<p><strong>ಬೆಂಗಳೂರು:</strong> `ಆ್ಯಮ್ವೆ ಆಪರ್ಚುನಿಟಿ ಫೌಂಡೇಷನ್~ (ಎ.ಒ.ಎಫ್), `ನನ್ಹೆ ಚಿತ್ರಕಾರ್~ ಎಂಬ ಚಿತ್ರಕಲೆ ಸ್ಪರ್ಧೆಯನ್ನು ಭಾನುವಾರ ನಗರದ ಪ್ರೆಸ್ಕ್ಲಬ್ನಲ್ಲಿ ಏರ್ಪಡಿಸಿತ್ತು.<br /> <br /> ಸ್ಪರ್ಧೆಯಲ್ಲಿ ಸುಮಾರು 80 ಪುಟಾಣಿ ಮಕ್ಕಳು ಭಾಗವಹಿಸಿದ್ದರು. ಆ್ಯಮ್ವೆ ವಹಿವಾಟು ಮಾಲೀಕರ ಮಕ್ಕಳೊಂದಿಗೆ ಎ.ಒ.ಎಫ್ ಪಾಲುದಾರ ದೀಪಾ ಅಕಾಡೆಮಿ ಹಾಗೂ ಸುರಕ್ಷಾ ಚಾರಿಟೆಬಲ್ ಟ್ರಸ್ಟ್ನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಅಂಧ ಮಕ್ಕಳು ಕೂಡ ಭಾಗವಹಿಸಿದ್ದರು.<br /> <br /> ಅವಕಾಶ ವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.`ವನ್ಯಜೀವಿಗಳು ಮತ್ತು ಸಂರಕ್ಷಣೆ~ ಎಂಬ ಧ್ಯೇಯದೊಂದಿಗೆ ನಡೆದ ಸ್ಪರ್ಧೆಯಲ್ಲಿ ಬಹುಮಾನ ಪಡೆದವರ ವಿವರ ಇಲ್ಲಿದೆ. 4 ರಿಂದ 8 ವರ್ಷದ ವಿಭಾಗ- ಸುಜಲ್ ಜೈನ್ (ಪ್ರಥಮ), ಅದಿತಿ (ದ್ವಿತೀಯ), ತನೀಶಾ (ತೃತೀಯ). 9 ರಿಂದ 12 ವರ್ಷದ ವಿಭಾಗ- ತುಷಾರಾ (ಪ್ರಥಮ), ಅಂಧ ವಿದ್ಯಾರ್ಥಿನಿ ಅಂಬಿಕಾ (ದ್ವಿತೀಯ), ತಿತಿಕ್ಷಾ (ತೃತೀಯ).<br /> <br /> ದೀಪಾ ಅಕಾಡೆಮಿಗೆ 1,29,000 ರೂಪಾಯಿ, ಸುರಕ್ಷಾ ಚಾರಿಟೆಬಲ್ ಟ್ರಸ್ಟ್ಗೆ 99 ಸಾವಿರ ಮೌಲ್ಯದ ಚೆಕ್ನ್ನು ಹಸ್ತಾಂತರಿಸಲಾಯಿತು. ಸ್ಪರ್ಧೆ ನಂತರ ಮಕ್ಕಳಿಗೆ ಉಚಿತ ದಂತ ತಪಾಸಣೆ ಶಿಬಿರ ನಡೆಯಿತು. ಚಿತ್ರಕಲಾವಿದ ಕೆ.ವಿ.ಸುಬ್ರಮಣ್ಯಂ ಬಹುಮಾನಗಳನ್ನು ವಿತರಿಸಿದರು. ಫೌಂಡೇಷನ್ನ ಅನಿತಾ ರಾವ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಆ್ಯಮ್ವೆ ಆಪರ್ಚುನಿಟಿ ಫೌಂಡೇಷನ್~ (ಎ.ಒ.ಎಫ್), `ನನ್ಹೆ ಚಿತ್ರಕಾರ್~ ಎಂಬ ಚಿತ್ರಕಲೆ ಸ್ಪರ್ಧೆಯನ್ನು ಭಾನುವಾರ ನಗರದ ಪ್ರೆಸ್ಕ್ಲಬ್ನಲ್ಲಿ ಏರ್ಪಡಿಸಿತ್ತು.<br /> <br /> ಸ್ಪರ್ಧೆಯಲ್ಲಿ ಸುಮಾರು 80 ಪುಟಾಣಿ ಮಕ್ಕಳು ಭಾಗವಹಿಸಿದ್ದರು. ಆ್ಯಮ್ವೆ ವಹಿವಾಟು ಮಾಲೀಕರ ಮಕ್ಕಳೊಂದಿಗೆ ಎ.ಒ.ಎಫ್ ಪಾಲುದಾರ ದೀಪಾ ಅಕಾಡೆಮಿ ಹಾಗೂ ಸುರಕ್ಷಾ ಚಾರಿಟೆಬಲ್ ಟ್ರಸ್ಟ್ನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಅಂಧ ಮಕ್ಕಳು ಕೂಡ ಭಾಗವಹಿಸಿದ್ದರು.<br /> <br /> ಅವಕಾಶ ವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.`ವನ್ಯಜೀವಿಗಳು ಮತ್ತು ಸಂರಕ್ಷಣೆ~ ಎಂಬ ಧ್ಯೇಯದೊಂದಿಗೆ ನಡೆದ ಸ್ಪರ್ಧೆಯಲ್ಲಿ ಬಹುಮಾನ ಪಡೆದವರ ವಿವರ ಇಲ್ಲಿದೆ. 4 ರಿಂದ 8 ವರ್ಷದ ವಿಭಾಗ- ಸುಜಲ್ ಜೈನ್ (ಪ್ರಥಮ), ಅದಿತಿ (ದ್ವಿತೀಯ), ತನೀಶಾ (ತೃತೀಯ). 9 ರಿಂದ 12 ವರ್ಷದ ವಿಭಾಗ- ತುಷಾರಾ (ಪ್ರಥಮ), ಅಂಧ ವಿದ್ಯಾರ್ಥಿನಿ ಅಂಬಿಕಾ (ದ್ವಿತೀಯ), ತಿತಿಕ್ಷಾ (ತೃತೀಯ).<br /> <br /> ದೀಪಾ ಅಕಾಡೆಮಿಗೆ 1,29,000 ರೂಪಾಯಿ, ಸುರಕ್ಷಾ ಚಾರಿಟೆಬಲ್ ಟ್ರಸ್ಟ್ಗೆ 99 ಸಾವಿರ ಮೌಲ್ಯದ ಚೆಕ್ನ್ನು ಹಸ್ತಾಂತರಿಸಲಾಯಿತು. ಸ್ಪರ್ಧೆ ನಂತರ ಮಕ್ಕಳಿಗೆ ಉಚಿತ ದಂತ ತಪಾಸಣೆ ಶಿಬಿರ ನಡೆಯಿತು. ಚಿತ್ರಕಲಾವಿದ ಕೆ.ವಿ.ಸುಬ್ರಮಣ್ಯಂ ಬಹುಮಾನಗಳನ್ನು ವಿತರಿಸಿದರು. ಫೌಂಡೇಷನ್ನ ಅನಿತಾ ರಾವ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>