<p><strong>ಬಾಗಲಕೋಟೆ:</strong> ಮುಳುಗಡೆ ನಗರ ಬಾಗಲಕೋಟೆ ಸೇರಿದಂತೆ ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬದ ಸಡಗರ ಸಂಭ್ರಮ ಮನೆಮಾಡಿದೆ. <br /> <br /> ದೀಪಾವಳಿ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಭರಾಟೆಯಿಂದ ಸಾಗಿದೆ. ಕಳೆದ ಬಾರಿಗಿಂತ ಈ ಬಾರಿ ದೀಪಗಳ ಹಬ್ಬ ದೀಪಾವಳಿಯನ್ನು ಜನತೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಬಾಗಲಕೋಟೆ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿದೆ. <br /> <br /> ನಗರದ ಕೃಷ್ಣಾ ಚಿತ್ರಮಂದಿರದ ಬಳಿ ಇರುವ ನಗರಸಭೆ ಜಾಗದಲ್ಲಿ ಬಾಳೆ ಗಿಡ, ಚೆಂಡುಹೂವು, ಅಡಿಕೆ ಸಿಂಗಾರ, ಕಬ್ಬು, ಹೂವು, ಹಣ್ಣು, ಮಾವಿನ ತೋರಣ ಸೇರಿದಂತೆ ಮತ್ತಿತರ ಸಾಮಾಗ್ರಿಗಳ ಮಾರಾಟ ಭರಾಟೆಯಿಂದ ನಡೆದಿದೆ.<br /> <br /> ಹಳೆ ಅಂಚೆ ಕಚೇರಿ ರಸ್ತೆಯಿಂದ ಟಾಂಗಾ ಸ್ಟ್ಯಾಂಡ್ವರೆಗೆ ಹಣ್ಣು ಹಂಪಲುಗಳು, ಗೂಡುದೀಪ, ತೋರಣ, ಲಕ್ಷ್ಮೀ ಪೂಜೆಗೆ ಬೇಕಾಗುವ ಉಡಿ ತುಂಬುವ ಸಾಮಾಗ್ರಿಗಳ ಮಾರಾಟ ನಡೆಯಿತು.<br /> <br /> ಗಿಜುಗುಡುತ್ತಿದ್ದ ಮಾರುಕಟ್ಟೆ: ಬಾಗಲಕೋಟೆ ನಗರದಲ್ಲಿ ಕಳೆದ ಒಂದು ವಾರದಿಂದ ದೀಪಾವಳಿ ಹಬ್ಬದ ಸಿದ್ಧತೆಗಾಗಿ ಹಾಗೂ ಪೂಜಾ ಸಾಮಾಗ್ರಿ, ಹೊಸ ಬಟ್ಟೆ, ಬಂಗಾರ, ಬೆಳ್ಳಿಯನ್ನು ಜನರು ಮಾರು ಕಟ್ಟೆಯಲ್ಲಿ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.<br /> <br /> ಕಳೆದ ಎರಡು ವರ್ಷಕ್ಕಿಂತ ಈ ಭಾರಿ ಮಾರುಕಟ್ಟೆ ಯಲ್ಲಿ ವ್ಯಾಪಾರ ಜೋರಾಗಿ ನಡೆದಿದೆ ಎಂದು ವ್ಯಾಪಾ ರಸ್ಥರ ತಿಳಿಸಿದರು. <br /> <br /> ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೀಪಾವಳಿ ಹಬ್ಬದ ಪೂಜಾ ಸಾಮಾಗ್ರಿಗಳು ದುಪ್ಪಟ್ಟು ಬೆಲೆಯಲ್ಲಿ ಮಾರಾಟವಾಗುತ್ತಿದೆ. ಚೆಂಡು ಹೂವು ಕಳೆದ ಬಾರಿ ಕೆಜಿಗೆ ರೂ. 30 ರಿಂದ 40 ಕ್ಕೆ ಸಿಕ್ಕಿದ್ದರೆ ಈ ಬಾರಿ ರೂ.80 ರಿಂದ ರೂ.100 ವರೆಗೆ ಮಾರಾಟವಾಗುತ್ತಿದೆ. 5 ಕಬ್ಬುಗಳಿಗೆ ಕಳೆದ ಬಾರಿ ರೂ. 25 ಇದ್ದರೆ ಈ ಭಾರಿ 40ರಿಂದ ರೂ.50ಕ್ಕೆ ಏರಿದೆ. <br /> <br /> ಇನ್ನೂ ಬಾಳೆ ಹಣ್ಣು ರೂ.40 ಮತ್ತು 50 ಡಜನ್ಗೆ ಆದರೆ ಮತ್ತಿತರ ಸಾಮಾಗ್ರಿಗಳ ಬೆಲೆಯು ದುಪ್ಪಟ್ಟಾಗಿದೆ. ವಸ್ತುಗಳ ಬೆಲೆ ಗಗನಕ್ಕೆ ಏರಿದ್ದರೂ ಜನತೆ ಮಾತ್ರ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿ ರುವ ದೃಶ್ಯ ಕಂಡುಬಂದಿದೆ.<br /> <br /> ಲಕ್ಷ್ಮೀ ಪೂಜೆ:ದೀಪಾವಳಿ ಹಬ್ಬದ ಪ್ರಯುಕ್ತ ಬುಧವಾರ ಸಂಜೆ ಅಂಗಡಿ, ಮುಂಗಟ್ಟು, ಕಚೇರಿಗಳಲ್ಲಿ ಲಕ್ಷ್ಮಿ ಪೂಜೆ ಹಾಗೂ ವಾಹನಗಳನ್ನು ಹೂವಿನಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.<br /> <br /> ಮುತ್ತೈದೆಯರಿಗೆ ದೀಪಾವಳಿ ಹಬ್ಬದ ಅಂಗವಾಗಿ ಮಹಿಳೆಯರಿಗೆ ಉಡಿ ತುಂಬಿ ಸಂಭ್ರಮಿಸಿದರು. ಮನೆಗಳ ಅಂಗಳದಲ್ಲಿ ರಂಗೋಲಿಯನ್ನು ಚಿತ್ರಸಿ, ದೀಪಗಳನ್ನು ಬೆಳಗಿಸಿ ಸಂಭ್ರಮಿಸಿದರು.<br /> <br /> ನಗರದ ದೇವಾಲಯಗಳಲ್ಲೂ ಹಬ್ಬದ ಅಂಗವಾಗಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯಿತು.<br /> ಪಟಾಕಿ ಸಿಡಿತ: ಲಕ್ಷ್ಮೀ ಪೂಜೆ ನಡೆಯುತ್ತಿದ್ದಂತೆ ಮನೆ ಗಳ ಅಂಗಳದಲ್ಲಿ ಹಾಗೂ ಆಕಾಶದಲ್ಲಿ ಬಣ್ಣ ಬಣ್ಣದ ಪಟಾಕಿಗಳ ಸಿಡಿಸಿ ಚಿಣ್ಣರು ಸಂಭ್ರಮಿಸಿದರು. <br /> <br /> ಸಂಚಾರಕ್ಕೆ ತೊಂದರೆ: ದೀಪಾವಳಿ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಿದ್ದ ಕಾರಣ ನಗರದ ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ ವೃತ್ತದ ಮೂಲಕ ಮಾರುಕಟ್ಟೆಯಲ್ಲಿ ಹೋಗುತ್ತಿದ್ದ ಸಂಚಾರಕ್ಕೆ ತಡೆ ನೀಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಮುಳುಗಡೆ ನಗರ ಬಾಗಲಕೋಟೆ ಸೇರಿದಂತೆ ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬದ ಸಡಗರ ಸಂಭ್ರಮ ಮನೆಮಾಡಿದೆ. <br /> <br /> ದೀಪಾವಳಿ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಭರಾಟೆಯಿಂದ ಸಾಗಿದೆ. ಕಳೆದ ಬಾರಿಗಿಂತ ಈ ಬಾರಿ ದೀಪಗಳ ಹಬ್ಬ ದೀಪಾವಳಿಯನ್ನು ಜನತೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಬಾಗಲಕೋಟೆ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿದೆ. <br /> <br /> ನಗರದ ಕೃಷ್ಣಾ ಚಿತ್ರಮಂದಿರದ ಬಳಿ ಇರುವ ನಗರಸಭೆ ಜಾಗದಲ್ಲಿ ಬಾಳೆ ಗಿಡ, ಚೆಂಡುಹೂವು, ಅಡಿಕೆ ಸಿಂಗಾರ, ಕಬ್ಬು, ಹೂವು, ಹಣ್ಣು, ಮಾವಿನ ತೋರಣ ಸೇರಿದಂತೆ ಮತ್ತಿತರ ಸಾಮಾಗ್ರಿಗಳ ಮಾರಾಟ ಭರಾಟೆಯಿಂದ ನಡೆದಿದೆ.<br /> <br /> ಹಳೆ ಅಂಚೆ ಕಚೇರಿ ರಸ್ತೆಯಿಂದ ಟಾಂಗಾ ಸ್ಟ್ಯಾಂಡ್ವರೆಗೆ ಹಣ್ಣು ಹಂಪಲುಗಳು, ಗೂಡುದೀಪ, ತೋರಣ, ಲಕ್ಷ್ಮೀ ಪೂಜೆಗೆ ಬೇಕಾಗುವ ಉಡಿ ತುಂಬುವ ಸಾಮಾಗ್ರಿಗಳ ಮಾರಾಟ ನಡೆಯಿತು.<br /> <br /> ಗಿಜುಗುಡುತ್ತಿದ್ದ ಮಾರುಕಟ್ಟೆ: ಬಾಗಲಕೋಟೆ ನಗರದಲ್ಲಿ ಕಳೆದ ಒಂದು ವಾರದಿಂದ ದೀಪಾವಳಿ ಹಬ್ಬದ ಸಿದ್ಧತೆಗಾಗಿ ಹಾಗೂ ಪೂಜಾ ಸಾಮಾಗ್ರಿ, ಹೊಸ ಬಟ್ಟೆ, ಬಂಗಾರ, ಬೆಳ್ಳಿಯನ್ನು ಜನರು ಮಾರು ಕಟ್ಟೆಯಲ್ಲಿ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.<br /> <br /> ಕಳೆದ ಎರಡು ವರ್ಷಕ್ಕಿಂತ ಈ ಭಾರಿ ಮಾರುಕಟ್ಟೆ ಯಲ್ಲಿ ವ್ಯಾಪಾರ ಜೋರಾಗಿ ನಡೆದಿದೆ ಎಂದು ವ್ಯಾಪಾ ರಸ್ಥರ ತಿಳಿಸಿದರು. <br /> <br /> ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೀಪಾವಳಿ ಹಬ್ಬದ ಪೂಜಾ ಸಾಮಾಗ್ರಿಗಳು ದುಪ್ಪಟ್ಟು ಬೆಲೆಯಲ್ಲಿ ಮಾರಾಟವಾಗುತ್ತಿದೆ. ಚೆಂಡು ಹೂವು ಕಳೆದ ಬಾರಿ ಕೆಜಿಗೆ ರೂ. 30 ರಿಂದ 40 ಕ್ಕೆ ಸಿಕ್ಕಿದ್ದರೆ ಈ ಬಾರಿ ರೂ.80 ರಿಂದ ರೂ.100 ವರೆಗೆ ಮಾರಾಟವಾಗುತ್ತಿದೆ. 5 ಕಬ್ಬುಗಳಿಗೆ ಕಳೆದ ಬಾರಿ ರೂ. 25 ಇದ್ದರೆ ಈ ಭಾರಿ 40ರಿಂದ ರೂ.50ಕ್ಕೆ ಏರಿದೆ. <br /> <br /> ಇನ್ನೂ ಬಾಳೆ ಹಣ್ಣು ರೂ.40 ಮತ್ತು 50 ಡಜನ್ಗೆ ಆದರೆ ಮತ್ತಿತರ ಸಾಮಾಗ್ರಿಗಳ ಬೆಲೆಯು ದುಪ್ಪಟ್ಟಾಗಿದೆ. ವಸ್ತುಗಳ ಬೆಲೆ ಗಗನಕ್ಕೆ ಏರಿದ್ದರೂ ಜನತೆ ಮಾತ್ರ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿ ರುವ ದೃಶ್ಯ ಕಂಡುಬಂದಿದೆ.<br /> <br /> ಲಕ್ಷ್ಮೀ ಪೂಜೆ:ದೀಪಾವಳಿ ಹಬ್ಬದ ಪ್ರಯುಕ್ತ ಬುಧವಾರ ಸಂಜೆ ಅಂಗಡಿ, ಮುಂಗಟ್ಟು, ಕಚೇರಿಗಳಲ್ಲಿ ಲಕ್ಷ್ಮಿ ಪೂಜೆ ಹಾಗೂ ವಾಹನಗಳನ್ನು ಹೂವಿನಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.<br /> <br /> ಮುತ್ತೈದೆಯರಿಗೆ ದೀಪಾವಳಿ ಹಬ್ಬದ ಅಂಗವಾಗಿ ಮಹಿಳೆಯರಿಗೆ ಉಡಿ ತುಂಬಿ ಸಂಭ್ರಮಿಸಿದರು. ಮನೆಗಳ ಅಂಗಳದಲ್ಲಿ ರಂಗೋಲಿಯನ್ನು ಚಿತ್ರಸಿ, ದೀಪಗಳನ್ನು ಬೆಳಗಿಸಿ ಸಂಭ್ರಮಿಸಿದರು.<br /> <br /> ನಗರದ ದೇವಾಲಯಗಳಲ್ಲೂ ಹಬ್ಬದ ಅಂಗವಾಗಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯಿತು.<br /> ಪಟಾಕಿ ಸಿಡಿತ: ಲಕ್ಷ್ಮೀ ಪೂಜೆ ನಡೆಯುತ್ತಿದ್ದಂತೆ ಮನೆ ಗಳ ಅಂಗಳದಲ್ಲಿ ಹಾಗೂ ಆಕಾಶದಲ್ಲಿ ಬಣ್ಣ ಬಣ್ಣದ ಪಟಾಕಿಗಳ ಸಿಡಿಸಿ ಚಿಣ್ಣರು ಸಂಭ್ರಮಿಸಿದರು. <br /> <br /> ಸಂಚಾರಕ್ಕೆ ತೊಂದರೆ: ದೀಪಾವಳಿ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಿದ್ದ ಕಾರಣ ನಗರದ ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ ವೃತ್ತದ ಮೂಲಕ ಮಾರುಕಟ್ಟೆಯಲ್ಲಿ ಹೋಗುತ್ತಿದ್ದ ಸಂಚಾರಕ್ಕೆ ತಡೆ ನೀಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>