<p>ಬೀದರ್: `ನನಗೆ ರಾಜಕಾರಣಿಗಳಿಂದ ಜೀವ ಬೆದರಿಕೆ ಇದೆ. ನನ್ನ ಜೀವಕ್ಕೆ ಅಪಾಯ ಆದರೆ ನನ್ನ ಹೆಂಡತಿ, ಮಕ್ಕಳಿಗೆ ಯಾರು ಆಸರೆ? ನೋಡಿಕೊಳ್ಳುವರು ಯಾರು? ನೀವು ನೋಡುತ್ತಿರಾ'...<br /> <br /> ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಿ.ಆರ್. ಮಂಜುನಾಥ ಅವರ ಪ್ರಶ್ನೆ ಇದು. ಎಪಿಎಂಸಿ ವಾರ್ಷಿಕ ಕ್ರಿಯಾ ಯೋಜನೆಯ ವಿವರ ತಿಳಿಸಲು ಅಧ್ಯಕ್ಷರು ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಎದುರಾದ ಮಾರುಕಟ್ಟೆ ಅವ್ಯವಸ್ಥೆ ಕುರಿತ ಪ್ರಶ್ನೆಗೆ ಕಾರ್ಯದರ್ಶಿಗಳು ಉತ್ತರಿಸಿದ ಪರಿ ಇದು.<br /> <br /> ಆವರಣದಲ್ಲಿ ಮಳೆ ನೀರು ಹರಿದು ಹೋಗಲಾಗದ ಸ್ಥಿತಿ, ರಸ್ತೆ ದುಃಸ್ಥಿತಿ ಸರಿಪಡಿಸಲಾಗುವುದಿಲ್ಲವೇ ಎಂಬ ಪ್ರಶ್ನೆಗೆ ಅಸಹಾಯಕತೆ ವ್ಯಕ್ತಪಡಿಸಿದ ಅವರು, `ಅನೇಕ ಬಾರಿ ಈ ಅವ್ಯವಸ್ಥೆ ಬಗೆಗೆ ಸಂಬಂಧಿಸಿದವರ ಗಮನಕ್ಕೆ ತಂದಿದ್ದೇನೆ. ಅದಕ್ಕೆ ಸ್ಪಂದಿಸುತ್ತಲೇ ಇಲ್ಲ. ಬದಲಾಗಿ, ನನಗೆ ಜೀವ ಬೆದರಿಕೆ ಹಾಕಿದ್ದಾರೆ' ಎಂದರು.<br /> <br /> ಗಾಂಧಿಗಂಜ್ನಲ್ಲಿ ತರಕಾರಿ ವ್ಯಾಪಾರಿಗಳು ರಸ್ತೆಯಲ್ಲಿ ನಿಂತುಕೊಂಡೇ ತರಕಾರಿ ಮಾರುತ್ತಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ. ಈ ಬಗ್ಗೆ ಏನು ಕ್ರಮ ತೆಗೆದು ಕೊಂಡಿದ್ದೀರಿ ಎಂಬ ಪ್ರಶ್ನೆ ಎದುರಾದಾಗ ಕಾರ್ಯದರ್ಶಿ ಮಂಜುನಾಥ ಅವರು ಏಕಾಏಕಿ ಕೋಪಗೊಂಡರು.<br /> <br /> `ತರಕಾರಿ ವ್ಯಾಪಾರಿಗಳಿಗೆ ಅನೇಕ ಬಾರಿ ಸೂಚನೆ ನೀಡಿದ್ದರೂ ಕೇಳುತ್ತಿಲ್ಲ. ಏನು ಮಾಡಬೇಕು? ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನ ಆಗುತ್ತಿಲ್ಲ. ತರಕಾರಿ ವ್ಯಾಪಾರಿಗಳಿಗೆ ಒತ್ತಡ ಹಾಕಿದ್ದರೆ ರಾಜಕಾರಣಿಗಳಿಂದ ಜೀವ ಬೆದರಿಕೆ ಬರುತ್ತಿದೆ, ಈ ರೀತಿ ಜೀವ ಬೆದರಿಕೆ ಬಂದರೆ ಹೇಗೆ ಕೆಲಸ ಮಾಡಬೇಕು? ಎಂದು ಪ್ರಶ್ನಿಸಿದರು.<br /> <br /> ಅವ್ಯವಸ್ಥೆಯನ್ನು ಕುರಿತಂತೆ ಗಮನಸೆಳೆದ ಪತ್ರಕರ್ತರ ಮೇಲೇ ಏರು ದನಿಯಲ್ಲಿ ಅವರು ತಿರುಗಿ ಬಿದ್ದರು. ಆದರೆ, ತಮಗೆ ಯಾವ ಅಧಿಕಾರಿ ಅಥವಾ ರಾಜಕಾರಣಿಯಿಂದ ಜೀವ ಬೆದರಿಕೆ ಇದೆ ಎಂಬುದನ್ನು ಬಹಿರಂಗ ಪಡಿಸಲಿಲ್ಲ.<br /> <br /> `ವ್ಯಾಪಾರಿಗಳ ಮೇಲೆ ಒತ್ತಡ ಹಾಕಿ ಜೀವ ಕಳೆದುಕೊಂಡು ಕೆಲಸ ಮಾಡಿ ಅಂತಿರಾ, ಜೀವ ಹೋದರೆ ನನ್ನ ಹೆಂಡತಿ, ಮಕ್ಕಳಿಗೆ ಯಾರು ನೋಡುತ್ತಾರೆ, ನೀವೂ ನೋಡುತ್ತಿರಾ ಎಂದು ಪ್ರಶ್ನೆ ಹಾಕಿದರು. `ಗಾಂಧಿಗಂಜ್ನ ಅವ್ಯವಸ್ಥೆ ಸರಿಪಡಿಸುವ ವಿಷಯದಲ್ಲಿಯೂ ನಾವು ನಿರ್ಲಕ್ಷ್ಯ ವಹಿಸಿಲ್ಲ. ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ' ಎಂದು ನಿರ್ಗಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: `ನನಗೆ ರಾಜಕಾರಣಿಗಳಿಂದ ಜೀವ ಬೆದರಿಕೆ ಇದೆ. ನನ್ನ ಜೀವಕ್ಕೆ ಅಪಾಯ ಆದರೆ ನನ್ನ ಹೆಂಡತಿ, ಮಕ್ಕಳಿಗೆ ಯಾರು ಆಸರೆ? ನೋಡಿಕೊಳ್ಳುವರು ಯಾರು? ನೀವು ನೋಡುತ್ತಿರಾ'...<br /> <br /> ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಿ.ಆರ್. ಮಂಜುನಾಥ ಅವರ ಪ್ರಶ್ನೆ ಇದು. ಎಪಿಎಂಸಿ ವಾರ್ಷಿಕ ಕ್ರಿಯಾ ಯೋಜನೆಯ ವಿವರ ತಿಳಿಸಲು ಅಧ್ಯಕ್ಷರು ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಎದುರಾದ ಮಾರುಕಟ್ಟೆ ಅವ್ಯವಸ್ಥೆ ಕುರಿತ ಪ್ರಶ್ನೆಗೆ ಕಾರ್ಯದರ್ಶಿಗಳು ಉತ್ತರಿಸಿದ ಪರಿ ಇದು.<br /> <br /> ಆವರಣದಲ್ಲಿ ಮಳೆ ನೀರು ಹರಿದು ಹೋಗಲಾಗದ ಸ್ಥಿತಿ, ರಸ್ತೆ ದುಃಸ್ಥಿತಿ ಸರಿಪಡಿಸಲಾಗುವುದಿಲ್ಲವೇ ಎಂಬ ಪ್ರಶ್ನೆಗೆ ಅಸಹಾಯಕತೆ ವ್ಯಕ್ತಪಡಿಸಿದ ಅವರು, `ಅನೇಕ ಬಾರಿ ಈ ಅವ್ಯವಸ್ಥೆ ಬಗೆಗೆ ಸಂಬಂಧಿಸಿದವರ ಗಮನಕ್ಕೆ ತಂದಿದ್ದೇನೆ. ಅದಕ್ಕೆ ಸ್ಪಂದಿಸುತ್ತಲೇ ಇಲ್ಲ. ಬದಲಾಗಿ, ನನಗೆ ಜೀವ ಬೆದರಿಕೆ ಹಾಕಿದ್ದಾರೆ' ಎಂದರು.<br /> <br /> ಗಾಂಧಿಗಂಜ್ನಲ್ಲಿ ತರಕಾರಿ ವ್ಯಾಪಾರಿಗಳು ರಸ್ತೆಯಲ್ಲಿ ನಿಂತುಕೊಂಡೇ ತರಕಾರಿ ಮಾರುತ್ತಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ. ಈ ಬಗ್ಗೆ ಏನು ಕ್ರಮ ತೆಗೆದು ಕೊಂಡಿದ್ದೀರಿ ಎಂಬ ಪ್ರಶ್ನೆ ಎದುರಾದಾಗ ಕಾರ್ಯದರ್ಶಿ ಮಂಜುನಾಥ ಅವರು ಏಕಾಏಕಿ ಕೋಪಗೊಂಡರು.<br /> <br /> `ತರಕಾರಿ ವ್ಯಾಪಾರಿಗಳಿಗೆ ಅನೇಕ ಬಾರಿ ಸೂಚನೆ ನೀಡಿದ್ದರೂ ಕೇಳುತ್ತಿಲ್ಲ. ಏನು ಮಾಡಬೇಕು? ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನ ಆಗುತ್ತಿಲ್ಲ. ತರಕಾರಿ ವ್ಯಾಪಾರಿಗಳಿಗೆ ಒತ್ತಡ ಹಾಕಿದ್ದರೆ ರಾಜಕಾರಣಿಗಳಿಂದ ಜೀವ ಬೆದರಿಕೆ ಬರುತ್ತಿದೆ, ಈ ರೀತಿ ಜೀವ ಬೆದರಿಕೆ ಬಂದರೆ ಹೇಗೆ ಕೆಲಸ ಮಾಡಬೇಕು? ಎಂದು ಪ್ರಶ್ನಿಸಿದರು.<br /> <br /> ಅವ್ಯವಸ್ಥೆಯನ್ನು ಕುರಿತಂತೆ ಗಮನಸೆಳೆದ ಪತ್ರಕರ್ತರ ಮೇಲೇ ಏರು ದನಿಯಲ್ಲಿ ಅವರು ತಿರುಗಿ ಬಿದ್ದರು. ಆದರೆ, ತಮಗೆ ಯಾವ ಅಧಿಕಾರಿ ಅಥವಾ ರಾಜಕಾರಣಿಯಿಂದ ಜೀವ ಬೆದರಿಕೆ ಇದೆ ಎಂಬುದನ್ನು ಬಹಿರಂಗ ಪಡಿಸಲಿಲ್ಲ.<br /> <br /> `ವ್ಯಾಪಾರಿಗಳ ಮೇಲೆ ಒತ್ತಡ ಹಾಕಿ ಜೀವ ಕಳೆದುಕೊಂಡು ಕೆಲಸ ಮಾಡಿ ಅಂತಿರಾ, ಜೀವ ಹೋದರೆ ನನ್ನ ಹೆಂಡತಿ, ಮಕ್ಕಳಿಗೆ ಯಾರು ನೋಡುತ್ತಾರೆ, ನೀವೂ ನೋಡುತ್ತಿರಾ ಎಂದು ಪ್ರಶ್ನೆ ಹಾಕಿದರು. `ಗಾಂಧಿಗಂಜ್ನ ಅವ್ಯವಸ್ಥೆ ಸರಿಪಡಿಸುವ ವಿಷಯದಲ್ಲಿಯೂ ನಾವು ನಿರ್ಲಕ್ಷ್ಯ ವಹಿಸಿಲ್ಲ. ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ' ಎಂದು ನಿರ್ಗಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>