<p><strong>ಬೆಂಗಳೂರು: </strong>`ಎಂಜಿನಿಯರಿಂಗ್ ಬೋಧನೆಗೆ ಪ್ರಾಧಾನ್ಯತೆ ಇದ್ದರೂ ಅದು ಬೆಳಕಿಗೆ ಬರುತ್ತಿಲ್ಲ. ಇತರೆ ಶಿಕ್ಷಕರಂತೆ ಎಂಜಿನಿಯರಿಂಗ್ ಬೋಧಕರಿಗೆ ಮಾನ್ಯತೆ ದೊರೆಯುತ್ತಿಲ್ಲ~ ಎಂದು ಖಗೋಳ ವಿಜ್ಞಾನಿ ಡಾ.ಯು.ಆರ್.ರಾವ್ ವಿಷಾದ ವ್ಯಕ್ತಪಡಿಸಿದರು.<br /> <br /> ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಶೃತ್ ಮತ್ತು ಸ್ಮಿತ್ ಪ್ರತಿಷ್ಠಾನ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಯಂಗ್ ಟೆಕ್ ಇಂಡಿಯಾ- 2011~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. <br /> <br /> `ಸುಮಾರು 25 ಸಾವಿರ ಎಂಜಿನಿಯರಿಂಗ್ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ. ಅವರು ಬೇರೆಲ್ಲಾ ಬೋಧಕರಂತೆ ಸಮರ್ಥರಾಗಿದ್ದಾರೆ. ಇಂತಹ ಶಿಕ್ಷಕರಿಗೆ ಸರ್ಕಾರಿ ಬೋಧಕರಿಗೆ ಸಿಗುವ ಮಾನ್ಯತೆ ದೊರೆಯಬೇಕಿದೆ~ ಎಂದರು. <br /> <br /> `ಅಣ್ಣಾ ಹಜಾರೆ ಅವರ ಹೋರಾಟದ ನಿರೀಕ್ಷೆಗೂ ಮೀರಿದ ಯಶಸ್ಸಿಗೆ ಯುವಕರೇ ಪ್ರಮುಖ ಕಾರಣ. ಈ ಆಂದೋಲನ ಯುವಕರಲ್ಲಿ ಮಹಾನ್ ಶಕ್ತಿ ಇದೆ ಎನ್ನುವುದನ್ನು ಬಿಂಬಿಸಿದೆ. ಯುವಕರ ಶಕ್ತಿಯನ್ನು ಬಿಂಬಿಸಲು ಆಂದೋಲನ ವು ಒಂದು ಉತ್ತಮ ವೇದಿಕೆಯಾಯಿತು~ ಎಂದು ಹೇಳಿದರು. <br /> <br /> ಕುಲಪತಿ ಡಾ. ಎಚ್.ಮಹೇಶಪ್ಪ, ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ವೀರೇಶಾನಂದಜೀ ಸರಸ್ವತಿ ಸ್ವಾಮೀಜಿ, ಸುಪ್ರಿಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಡಿ.ಎನ್.ಖುರಾನಾ, ಉದ್ಯಮಿ ಸಂಜಯ್ ಸಿಂಗ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಎಂಜಿನಿಯರಿಂಗ್ ಬೋಧನೆಗೆ ಪ್ರಾಧಾನ್ಯತೆ ಇದ್ದರೂ ಅದು ಬೆಳಕಿಗೆ ಬರುತ್ತಿಲ್ಲ. ಇತರೆ ಶಿಕ್ಷಕರಂತೆ ಎಂಜಿನಿಯರಿಂಗ್ ಬೋಧಕರಿಗೆ ಮಾನ್ಯತೆ ದೊರೆಯುತ್ತಿಲ್ಲ~ ಎಂದು ಖಗೋಳ ವಿಜ್ಞಾನಿ ಡಾ.ಯು.ಆರ್.ರಾವ್ ವಿಷಾದ ವ್ಯಕ್ತಪಡಿಸಿದರು.<br /> <br /> ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಶೃತ್ ಮತ್ತು ಸ್ಮಿತ್ ಪ್ರತಿಷ್ಠಾನ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಯಂಗ್ ಟೆಕ್ ಇಂಡಿಯಾ- 2011~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. <br /> <br /> `ಸುಮಾರು 25 ಸಾವಿರ ಎಂಜಿನಿಯರಿಂಗ್ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ. ಅವರು ಬೇರೆಲ್ಲಾ ಬೋಧಕರಂತೆ ಸಮರ್ಥರಾಗಿದ್ದಾರೆ. ಇಂತಹ ಶಿಕ್ಷಕರಿಗೆ ಸರ್ಕಾರಿ ಬೋಧಕರಿಗೆ ಸಿಗುವ ಮಾನ್ಯತೆ ದೊರೆಯಬೇಕಿದೆ~ ಎಂದರು. <br /> <br /> `ಅಣ್ಣಾ ಹಜಾರೆ ಅವರ ಹೋರಾಟದ ನಿರೀಕ್ಷೆಗೂ ಮೀರಿದ ಯಶಸ್ಸಿಗೆ ಯುವಕರೇ ಪ್ರಮುಖ ಕಾರಣ. ಈ ಆಂದೋಲನ ಯುವಕರಲ್ಲಿ ಮಹಾನ್ ಶಕ್ತಿ ಇದೆ ಎನ್ನುವುದನ್ನು ಬಿಂಬಿಸಿದೆ. ಯುವಕರ ಶಕ್ತಿಯನ್ನು ಬಿಂಬಿಸಲು ಆಂದೋಲನ ವು ಒಂದು ಉತ್ತಮ ವೇದಿಕೆಯಾಯಿತು~ ಎಂದು ಹೇಳಿದರು. <br /> <br /> ಕುಲಪತಿ ಡಾ. ಎಚ್.ಮಹೇಶಪ್ಪ, ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ವೀರೇಶಾನಂದಜೀ ಸರಸ್ವತಿ ಸ್ವಾಮೀಜಿ, ಸುಪ್ರಿಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಡಿ.ಎನ್.ಖುರಾನಾ, ಉದ್ಯಮಿ ಸಂಜಯ್ ಸಿಂಗ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>