<p>ಬೆಂಗಳೂರು: ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ ಶ್ರಿರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಕಂಪೆನಿ ಲಿ.(ಎಸ್ಟಿಎಫ್ಸಿ), `ಪರಿವರ್ತನೆಯಾಗದ-ಸುರಕ್ಷಿತ ಡಿಬೆಂಚರ್'(ಎನ್ಸಿಡಿ)ಗಳ ಮೂಲಕ ರೂ.750 ಕೋಟಿ ಸಂಗ್ರಹ ಗುರಿ ಇಟ್ಟುಕೊಂಡಿದೆ.<br /> <br /> ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಜಿ.ರೇವಣಕರ್, ತಲಾ ರೂ.1000 ಮುಖಬೆಲೆಯ `ಎನ್ಸಿಡಿ'ಗಳನ್ನು ಜು. 16ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದರು.<br /> <br /> ಪ್ರಸ್ತಾವಿತ ಹೂಡಿಕೆ ಯೋಜನೆಗೆ `ಕ್ರಿಸಿಲ್' ಸದ್ಯ ಕ್ರಿಸಿಲ್ ಎಎ/ಸುಸ್ಥಿರ(ಸ್ಟೇಬಲ್) ಹಾಗೂ `ಕೇರ್' ಸಂಸ್ಥೆ ಕೇರ್ ಎಎ+ ರೇಟಿಂಗ್ ನೀಡಿವೆ. `ಎನ್ಸಿಡಿ'ನಂತರದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್ಎಸ್ಇ) ಮತ್ತು ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್ಇ) ವಹಿವಾಟು ಪಟ್ಟಿ ಸೇರಲಿವೆ ಎಂದು ವಿವರಿಸಿದರು.<br /> <br /> ಈ ಯೋಜನೆಯಡಿ ಸಂಗ್ರಹವಾಗುವ ಹಣವನ್ನು ಸಾಲ ವಿತರಣೆ, ಬಂಡವಾಳ ಹೂಡಿಕೆ, ಹಳೆ ಸಾಲ ತೀರುವಳಿ, ವಹಿವಾಟು ನಿರ್ವಹಣೆ ವಿನಿಯೋಜನೆ ಸೇರಿದಂತೆ ಕಂಪೆನಿಯ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ ಶ್ರಿರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಕಂಪೆನಿ ಲಿ.(ಎಸ್ಟಿಎಫ್ಸಿ), `ಪರಿವರ್ತನೆಯಾಗದ-ಸುರಕ್ಷಿತ ಡಿಬೆಂಚರ್'(ಎನ್ಸಿಡಿ)ಗಳ ಮೂಲಕ ರೂ.750 ಕೋಟಿ ಸಂಗ್ರಹ ಗುರಿ ಇಟ್ಟುಕೊಂಡಿದೆ.<br /> <br /> ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಜಿ.ರೇವಣಕರ್, ತಲಾ ರೂ.1000 ಮುಖಬೆಲೆಯ `ಎನ್ಸಿಡಿ'ಗಳನ್ನು ಜು. 16ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದರು.<br /> <br /> ಪ್ರಸ್ತಾವಿತ ಹೂಡಿಕೆ ಯೋಜನೆಗೆ `ಕ್ರಿಸಿಲ್' ಸದ್ಯ ಕ್ರಿಸಿಲ್ ಎಎ/ಸುಸ್ಥಿರ(ಸ್ಟೇಬಲ್) ಹಾಗೂ `ಕೇರ್' ಸಂಸ್ಥೆ ಕೇರ್ ಎಎ+ ರೇಟಿಂಗ್ ನೀಡಿವೆ. `ಎನ್ಸಿಡಿ'ನಂತರದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್ಎಸ್ಇ) ಮತ್ತು ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್ಇ) ವಹಿವಾಟು ಪಟ್ಟಿ ಸೇರಲಿವೆ ಎಂದು ವಿವರಿಸಿದರು.<br /> <br /> ಈ ಯೋಜನೆಯಡಿ ಸಂಗ್ರಹವಾಗುವ ಹಣವನ್ನು ಸಾಲ ವಿತರಣೆ, ಬಂಡವಾಳ ಹೂಡಿಕೆ, ಹಳೆ ಸಾಲ ತೀರುವಳಿ, ವಹಿವಾಟು ನಿರ್ವಹಣೆ ವಿನಿಯೋಜನೆ ಸೇರಿದಂತೆ ಕಂಪೆನಿಯ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>