮಾನ ತೆಗೆದುಕೊಳ್ಳಲು ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ತಜ್ಞರ ಸಮಿತಿ ಕೆಲಸ ಮಾಡುತ್ತದೆ. ಹಾಗಾಗಿ ಸರಿಯಾದ, ಸೂಕ್ತವಾದ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಸಮಜಾಯಿಷಿ ನೀಡಿದರು.<br /> <br /> ಭದ್ರತಾ ವ್ಯವಸ್ಥೆಯ ಟೆಂಡರ್ ಸಹ `ಇ~ ಪ್ರಕ್ರಿಯೆಯಲ್ಲಿ ನಡೆದಿಲ್ಲ. ಆದರೆ ಆಯ್ಕೆಯಲ್ಲಿ ಯಾವುದೇ ಲೋಪ ನಡೆದಿಲ್ಲ. ಪ್ರಕಟಣೆಯಲ್ಲೂ ಸಹ ಯಾವುದೇ ನಿಬಂಧನೆಗಳ ಉಲ್ಲಂಘನೆಯಾಗಿಲ್ಲ. ಇವೆಲ್ಲಾ ಸಂಪೂರ್ಣ ಕಲ್ಪಿತ ಹೇಳಿಕೆ ಎಂದು ನುಡಿದ ಅವರು, ಎರಡೇ ಕಂಪೆನಿಗಳು ಭಾಗವಹಿಸಿದ್ದ ಈ ಬಿಡ್ನಲ್ಲಿ ಎರಡು ಕಡೆಯವರನ್ನು ಕೂರಿಸಿ ಮಾತುಕತೆ ಮಾಡಿಯೇ ಗುತ್ತಿಗೆ ನೀಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.<br /> ಪ್ರತಿಭಾ ಪುರಸ್ಕಾರ <br /> <br /> ಬ್ರಾಹ್ಮಣರು ಎನ್ನುವ ಕಾರಣಕ್ಕೆ ಪೂರ್ವಾಗ್ರಹ ಪೀಡಿತರಾಗಿ ಅವರನ್ನು ವ್ಯತಿರಿಕ್ತ ಮನೋಭಾವದಿಂದ ನೋಡುವ ಪ್ರವೃತ್ತಿ ಸರಿಯಲ್ಲ ಎಂದು ಸೊರಬದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ರವೀಂದ್ರಭಟ್ ಕುಳಿಬೀಡು ಹೇಳಿದರು.<br /> <br /> ಹವ್ಯಕ ಸಾಗರ ಸಂಘಟನೆ ಶನಿವಾರ ಏರ್ಪಡಿಸಿದ್ದ ಪತ್ರಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಸಮಾಜಕ್ಕೆ ಸೇರಿದವರನ್ನು ಜಾತಿಯ ಕಾರಣದಿಂದ ಅನಾದರದಿಂದ ನೋಡುವ ಮನೋಭಾವ ಕೊನೆಯಾಗಬೇಕು ಎಂದು ಹೇಳಿದರು.<br /> <br /> ಯುವಜನರಲ್ಲಿ ಆಧುನಿಕ ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕಿದೆ. ತಂತ್ರಜ್ಞಾನ ಯುವಕ ಯುವತಿಯರ ಸಾಧನೆಗೆ ಪೂರಕವಾಗಬೇಕೇ ವಿನಾ ಮಾರಕವಾಗಬಾರದು ಎಂದರು.<br /> <br /> ಇದೇ ಸಂದರ್ಭದಲ್ಲಿ ಬ್ರಾಸಂ ಸಂಸ್ಥೆಯ ಮುಖ್ಯಸ್ಥರಾದ ಅ.ರಾ.ಲಂಬೋದರ್ ಹಾಗೂ ಗಣಪತಿ ಅರ್ಬನ್ ಕೋ-ಆಪರೇಟೀವ್ ಬ್ಯಾಂಕ್ನ ಅಧ್ಯಕ್ಷೆ ಶೋಭಾ ಲಂಬೋದರ್ ಅವರನ್ನು ಸನ್ಮಾನಿಸಲಾಯಿತು. <br /> <br /> ಸನ್ಮಾನ ಸ್ವೀಕರಿಸಿ ಮಾತನಾಡಿದ ಅ.ರಾ.ಲಂಬೋದರ್, ಯಾವುದೇ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸುವುದರಿಂದ ಅವರು ಮತ್ತಷ್ಟು ಒಳ್ಳೆಯ ಕಾರ್ಯಗಳನ್ನು ನಡೆಸಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಹೇಳಿದರು.<br /> <br /> ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಹವ್ಯಕ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.<br /> <br /> ಹವ್ಯಕ ಸಾಗರದ ಅಧ್ಯಕ್ಷ ಎನ್.ಎಸ್. ಮಂಕಾಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈತ್ರಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವೆಂಕಟೇಶ್ ಜೋಯಿಸ್ ಸ್ವಾಗತಿಸಿದರು. ರಾಜಶ್ರೀ ಸದಾಶಿವ ಸನ್ಮಾನಿತರನ್ನು ಪರಿಚಯಿಸಿದರು. ಶ್ರೀಧರ ಹೆಗಡೆ ವಂದಿಸಿದರು. ಶರಾವತಿ ಸಿ. ರಾವ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ:</strong> ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವ ಸಲುವಾಗಿ ಗುತ್ತಿಗೆ ಪ್ರಕಟಣೆಯನ್ನು `ಇ~ ಆಡಳಿತ ಮೂಲಕ ನಡೆಸಬೇಕೆಂಬ ನಿಯಮವಿದ್ದರೂ ಸಹ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯೇ ಅದನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವ ಉದಾಹರಣೆ ಇಲ್ಲಿದೆ!<br /> <br /> ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಸರ್ಕಾರಿ ಸ್ವಾಮ್ಯದ ಕಾರ್ಖಾನೆ. ಇಲ್ಲಿಯ ಎಲ್ಲಾ ವ್ಯವಹಾರವು ಸರ್ಕಾರದ ನಿರ್ದೇಶನ ರೀತಿಯ್ಲ್ಲಲೇ ನಡೆಯುವುದು ಸಹಜ ಪ್ರಕ್ರಿಯೆ. ಆದರೆ. ಟೆಂಡರಿಂಗ್ ವ್ಯವಸ್ಥೆಯಲ್ಲಿ ಮಾತ್ರ ಇದರ ಪಾಲನೆಯ ಸ್ಪಷ್ಟ ಉಲ್ಲಂಘನೆ ನಡೆದಿದೆ.<br /> <br /> ಸುಮಾರು ಒಂದು ಕೋಟಿ ವ್ಯವಹಾರದ ಭದ್ರತಾ ವ್ಯವಸ್ಥೆಯ ಟೆಂಡರ್ ಪ್ರಕ್ರಿಯೆ ಸಹ `ಇ~ ಪ್ರಕ್ರಿಯೆಯಲ್ಲಿ ನಡೆದಿಲ್ಲ ಎಂಬ ಕೂಗು ಈಚೆಗೆ ಕಾರ್ಖಾನೆಯಲ್ಲಿ ಪ್ರತಿಧ್ವನಿಸಿತು. ಇದರತ್ತ ಗಮನಿಸಿದಾಗ ಸ್ವತಃ ಆಡಳಿತ ಮಂಡಳಿಯೇ ತನ್ನ ತಪ್ಪನ್ನು ಒಪ್ಪಿಕೊಂಡು ಅದಕ್ಕೆ ಸಮಜಾಯಿಷಿ ನೀಡುವ ಯತ್ನ ಮಾಡಿದೆ.<br /> <br /> ಈ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಅಡಗಿಲ್ಲ. ಸರಿಯಾದ ರೀತಿಯಲ್ಲಿ ಪ್ರಕಟಣೆ ನೀಡಿಲ್ಲ, ನಿಬಂಧನೆಗಳ ಉಲ್ಲಂಘನೆ ನಡೆದಿದೆ. ಕಡಿಮೆ ಮೊತ್ತಕ್ಕೆ ಕೋಟ್ ಮಾಡಿದ ವರದಿಯನ್ನು ನೋಟಿಸ್ ಬೋರ್ಡ್ನಲ್ಲಿ ಹಾಕಿಲ್ಲವೆಂಬ ಆರೋಪ ಕೇಳಿಬಂತು.<br /> <br /> <strong>ಟೆಂಡರ್ ಹಿನ್ನೆಲೆ: </strong>ಮುಂದಿನ ಎರಡು ವರ್ಷಗಳ ಅವಧಿಗೆ ಕಾರ್ಖಾನೆ ಭದ್ರತಾ ವಹಿವಾಟಿನ ಟೆಂಡರ್ ಕರೆಯಲಾಯಿತು. ಇದರನ್ನು ಸರ್ಕಾರದ ಆದೇಶ ಪ್ರಕಾರ `ಇ~ ಪ್ರಕ್ರಿಯೆಯಲ್ಲಿ ನಡೆಸದ ಆಡಳಿತ ಮಂಡಳಿ ಪ್ರಕಟಣೆ ಮೂಲಕ ಆಹ್ವಾನ ನೀಡಿತ್ತು.<br /> <br /> ಈ ಪ್ರಕ್ರಿಯೆಯಲ್ಲಿ ಹೈದ್ರಾಬಾದ್ ಮೂಲದ `ಹಾಕ್ ಸೆಕ್ಯೂರಿಟಿ ಸರ್ವೀಸಸ್~ ಹಾಗೂ ಪುಣೆ ಮೂಲದ `ಬೆಸ್ಟ್ ಸೆಕ್ಯೂರಿಟಿ ಸರ್ವೀಸಸ್~ ಭಾಗವಹಿಸಿದ್ದವು. ಇವರಿಬ್ಬರನ್ನು ಕರೆಸಿ ಮಾತುಕತೆ ಮಾಡಿದ ಕಾರ್ಖಾನೆ ಆಡಳಿತ ವರ್ಗ ಅಂತಿಮವಾಗಿ ಪುಣೆ ಮೂಲದ ಬಿಡ್ದಾರರಿಗೆ ಸೆಕ್ಯೂರಿಟಿ ಕೆಲಸವನ್ನು ಗುತ್ತಿಗೆ ನೀಡಿದೆ. <br /> <br /> <strong>ಹಲವು ಬಾರಿ ನೋಟಿಸ್: </strong>ಕಾರ್ಖಾನೆಯಲ್ಲಿ ಯಾವುದೇ ಟೆಂಡರ್ ಪ್ರಕ್ರಿಯೆಯನ್ನು `ಇ~ ವ್ಯವಸ್ಥೆ ಮೂಲಕ ಕರೆಯಲು ಸಾಧ್ಯವಾಗಿಲ್ಲ. ಈ ವ್ಯವಸ್ಥೆಯಲ್ಲಿ ಹೆಚ್ಚಿನ ಬಿಡ್ದಾರರು ಭಾಗವಹಿಸುವುದಿಲ್ಲ. ಹಾಗಾಗಿ, ಸರ್ಕಾರಿ ಸಂಸ್ಥೆಯಾದರೂ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಇದನ್ನು ಪ್ರಶ್ನಿಸಿ ಸರ್ಕಾರದಿಂದ ನಮಗೆ ಸಾಕಷ್ಟು ನೋಟಿಸ್ ಬಂದಿದೆ ಎನ್ನುತ್ತಾರೆ ಎಂಪಿಎಂ ಜನರಲ್ ಮ್ಯಾನೇಜರ್ ಬಿ.ಎನ್. ಶ್ರೀನಿವಾಸ್.<br /> <br /> ಪ್ರತಿ ಟೆಂಡರ್ ಕರೆದಾಗ ಅದನ್ನು ಸಂಪೂರ್ಣವಾಗಿ ವಿಶ್ಲೇಷಣೆ ಮಾಡಿ ವರದಿ ಪಡೆದು, ಸೂಕ್ತ ಆಯ್ಕೆ ಕುರಿತಾಗಿ ತೀರ್ಮಾನ ತೆಗೆದುಕೊಳ್ಳಲು ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ತಜ್ಞರ ಸಮಿತಿ ಕೆಲಸ ಮಾಡುತ್ತದೆ. ಹಾಗಾಗಿ ಸರಿಯಾದ, ಸೂಕ್ತವಾದ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಸಮಜಾಯಿಷಿ ನೀಡಿದರು.<br /> <br /> ಭದ್ರತಾ ವ್ಯವಸ್ಥೆಯ ಟೆಂಡರ್ ಸಹ `ಇ~ ಪ್ರಕ್ರಿಯೆಯಲ್ಲಿ ನಡೆದಿಲ್ಲ. ಆದರೆ ಆಯ್ಕೆಯಲ್ಲಿ ಯಾವುದೇ ಲೋಪ ನಡೆದಿಲ್ಲ. ಪ್ರಕಟಣೆಯಲ್ಲೂ ಸಹ ಯಾವುದೇ ನಿಬಂಧನೆಗಳ ಉಲ್ಲಂಘನೆಯಾಗಿಲ್ಲ. ಇವೆಲ್ಲಾ ಸಂಪೂರ್ಣ ಕಲ್ಪಿತ ಹೇಳಿಕೆ ಎಂದು ನುಡಿದ ಅವರು, ಎರಡೇ ಕಂಪೆನಿಗಳು ಭಾಗವಹಿಸಿದ್ದ ಈ ಬಿಡ್ನಲ್ಲಿ ಎರಡು ಕಡೆಯವರನ್ನು ಕೂರಿಸಿ ಮಾತುಕತೆ ಮಾಡಿಯೇ ಗುತ್ತಿಗೆ ನೀಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.<br /> ಪ್ರತಿಭಾ ಪುರಸ್ಕಾರ <br /> <br /> ಬ್ರಾಹ್ಮಣರು ಎನ್ನುವ ಕಾರಣಕ್ಕೆ ಪೂರ್ವಾಗ್ರಹ ಪೀಡಿತರಾಗಿ ಅವರನ್ನು ವ್ಯತಿರಿಕ್ತ ಮನೋಭಾವದಿಂದ ನೋಡುವ ಪ್ರವೃತ್ತಿ ಸರಿಯಲ್ಲ ಎಂದು ಸೊರಬದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ರವೀಂದ್ರಭಟ್ ಕುಳಿಬೀಡು ಹೇಳಿದರು.<br /> <br /> ಹವ್ಯಕ ಸಾಗರ ಸಂಘಟನೆ ಶನಿವಾರ ಏರ್ಪಡಿಸಿದ್ದ ಪತ್ರಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಸಮಾಜಕ್ಕೆ ಸೇರಿದವರನ್ನು ಜಾತಿಯ ಕಾರಣದಿಂದ ಅನಾದರದಿಂದ ನೋಡುವ ಮನೋಭಾವ ಕೊನೆಯಾಗಬೇಕು ಎಂದು ಹೇಳಿದರು.<br /> <br /> ಯುವಜನರಲ್ಲಿ ಆಧುನಿಕ ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕಿದೆ. ತಂತ್ರಜ್ಞಾನ ಯುವಕ ಯುವತಿಯರ ಸಾಧನೆಗೆ ಪೂರಕವಾಗಬೇಕೇ ವಿನಾ ಮಾರಕವಾಗಬಾರದು ಎಂದರು.<br /> <br /> ಇದೇ ಸಂದರ್ಭದಲ್ಲಿ ಬ್ರಾಸಂ ಸಂಸ್ಥೆಯ ಮುಖ್ಯಸ್ಥರಾದ ಅ.ರಾ.ಲಂಬೋದರ್ ಹಾಗೂ ಗಣಪತಿ ಅರ್ಬನ್ ಕೋ-ಆಪರೇಟೀವ್ ಬ್ಯಾಂಕ್ನ ಅಧ್ಯಕ್ಷೆ ಶೋಭಾ ಲಂಬೋದರ್ ಅವರನ್ನು ಸನ್ಮಾನಿಸಲಾಯಿತು. <br /> <br /> ಸನ್ಮಾನ ಸ್ವೀಕರಿಸಿ ಮಾತನಾಡಿದ ಅ.ರಾ.ಲಂಬೋದರ್, ಯಾವುದೇ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸುವುದರಿಂದ ಅವರು ಮತ್ತಷ್ಟು ಒಳ್ಳೆಯ ಕಾರ್ಯಗಳನ್ನು ನಡೆಸಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಹೇಳಿದರು.<br /> <br /> ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಹವ್ಯಕ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.<br /> <br /> ಹವ್ಯಕ ಸಾಗರದ ಅಧ್ಯಕ್ಷ ಎನ್.ಎಸ್. ಮಂಕಾಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈತ್ರಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವೆಂಕಟೇಶ್ ಜೋಯಿಸ್ ಸ್ವಾಗತಿಸಿದರು. ರಾಜಶ್ರೀ ಸದಾಶಿವ ಸನ್ಮಾನಿತರನ್ನು ಪರಿಚಯಿಸಿದರು. ಶ್ರೀಧರ ಹೆಗಡೆ ವಂದಿಸಿದರು. ಶರಾವತಿ ಸಿ. ರಾವ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>