<p><strong>ಕಾರವಾರ</strong>: ಅಂಗವಿಕಲ ಮಗನಿಗೆ ಮಾಸಾಶನ ಕೊಡಿಸಲು ತಾಯಿ ಕಳೆದ ಎಂಟು ತಿಂಗಳಿಂದ ಇಲ್ಲಿಯ ಮತ್ತು ಅಂಕೋಲಾದಲ್ಲಿರುವ ತಹಶೀಲ್ದಾರ್ ಕಚೇರಿ ಅಲೆಯುತ್ತಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.<br /> <br /> ತಾಲ್ಲೂಕಿನ ಚೆಂಡಿಯಾ ಅಲಿಗದ್ದಾ ಗ್ರಾಮದ ನಿವಾಸಿ ಕೇಶವ ನಾಯ್ಕ ಮಂಜುಳಾ ದಂಪತಿಗೆ ಐವರು ಮಕ್ಕಳು. ಐವರ ಪೈಕಿ ಹಿರಿಯವನು ಹುಟ್ಟು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಅವರ ಎರಡೂ ಕಾಲುಗಳು ಸಂಪೂರ್ಣ ಸ್ವಾಧೀನ ಕಳೆದುಕೊಂಡಿವೆ.<br /> <br /> ತಾಲ್ಲೂಕಿನ ಚೆಂಡಿಯಾದಲ್ಲಿರುವ ಭೂಮಿ ಸೀಬರ್ಡ್ ಯೋಜನೆಗಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡ ನಂತರ ಕೇಶವ ನಾಯ್ಕ ಕುಟುಂಬ ಅಂಕೋಲಾ ತಾಲ್ಲೂಕಿನ ಅವರ್ಸಾ ಸಕಲಬೇಣಕ್ಕೆ ಹೋಗಿ ನೆಲೆಸಿತು. ಅಲ್ಲಿ ನೆಲೆಸಿದ ನಂತರವೂ ಹಿರಿಯ ಪುತ್ರ ನಾರಾಯಣನಿಗೆ ಬರುತ್ತಿದ್ದ ಮಾಸಾಶನ ಕಳೆದ ಒಂದು ವರ್ಷದಿಂದ ನಿಂತಿದೆ.<br /> <br /> ಈ ಕುರಿತು ಮಂಜುಳಾ ನಾಯ್ಕ ಜಿಲ್ಲಾ ಖಜಾನೆಯ ಅಧಿಕಾರಿಗಳನ್ನು ವಿಚಾರಿಸಿದ್ದಾಗ ತಹಶೀಲ್ದಾರ್ ಕಚೇರಿಗೆ ಹೋಗುವಂತೆ ತಿಳಿಸಿದ್ದಾರೆ. ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಅಂಕೋಲಾ ತಹಶೀಲ್ದಾರ ಕಚೇರಿಗೆ ಹೋಗಿ ಎಂದು ಸೂಚನೆ ನೀಡಿದ್ದಾರೆ.<br /> <br /> ಅವರ್ಸಾದಿಂದ ತರಕಾರಿಗಳನ್ನು ತಂದು ನಗರದಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಮಂಜುಳಾ ಅಂಕೋಲಾ ಹಾಗೂ ಕಾರವಾರ ತಹಶೀಲ್ದಾರ್ ಕಚೇರಿ ಅಲೆದಲೆದು ಸುಸ್ತಾಗಿದ್ದಾರೆ. ಯಾವ ಕಚೇರಿಯಲ್ಲೂ ಅವರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅಧಿಕಾರಿಗಳು, ಸಿಬ್ಬಂದಿ ಸರಿಯಾಗಿ ಸ್ಪಂದಿಸದೇ ಇರುವುದರಿಂದ ಅವರು ರೋಸಿಹೋಗಿದ್ದಾರೆ.<br /> <br /> `ಮಗ ನಾರಾಯಣನಿಗೆ ರೂ 50 ಮಾಸಾಶನ ಬರುತ್ತಿತ್ತು. ನಂತರ ರೂ 75 ಬಳಿಕ ರೂ 400 ಮಾಶಸನ ಬರುತ್ತಿತ್ತು. ಕಳೆದ ಒಂದೂವರೆಗೆ ವರ್ಷದಿಂದ ಮಾಸಾಶನ ಬರುವುದು ನಿಂತು ಹೋಗಿದೆ. ಈ ಬಗ್ಗೆ ಕಾರವಾರ ತಹಶೀಲ್ದಾರ್ ಕಚೇರಿ ಹೋಗಿ ಕೇಳಿದರೆ ಅಂಕೋಲಾಕ್ಕೆ ಹೋಗಿ ಎನ್ನುತ್ತಾರೆ. ಅಲ್ಲಿ ಹೋದರೆ ಇಲ್ಲಿಗೆ ಕಳುಹಿಸುತ್ತಾರೆ' ಎಂದು ಮಂಜುಳಾ ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ಅಂಗವಿಕಲ ಮಗನಿಗೆ ಮಾಸಾಶನ ಕೊಡಿಸಲು ತಾಯಿ ಕಳೆದ ಎಂಟು ತಿಂಗಳಿಂದ ಇಲ್ಲಿಯ ಮತ್ತು ಅಂಕೋಲಾದಲ್ಲಿರುವ ತಹಶೀಲ್ದಾರ್ ಕಚೇರಿ ಅಲೆಯುತ್ತಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.<br /> <br /> ತಾಲ್ಲೂಕಿನ ಚೆಂಡಿಯಾ ಅಲಿಗದ್ದಾ ಗ್ರಾಮದ ನಿವಾಸಿ ಕೇಶವ ನಾಯ್ಕ ಮಂಜುಳಾ ದಂಪತಿಗೆ ಐವರು ಮಕ್ಕಳು. ಐವರ ಪೈಕಿ ಹಿರಿಯವನು ಹುಟ್ಟು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಅವರ ಎರಡೂ ಕಾಲುಗಳು ಸಂಪೂರ್ಣ ಸ್ವಾಧೀನ ಕಳೆದುಕೊಂಡಿವೆ.<br /> <br /> ತಾಲ್ಲೂಕಿನ ಚೆಂಡಿಯಾದಲ್ಲಿರುವ ಭೂಮಿ ಸೀಬರ್ಡ್ ಯೋಜನೆಗಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡ ನಂತರ ಕೇಶವ ನಾಯ್ಕ ಕುಟುಂಬ ಅಂಕೋಲಾ ತಾಲ್ಲೂಕಿನ ಅವರ್ಸಾ ಸಕಲಬೇಣಕ್ಕೆ ಹೋಗಿ ನೆಲೆಸಿತು. ಅಲ್ಲಿ ನೆಲೆಸಿದ ನಂತರವೂ ಹಿರಿಯ ಪುತ್ರ ನಾರಾಯಣನಿಗೆ ಬರುತ್ತಿದ್ದ ಮಾಸಾಶನ ಕಳೆದ ಒಂದು ವರ್ಷದಿಂದ ನಿಂತಿದೆ.<br /> <br /> ಈ ಕುರಿತು ಮಂಜುಳಾ ನಾಯ್ಕ ಜಿಲ್ಲಾ ಖಜಾನೆಯ ಅಧಿಕಾರಿಗಳನ್ನು ವಿಚಾರಿಸಿದ್ದಾಗ ತಹಶೀಲ್ದಾರ್ ಕಚೇರಿಗೆ ಹೋಗುವಂತೆ ತಿಳಿಸಿದ್ದಾರೆ. ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಅಂಕೋಲಾ ತಹಶೀಲ್ದಾರ ಕಚೇರಿಗೆ ಹೋಗಿ ಎಂದು ಸೂಚನೆ ನೀಡಿದ್ದಾರೆ.<br /> <br /> ಅವರ್ಸಾದಿಂದ ತರಕಾರಿಗಳನ್ನು ತಂದು ನಗರದಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಮಂಜುಳಾ ಅಂಕೋಲಾ ಹಾಗೂ ಕಾರವಾರ ತಹಶೀಲ್ದಾರ್ ಕಚೇರಿ ಅಲೆದಲೆದು ಸುಸ್ತಾಗಿದ್ದಾರೆ. ಯಾವ ಕಚೇರಿಯಲ್ಲೂ ಅವರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅಧಿಕಾರಿಗಳು, ಸಿಬ್ಬಂದಿ ಸರಿಯಾಗಿ ಸ್ಪಂದಿಸದೇ ಇರುವುದರಿಂದ ಅವರು ರೋಸಿಹೋಗಿದ್ದಾರೆ.<br /> <br /> `ಮಗ ನಾರಾಯಣನಿಗೆ ರೂ 50 ಮಾಸಾಶನ ಬರುತ್ತಿತ್ತು. ನಂತರ ರೂ 75 ಬಳಿಕ ರೂ 400 ಮಾಶಸನ ಬರುತ್ತಿತ್ತು. ಕಳೆದ ಒಂದೂವರೆಗೆ ವರ್ಷದಿಂದ ಮಾಸಾಶನ ಬರುವುದು ನಿಂತು ಹೋಗಿದೆ. ಈ ಬಗ್ಗೆ ಕಾರವಾರ ತಹಶೀಲ್ದಾರ್ ಕಚೇರಿ ಹೋಗಿ ಕೇಳಿದರೆ ಅಂಕೋಲಾಕ್ಕೆ ಹೋಗಿ ಎನ್ನುತ್ತಾರೆ. ಅಲ್ಲಿ ಹೋದರೆ ಇಲ್ಲಿಗೆ ಕಳುಹಿಸುತ್ತಾರೆ' ಎಂದು ಮಂಜುಳಾ ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>