<p>ಆರಾಧನಾ ನಾಟ್ಯಶಾಲೆ: ಶುಕ್ರವಾರ ವಿದ್ವಾನ್ ನಾಗಭೂಷಣ ಅವರ ಶಿಷ್ಯೆ ಉಷಾ ಹರೀಶ್ ಅವರ ಭರತನಾಟ್ಯ ರಂಗಪ್ರವೇಶ.<br /> <br /> ಉಷಾ ಅವರನ್ನು ನಾಟ್ಯ ಲೋಕಕ್ಕೆ ಸೆಳೆದಿದ್ದು ಗೆಜ್ಜೆ ಸದ್ದು, ವರ್ಣಮಯ ಉಡುಪು, ಮನಮೋಹಕ ಆಭರಣ. ಚೆನ್ನೈನ ಕೃಷ್ಣಾ ಮ್ಯೂಸಿಕಲ್ ಅಕಾಡೆಮಿಯಲ್ಲಿ 5ರ ಎಳವೆಯಲ್ಲೇ ಭರತನಾಟ್ಯ ಕಲಿಕೆ ಆರಂಭಿಸಿ ಹತ್ತು ವರ್ಷ ಅಭ್ಯಾಸ ಮಾಡಿದರು. <br /> <br /> ಬೆಂಗಳೂರಿಗೆ ಮರಳಿದ ನಂತರ ಆರಾಧನಾ ನಾಟ್ಯಶಾಲೆಯ ವಿದ್ವಾನ್ ನಾಗಭೂಷಣ ಅವರ ಬಳಿ ನೃತ್ಯಾಭ್ಯಾಸ ಮುಂದುವರಿಸಿದರು. ಭರತನಾಟ್ಯದ ಸೂಕ್ಷ್ಮತೆಗಳನ್ನೆಲ್ಲ ಮೈಗೂಡಿಸಿಕೊಂಡ ಉಷಾ, ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.<br /> <br /> ಇತ್ತೀಚೆಗೆ ಜಾನಪದ ನೃತ್ಯ ಪ್ರಕಾರದಿಂದ ಆಕರ್ಷಿತರಾಗಿರುವ ಉಷಾ ಶಾಲಾ ಸಮಾರಂಭಗಳಿಗೆ ಜಾನಪದ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಹತ್ತು ವರ್ಷಗಳಿಂದ ನೃತ್ಯ ತರಬೇತಿ ನೀಡುತ್ತಿದ್ದು, ಅವರ ಹಲವು ವಿದ್ಯಾರ್ಥಿಗಳು ಭರತನಾಟ್ಯದಲ್ಲಿ ಜೂನಿಯರ್ ಉತ್ತೀರ್ಣರಾಗಿದ್ದಾರೆ.<br /> <br /> ಉಷಾ ಅವರ ಗುರು ವಿದ್ವಾನ್ ನಾಗಭೂಷಣ ಎರಡು ದಶಕಗಳಿಂದ ನೃತ್ಯ ಹೇಳಿಕೊಡುತ್ತಿದ್ದಾರೆ. ಉತ್ತಮ ಸಂಗೀತಗಾರರು ಆಗಿರುವ ಅವರು ನಟುವಾಂಗದಲ್ಲೂ ಎತ್ತಿದ ಕೈ. ಸಾಂಪ್ರದಾಯಿಕ ಶೈಲಿಯ ಭರತನಾಟ್ಯವನ್ನು ಸುಂದರವಾಗಿ ಅಭಿನಯಿಸುತ್ತಾರೆ. <br /> <br /> ಅತಿಥಿಗಳು: ಎಸ್. ಐ. ಭಾವೀಕಟ್ಟಿ, ಡಾ. ಮಹೇಶ ಜೋಶಿ, ಡಾ. ಸೂರ್ಯಪ್ರಸಾದ್, ಮುಳ್ಳಹಳ್ಳಿ ಸೂರಿ, ಲಲಿತಾ ಶ್ರೀನಿವಾಸನ್, ಪದ್ಮಜಾ ಶ್ರೀನಿವಾಸನ್.<br /> ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆರಾಧನಾ ನಾಟ್ಯಶಾಲೆ: ಶುಕ್ರವಾರ ವಿದ್ವಾನ್ ನಾಗಭೂಷಣ ಅವರ ಶಿಷ್ಯೆ ಉಷಾ ಹರೀಶ್ ಅವರ ಭರತನಾಟ್ಯ ರಂಗಪ್ರವೇಶ.<br /> <br /> ಉಷಾ ಅವರನ್ನು ನಾಟ್ಯ ಲೋಕಕ್ಕೆ ಸೆಳೆದಿದ್ದು ಗೆಜ್ಜೆ ಸದ್ದು, ವರ್ಣಮಯ ಉಡುಪು, ಮನಮೋಹಕ ಆಭರಣ. ಚೆನ್ನೈನ ಕೃಷ್ಣಾ ಮ್ಯೂಸಿಕಲ್ ಅಕಾಡೆಮಿಯಲ್ಲಿ 5ರ ಎಳವೆಯಲ್ಲೇ ಭರತನಾಟ್ಯ ಕಲಿಕೆ ಆರಂಭಿಸಿ ಹತ್ತು ವರ್ಷ ಅಭ್ಯಾಸ ಮಾಡಿದರು. <br /> <br /> ಬೆಂಗಳೂರಿಗೆ ಮರಳಿದ ನಂತರ ಆರಾಧನಾ ನಾಟ್ಯಶಾಲೆಯ ವಿದ್ವಾನ್ ನಾಗಭೂಷಣ ಅವರ ಬಳಿ ನೃತ್ಯಾಭ್ಯಾಸ ಮುಂದುವರಿಸಿದರು. ಭರತನಾಟ್ಯದ ಸೂಕ್ಷ್ಮತೆಗಳನ್ನೆಲ್ಲ ಮೈಗೂಡಿಸಿಕೊಂಡ ಉಷಾ, ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.<br /> <br /> ಇತ್ತೀಚೆಗೆ ಜಾನಪದ ನೃತ್ಯ ಪ್ರಕಾರದಿಂದ ಆಕರ್ಷಿತರಾಗಿರುವ ಉಷಾ ಶಾಲಾ ಸಮಾರಂಭಗಳಿಗೆ ಜಾನಪದ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಹತ್ತು ವರ್ಷಗಳಿಂದ ನೃತ್ಯ ತರಬೇತಿ ನೀಡುತ್ತಿದ್ದು, ಅವರ ಹಲವು ವಿದ್ಯಾರ್ಥಿಗಳು ಭರತನಾಟ್ಯದಲ್ಲಿ ಜೂನಿಯರ್ ಉತ್ತೀರ್ಣರಾಗಿದ್ದಾರೆ.<br /> <br /> ಉಷಾ ಅವರ ಗುರು ವಿದ್ವಾನ್ ನಾಗಭೂಷಣ ಎರಡು ದಶಕಗಳಿಂದ ನೃತ್ಯ ಹೇಳಿಕೊಡುತ್ತಿದ್ದಾರೆ. ಉತ್ತಮ ಸಂಗೀತಗಾರರು ಆಗಿರುವ ಅವರು ನಟುವಾಂಗದಲ್ಲೂ ಎತ್ತಿದ ಕೈ. ಸಾಂಪ್ರದಾಯಿಕ ಶೈಲಿಯ ಭರತನಾಟ್ಯವನ್ನು ಸುಂದರವಾಗಿ ಅಭಿನಯಿಸುತ್ತಾರೆ. <br /> <br /> ಅತಿಥಿಗಳು: ಎಸ್. ಐ. ಭಾವೀಕಟ್ಟಿ, ಡಾ. ಮಹೇಶ ಜೋಶಿ, ಡಾ. ಸೂರ್ಯಪ್ರಸಾದ್, ಮುಳ್ಳಹಳ್ಳಿ ಸೂರಿ, ಲಲಿತಾ ಶ್ರೀನಿವಾಸನ್, ಪದ್ಮಜಾ ಶ್ರೀನಿವಾಸನ್.<br /> ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>