<p><strong>ನವದೆಹಲಿ (ಪಿಟಿಐ</strong>): ಮಹತ್ವಾಕಾಂಕ್ಷೆಯ `ಲಕ್ಷ್ಯ 2022' ಯೋಜನೆ ಜಾರಿಗೆ ಮೀನಮೇಷ ಎನಿಸುತ್ತಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಐಎಎಫ್ಎಫ್) ಕ್ರಮದಿಂದ ಯೋಜನೆಯ ತಾಂತ್ರಿಕ ನಿರ್ದೇಶಕ ರಾಬ್ ಬಾನ್ ನಿರಾಸೆಗೊಂಡಿದ್ದಾರೆ. ಇದೇ ವರ್ಷದ ಅಕ್ಟೋಬರ್ನಲ್ಲಿ ಕೊನೆಗೊಳ್ಳಲಿರುವ ಈ ಒಪ್ಪಂದ ವಿಸ್ತರಣೆಗೊಳ್ಳುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.<br /> <br /> ಅಪಾರ ಅನುಭವ ಹೊಂದಿರುವ ಬಾನ್, ಕತಾರ್ನಲ್ಲಿ 2022ರಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ಗೆ ಭಾರತ ತಂಡ ಅರ್ಹತೆ ಪಡೆಯುವ ಗುರಿಯೊಂದಿಗೆ `ಲಕ್ಷ್ಯ 2022' ಎಂಬ ಯೋಜನೆ ರೂಪಿಸಿದ್ದರು. ಆದರೆ ಅವರ ಕನಸಿನ ಯೋಜನೆ ಕಳೆದ ಆಗಸ್ಟ್ನಿಂದಲೇ ದೂಳು ತಿನ್ನುತ್ತಿದೆ. ಇದನ್ನರಿತ 70 ವರ್ಷದ ಬಾನ್, ಒಪ್ಪಂದವನ್ನು ಮತ್ತೊಂದು ಅವಧಿಗೆ ವಿಸ್ತರಿಸುವ ಸಾಧ್ಯತೆಗಳಿಲ್ಲ ಎಂಬ ಸಂದೇಶವನ್ನು ಸೂಕ್ಷ್ಮವಾಗಿ ರವಾನಿಸಿದ್ದಾರೆ.<br /> <br /> `ಲಕ್ಷ್ಯ 2022 ಯೋಜನೆ ಜಾರಿಗೊಳಿಸದ್ದರಿಂದ ಬಾನ್ ಅಸಂತುಷ್ಟರಾಗಿರುವುದು ನಿಜ. ಆದ್ದರಿಂದ ನಿಗದಿತ ಒಪ್ಪಂದವನ್ನು ಬಾನ್ ಮತ್ತೊಂದು ಅವಧಿಗೆ ವಿಸ್ತರಿಸುವ ಸಾಧ್ಯತೆಗಳು ಕಡಿಮೆ. ಆದರೆ ಈ ಸಂಬಂಧ ಬಾನ್ ಯಾವುದೇ ಹೇಳಿಕೆ ನೀಡಿಲ್ಲ' ಎಂದು ಎಐಎಫ್ಎಫ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.<br /> <br /> 2011ರ ಅಕ್ಟೋಬರ್ನಲ್ಲಿ ಬಾನ್ ಅವರು ಎರಡು ವರ್ಷಗಳ ಅವಧಿಗೆ ಯೋಜನೆಯ ತಾಂತ್ರಿಕ ನಿರ್ದೇಶಕರಾಗಿ ನೇಮಕಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ</strong>): ಮಹತ್ವಾಕಾಂಕ್ಷೆಯ `ಲಕ್ಷ್ಯ 2022' ಯೋಜನೆ ಜಾರಿಗೆ ಮೀನಮೇಷ ಎನಿಸುತ್ತಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಐಎಎಫ್ಎಫ್) ಕ್ರಮದಿಂದ ಯೋಜನೆಯ ತಾಂತ್ರಿಕ ನಿರ್ದೇಶಕ ರಾಬ್ ಬಾನ್ ನಿರಾಸೆಗೊಂಡಿದ್ದಾರೆ. ಇದೇ ವರ್ಷದ ಅಕ್ಟೋಬರ್ನಲ್ಲಿ ಕೊನೆಗೊಳ್ಳಲಿರುವ ಈ ಒಪ್ಪಂದ ವಿಸ್ತರಣೆಗೊಳ್ಳುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.<br /> <br /> ಅಪಾರ ಅನುಭವ ಹೊಂದಿರುವ ಬಾನ್, ಕತಾರ್ನಲ್ಲಿ 2022ರಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ಗೆ ಭಾರತ ತಂಡ ಅರ್ಹತೆ ಪಡೆಯುವ ಗುರಿಯೊಂದಿಗೆ `ಲಕ್ಷ್ಯ 2022' ಎಂಬ ಯೋಜನೆ ರೂಪಿಸಿದ್ದರು. ಆದರೆ ಅವರ ಕನಸಿನ ಯೋಜನೆ ಕಳೆದ ಆಗಸ್ಟ್ನಿಂದಲೇ ದೂಳು ತಿನ್ನುತ್ತಿದೆ. ಇದನ್ನರಿತ 70 ವರ್ಷದ ಬಾನ್, ಒಪ್ಪಂದವನ್ನು ಮತ್ತೊಂದು ಅವಧಿಗೆ ವಿಸ್ತರಿಸುವ ಸಾಧ್ಯತೆಗಳಿಲ್ಲ ಎಂಬ ಸಂದೇಶವನ್ನು ಸೂಕ್ಷ್ಮವಾಗಿ ರವಾನಿಸಿದ್ದಾರೆ.<br /> <br /> `ಲಕ್ಷ್ಯ 2022 ಯೋಜನೆ ಜಾರಿಗೊಳಿಸದ್ದರಿಂದ ಬಾನ್ ಅಸಂತುಷ್ಟರಾಗಿರುವುದು ನಿಜ. ಆದ್ದರಿಂದ ನಿಗದಿತ ಒಪ್ಪಂದವನ್ನು ಬಾನ್ ಮತ್ತೊಂದು ಅವಧಿಗೆ ವಿಸ್ತರಿಸುವ ಸಾಧ್ಯತೆಗಳು ಕಡಿಮೆ. ಆದರೆ ಈ ಸಂಬಂಧ ಬಾನ್ ಯಾವುದೇ ಹೇಳಿಕೆ ನೀಡಿಲ್ಲ' ಎಂದು ಎಐಎಫ್ಎಫ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.<br /> <br /> 2011ರ ಅಕ್ಟೋಬರ್ನಲ್ಲಿ ಬಾನ್ ಅವರು ಎರಡು ವರ್ಷಗಳ ಅವಧಿಗೆ ಯೋಜನೆಯ ತಾಂತ್ರಿಕ ನಿರ್ದೇಶಕರಾಗಿ ನೇಮಕಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>