<p><strong>ಮೂಡುಬಿದಿರೆ</strong>: ‘ಆಗಸ್ಟ್ನಲ್ಲಿ ಹಾಲೆಂಡ್ ಮತ್ತು ಸ್ಪೇನ್ಗೆ ಹಾಕಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡದೊಂದಿಗೆ ಹೋಗುತ್ತಿದ್ದೇನೆ. ಮುಂದಿನ ಒಲಿಂಪಿಕ್ಸ್ ನಲ್ಲಿ ತಂಡ ಪದಕ ಗೆಲ್ಲುವ ಗುರಿ ಹೊಂದಿದೆ’ ಎಂದು ಭಾರತ ತಂಡದ ಪ್ರಮುಖ ಹಾಕಿ ಆಟಗಾರರಲ್ಲೊಬ್ಬರಾ ಗಿರುವ ಎಸ್.ವಿ ಸುನಿಲ್ ಹೇಳಿದರು.</p>.<p>ತಮ್ಮ ಹುಟ್ಟೂರಾದ ಕಾರ್ಕಳ ತಾಲ್ಲೂಕಿನ ಸಾಣೂರಿನಲ್ಲಿರುವ ತಮ್ಮ ಕುಟುಂಬದ ನಾಗಸನ್ನಿಧಿಗೆ ಭೇಟಿ ನೀಡುವ ನಿಮಿತ್ತ ಅವರು ಭಾನುವಾರ ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.<br /> ‘ಈ ಕ್ಷೇತ್ರಕ್ಕೆ ಮೊದಲ ಬಾರಿ ಭೇಟಿ ನೀಡಿದ್ದೇನೆ. ದೇವರ ದರ್ಶನ ಮನಸ್ಸಿಗೆ ಮುದ ನೀಡಿದೆ. ಮುಂದಿನ ಕ್ರೀಡಾ ಸಾಧನೆಗೆ ಇದು ಸ್ಫೂರ್ತಿ ನೀಡಲಿದೆ. ಮುಂದೆ ಪ್ರತಿ ವರ್ಷವೂ ಇಲ್ಲಿಗೆ ಭೇಟಿ ನೀಡುತ್ತೇನೆ ಎಂದರು.</p>.<p>ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಅವರು ನಿತ್ಯಪೂಜಾ ನಿಧಿ ಹಾಗೂ ಅನ್ನದಾನ ನಿಧಿಗೆ ದೇಣಿಗೆ ನೀಡಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಸುಂದರ ಜಿ. ಆಚಾರ್ಯ ಸುನಿಲ್ ಅವರನ್ನು ಕ್ಷೇತ್ರದ ಪರವಾಗಿ ಗೌರವಿಸಿದರು.</p>.<p>ಮೊಕ್ತೇಸರ ರಾದ ಜಯಕರ, ಪುರೋಹಿತ ಎಂ.ಕೆ. ಬಾಲಕೃಷ್ಣ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿ ಯ ಅಧ್ಯಕ್ಷ ಶಿವರಾಮ ಆಚಾರ್ಯ, ಕಾಳಿಕಾಂಬಾ ಮಹಿಳಾ ಸಮಿತಿಯ ಮಾಜಿ ಅಧ್ಯಕ್ಷೆ ಸುರೇಖಾ ಹರಿಶ್ಚಂದ್ರ ಆಚಾರ್ಯ ಮತ್ತಿತರರು ಇದ್ದರು.</p>.<p><strong>ಮುಖ್ಯಾಂಶಗಳು</strong><br /> * ಹುಟ್ಟೂರು ಸಾಣೂರಿಗೆ ಸುನಿಲ್ ಭೇಟಿ<br /> * ಕಾಲಿಗೆ ಗಾಯ– 3 ತಿಂಗಳ ವಿಶ್ರಾಂತಿ<br /> * ಮುಂದಿನ ಒಲಿಂಪಿಕ್ಸ್ನತ್ತ ಸುನಿಲ್ ಕಣ್ಣು</p>.<p><em>ಆಟದ ಸಮಯದಲ್ಲಿ ಕಾಲಿಗೆ ಗಾಯವಾದ ಕಾರಣ ವೈದ್ಯರ ಸಲಹೆಯಂತೆ ವಿಶ್ರಾಂತಿಗಾಗಿ ಮೂರು ತಿಂಗಳ ರಜೆಯಲ್ಲಿ ಊರಿಗೆ ಬಂದಿದ್ದೇನೆ’</em><br /> ಎಸ್.ವಿ ಸುನಿಲ್, ಹಾಕಿ ಆಟಗಾರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡುಬಿದಿರೆ</strong>: ‘ಆಗಸ್ಟ್ನಲ್ಲಿ ಹಾಲೆಂಡ್ ಮತ್ತು ಸ್ಪೇನ್ಗೆ ಹಾಕಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡದೊಂದಿಗೆ ಹೋಗುತ್ತಿದ್ದೇನೆ. ಮುಂದಿನ ಒಲಿಂಪಿಕ್ಸ್ ನಲ್ಲಿ ತಂಡ ಪದಕ ಗೆಲ್ಲುವ ಗುರಿ ಹೊಂದಿದೆ’ ಎಂದು ಭಾರತ ತಂಡದ ಪ್ರಮುಖ ಹಾಕಿ ಆಟಗಾರರಲ್ಲೊಬ್ಬರಾ ಗಿರುವ ಎಸ್.ವಿ ಸುನಿಲ್ ಹೇಳಿದರು.</p>.<p>ತಮ್ಮ ಹುಟ್ಟೂರಾದ ಕಾರ್ಕಳ ತಾಲ್ಲೂಕಿನ ಸಾಣೂರಿನಲ್ಲಿರುವ ತಮ್ಮ ಕುಟುಂಬದ ನಾಗಸನ್ನಿಧಿಗೆ ಭೇಟಿ ನೀಡುವ ನಿಮಿತ್ತ ಅವರು ಭಾನುವಾರ ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.<br /> ‘ಈ ಕ್ಷೇತ್ರಕ್ಕೆ ಮೊದಲ ಬಾರಿ ಭೇಟಿ ನೀಡಿದ್ದೇನೆ. ದೇವರ ದರ್ಶನ ಮನಸ್ಸಿಗೆ ಮುದ ನೀಡಿದೆ. ಮುಂದಿನ ಕ್ರೀಡಾ ಸಾಧನೆಗೆ ಇದು ಸ್ಫೂರ್ತಿ ನೀಡಲಿದೆ. ಮುಂದೆ ಪ್ರತಿ ವರ್ಷವೂ ಇಲ್ಲಿಗೆ ಭೇಟಿ ನೀಡುತ್ತೇನೆ ಎಂದರು.</p>.<p>ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಅವರು ನಿತ್ಯಪೂಜಾ ನಿಧಿ ಹಾಗೂ ಅನ್ನದಾನ ನಿಧಿಗೆ ದೇಣಿಗೆ ನೀಡಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಸುಂದರ ಜಿ. ಆಚಾರ್ಯ ಸುನಿಲ್ ಅವರನ್ನು ಕ್ಷೇತ್ರದ ಪರವಾಗಿ ಗೌರವಿಸಿದರು.</p>.<p>ಮೊಕ್ತೇಸರ ರಾದ ಜಯಕರ, ಪುರೋಹಿತ ಎಂ.ಕೆ. ಬಾಲಕೃಷ್ಣ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿ ಯ ಅಧ್ಯಕ್ಷ ಶಿವರಾಮ ಆಚಾರ್ಯ, ಕಾಳಿಕಾಂಬಾ ಮಹಿಳಾ ಸಮಿತಿಯ ಮಾಜಿ ಅಧ್ಯಕ್ಷೆ ಸುರೇಖಾ ಹರಿಶ್ಚಂದ್ರ ಆಚಾರ್ಯ ಮತ್ತಿತರರು ಇದ್ದರು.</p>.<p><strong>ಮುಖ್ಯಾಂಶಗಳು</strong><br /> * ಹುಟ್ಟೂರು ಸಾಣೂರಿಗೆ ಸುನಿಲ್ ಭೇಟಿ<br /> * ಕಾಲಿಗೆ ಗಾಯ– 3 ತಿಂಗಳ ವಿಶ್ರಾಂತಿ<br /> * ಮುಂದಿನ ಒಲಿಂಪಿಕ್ಸ್ನತ್ತ ಸುನಿಲ್ ಕಣ್ಣು</p>.<p><em>ಆಟದ ಸಮಯದಲ್ಲಿ ಕಾಲಿಗೆ ಗಾಯವಾದ ಕಾರಣ ವೈದ್ಯರ ಸಲಹೆಯಂತೆ ವಿಶ್ರಾಂತಿಗಾಗಿ ಮೂರು ತಿಂಗಳ ರಜೆಯಲ್ಲಿ ಊರಿಗೆ ಬಂದಿದ್ದೇನೆ’</em><br /> ಎಸ್.ವಿ ಸುನಿಲ್, ಹಾಕಿ ಆಟಗಾರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>