<p>ಉಳ್ಳಾಗಡ್ಡೆ ಬೆಳೆದು ಸರಿಯಾದ ಧಾರಣೆ ಸಿಗದೆ ನಷ್ಟ ಅನುಭವಿಸುತ್ತಿದ್ದ ರೈತ ಕಲ್ಲಪ್ಪ ಪ್ರತಿ ಬಾರಿ ದಲ್ಲಾಳಿಗಳಿಂದ ಮೋಸಕ್ಕೆ ಬಲಿಯಾಗುತ್ತಿದ್ದರು.<br /> <br /> ಪ್ರತಿ ಬಾರಿ ಟೊಮೆಟೊ ಬೆಳೆದು ಮಾರುಕಟ್ಟೆಗೆ ಹೋಗಿ ಮಾರಲಾಗದ ಮಾಲೂರಿನ ಯುವ ರೈತ ವೆಂಕಟೇಶ ಜಮೀನಿಗೆ ಬಂದು ಖರೀದಿಸುತ್ತಿದ್ದ ಮಧ್ಯವರ್ತಿಗಳು ಕೇಳಿದ ಬೆಲೆಗೆ ಮಾರಿ ನಷ್ಟ ಅನುಭವಿಸುತ್ತಿದ್ದರು.<br /> <br /> ತೆಂಗು ಬೆಳೆಯುತ್ತಿದ್ದ ಹೊಸದುರ್ಗದ ರಮೇಶ್ ಅವರು ಮಾರುಕಟ್ಟೆಯಲ್ಲಿರುವ ನಿಖರ ಧಾರಣೆ ತಿಳಿಯದೇ ಊರಲ್ಲಿಯೇ ಒಣಕೊಬ್ಬರಿಯನ್ನು ಕೈಗೆ ಬಂದ ದರಕ್ಕೆ ಕೊಟ್ಟು ನಂತರ ಪರಿತಪಿಸುತ್ತಿದ್ದರು.<br /> <br /> ಕುರಂಬಳ್ಳಿಯ ಗಿರೀಶ್ ಅವರದು ಅಡಿಕೆಗೆ ಯೋಗ್ಯ ಬೆಲೆ ಸಿಗುತ್ತಿಲ್ಲ ಎನ್ನುವ ಕೊರಗು. ಜತೆಗೆ ಪ್ರತಿ ಸಾರಿ ಕೂಡ ಅವರಿಗೆ ದಲ್ಲಾಳಿಗಳಿಂದ ದರದಲ್ಲಿ ನಷ್ಟವಾಗುತ್ತಿತ್ತು.<br /> ಹೀಗೆ ಮಧ್ಯವರ್ತಿಗಳ ಶೋಷಣೆ, ತಾವು ಬೆಳೆದ ಬೆಳೆಗೆ ಯೋಗ್ಯ ಬೆಲೆ ಪಡೆಯದೆ ವಂಚನೆಗೊಳಗಾಗುವ ಇಂಥ ರೈತರಿಗೊಂದು ಸಂತಸದ ಸುದ್ದಿ ತಂದಿದೆ `ಫಸಲ್~. ಅದೇ ನಿಖರ ಬೆಲೆಗಾಗಿ `ಫಸಲ್~ ಎಸ್ಎಂಎಸ್ ಸೇವೆ. <br /> <br /> ಇದರ ಮೂಲಕ ಇನ್ನು ಮುಂದೆ ರೈತರು ತಾವು ಬೆಳೆದ ಫಸಲನ್ನು ಮಾರಾಟಕ್ಕೆ ಒಯ್ಯುವ ಮೊದಲೇ ಬೇರೆ ಬೇರೆ ಮಾರುಕಟ್ಟೆಯಲ್ಲಿ ಆ ಉತ್ಪನ್ನಕ್ಕೆ ಇರುವ ಅಂದಿನ ನಿಖರ ಬೆಲೆ ತಿಳಿದುಕೊಂಡು ಅಧಿಕ ಬೆಲೆ ಇರುವ ಕಡೆ ಹೋಗಿ ಲಾಭ ಪಡೆಯಬಹುದು.<br /> <br /> ಮಧ್ಯಮ ಗಾತ್ರದ ಉದ್ಯಮಗಳು, ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಮತ್ತು ಕ್ರೆಡಿಟ್ ಯೂನಿಯನ್ಗಳು, ಗ್ರಾಹಕರು ಮತ್ತು ಅಕೌಂಟಿಂಗ್ ವೃತ್ತಿಪರರಿಗೆ ಉದ್ಯಮ ಹಾಗೂ ಹಣಕಾಸು ನಿರ್ವಹಣಾ ಸೇವೆ ನೀಡುವ ಅಮೆರಿಕ ಮೂಲದ ಇನ್ಟ್ಯೂಟ್ ಐಎನ್ಸಿ (ನಾಸ್ ಡಾಕ್: ಐಎನ್ಟಿಯು) ಇದೀಗ ರೈತರ ಅನುಕೂಲಕ್ಕಾಗಿ ಎಸ್ಎಂಎಸ್ ಆಧಾರಿತ `ಫಸಲ್~ ಸೇವೆ ಪ್ರಾರಂಭಿಸಿದೆ. ರೈತರಿಗೆ ನಯಾಪೈಸೆ ಕೂಡ ಖರ್ಚಿಲ್ಲದೆ ಸಂಪೂರ್ಣ ಉಚಿತವಾಗಿ ವಿವಿಧ ಕೃಷಿ ಉತ್ಪನ್ನಗಳ ಬೆಲೆಗಳನ್ನು ತಿಳಿಸುತ್ತದೆ.<br /> <br /> ಇನ್ಟ್ಯೂಟ್ನ ಈ `ಫಸಲ್~ ಎಸ್ಎಂಎಸ್ ಸೇವೆಯು ರೈತರ ವೈಯಕ್ತಿಕ ಅಪೇಕ್ಷೆಯನ್ನಾಧರಿಸಿ ಅವರು ಬೆಳೆದ ಉತ್ಪನ್ನಕ್ಕೆ ಅವರಿಷ್ಟದ ಮಾರುಕಟ್ಟೆಗಳಲ್ಲಿರುವ ನಿಖರ ಬೆಲೆಯನ್ನು ಅನುಕೂಲವಾದ ಭಾಷೆಯಲ್ಲಿ ಸೂಕ್ತ ಸಮಯದಲ್ಲಿ ರವಾನಿಸುತ್ತದೆ. ಈ ಮೂಲಕ ರೈತರು ಹಾಗೂ ಖರೀದಿದಾರರ ನಡುವೆ ಸಂಪರ್ಕ ಕಲ್ಪಿಸುತ್ತದೆ. <br /> <br /> ಧಾನ್ಯಗಳು, ಬೇಳೆಕಾಳುಗಳು, ಅಡಿಕೆ, ತರಕಾರಿ, ಹಣ್ಣು ಹಾಗೂ ಹೂವು ಸೇರಿದಂತೆ ರಾಜ್ಯದಲ್ಲಿ ಬೆಳೆಯುವ ವಿವಿಧ ಕೃಷಿ ಉತ್ಪನ್ನಗಳ ದರ ಕುರಿತಂತೆ ರೈತರು ಈ ಸೇವೆ ಪಡೆಯಬಹುದು. <br /> <br /> ರಾಜ್ಯದ ಎಲ್ಲ ಎಪಿಎಂಸಿಗಳು ಸೇರಿದಂತೆ 38ಕ್ಕೂ ಅಧಿಕ ಮಾರುಕಟ್ಟೆಗಳೊಂದಿಗೆ ಕಂಪೆನಿ ನಿರಂತರ ಸಂಪರ್ಕ ಇಟ್ಟುಕೊಂಡು ದಿನೇ ದಿನೇ ಮಾರುಕಟ್ಟೆಯಲ್ಲಿ ಬದಲಾಗುವ ಕೃಷಿ ಉತ್ಪನ್ನಗಳ ಬೆಲೆ ಮಾಹಿತಿಯನ್ನು ಪರಿಷ್ಕರಿಸುತ್ತದೆ. ಹೀಗಾಗಿ ರೈತರು ಈ ಎಲ್ಲ ಮಾರುಕಟ್ಟೆಗಳಲ್ಲಿರುವ ತಮ್ಮ ಬೆಳೆಯ ನಿಖರ ಬೆಲೆ ತಿಳಿದುಕೊಳ್ಳಬಹುದು.<br /> <br /> ಈಗ ಕರ್ನಾಟಕದಲ್ಲಿ ವಿಸ್ತರಣೆಯಾಗುತ್ತಿರುವ ಈ ಸೇವೆ ಈಗಾಗಲೇ ಆಂಧ್ರಪ್ರದೇಶ, ಗುಜರಾತ್ನಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿ ಇದರ ಸದುಪಯೋಗವನ್ನು ಸುಮಾರು 8.5 ಲಕ್ಷ ರೈತರು ಪಡೆಯುತ್ತಿದ್ದಾರೆ ಎನ್ನುತ್ತಾರೆ ಫಸಲ್ನ ಅಧಿಕಾರಿಗಳು.<br /> <br /> `ಅನೇಕ ಬಾರಿ ರೈತರಿಗೆ ತಮ್ಮ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿದೆಯೇ ಎಂಬುದು ತಿಳಿದಿರುವುದೇ ಇಲ್ಲ. ಇದರ ಅವಶ್ಯಕತೆ ಮನಗಂಡು ನಾವು ರೈತರಿಗೆ ಫಸಲ್ ಮೂಲಕ ಮಾಹಿತಿ ಒದಗಿಸಿ ಅವರು ತಮ್ಮ ಬೆಳೆಗೆ ಹೆಚ್ಚಿನ ಬೆಲೆಯನ್ನು ಪಡೆಯಲು ನೆರವು ನೀಡುತ್ತ್ದ್ದಿದೇವೆ.<br /> <br /> ಇದರಿಂದ ರೈತರಿಗೂ ಲಾಭ~ ಎನ್ನುತ್ತಾರೆ `ಎಮರ್ಜಿಂಗ್ ಮಾರ್ಕೆಟ್ ಇನ್ನೊವೇಷನ್ ಇನ್ಟ್ಯೂಟ್ ಇಂಡಿಯಾ~ದ ನಿರ್ದೇಶಕಿ ದೀಪಾ ಬಚು.</p>.<p><br /> <strong>ಸೇವೆ ಪಡೆಯುವುದು ಹೇಗೆ ?</strong><br /> ರೈತರು ಮಾಡಬೇಕಾಗಿದ್ದಿಷ್ಟೆ. 080 6764 6764 ಸಂಖ್ಯೆಗೆ ತಮ್ಮ ಮೊಬೈಲ್ನಿಂದ ಕರೆ ಮಾಡಿ ತಮ್ಮ ಬೆಳೆ, ತಮ್ಮ ಅಪೇಕ್ಷೆಯ ಮಾರುಕಟ್ಟೆ ಹಾಗೂ ಫೋನ್ನಲ್ಲಿ ಉಪಯೋಗಿಸುವ ಭಾಷೆ (ಎಸ್ಎಂಎಸ್ ಸಂದೇಶ ಓದಲು ಅನುಕೂಲವಾಗುವಂತೆ) ಈ ಎಲ್ಲ ಮಾಹಿತಿಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು. <br /> <br /> ಬಳಿಕ ಮಾರುಕಟ್ಟೆ ಬೆಲೆ ತಿಳಿಯಬೇಕಾದಾಗಲೆಲ್ಲ ಶುಲ್ಕ ರಹಿತ ದೂರವಾಣಿ 1800 103 8616 ಸಂಖ್ಯೆಗೆ ನೀವು ಮಿಸ್ ಕಾಲ್ ಮಾಡಿದರೆ ಸಾಕು. ಕೂಡಲೇ ಫಸಲ್ನಿಂದ ನಿಮಗೆ ನಿಮ್ಮ ಅಪೇಕ್ಷೆಯ ಮಾರುಕಟ್ಟೆಯಲ್ಲಿ ನಿಮ್ಮ ಉತ್ಪನ್ನಕ್ಕಿರುವ ಬೆಲೆ ಕುರಿತಾದ `ಎಸ್ಎಂಎಸ್~ ಸಂದೇಶ ಬರುತ್ತದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಳ್ಳಾಗಡ್ಡೆ ಬೆಳೆದು ಸರಿಯಾದ ಧಾರಣೆ ಸಿಗದೆ ನಷ್ಟ ಅನುಭವಿಸುತ್ತಿದ್ದ ರೈತ ಕಲ್ಲಪ್ಪ ಪ್ರತಿ ಬಾರಿ ದಲ್ಲಾಳಿಗಳಿಂದ ಮೋಸಕ್ಕೆ ಬಲಿಯಾಗುತ್ತಿದ್ದರು.<br /> <br /> ಪ್ರತಿ ಬಾರಿ ಟೊಮೆಟೊ ಬೆಳೆದು ಮಾರುಕಟ್ಟೆಗೆ ಹೋಗಿ ಮಾರಲಾಗದ ಮಾಲೂರಿನ ಯುವ ರೈತ ವೆಂಕಟೇಶ ಜಮೀನಿಗೆ ಬಂದು ಖರೀದಿಸುತ್ತಿದ್ದ ಮಧ್ಯವರ್ತಿಗಳು ಕೇಳಿದ ಬೆಲೆಗೆ ಮಾರಿ ನಷ್ಟ ಅನುಭವಿಸುತ್ತಿದ್ದರು.<br /> <br /> ತೆಂಗು ಬೆಳೆಯುತ್ತಿದ್ದ ಹೊಸದುರ್ಗದ ರಮೇಶ್ ಅವರು ಮಾರುಕಟ್ಟೆಯಲ್ಲಿರುವ ನಿಖರ ಧಾರಣೆ ತಿಳಿಯದೇ ಊರಲ್ಲಿಯೇ ಒಣಕೊಬ್ಬರಿಯನ್ನು ಕೈಗೆ ಬಂದ ದರಕ್ಕೆ ಕೊಟ್ಟು ನಂತರ ಪರಿತಪಿಸುತ್ತಿದ್ದರು.<br /> <br /> ಕುರಂಬಳ್ಳಿಯ ಗಿರೀಶ್ ಅವರದು ಅಡಿಕೆಗೆ ಯೋಗ್ಯ ಬೆಲೆ ಸಿಗುತ್ತಿಲ್ಲ ಎನ್ನುವ ಕೊರಗು. ಜತೆಗೆ ಪ್ರತಿ ಸಾರಿ ಕೂಡ ಅವರಿಗೆ ದಲ್ಲಾಳಿಗಳಿಂದ ದರದಲ್ಲಿ ನಷ್ಟವಾಗುತ್ತಿತ್ತು.<br /> ಹೀಗೆ ಮಧ್ಯವರ್ತಿಗಳ ಶೋಷಣೆ, ತಾವು ಬೆಳೆದ ಬೆಳೆಗೆ ಯೋಗ್ಯ ಬೆಲೆ ಪಡೆಯದೆ ವಂಚನೆಗೊಳಗಾಗುವ ಇಂಥ ರೈತರಿಗೊಂದು ಸಂತಸದ ಸುದ್ದಿ ತಂದಿದೆ `ಫಸಲ್~. ಅದೇ ನಿಖರ ಬೆಲೆಗಾಗಿ `ಫಸಲ್~ ಎಸ್ಎಂಎಸ್ ಸೇವೆ. <br /> <br /> ಇದರ ಮೂಲಕ ಇನ್ನು ಮುಂದೆ ರೈತರು ತಾವು ಬೆಳೆದ ಫಸಲನ್ನು ಮಾರಾಟಕ್ಕೆ ಒಯ್ಯುವ ಮೊದಲೇ ಬೇರೆ ಬೇರೆ ಮಾರುಕಟ್ಟೆಯಲ್ಲಿ ಆ ಉತ್ಪನ್ನಕ್ಕೆ ಇರುವ ಅಂದಿನ ನಿಖರ ಬೆಲೆ ತಿಳಿದುಕೊಂಡು ಅಧಿಕ ಬೆಲೆ ಇರುವ ಕಡೆ ಹೋಗಿ ಲಾಭ ಪಡೆಯಬಹುದು.<br /> <br /> ಮಧ್ಯಮ ಗಾತ್ರದ ಉದ್ಯಮಗಳು, ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಮತ್ತು ಕ್ರೆಡಿಟ್ ಯೂನಿಯನ್ಗಳು, ಗ್ರಾಹಕರು ಮತ್ತು ಅಕೌಂಟಿಂಗ್ ವೃತ್ತಿಪರರಿಗೆ ಉದ್ಯಮ ಹಾಗೂ ಹಣಕಾಸು ನಿರ್ವಹಣಾ ಸೇವೆ ನೀಡುವ ಅಮೆರಿಕ ಮೂಲದ ಇನ್ಟ್ಯೂಟ್ ಐಎನ್ಸಿ (ನಾಸ್ ಡಾಕ್: ಐಎನ್ಟಿಯು) ಇದೀಗ ರೈತರ ಅನುಕೂಲಕ್ಕಾಗಿ ಎಸ್ಎಂಎಸ್ ಆಧಾರಿತ `ಫಸಲ್~ ಸೇವೆ ಪ್ರಾರಂಭಿಸಿದೆ. ರೈತರಿಗೆ ನಯಾಪೈಸೆ ಕೂಡ ಖರ್ಚಿಲ್ಲದೆ ಸಂಪೂರ್ಣ ಉಚಿತವಾಗಿ ವಿವಿಧ ಕೃಷಿ ಉತ್ಪನ್ನಗಳ ಬೆಲೆಗಳನ್ನು ತಿಳಿಸುತ್ತದೆ.<br /> <br /> ಇನ್ಟ್ಯೂಟ್ನ ಈ `ಫಸಲ್~ ಎಸ್ಎಂಎಸ್ ಸೇವೆಯು ರೈತರ ವೈಯಕ್ತಿಕ ಅಪೇಕ್ಷೆಯನ್ನಾಧರಿಸಿ ಅವರು ಬೆಳೆದ ಉತ್ಪನ್ನಕ್ಕೆ ಅವರಿಷ್ಟದ ಮಾರುಕಟ್ಟೆಗಳಲ್ಲಿರುವ ನಿಖರ ಬೆಲೆಯನ್ನು ಅನುಕೂಲವಾದ ಭಾಷೆಯಲ್ಲಿ ಸೂಕ್ತ ಸಮಯದಲ್ಲಿ ರವಾನಿಸುತ್ತದೆ. ಈ ಮೂಲಕ ರೈತರು ಹಾಗೂ ಖರೀದಿದಾರರ ನಡುವೆ ಸಂಪರ್ಕ ಕಲ್ಪಿಸುತ್ತದೆ. <br /> <br /> ಧಾನ್ಯಗಳು, ಬೇಳೆಕಾಳುಗಳು, ಅಡಿಕೆ, ತರಕಾರಿ, ಹಣ್ಣು ಹಾಗೂ ಹೂವು ಸೇರಿದಂತೆ ರಾಜ್ಯದಲ್ಲಿ ಬೆಳೆಯುವ ವಿವಿಧ ಕೃಷಿ ಉತ್ಪನ್ನಗಳ ದರ ಕುರಿತಂತೆ ರೈತರು ಈ ಸೇವೆ ಪಡೆಯಬಹುದು. <br /> <br /> ರಾಜ್ಯದ ಎಲ್ಲ ಎಪಿಎಂಸಿಗಳು ಸೇರಿದಂತೆ 38ಕ್ಕೂ ಅಧಿಕ ಮಾರುಕಟ್ಟೆಗಳೊಂದಿಗೆ ಕಂಪೆನಿ ನಿರಂತರ ಸಂಪರ್ಕ ಇಟ್ಟುಕೊಂಡು ದಿನೇ ದಿನೇ ಮಾರುಕಟ್ಟೆಯಲ್ಲಿ ಬದಲಾಗುವ ಕೃಷಿ ಉತ್ಪನ್ನಗಳ ಬೆಲೆ ಮಾಹಿತಿಯನ್ನು ಪರಿಷ್ಕರಿಸುತ್ತದೆ. ಹೀಗಾಗಿ ರೈತರು ಈ ಎಲ್ಲ ಮಾರುಕಟ್ಟೆಗಳಲ್ಲಿರುವ ತಮ್ಮ ಬೆಳೆಯ ನಿಖರ ಬೆಲೆ ತಿಳಿದುಕೊಳ್ಳಬಹುದು.<br /> <br /> ಈಗ ಕರ್ನಾಟಕದಲ್ಲಿ ವಿಸ್ತರಣೆಯಾಗುತ್ತಿರುವ ಈ ಸೇವೆ ಈಗಾಗಲೇ ಆಂಧ್ರಪ್ರದೇಶ, ಗುಜರಾತ್ನಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿ ಇದರ ಸದುಪಯೋಗವನ್ನು ಸುಮಾರು 8.5 ಲಕ್ಷ ರೈತರು ಪಡೆಯುತ್ತಿದ್ದಾರೆ ಎನ್ನುತ್ತಾರೆ ಫಸಲ್ನ ಅಧಿಕಾರಿಗಳು.<br /> <br /> `ಅನೇಕ ಬಾರಿ ರೈತರಿಗೆ ತಮ್ಮ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿದೆಯೇ ಎಂಬುದು ತಿಳಿದಿರುವುದೇ ಇಲ್ಲ. ಇದರ ಅವಶ್ಯಕತೆ ಮನಗಂಡು ನಾವು ರೈತರಿಗೆ ಫಸಲ್ ಮೂಲಕ ಮಾಹಿತಿ ಒದಗಿಸಿ ಅವರು ತಮ್ಮ ಬೆಳೆಗೆ ಹೆಚ್ಚಿನ ಬೆಲೆಯನ್ನು ಪಡೆಯಲು ನೆರವು ನೀಡುತ್ತ್ದ್ದಿದೇವೆ.<br /> <br /> ಇದರಿಂದ ರೈತರಿಗೂ ಲಾಭ~ ಎನ್ನುತ್ತಾರೆ `ಎಮರ್ಜಿಂಗ್ ಮಾರ್ಕೆಟ್ ಇನ್ನೊವೇಷನ್ ಇನ್ಟ್ಯೂಟ್ ಇಂಡಿಯಾ~ದ ನಿರ್ದೇಶಕಿ ದೀಪಾ ಬಚು.</p>.<p><br /> <strong>ಸೇವೆ ಪಡೆಯುವುದು ಹೇಗೆ ?</strong><br /> ರೈತರು ಮಾಡಬೇಕಾಗಿದ್ದಿಷ್ಟೆ. 080 6764 6764 ಸಂಖ್ಯೆಗೆ ತಮ್ಮ ಮೊಬೈಲ್ನಿಂದ ಕರೆ ಮಾಡಿ ತಮ್ಮ ಬೆಳೆ, ತಮ್ಮ ಅಪೇಕ್ಷೆಯ ಮಾರುಕಟ್ಟೆ ಹಾಗೂ ಫೋನ್ನಲ್ಲಿ ಉಪಯೋಗಿಸುವ ಭಾಷೆ (ಎಸ್ಎಂಎಸ್ ಸಂದೇಶ ಓದಲು ಅನುಕೂಲವಾಗುವಂತೆ) ಈ ಎಲ್ಲ ಮಾಹಿತಿಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು. <br /> <br /> ಬಳಿಕ ಮಾರುಕಟ್ಟೆ ಬೆಲೆ ತಿಳಿಯಬೇಕಾದಾಗಲೆಲ್ಲ ಶುಲ್ಕ ರಹಿತ ದೂರವಾಣಿ 1800 103 8616 ಸಂಖ್ಯೆಗೆ ನೀವು ಮಿಸ್ ಕಾಲ್ ಮಾಡಿದರೆ ಸಾಕು. ಕೂಡಲೇ ಫಸಲ್ನಿಂದ ನಿಮಗೆ ನಿಮ್ಮ ಅಪೇಕ್ಷೆಯ ಮಾರುಕಟ್ಟೆಯಲ್ಲಿ ನಿಮ್ಮ ಉತ್ಪನ್ನಕ್ಕಿರುವ ಬೆಲೆ ಕುರಿತಾದ `ಎಸ್ಎಂಎಸ್~ ಸಂದೇಶ ಬರುತ್ತದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>