<p><strong>ಬೆಂಗಳೂರು:</strong> `ಸ್ವಾತಂತ್ರ್ಯ ಚಳವಳಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ~ ಎಂದು ನಾಟಕಕಾರ ಡಾ.ಚಂದ್ರಶೇಖರ ಕಂಬಾರ ಇಲ್ಲಿ ಪ್ರಶಂಸಿದರು.<br /> <br /> ಉತ್ತರ ಕರ್ನಾಟಕ ನಾಗರಿಕರ ಕ್ಷೇಮಾಭಿವೃದ್ಧಿ ಸಂಘವು ಬಸವೇಶ್ವರ ಪ್ರೌಢಶಾಲೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ `ಬನ್ನಿ- ಬಂಗಾರ- 2011~ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಉತ್ತರ ಕರ್ನಾಟಕ ಜನರಲ್ಲಿ ಹೋರಾಟದ ಮನೋಭಾವ ಹೆಚ್ಚಾಗಿದೆ. ಹಾಗಾಗಿ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಭಾಗದ ಜನತೆ ಕರ್ನಾಟಕದ ಬಗೆಗಿನ ಯಾವುದೇ ಹೋರಾಟಪವಿತ್ರ ಕೆಲಸ ಎಂದು ಭಾವಿಸಿದ್ದಾರೆ~ ಎಂದರು.<br /> <br /> `ಸಂಗ್ಯಾಬಾಳ್ಯ ನಾಟಕ ಕುರಿತು, `ಅದೊಂದು ಕೇವಲ ನಾಟಕ ಮಾತ್ರವಾಗಿರಲಿಲ್ಲ. ಸ್ವಾತಂತ್ರ್ಯ ಚಳವಳಿಯನ್ನು ಪ್ರೇರೇಪಿಸುವ ಶಕ್ತಿ ಹಾಗೂ ಅಂಶಗಳು ಅದರಲ್ಲಿ ಅಡಕವಾಗಿದ್ದವು. ಈ ನಾಟಕ ಬ್ರಿಟಿಷರ ನಿದ್ರೆ ಭಂಗ ಮಾಡುವುಲ್ಲದೆ, ನಾಟಕ ಪ್ರದರ್ಶನ ರದ್ದು ಮಾಡುವಷ್ಟು ಬ್ರಿಟಿಷರ ಮೇಲೆ ಪ್ರಭಾವ ಬೀರಿತ್ತು~ ಎಂದು ನೆನೆದರು.<br /> <br /> ಉತ್ತರ ಕರ್ನಾಟಕ ಸಂಸ್ಕೃತಿಗೆ ತನ್ನದೇ ವಿಶೇಷತೆ ಇದೆ. ದೂರದೂರಿಂದ ಬಂದು ನಗರದಲ್ಲಿ ನೆಲೆಸಿರುವ ಜನರು ಇಂದಿಗೂ ತಮ್ಮ ಸಂಸ್ಕೃತಿ ಉಳಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಯಾವುದೇ ಭಾಗದ ಸಂಸ್ಕೃತಿ ಇರಲಿ, ಆ ಸಂಸ್ಕೃತಿ ಆಚರಣೆಗೆ ತಂದು ಬೆಳೆಸುವ ಅಗತ್ಯತೆ ಇದೆ ಅಭಿಪ್ರಾಯಪಟ್ಟರು.<br /> <br /> ಕನ್ನಡ ತಂತ್ರಾಂಶದ ಅಭಿವೃದ್ಧಿಗೆ ಹಿಂದಿನ ಮುಖ್ಯಮಂತ್ರಿಗಳು ಹೆಚ್ಚಿನ ಆಸಕ್ತಿ ತೋರಿ ಕೆಲಸ ಮಾಡಿದ್ದರು. ಈ ಬಗ್ಗೆ ಇಂದಿನ ಸರ್ಕಾರ ಭರವಸೆ ನೀಡು ್ತ ಬಂದಿದೆ. ಹೋರಾಟ ಮಾಡಿಯಾದರೂ ತಂತ್ರಾಂಶ ಅಭಿವೃದ್ಧಿಪಡಿಸಲು ಮುಂದಾಗುತ್ತೇನೆ ಎಂದರು.<br /> <br /> ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, `ಕಂಬಾರರು ದನಿಯಿಲ್ಲದ ವರ್ಗಕ್ಕೆ ಧ್ವನಿಯಾಗಿದ್ದರು. ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಗೆ ಈ ಕೀರ್ತಿ ಲಭಿಸಿದೆ~ ಎಂದು ನುಡಿದರು.<br /> <br /> ಇದೇ ವೇಳೆ ಡಾ.ಚಂದ್ರಶೇಖರ ಕಂಬಾರ ಹಾಗೂ ಪತ್ನಿ ಸತ್ಯಭಾಮ ಕಂಬಾರ ಅವರನ್ನು ಸನ್ಮಾನಿಸಲಾಯಿತು. ವಿಜಯದಶಮಿ ಅಂಗವಾಗಿ ಬನ್ನಿ ಪತ್ರೆ ವಿನಿಮಯ ಮಾಡಿಕೊಳ್ಳಲುವ ಮೂಲಕ ವಿಜಯದಶಮಿಯನ್ನು ಸಾಂಪ್ರದಾಯಿಕವಾಗಿ ಆಚರಿಸಿದರು. <br /> <br /> ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ ಸಾಂಬ್ರಾಣಿ, ಉಪಾಧ್ಯಕ್ಷ ಚಂದ್ರಶೇಖರ ಶಾಂತಗಿರಿ, ಪ್ರಧಾನ ಕಾರ್ಯದರ್ಶಿ ಭೀಮರಾವ ಅವಟಿ, ಖಜಾಂಚಿ ವೀರಣ್ಣ ತಾಂಡೂರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಸ್ವಾತಂತ್ರ್ಯ ಚಳವಳಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ~ ಎಂದು ನಾಟಕಕಾರ ಡಾ.ಚಂದ್ರಶೇಖರ ಕಂಬಾರ ಇಲ್ಲಿ ಪ್ರಶಂಸಿದರು.<br /> <br /> ಉತ್ತರ ಕರ್ನಾಟಕ ನಾಗರಿಕರ ಕ್ಷೇಮಾಭಿವೃದ್ಧಿ ಸಂಘವು ಬಸವೇಶ್ವರ ಪ್ರೌಢಶಾಲೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ `ಬನ್ನಿ- ಬಂಗಾರ- 2011~ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಉತ್ತರ ಕರ್ನಾಟಕ ಜನರಲ್ಲಿ ಹೋರಾಟದ ಮನೋಭಾವ ಹೆಚ್ಚಾಗಿದೆ. ಹಾಗಾಗಿ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಭಾಗದ ಜನತೆ ಕರ್ನಾಟಕದ ಬಗೆಗಿನ ಯಾವುದೇ ಹೋರಾಟಪವಿತ್ರ ಕೆಲಸ ಎಂದು ಭಾವಿಸಿದ್ದಾರೆ~ ಎಂದರು.<br /> <br /> `ಸಂಗ್ಯಾಬಾಳ್ಯ ನಾಟಕ ಕುರಿತು, `ಅದೊಂದು ಕೇವಲ ನಾಟಕ ಮಾತ್ರವಾಗಿರಲಿಲ್ಲ. ಸ್ವಾತಂತ್ರ್ಯ ಚಳವಳಿಯನ್ನು ಪ್ರೇರೇಪಿಸುವ ಶಕ್ತಿ ಹಾಗೂ ಅಂಶಗಳು ಅದರಲ್ಲಿ ಅಡಕವಾಗಿದ್ದವು. ಈ ನಾಟಕ ಬ್ರಿಟಿಷರ ನಿದ್ರೆ ಭಂಗ ಮಾಡುವುಲ್ಲದೆ, ನಾಟಕ ಪ್ರದರ್ಶನ ರದ್ದು ಮಾಡುವಷ್ಟು ಬ್ರಿಟಿಷರ ಮೇಲೆ ಪ್ರಭಾವ ಬೀರಿತ್ತು~ ಎಂದು ನೆನೆದರು.<br /> <br /> ಉತ್ತರ ಕರ್ನಾಟಕ ಸಂಸ್ಕೃತಿಗೆ ತನ್ನದೇ ವಿಶೇಷತೆ ಇದೆ. ದೂರದೂರಿಂದ ಬಂದು ನಗರದಲ್ಲಿ ನೆಲೆಸಿರುವ ಜನರು ಇಂದಿಗೂ ತಮ್ಮ ಸಂಸ್ಕೃತಿ ಉಳಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಯಾವುದೇ ಭಾಗದ ಸಂಸ್ಕೃತಿ ಇರಲಿ, ಆ ಸಂಸ್ಕೃತಿ ಆಚರಣೆಗೆ ತಂದು ಬೆಳೆಸುವ ಅಗತ್ಯತೆ ಇದೆ ಅಭಿಪ್ರಾಯಪಟ್ಟರು.<br /> <br /> ಕನ್ನಡ ತಂತ್ರಾಂಶದ ಅಭಿವೃದ್ಧಿಗೆ ಹಿಂದಿನ ಮುಖ್ಯಮಂತ್ರಿಗಳು ಹೆಚ್ಚಿನ ಆಸಕ್ತಿ ತೋರಿ ಕೆಲಸ ಮಾಡಿದ್ದರು. ಈ ಬಗ್ಗೆ ಇಂದಿನ ಸರ್ಕಾರ ಭರವಸೆ ನೀಡು ್ತ ಬಂದಿದೆ. ಹೋರಾಟ ಮಾಡಿಯಾದರೂ ತಂತ್ರಾಂಶ ಅಭಿವೃದ್ಧಿಪಡಿಸಲು ಮುಂದಾಗುತ್ತೇನೆ ಎಂದರು.<br /> <br /> ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, `ಕಂಬಾರರು ದನಿಯಿಲ್ಲದ ವರ್ಗಕ್ಕೆ ಧ್ವನಿಯಾಗಿದ್ದರು. ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಗೆ ಈ ಕೀರ್ತಿ ಲಭಿಸಿದೆ~ ಎಂದು ನುಡಿದರು.<br /> <br /> ಇದೇ ವೇಳೆ ಡಾ.ಚಂದ್ರಶೇಖರ ಕಂಬಾರ ಹಾಗೂ ಪತ್ನಿ ಸತ್ಯಭಾಮ ಕಂಬಾರ ಅವರನ್ನು ಸನ್ಮಾನಿಸಲಾಯಿತು. ವಿಜಯದಶಮಿ ಅಂಗವಾಗಿ ಬನ್ನಿ ಪತ್ರೆ ವಿನಿಮಯ ಮಾಡಿಕೊಳ್ಳಲುವ ಮೂಲಕ ವಿಜಯದಶಮಿಯನ್ನು ಸಾಂಪ್ರದಾಯಿಕವಾಗಿ ಆಚರಿಸಿದರು. <br /> <br /> ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ ಸಾಂಬ್ರಾಣಿ, ಉಪಾಧ್ಯಕ್ಷ ಚಂದ್ರಶೇಖರ ಶಾಂತಗಿರಿ, ಪ್ರಧಾನ ಕಾರ್ಯದರ್ಶಿ ಭೀಮರಾವ ಅವಟಿ, ಖಜಾಂಚಿ ವೀರಣ್ಣ ತಾಂಡೂರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>