<p><strong>ಕೊಪ್ಪಳ: </strong>ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂರು ತಿಂಗಳ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಗರದ ಹಮಾಲರ ಕಾಲೊನಿಯಲ್ಲಿ ಮಂಗಳವಾರ ನಡೆದಿದೆ.<br /> <br /> ಮುನ್ನಿ ಬೇಗಂ (25), ರಾಹೀನಾ ಕೊಲೆಯಾದವರು. ಪತ್ನಿಯ ತವರು ಮನೆಯಲ್ಲೇ ಕೊಲೆ ಮಾಡಿರುವ ಆರೋಪಿ ಸುಲೈಮಾನ್, ಘಟನೆ ಬಳಿಕ ಪರಾರಿಯಾಗಿದ್ದಾನೆ.<br /> <br /> ಇನ್ನೊಬ್ಬ ಪುತ್ರಿ ಮುಜ್ಜು ಅದೇ ಮನೆಯಲ್ಲಿ ಬೇರೆಯವರ ಜತೆ ಮಲಗಿದ್ದ ಕಾರಣ ಪಾರಾಗಿದ್ದಾಳೆ. ಮುನ್ನಿ ಬೇಗಂ ಅವರಿಗೆ 2 ವರ್ಷಗಳ ಹಿಂದೆ ಕುಷ್ಟಗಿಯ ಸುಲೈಮಾನ್ ಜತೆ ವಿವಾಹ ಮಾಡಲಾಗಿತ್ತು.<br /> <br /> ಸುಲೈಮಾನ್ ಕುಷ್ಟಗಿಯ ಬ್ಯಾಂಕ್ವೊಂದರಲ್ಲಿ ಕಾವಲುಗಾರನಾಗಿದ್ದ. ಪತ್ನಿ ಮೇಲೆ ಸದಾ ಅನುಮಾನಿಸುತ್ತಿದ್ದ. ವಿವಾಹ ಸಂದರ್ಭ ₹ 1 ಲಕ್ಷ ವರದಕ್ಷಿಣೆ ನೀಡಲಾಗಿತ್ತು. ಆಗಾಗ ಹಣ, ಬಂಗಾರ ತರುವಂತೆ ಮುನ್ನಿ ಅವರನ್ನು ಪೀಡಿಸುತ್ತಿದ್ದ.<br /> <br /> ಕೆಲವು ದಿನಗಳ ಹಿಂದೆ ₹ 50 ಸಾವಿರ ನಗದು ಹಾಗೂ ಟಾಟಾ ಏಸ್ ವಾಹನ ಕೊಡಿಸುವಂತೆ ಬೇಡಿಕೆಯಿಟ್ಟಿದ್ದ. ಅದರಂತೆ ₹ 30 ಸಾವಿರ ನೀಡಲಾಗಿತ್ತು. ಕಿರುಕುಳ ಸಂಬಂಧ ಈ ಹಿಂದೆ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮುನ್ನಿ ಸಹೋದರ ಅಮ್ಜದ್ ಖಾನ್ ತಿಳಿಸಿದರು.<br /> <br /> ಮುನ್ನಿ ಮೂರು ತಿಂಗಳ ಹಿಂದೆ ಹೆರಿಗೆಗಾಗಿ ತವರು ಮನೆಗೆ ಬಂದಿದ್ದರು. ಬಳಿಕ ತಮ್ಮ ಸಹೋದರನ ಮದುವೆ ನಿಗದಿಯಾದ್ದರಿಂದ ಇಲ್ಲಿಯೇ ಉಳಿದುಕೊಂಡಿದ್ದರು. ಮೂರು ದಿನಗಳ ಹಿಂದೆ ಸುಲೇಮಾನ್ ಪತ್ನಿಯ ಮನೆಗೆ ಬಂದಿದ್ದ.<br /> <br /> ಸೋಮವಾರ ಸಂಜೆ ಹೊಸಪೇಟೆಯಲ್ಲಿ ಸಹೋದರನ ಮದುವೆ ಆರತಕ್ಷತೆ ಮುಗಿಸಿ ಬಂದಿದ್ದರು. ನಸುಕಿನಲ್ಲಿ ಆರೋಪಿಯು ಚಹಾ ಮಾಡಿತರುವಂತೆ ಪತ್ನಿಗೆ ಹೇಳಿದ್ದ. ಅದರಂತೆ ಮುನ್ನಿ ಚಹಾ ಕೊಟ್ಟಿದ್ದರು. ಮುಂದೇನಾಯಿತೋ ಗೊತ್ತಿಲ್ಲ ಎಂದು ಅಮ್ಜದ್ ಖಾನ್ ಗದ್ಗದಿತರಾದರು.<br /> <br /> ಮೃತದೇಹದ ಮೇಲೆ ಬಟ್ಟೆ ಇರಲಿಲ್ಲ. ಚಾದರದಲ್ಲಿ ಸುತ್ತಿ ಇಡಲಾಗಿತ್ತು ಎಂದು ಕುಟುಂಬದವರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ: </strong>ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂರು ತಿಂಗಳ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಗರದ ಹಮಾಲರ ಕಾಲೊನಿಯಲ್ಲಿ ಮಂಗಳವಾರ ನಡೆದಿದೆ.<br /> <br /> ಮುನ್ನಿ ಬೇಗಂ (25), ರಾಹೀನಾ ಕೊಲೆಯಾದವರು. ಪತ್ನಿಯ ತವರು ಮನೆಯಲ್ಲೇ ಕೊಲೆ ಮಾಡಿರುವ ಆರೋಪಿ ಸುಲೈಮಾನ್, ಘಟನೆ ಬಳಿಕ ಪರಾರಿಯಾಗಿದ್ದಾನೆ.<br /> <br /> ಇನ್ನೊಬ್ಬ ಪುತ್ರಿ ಮುಜ್ಜು ಅದೇ ಮನೆಯಲ್ಲಿ ಬೇರೆಯವರ ಜತೆ ಮಲಗಿದ್ದ ಕಾರಣ ಪಾರಾಗಿದ್ದಾಳೆ. ಮುನ್ನಿ ಬೇಗಂ ಅವರಿಗೆ 2 ವರ್ಷಗಳ ಹಿಂದೆ ಕುಷ್ಟಗಿಯ ಸುಲೈಮಾನ್ ಜತೆ ವಿವಾಹ ಮಾಡಲಾಗಿತ್ತು.<br /> <br /> ಸುಲೈಮಾನ್ ಕುಷ್ಟಗಿಯ ಬ್ಯಾಂಕ್ವೊಂದರಲ್ಲಿ ಕಾವಲುಗಾರನಾಗಿದ್ದ. ಪತ್ನಿ ಮೇಲೆ ಸದಾ ಅನುಮಾನಿಸುತ್ತಿದ್ದ. ವಿವಾಹ ಸಂದರ್ಭ ₹ 1 ಲಕ್ಷ ವರದಕ್ಷಿಣೆ ನೀಡಲಾಗಿತ್ತು. ಆಗಾಗ ಹಣ, ಬಂಗಾರ ತರುವಂತೆ ಮುನ್ನಿ ಅವರನ್ನು ಪೀಡಿಸುತ್ತಿದ್ದ.<br /> <br /> ಕೆಲವು ದಿನಗಳ ಹಿಂದೆ ₹ 50 ಸಾವಿರ ನಗದು ಹಾಗೂ ಟಾಟಾ ಏಸ್ ವಾಹನ ಕೊಡಿಸುವಂತೆ ಬೇಡಿಕೆಯಿಟ್ಟಿದ್ದ. ಅದರಂತೆ ₹ 30 ಸಾವಿರ ನೀಡಲಾಗಿತ್ತು. ಕಿರುಕುಳ ಸಂಬಂಧ ಈ ಹಿಂದೆ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮುನ್ನಿ ಸಹೋದರ ಅಮ್ಜದ್ ಖಾನ್ ತಿಳಿಸಿದರು.<br /> <br /> ಮುನ್ನಿ ಮೂರು ತಿಂಗಳ ಹಿಂದೆ ಹೆರಿಗೆಗಾಗಿ ತವರು ಮನೆಗೆ ಬಂದಿದ್ದರು. ಬಳಿಕ ತಮ್ಮ ಸಹೋದರನ ಮದುವೆ ನಿಗದಿಯಾದ್ದರಿಂದ ಇಲ್ಲಿಯೇ ಉಳಿದುಕೊಂಡಿದ್ದರು. ಮೂರು ದಿನಗಳ ಹಿಂದೆ ಸುಲೇಮಾನ್ ಪತ್ನಿಯ ಮನೆಗೆ ಬಂದಿದ್ದ.<br /> <br /> ಸೋಮವಾರ ಸಂಜೆ ಹೊಸಪೇಟೆಯಲ್ಲಿ ಸಹೋದರನ ಮದುವೆ ಆರತಕ್ಷತೆ ಮುಗಿಸಿ ಬಂದಿದ್ದರು. ನಸುಕಿನಲ್ಲಿ ಆರೋಪಿಯು ಚಹಾ ಮಾಡಿತರುವಂತೆ ಪತ್ನಿಗೆ ಹೇಳಿದ್ದ. ಅದರಂತೆ ಮುನ್ನಿ ಚಹಾ ಕೊಟ್ಟಿದ್ದರು. ಮುಂದೇನಾಯಿತೋ ಗೊತ್ತಿಲ್ಲ ಎಂದು ಅಮ್ಜದ್ ಖಾನ್ ಗದ್ಗದಿತರಾದರು.<br /> <br /> ಮೃತದೇಹದ ಮೇಲೆ ಬಟ್ಟೆ ಇರಲಿಲ್ಲ. ಚಾದರದಲ್ಲಿ ಸುತ್ತಿ ಇಡಲಾಗಿತ್ತು ಎಂದು ಕುಟುಂಬದವರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>