<p><strong>ಬೆಂಗಳೂರು:</strong> ‘ಪ್ರತಿ ಪಂದ್ಯದಲ್ಲೂ ನಾವು ಒಗ್ಗಟ್ಟಾಗಿ ಆಡುತ್ತೇವೆ. ಒಬ್ಬರ ಮೇಲೆ ಯಾರೂ ಅವಲಂಬಿತವಾಗಿಲ್ಲ. ಆದ್ದರಿಂದ ಎಲ್ಲಾ ಟೂರ್ನಿಗಳಲ್ಲಿಯೂ ನಮಗೆ ಯಶಸ್ಸು ಲಭಿಸುತ್ತಿದೆ. ನನ್ನ ಮೊದಲ ರಣಜಿ, ಇರಾನಿ ಕಪ್ ಮತ್ತು ವಿಜಯ ಹಜಾರೆ ಟೂರ್ನಿಯಲ್ಲಿಯೇ ಪ್ರಶಸ್ತಿ ಗೆದ್ದಿದ್ದು ಖುಷಿ ನೀಡಿದೆ...’<br /> ಟ್ರೋಫಿ ಗೆದ್ದ ಸಂಭ್ರಮವನ್ನು ಕರ್ನಾಟಕ ತಂಡದ ಬ್ಯಾಟ್ಸ್ಮನ್ ಕರುಣ್ ನಾಯರ್ ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದು ಹೀಗೆ.<br /> <br /> ಫೈನಲ್ ಪಂದ್ಯದಲ್ಲಿ ಕರುಣ್ ಅರ್ಧಶತಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟ್ರೋಫಿ ಗೆದ್ದ ಸಂಭ್ರಮವನ್ನು ದೂರವಾಣಿ ಮೂಲಕ ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.<br /> <br /> <strong>*ಕರ್ನಾಟಕ ತಂಡ ರಣಜಿ, ಇರಾನಿ ಮತ್ತು ವಿಜಯ ಹಜಾರೆ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ. ಈ ಬಗ್ಗೆ ಹೇಳಿ?</strong><br /> ನಿಜಕ್ಕೂ ಇದು ಅವಿಸ್ಮರಣೀಯ ಸಂದರ್ಭ. ಏಕೆಂದರೆ, ಮೊದಲ ಸಲ ರಣಜಿ ಟೂರ್ನಿ ಆಡಿದ್ದೇನೆ. ವಿಜಯ ಹಜಾರೆ ಟ್ರೋಫಿಯಲ್ಲಿ ಆಡಿದ್ದು ಇದೇ ಮೊದಲು. ಮೊದಲ ಯಶಸ್ಸಿನ ಸಂಭ್ರಮ ಕೊನೆಯವರೆಗೂ ನೆನಪಿನರುತ್ತದೆ.<br /> <br /> <strong>*ಈ ಗೆಲುವಿನಲ್ಲಿ ನೀವು ಗಳಿಸಿದ ಅರ್ಧಶತಕವೇ ಪ್ರಮುಖ ಪಾತ್ರ ವಹಿಸಿತು. ಈ ಬಗ್ಗೆ ಹೇಳಿ?</strong><br /> ವೈಯಕ್ತಿಕವಾಗಿ ನನ್ನ ಆಟಕ್ಕಿಂತ ಒಟ್ಟಾರೆಯಾಗಿ ತಂಡ ತೋರಿದ ಪ್ರದರ್ಶನ ಮುಖ್ಯ. ಮಿಥುನ್, ಅಬ್ರಾರ್ ಖಾಜಿ ಚೆನ್ನಾಗಿ ಬೌಲ್ ಮಾಡಿದರು. ಹಿಂದಿನ ಪಂದ್ಯಗಳಲ್ಲಿ ರಾಬಿನ್ ಉತ್ತಪ್ಪ ಶತಕ ಗಳಿಸಿ ತಂಡ ಫೈನಲ್ ಪ್ರವೇಶಿಸಲು ಕಾರಣರಾದರು. ಎಲ್ಲಾ ಆಟಗಾರರ ಒಗ್ಗಟ್ಟಿಗೆ ಲಭಿಸಿದ ಫಲ ಇದು.<br /> <br /> <strong>*ಕರ್ನಾಟಕ ಮೂರೂ ಟೂರ್ನಿಗಳಲ್ಲಿ ಟ್ರೋಫಿ ಗೆದ್ದಿದೆ. ಈ ಯಶಸ್ಸಿನ ಗುಟ್ಟೇನು?</strong><br /> ಆಟಗಾರರ ನಡುವೆ ಇರುವ ಉತ್ತಮ ಹೊಂದಾಣಿಕೆಯೇ ಯಶಸ್ಸಿನ ಗುಟ್ಟು. ಅನುಭವಿ ಹಾಗೂ ಯುವ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ನಮ್ಮ ನಡುವೆ ಯಾವುದೇ ಭೇದವಿಲ್ಲ. ತರಬೇತುದಾರರೂ ಸ್ನೇಹಿತರಂತಿದ್ದಾರೆ. ಕುಟುಂಬದಲ್ಲಿ ಇರುವಂಥ ವಾತಾವರಣ ತಂಡದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಪ್ರತಿ ಪಂದ್ಯದಲ್ಲೂ ನಾವು ಒಗ್ಗಟ್ಟಾಗಿ ಆಡುತ್ತೇವೆ. ಒಬ್ಬರ ಮೇಲೆ ಯಾರೂ ಅವಲಂಬಿತವಾಗಿಲ್ಲ. ಆದ್ದರಿಂದ ಎಲ್ಲಾ ಟೂರ್ನಿಗಳಲ್ಲಿಯೂ ನಮಗೆ ಯಶಸ್ಸು ಲಭಿಸುತ್ತಿದೆ. ನನ್ನ ಮೊದಲ ರಣಜಿ, ಇರಾನಿ ಕಪ್ ಮತ್ತು ವಿಜಯ ಹಜಾರೆ ಟೂರ್ನಿಯಲ್ಲಿಯೇ ಪ್ರಶಸ್ತಿ ಗೆದ್ದಿದ್ದು ಖುಷಿ ನೀಡಿದೆ...’<br /> ಟ್ರೋಫಿ ಗೆದ್ದ ಸಂಭ್ರಮವನ್ನು ಕರ್ನಾಟಕ ತಂಡದ ಬ್ಯಾಟ್ಸ್ಮನ್ ಕರುಣ್ ನಾಯರ್ ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದು ಹೀಗೆ.<br /> <br /> ಫೈನಲ್ ಪಂದ್ಯದಲ್ಲಿ ಕರುಣ್ ಅರ್ಧಶತಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟ್ರೋಫಿ ಗೆದ್ದ ಸಂಭ್ರಮವನ್ನು ದೂರವಾಣಿ ಮೂಲಕ ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.<br /> <br /> <strong>*ಕರ್ನಾಟಕ ತಂಡ ರಣಜಿ, ಇರಾನಿ ಮತ್ತು ವಿಜಯ ಹಜಾರೆ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ. ಈ ಬಗ್ಗೆ ಹೇಳಿ?</strong><br /> ನಿಜಕ್ಕೂ ಇದು ಅವಿಸ್ಮರಣೀಯ ಸಂದರ್ಭ. ಏಕೆಂದರೆ, ಮೊದಲ ಸಲ ರಣಜಿ ಟೂರ್ನಿ ಆಡಿದ್ದೇನೆ. ವಿಜಯ ಹಜಾರೆ ಟ್ರೋಫಿಯಲ್ಲಿ ಆಡಿದ್ದು ಇದೇ ಮೊದಲು. ಮೊದಲ ಯಶಸ್ಸಿನ ಸಂಭ್ರಮ ಕೊನೆಯವರೆಗೂ ನೆನಪಿನರುತ್ತದೆ.<br /> <br /> <strong>*ಈ ಗೆಲುವಿನಲ್ಲಿ ನೀವು ಗಳಿಸಿದ ಅರ್ಧಶತಕವೇ ಪ್ರಮುಖ ಪಾತ್ರ ವಹಿಸಿತು. ಈ ಬಗ್ಗೆ ಹೇಳಿ?</strong><br /> ವೈಯಕ್ತಿಕವಾಗಿ ನನ್ನ ಆಟಕ್ಕಿಂತ ಒಟ್ಟಾರೆಯಾಗಿ ತಂಡ ತೋರಿದ ಪ್ರದರ್ಶನ ಮುಖ್ಯ. ಮಿಥುನ್, ಅಬ್ರಾರ್ ಖಾಜಿ ಚೆನ್ನಾಗಿ ಬೌಲ್ ಮಾಡಿದರು. ಹಿಂದಿನ ಪಂದ್ಯಗಳಲ್ಲಿ ರಾಬಿನ್ ಉತ್ತಪ್ಪ ಶತಕ ಗಳಿಸಿ ತಂಡ ಫೈನಲ್ ಪ್ರವೇಶಿಸಲು ಕಾರಣರಾದರು. ಎಲ್ಲಾ ಆಟಗಾರರ ಒಗ್ಗಟ್ಟಿಗೆ ಲಭಿಸಿದ ಫಲ ಇದು.<br /> <br /> <strong>*ಕರ್ನಾಟಕ ಮೂರೂ ಟೂರ್ನಿಗಳಲ್ಲಿ ಟ್ರೋಫಿ ಗೆದ್ದಿದೆ. ಈ ಯಶಸ್ಸಿನ ಗುಟ್ಟೇನು?</strong><br /> ಆಟಗಾರರ ನಡುವೆ ಇರುವ ಉತ್ತಮ ಹೊಂದಾಣಿಕೆಯೇ ಯಶಸ್ಸಿನ ಗುಟ್ಟು. ಅನುಭವಿ ಹಾಗೂ ಯುವ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ನಮ್ಮ ನಡುವೆ ಯಾವುದೇ ಭೇದವಿಲ್ಲ. ತರಬೇತುದಾರರೂ ಸ್ನೇಹಿತರಂತಿದ್ದಾರೆ. ಕುಟುಂಬದಲ್ಲಿ ಇರುವಂಥ ವಾತಾವರಣ ತಂಡದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>