<p>ಈ ವಾರಾಂತ್ಯದಲ್ಲಿ ನಗರದ ಓರಿಯನ್ ಮಾಲ್ಗೆ ಭೇಟಿ ನೀಡಿದರೆ ಬೇಸ್ತು ಬೀಳಲಿದ್ದೀರಿ. ಇಲ್ಲಿಯ ನೆಲ ಸೀಳಿ ಆಕೃತಿಗಳು ಮೇಲೇಳಲಿವೆ. <br /> <br /> ಗಾಬರಿ ಬೇಡ, ಆದರೆ, ಸೋಜಿಗದ 3ಡಿ ಸ್ಟ್ರೀಟ್ ಕಲೆಯನ್ನು ಆಸ್ವಾದಿಸಲು ಭೇಟಿ ನೀಡಿ. ಕೆನ್ ಸ್ಕೂಲ್ ಆಫ್ ಆರ್ಟ್ಸ್ನ ಕಾರ್ತಿಕ್ ಬಿ. ಶೆಟ್ಟಿ, ವಿಜಯಕೃಷ್ಣ, ಪ್ರೀತಮ್ ಕ್ರಿಸ್ಟೋಫರ್, ಪೃಥ್ವಿರಾಜ್ ಅರಸ್ ನಾಲ್ವರೂ 3ಡಿ ಸ್ಟ್ರೀಟ್ ಆರ್ಟ್ ಅನ್ನು ಧರೆಗಿಳಿಸಲಿದ್ದಾರೆ.<br /> <br /> ಕಲಾಕೃತಿಯಲ್ಲೇಕೆ ಭೂಕಂಪ ಅಥವಾ ಭೂ ಕುಸಿತದಂಥ ಭೀಭತ್ಸ ಉದ್ದೇಶ ಏಕೆ ಎಂದು ಹುಬ್ಬೇರಿಸಬಹುದು? <br /> <br /> ಆದರೆ ಈ ಹುಡುಗರು ಎಚ್ಚರಿಕೆಯ ಗಂಟೆಯನ್ನು ನೀಡುತ್ತಿದ್ದಾರೆ. ಪರಿಸರ ಕಾಳಜಿ ವ್ಯಕ್ತ ಪಡಿಸಲು, ನಮ್ಮ ಭೀಕರ ಭವಿಷ್ಯದ ಪರಿಕಲ್ಪನೆ ಮೂಡಲಿ ಎಂದು ಇದನ್ನು ಆಯ್ಕೆ ಮಾಡಿಕೊಂಡಿದ್ದಾರೆ. <br /> <br /> ನೀರು ಉಳಿಸಿ, ಪರಿಸರ ಸಂರಕ್ಷಿಸಿ ಎಂಬುದು ಅವರ ಸಂದೇಶ. ಈ ಕಲೆಯನ್ನು ಬ್ರಿಗೇಡ್ಸ್ ಗ್ರೂಪ್ಸ್, ಸರಸ್ವತಿ ಯು ಶೆಟ್ಟಿ ಉಡುಪಿ, ಲಕ್ಷ್ಮಿ ಸ್ಟೀಲ್ ಇಂಡಸ್ಟ್ರೀಸ್ ಬೆಂಗಳೂರು, ಆರ್ ಟಿ ನಗರದ ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ ಮುಂತಾದವರು ಪ್ರಾಯೋಜಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈ ವಾರಾಂತ್ಯದಲ್ಲಿ ನಗರದ ಓರಿಯನ್ ಮಾಲ್ಗೆ ಭೇಟಿ ನೀಡಿದರೆ ಬೇಸ್ತು ಬೀಳಲಿದ್ದೀರಿ. ಇಲ್ಲಿಯ ನೆಲ ಸೀಳಿ ಆಕೃತಿಗಳು ಮೇಲೇಳಲಿವೆ. <br /> <br /> ಗಾಬರಿ ಬೇಡ, ಆದರೆ, ಸೋಜಿಗದ 3ಡಿ ಸ್ಟ್ರೀಟ್ ಕಲೆಯನ್ನು ಆಸ್ವಾದಿಸಲು ಭೇಟಿ ನೀಡಿ. ಕೆನ್ ಸ್ಕೂಲ್ ಆಫ್ ಆರ್ಟ್ಸ್ನ ಕಾರ್ತಿಕ್ ಬಿ. ಶೆಟ್ಟಿ, ವಿಜಯಕೃಷ್ಣ, ಪ್ರೀತಮ್ ಕ್ರಿಸ್ಟೋಫರ್, ಪೃಥ್ವಿರಾಜ್ ಅರಸ್ ನಾಲ್ವರೂ 3ಡಿ ಸ್ಟ್ರೀಟ್ ಆರ್ಟ್ ಅನ್ನು ಧರೆಗಿಳಿಸಲಿದ್ದಾರೆ.<br /> <br /> ಕಲಾಕೃತಿಯಲ್ಲೇಕೆ ಭೂಕಂಪ ಅಥವಾ ಭೂ ಕುಸಿತದಂಥ ಭೀಭತ್ಸ ಉದ್ದೇಶ ಏಕೆ ಎಂದು ಹುಬ್ಬೇರಿಸಬಹುದು? <br /> <br /> ಆದರೆ ಈ ಹುಡುಗರು ಎಚ್ಚರಿಕೆಯ ಗಂಟೆಯನ್ನು ನೀಡುತ್ತಿದ್ದಾರೆ. ಪರಿಸರ ಕಾಳಜಿ ವ್ಯಕ್ತ ಪಡಿಸಲು, ನಮ್ಮ ಭೀಕರ ಭವಿಷ್ಯದ ಪರಿಕಲ್ಪನೆ ಮೂಡಲಿ ಎಂದು ಇದನ್ನು ಆಯ್ಕೆ ಮಾಡಿಕೊಂಡಿದ್ದಾರೆ. <br /> <br /> ನೀರು ಉಳಿಸಿ, ಪರಿಸರ ಸಂರಕ್ಷಿಸಿ ಎಂಬುದು ಅವರ ಸಂದೇಶ. ಈ ಕಲೆಯನ್ನು ಬ್ರಿಗೇಡ್ಸ್ ಗ್ರೂಪ್ಸ್, ಸರಸ್ವತಿ ಯು ಶೆಟ್ಟಿ ಉಡುಪಿ, ಲಕ್ಷ್ಮಿ ಸ್ಟೀಲ್ ಇಂಡಸ್ಟ್ರೀಸ್ ಬೆಂಗಳೂರು, ಆರ್ ಟಿ ನಗರದ ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ ಮುಂತಾದವರು ಪ್ರಾಯೋಜಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>