<p><span style="font-size: 26px;"><strong>ತಿಪಟೂರು: </strong>ರೋಗ, ಕೀಟಬಾಧೆ, ಸತತ ಬರದಿಂದಾಗಿ ಸಂಪೂರ್ಣ ನಾಶವಾಗಿರುವ ತೆಂಗಿನ ಮರಗಳ ತಲಾವಾರು ಲೆಕ್ಕದಲ್ಲಿ ರೈತರಿಗೆ ಪರಿಹಾರ ಒದಗಿಸಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.</span><br /> <br /> ನಗರದ ಎಪಿಎಂಸಿ ಆವರಣದಲ್ಲಿ ಬುಧವಾರ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸುವ ನಫೆಡ್ ಕೇಂದ್ರಕ್ಕೆ ಚಾಲನೆ ನೀಡಿದ ಅವರು, ತೆಂಗಿನ ತೋಟಗಳು ಹಿಂದೆಂದೂ ಕಾಣದಷ್ಟು ಬರಡಾಗಿವೆ. ಈ ಬಗ್ಗೆ ಪೂರ್ಣ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕ್ರಮಬದ್ಧ ಸಮೀಕ್ಷೆ ಮೂಲಕ ವಾಸ್ತವ ನಷ್ಟ ಅರಿಯಲಾಗುವುದು.<br /> <br /> ಸಂಪೂರ್ಣ ಒಣಗಿರುವ ಮರಗಳ ಲೆಕ್ಕದಲ್ಲಿ ಪರಿಹಾರ ನೀಡಲಾಗುವುದು. ಇದಕ್ಕಾಗಿ ಕೇಂದ್ರದ ನೆರವು ಪಡೆದು ಒಟ್ಟು 100 ಕೋಟಿ ರೂಪಾಯಿ ಮೀಸಲಿಡಲು ಚಿಂತಿಸಲಾಗಿದೆ. ವಾಸ್ತವ ಸ್ಥಿತಿಯ ಅವಲೋಕನದ ನಂತರ ಪ್ರತಿ ತೆಂಗಿನ ಮರಕ್ಕೆ ಪರಿಹಾರದ ಮೊತ್ತವನ್ನು ನಿಗದಿಪಡಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ತಿಪಟೂರು: </strong>ರೋಗ, ಕೀಟಬಾಧೆ, ಸತತ ಬರದಿಂದಾಗಿ ಸಂಪೂರ್ಣ ನಾಶವಾಗಿರುವ ತೆಂಗಿನ ಮರಗಳ ತಲಾವಾರು ಲೆಕ್ಕದಲ್ಲಿ ರೈತರಿಗೆ ಪರಿಹಾರ ಒದಗಿಸಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.</span><br /> <br /> ನಗರದ ಎಪಿಎಂಸಿ ಆವರಣದಲ್ಲಿ ಬುಧವಾರ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸುವ ನಫೆಡ್ ಕೇಂದ್ರಕ್ಕೆ ಚಾಲನೆ ನೀಡಿದ ಅವರು, ತೆಂಗಿನ ತೋಟಗಳು ಹಿಂದೆಂದೂ ಕಾಣದಷ್ಟು ಬರಡಾಗಿವೆ. ಈ ಬಗ್ಗೆ ಪೂರ್ಣ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕ್ರಮಬದ್ಧ ಸಮೀಕ್ಷೆ ಮೂಲಕ ವಾಸ್ತವ ನಷ್ಟ ಅರಿಯಲಾಗುವುದು.<br /> <br /> ಸಂಪೂರ್ಣ ಒಣಗಿರುವ ಮರಗಳ ಲೆಕ್ಕದಲ್ಲಿ ಪರಿಹಾರ ನೀಡಲಾಗುವುದು. ಇದಕ್ಕಾಗಿ ಕೇಂದ್ರದ ನೆರವು ಪಡೆದು ಒಟ್ಟು 100 ಕೋಟಿ ರೂಪಾಯಿ ಮೀಸಲಿಡಲು ಚಿಂತಿಸಲಾಗಿದೆ. ವಾಸ್ತವ ಸ್ಥಿತಿಯ ಅವಲೋಕನದ ನಂತರ ಪ್ರತಿ ತೆಂಗಿನ ಮರಕ್ಕೆ ಪರಿಹಾರದ ಮೊತ್ತವನ್ನು ನಿಗದಿಪಡಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>