<p><strong>ಚಿಕ್ಕಬಳ್ಳಾಪುರ:</strong> ಉಡುಪಿ ಮಠಗಳಲ್ಲಿ ನಿರಂತರವಾಗಿ ಪಂಕ್ತಿ-ಭೇದ ಮತ್ತು ಜಾತಿ-ಭೇದ ನಡೆಯುತ್ತಿದೆ ಎಂದು ಆರೋಪಿಸಿರುವ ಸಿಪಿಎಂ ಇದೇ ಪ್ರಪ್ರಥಮ ಬಾರಿಗೆ ಇಂಥ ಆಚರಣೆ ವಿರುದ್ಧ ರಾಜ್ಯಮಟ್ಟದ ಪ್ರತಿಭಟನೆಯನ್ನು ಜ. 26ರಂದು ಹಮ್ಮಿಕೊಂಡಿದೆ. ನಗರದಲ್ಲಿ ನಡೆಯುತ್ತಿರುವ ಸಿಪಿಎಂ 20ನೇ ರಾಜ್ಯ ಸಮ್ಮೇಳನವು ಮಂಗಳವಾರ ಈ ನಿರ್ಣಯ ಅಂಗೀಕರಿಸಿದೆ.<br /> <br /> `ದೇವಾಲಯ, ಮಠಗಳಲ್ಲಿ ಬೇರೆ ಬೇರೆ ಜಾತಿಯವರಿಗೆ ವಿವಿಧ ಪಂಕ್ತಿಭೇದ ಆಚರಣೆ ನಡೆಸಲಾಗುತ್ತಿದೆ. ರಾಜ್ಯದ ಸುಮಾರು 215 ದೇವಾಲಯ ಮತ್ತು ಮಠಗಳಲ್ಲಿ ನಿರಾತಂಕವಾಗಿ ಪಂಕ್ತಿಭೇದ ಮುಂದುವರೆದಿದ್ದು, ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಉಡುಪಿ ಮಠದ ಎದುರು ಪ್ರತಿಭಟನೆ ನಡೆಸಲು ನಿರ್ಣಯಿಸಲಾಗಿದೆ~ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> `ಪಂಕ್ತಿ ನೆಪದಲ್ಲಿ ವಿಂಗಡಿಸಲು ಜನರ ಮೇಲಂಗಿಗಳನ್ನು ತೆಗೆದು ಬರಿಮೈಯಲ್ಲಿ ಊಟ ನೀಡಲಾಗುತ್ತದೆ. ಆಕಸ್ಮಿಕವಾಗಿ ಬೇರೆ ಜಾತಿಯವರು ಬ್ರಾಹ್ಮಣರ ಪಂಕ್ತಿಯಲ್ಲಿ ಊಟಕ್ಕೆ ಕೂತರೆ, ಅವರನ್ನು ಊಟದ ಮಧ್ಯೆಯೇ ಎಬ್ಬಿಸಲಾಗುತ್ತದೆ. ಇಂಥ ಮೌಢ್ಯ, ಕಂದಾಚಾರದ ಆಚರಣೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು~ ಎಂದು ಅವರು ಹೇಳಿದರು.<br /> <br /> ಮಡೆ ಮಡೆಸ್ನಾನ ಎಂಬ ಅಮಾನವೀಯ, ಅಸಹ್ಯಕರ ಆಚರಣೆ ಕೂಡ ಈ ರೀತಿಯ ಪಂಕ್ತಿಭೇದದಿಂದಲೇ ಉದ್ಭವಿಸಿದ್ದು. ಈ ಎಲ್ಲ ರೀತಿಯ ಅಮಾನವೀಯ ವರ್ತನೆಗಳ ವಿರುದ್ಧ ನಡೆಸುವ ಪ್ರತಿಭಟನೆಗೆ ಇತರ ಪ್ರಗತಿಪರ ಸಂಘಟನೆಗಳು ಸಹ ಬೆಂಬಲ ನೀಡಲಿವೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಉಡುಪಿ ಮಠಗಳಲ್ಲಿ ನಿರಂತರವಾಗಿ ಪಂಕ್ತಿ-ಭೇದ ಮತ್ತು ಜಾತಿ-ಭೇದ ನಡೆಯುತ್ತಿದೆ ಎಂದು ಆರೋಪಿಸಿರುವ ಸಿಪಿಎಂ ಇದೇ ಪ್ರಪ್ರಥಮ ಬಾರಿಗೆ ಇಂಥ ಆಚರಣೆ ವಿರುದ್ಧ ರಾಜ್ಯಮಟ್ಟದ ಪ್ರತಿಭಟನೆಯನ್ನು ಜ. 26ರಂದು ಹಮ್ಮಿಕೊಂಡಿದೆ. ನಗರದಲ್ಲಿ ನಡೆಯುತ್ತಿರುವ ಸಿಪಿಎಂ 20ನೇ ರಾಜ್ಯ ಸಮ್ಮೇಳನವು ಮಂಗಳವಾರ ಈ ನಿರ್ಣಯ ಅಂಗೀಕರಿಸಿದೆ.<br /> <br /> `ದೇವಾಲಯ, ಮಠಗಳಲ್ಲಿ ಬೇರೆ ಬೇರೆ ಜಾತಿಯವರಿಗೆ ವಿವಿಧ ಪಂಕ್ತಿಭೇದ ಆಚರಣೆ ನಡೆಸಲಾಗುತ್ತಿದೆ. ರಾಜ್ಯದ ಸುಮಾರು 215 ದೇವಾಲಯ ಮತ್ತು ಮಠಗಳಲ್ಲಿ ನಿರಾತಂಕವಾಗಿ ಪಂಕ್ತಿಭೇದ ಮುಂದುವರೆದಿದ್ದು, ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಉಡುಪಿ ಮಠದ ಎದುರು ಪ್ರತಿಭಟನೆ ನಡೆಸಲು ನಿರ್ಣಯಿಸಲಾಗಿದೆ~ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> `ಪಂಕ್ತಿ ನೆಪದಲ್ಲಿ ವಿಂಗಡಿಸಲು ಜನರ ಮೇಲಂಗಿಗಳನ್ನು ತೆಗೆದು ಬರಿಮೈಯಲ್ಲಿ ಊಟ ನೀಡಲಾಗುತ್ತದೆ. ಆಕಸ್ಮಿಕವಾಗಿ ಬೇರೆ ಜಾತಿಯವರು ಬ್ರಾಹ್ಮಣರ ಪಂಕ್ತಿಯಲ್ಲಿ ಊಟಕ್ಕೆ ಕೂತರೆ, ಅವರನ್ನು ಊಟದ ಮಧ್ಯೆಯೇ ಎಬ್ಬಿಸಲಾಗುತ್ತದೆ. ಇಂಥ ಮೌಢ್ಯ, ಕಂದಾಚಾರದ ಆಚರಣೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು~ ಎಂದು ಅವರು ಹೇಳಿದರು.<br /> <br /> ಮಡೆ ಮಡೆಸ್ನಾನ ಎಂಬ ಅಮಾನವೀಯ, ಅಸಹ್ಯಕರ ಆಚರಣೆ ಕೂಡ ಈ ರೀತಿಯ ಪಂಕ್ತಿಭೇದದಿಂದಲೇ ಉದ್ಭವಿಸಿದ್ದು. ಈ ಎಲ್ಲ ರೀತಿಯ ಅಮಾನವೀಯ ವರ್ತನೆಗಳ ವಿರುದ್ಧ ನಡೆಸುವ ಪ್ರತಿಭಟನೆಗೆ ಇತರ ಪ್ರಗತಿಪರ ಸಂಘಟನೆಗಳು ಸಹ ಬೆಂಬಲ ನೀಡಲಿವೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>