<p><strong>ಬೆಂಗಳೂರು: </strong>ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ (ಐಸಿಡಿಎ) ನಡೆದಿರು <br /> ಅವ್ಯವಹಾರಕುರಿತು ಸೋಮವಾರ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾಗ ಸಿ.ಡಿ ತುಂಡರಿಸಿ ಸಾಕ್ಷ್ಯ ನಾಶ ಮಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮುನಿರಾಜು ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.<br /> <br /> ಐಸಿಡಿಎಸ್ ಯೋಜನೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾಜ್ಯದ ವಿವಿಧೆಡೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶನಾಲಯ ಸೇರಿದಂತೆ ಹಲವು ಕಚೇರಿಗಳನ್ನು ಮೊಹರು ಮಾಡಿದ್ದರು. ಸೋಮವಾರ ಕೆಲ ಕಚೇರಿಗಳ ತಪಾಸಣೆ ಮುಂದುವರಿಸಲಾಯಿತು.<br /> <br /> ಅಂಬೇಡ್ಕರ್ ರಸ್ತೆಯ ಬಹುಮಹಡಿ ಕಟ್ಟಡದಲ್ಲಿರುವ ಮುನಿರಾಜು ಅವರ ಕಚೇರಿಯ ಬಾಗಿಲಿನ ಮೊಹರನ್ನು ತೆರೆದ ಡಿವೈಎಸ್ಪಿ ಪ್ರಸನ್ನ ವಿ.ರಾಜು ನೇತೃತ್ವದ ತಂಡ ಪರಿಶೀಲನೆ ಆರಂಭಿಸಿತು.<br /> <br /> ಕಚೇರಿಯಲ್ಲಿದ್ದ ಕಡತಗಳು ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿತ್ತು. ಅಲ್ಲಿ ದೊರೆತ ಸಿ.ಡಿಯೊಂದರ ವಿವರವನ್ನು ದಾಖಲಿಸಿಕೊಂಡ ತನಿಖಾ ತಂಡದ ಸದಸ್ಯರು, ಅದನ್ನು ಪರಿಶೀಲಿಸುತ್ತಿದ್ದರು. <br /> <br /> ಅಷ್ಟರಲ್ಲಿ ಲೋಕಾಯುಕ್ತ ಪೊಲೀಸರ ಮೇಲೆರಗಿದ ಮುನಿರಾಜು ಸಿ.ಡಿ ಕಿತ್ತುಕೊಂಡು ಅದನ್ನು ಛಿದ್ರಗೊಳಿಸಿದ್ದಾರೆ. ನಂತರ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ಪ್ರಸನ್ನ ವಿ.ರಾಜು ಅವರು, ಘಟನೆಯ ವಿವರ ನೀಡಿದರು. ಪ್ರಕರಣದ ತನಿಖಾಧಿಕಾರಿಯಾಗಿರುವ ಡಿವೈಎಸ್ಪಿ ಅಬ್ದುಲ್ ಅಹದ್ ಅವರು ತಕ್ಷಣ ಸ್ಥಳಕ್ಕೆ ಧಾವಿಸಿದರು.<br /> <br /> ಸಾಕ್ಷ್ಯನಾಶಕ್ಕೆ ಯತ್ನಿಸಿದ ಆರೋಪದ ಮೇಲೆ ಮುನಿರಾಜು ಅವರನ್ನು ಬಂಧಿಸಿದ ಅವರು, ಲೋಕಾಯುಕ್ತ ಕಚೇರಿಗೆ ಕರೆತಂದು ಕೆಲಕಾಲ ವಿಚಾರಣೆಗೆ ಒಳಪಡಿಸಿದ್ದಾರೆ.<br /> <br /> `ವಿಡಿಯೊ ಇತ್ತು~: ಸಿ.ಡಿ ನಾಶದ ಹಿಂದಿನ ಉದ್ದೇಶ ಕುರಿತು ತನಿಖಾ ತಂಡವು ಆರೋಪಿ ಅಧಿಕಾರಿಯನ್ನು ಪ್ರಶ್ನಿಸಿದೆ. `ಪ್ರಕರಣದ ಕೇಂದ್ರ ಬಿಂದುವಾಗಿರುವ ಕ್ರಿಸ್ಟಿ ಫ್ರೈಡ್ ಗ್ರ್ಯಾಮ್ಸ ಕಂಪೆನಿಯ ಅಧಿಕಾರಿಗಳ ಜೊತೆ ನಾನು ವಿವಿಧ ಕಡೆ ಪ್ರವಾಸ ಮಾಡಿರುವ ವಿಡಿಯೊ ತುಣುಕುಗಳು ಸಿ.ಡಿಯಲ್ಲಿದ್ದವು. ಅದು ದೊರೆತಲ್ಲಿ ಮುಂದೆ ತೊಂದರೆ ಆಗಬಹುದು ಎಂಬ ಭಾವನೆಯಿಂದ ಅದನ್ನು ತುಂಡು ಮಾಡಿದ್ದೇನೆ~ ಎಂಬುದಾಗಿ ಮುನಿರಾಜು ಪ್ರತಿಕ್ರಿಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.<br /> <br /> ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಬಂಧನವನ್ನು ಖಚಿತಪಡಿಸಿದ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್, `ದಾಖಲೆಗಳ ಪರಿಶೀಲನೆ ವೇಳೆ ಮುನಿರಾಜು ಸಿ.ಡಿ ಛಿದ್ರಗೊಳಿಸಿದ್ದಾರೆ. <br /> <br /> ಅದರಲ್ಲಿ ಮಹತ್ವದ ಸಾಕ್ಷ್ಯ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಅದನ್ನು ನಾಶ ಮಾಡಿರಬಹುದು ಎಂದು ಶಂಕಿಸಲಾಗಿದೆ. ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ (ಐಸಿಡಿಎ) ನಡೆದಿರು <br /> ಅವ್ಯವಹಾರಕುರಿತು ಸೋಮವಾರ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾಗ ಸಿ.ಡಿ ತುಂಡರಿಸಿ ಸಾಕ್ಷ್ಯ ನಾಶ ಮಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮುನಿರಾಜು ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.<br /> <br /> ಐಸಿಡಿಎಸ್ ಯೋಜನೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾಜ್ಯದ ವಿವಿಧೆಡೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶನಾಲಯ ಸೇರಿದಂತೆ ಹಲವು ಕಚೇರಿಗಳನ್ನು ಮೊಹರು ಮಾಡಿದ್ದರು. ಸೋಮವಾರ ಕೆಲ ಕಚೇರಿಗಳ ತಪಾಸಣೆ ಮುಂದುವರಿಸಲಾಯಿತು.<br /> <br /> ಅಂಬೇಡ್ಕರ್ ರಸ್ತೆಯ ಬಹುಮಹಡಿ ಕಟ್ಟಡದಲ್ಲಿರುವ ಮುನಿರಾಜು ಅವರ ಕಚೇರಿಯ ಬಾಗಿಲಿನ ಮೊಹರನ್ನು ತೆರೆದ ಡಿವೈಎಸ್ಪಿ ಪ್ರಸನ್ನ ವಿ.ರಾಜು ನೇತೃತ್ವದ ತಂಡ ಪರಿಶೀಲನೆ ಆರಂಭಿಸಿತು.<br /> <br /> ಕಚೇರಿಯಲ್ಲಿದ್ದ ಕಡತಗಳು ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿತ್ತು. ಅಲ್ಲಿ ದೊರೆತ ಸಿ.ಡಿಯೊಂದರ ವಿವರವನ್ನು ದಾಖಲಿಸಿಕೊಂಡ ತನಿಖಾ ತಂಡದ ಸದಸ್ಯರು, ಅದನ್ನು ಪರಿಶೀಲಿಸುತ್ತಿದ್ದರು. <br /> <br /> ಅಷ್ಟರಲ್ಲಿ ಲೋಕಾಯುಕ್ತ ಪೊಲೀಸರ ಮೇಲೆರಗಿದ ಮುನಿರಾಜು ಸಿ.ಡಿ ಕಿತ್ತುಕೊಂಡು ಅದನ್ನು ಛಿದ್ರಗೊಳಿಸಿದ್ದಾರೆ. ನಂತರ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ಪ್ರಸನ್ನ ವಿ.ರಾಜು ಅವರು, ಘಟನೆಯ ವಿವರ ನೀಡಿದರು. ಪ್ರಕರಣದ ತನಿಖಾಧಿಕಾರಿಯಾಗಿರುವ ಡಿವೈಎಸ್ಪಿ ಅಬ್ದುಲ್ ಅಹದ್ ಅವರು ತಕ್ಷಣ ಸ್ಥಳಕ್ಕೆ ಧಾವಿಸಿದರು.<br /> <br /> ಸಾಕ್ಷ್ಯನಾಶಕ್ಕೆ ಯತ್ನಿಸಿದ ಆರೋಪದ ಮೇಲೆ ಮುನಿರಾಜು ಅವರನ್ನು ಬಂಧಿಸಿದ ಅವರು, ಲೋಕಾಯುಕ್ತ ಕಚೇರಿಗೆ ಕರೆತಂದು ಕೆಲಕಾಲ ವಿಚಾರಣೆಗೆ ಒಳಪಡಿಸಿದ್ದಾರೆ.<br /> <br /> `ವಿಡಿಯೊ ಇತ್ತು~: ಸಿ.ಡಿ ನಾಶದ ಹಿಂದಿನ ಉದ್ದೇಶ ಕುರಿತು ತನಿಖಾ ತಂಡವು ಆರೋಪಿ ಅಧಿಕಾರಿಯನ್ನು ಪ್ರಶ್ನಿಸಿದೆ. `ಪ್ರಕರಣದ ಕೇಂದ್ರ ಬಿಂದುವಾಗಿರುವ ಕ್ರಿಸ್ಟಿ ಫ್ರೈಡ್ ಗ್ರ್ಯಾಮ್ಸ ಕಂಪೆನಿಯ ಅಧಿಕಾರಿಗಳ ಜೊತೆ ನಾನು ವಿವಿಧ ಕಡೆ ಪ್ರವಾಸ ಮಾಡಿರುವ ವಿಡಿಯೊ ತುಣುಕುಗಳು ಸಿ.ಡಿಯಲ್ಲಿದ್ದವು. ಅದು ದೊರೆತಲ್ಲಿ ಮುಂದೆ ತೊಂದರೆ ಆಗಬಹುದು ಎಂಬ ಭಾವನೆಯಿಂದ ಅದನ್ನು ತುಂಡು ಮಾಡಿದ್ದೇನೆ~ ಎಂಬುದಾಗಿ ಮುನಿರಾಜು ಪ್ರತಿಕ್ರಿಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.<br /> <br /> ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಬಂಧನವನ್ನು ಖಚಿತಪಡಿಸಿದ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್, `ದಾಖಲೆಗಳ ಪರಿಶೀಲನೆ ವೇಳೆ ಮುನಿರಾಜು ಸಿ.ಡಿ ಛಿದ್ರಗೊಳಿಸಿದ್ದಾರೆ. <br /> <br /> ಅದರಲ್ಲಿ ಮಹತ್ವದ ಸಾಕ್ಷ್ಯ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಅದನ್ನು ನಾಶ ಮಾಡಿರಬಹುದು ಎಂದು ಶಂಕಿಸಲಾಗಿದೆ. ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>