<p>ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆ ರಂಗೇರಿದ್ದು, ಈಗಾಗಲೇ 8 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಡಿ. 17 ಕೊನೆ ದಿನವಾಗಿದ್ದು, ಇನ್ನೂ ಸಾಕಷ್ಟು ಮಂದಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.<br /> <br /> ಜೆಡಿಎಸ್ ಮುಖಂಡರೂ ಆದ ವಕೀಲ ಜಿ.ಎಲ್.ನರೇಂದ್ರಬಾಬು ತಮ್ಮ ಬೆಂಬಲಿಗರೊಂದಿಗೆ ಗುರುವಾರ ನಾಮಪತ್ರ ಸಲ್ಲಿಸಿದರು.<br /> <br /> ಮೆರವಣಿಗೆ: ಸಿ.ಎನ್.ಶಶಿಕಿರಣ್ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು. ನಗರದ ಟೌನ್ಹಾಲ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿದರು.<br /> <br /> ಇದುವರೆಗೆ ಬಿ.ಎಚ್.ಜಗದೀಶ್, ವತ್ಸಲಾ ನಾಗರಾಜ್, ಹನಮಂತರಾಯಪ್ಪ, ಎಚ್.ಕೆ.ಮಲ್ಲಿಕಾರ್ಜುನ, ಯಲಚವಾಡಿ ನಾಗರಾಜ್, ಎ.ಕೃಷ್ಣಮೂರ್ತಿ ಸೇರಿದಂತೆ 8 ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.<br /> <br /> ರಾಜ್ಯ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯಿಂದ ಇಬ್ಬರನ್ನು ಆಯ್ಕೆ ಮಾಡಲು ಅವಕಾಶವಿದೆ. ಆದರೆ 2 ಸ್ಥಾನಗಳಿಗೆ 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಪರಸ್ಪರ ತುರುಸಿನ ಸ್ಪರ್ಧೆ ಏರ್ಪಡಲಿದೆ.<br /> <br /> ಜಿಲ್ಲೆಯಲ್ಲಿ ಸುಮಾರು 23 ಸಾವಿರ ಮಂದಿ ಮತದಾರರಿದ್ದು, ಮತದಾರರನ್ನು ಓಲೈಸುವ ಕಸರತ್ತು ಅಭ್ಯರ್ಥಿಗಳಿಂದ ಈಗಾಗಲೇ ಆರಂಭವಾಗಿದೆ. ಸಾಮಾನ್ಯ ಚುನಾವಣೆಯಂತೆಯೇ ಆಸೆ ಆಮಿಷದ ಮೂಲಕ ಮತ ಸೆಳೆಯಲು ಮುಂದಾಗಿದ್ದಾರೆ. ಅಲ್ಲದೆ ಬಹಿರಂಗವಾಗಿ ಮೆರವಣಿಗೆ ಮೂಲಕ ತಮ್ಮ ಬಲಾಬಲ ಪ್ರದರ್ಶಿಸುವ ಕಸರತ್ತು ನಡೆಯುತ್ತಿದೆ.<br /> <br /> ಜಿಲ್ಲೆಯ ತುಮಕೂರು ಸೇರಿದಂತೆ 8 ತಾಲ್ಲೂಕು ಕೇಂದ್ರಗಳಲ್ಲಿ ಚುನಾವಣೆ ನಡೆಯಲಿದೆ. ಒಬ್ಬ ಸದಸ್ಯ ಎರಡು ಮತ ಚಲಾಯಿಸಬಹುದು.<br /> <br /> ನಾಮಪತ್ರ ಹಿಂತೆಗೆದುಕೊಳ್ಳಲು ಡಿ. 19 ಅಂತಿಮ ದಿನ. ಜ. 5ರಂದು ಚುನಾವಣೆ ನಡೆಯಲಿದ್ದು, 6ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಸಹಕಾರ ಇಲಾಖೆ ಉಪ ನಿಬಂಧಕ ಬಾಲಶೇಖರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆ ರಂಗೇರಿದ್ದು, ಈಗಾಗಲೇ 8 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಡಿ. 17 ಕೊನೆ ದಿನವಾಗಿದ್ದು, ಇನ್ನೂ ಸಾಕಷ್ಟು ಮಂದಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.<br /> <br /> ಜೆಡಿಎಸ್ ಮುಖಂಡರೂ ಆದ ವಕೀಲ ಜಿ.ಎಲ್.ನರೇಂದ್ರಬಾಬು ತಮ್ಮ ಬೆಂಬಲಿಗರೊಂದಿಗೆ ಗುರುವಾರ ನಾಮಪತ್ರ ಸಲ್ಲಿಸಿದರು.<br /> <br /> ಮೆರವಣಿಗೆ: ಸಿ.ಎನ್.ಶಶಿಕಿರಣ್ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು. ನಗರದ ಟೌನ್ಹಾಲ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿದರು.<br /> <br /> ಇದುವರೆಗೆ ಬಿ.ಎಚ್.ಜಗದೀಶ್, ವತ್ಸಲಾ ನಾಗರಾಜ್, ಹನಮಂತರಾಯಪ್ಪ, ಎಚ್.ಕೆ.ಮಲ್ಲಿಕಾರ್ಜುನ, ಯಲಚವಾಡಿ ನಾಗರಾಜ್, ಎ.ಕೃಷ್ಣಮೂರ್ತಿ ಸೇರಿದಂತೆ 8 ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.<br /> <br /> ರಾಜ್ಯ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯಿಂದ ಇಬ್ಬರನ್ನು ಆಯ್ಕೆ ಮಾಡಲು ಅವಕಾಶವಿದೆ. ಆದರೆ 2 ಸ್ಥಾನಗಳಿಗೆ 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಪರಸ್ಪರ ತುರುಸಿನ ಸ್ಪರ್ಧೆ ಏರ್ಪಡಲಿದೆ.<br /> <br /> ಜಿಲ್ಲೆಯಲ್ಲಿ ಸುಮಾರು 23 ಸಾವಿರ ಮಂದಿ ಮತದಾರರಿದ್ದು, ಮತದಾರರನ್ನು ಓಲೈಸುವ ಕಸರತ್ತು ಅಭ್ಯರ್ಥಿಗಳಿಂದ ಈಗಾಗಲೇ ಆರಂಭವಾಗಿದೆ. ಸಾಮಾನ್ಯ ಚುನಾವಣೆಯಂತೆಯೇ ಆಸೆ ಆಮಿಷದ ಮೂಲಕ ಮತ ಸೆಳೆಯಲು ಮುಂದಾಗಿದ್ದಾರೆ. ಅಲ್ಲದೆ ಬಹಿರಂಗವಾಗಿ ಮೆರವಣಿಗೆ ಮೂಲಕ ತಮ್ಮ ಬಲಾಬಲ ಪ್ರದರ್ಶಿಸುವ ಕಸರತ್ತು ನಡೆಯುತ್ತಿದೆ.<br /> <br /> ಜಿಲ್ಲೆಯ ತುಮಕೂರು ಸೇರಿದಂತೆ 8 ತಾಲ್ಲೂಕು ಕೇಂದ್ರಗಳಲ್ಲಿ ಚುನಾವಣೆ ನಡೆಯಲಿದೆ. ಒಬ್ಬ ಸದಸ್ಯ ಎರಡು ಮತ ಚಲಾಯಿಸಬಹುದು.<br /> <br /> ನಾಮಪತ್ರ ಹಿಂತೆಗೆದುಕೊಳ್ಳಲು ಡಿ. 19 ಅಂತಿಮ ದಿನ. ಜ. 5ರಂದು ಚುನಾವಣೆ ನಡೆಯಲಿದ್ದು, 6ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಸಹಕಾರ ಇಲಾಖೆ ಉಪ ನಿಬಂಧಕ ಬಾಲಶೇಖರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>