<p><strong>ನವದೆಹಲಿ (ಪಿಟಿಐ):</strong> ಇಸ್ರೇಲ್ ರಾಯಭಾರಿ ಕಾರು ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಹವ್ಯಾಸಿ ಪತ್ರಕರ್ತ ಸೈಯ್ಯದ್ ಮೊಹಮ್ಮದ್ ಕಜ್ಮಿ ನಿರಪರಾಧಿ ಎಂದಿರುವ ಕುಟುಂಬದವರು ಹಾಗೂ ಸ್ನೇಹಿತರು, ಕಜ್ಮಿ ಅವರಿಗೆ ಪೊಲೀಸರು ಮಾನಸಿಕ ಯಾತನೆ ನೀಡುತ್ತಿದ್ದಾರೆ~ ಎಂದು ದೂರಿದ್ದಾರೆ.<br /> <br /> ಕಜ್ಮಿ ಅವರ ಇಬ್ಬರು ಪುತ್ರರೊಂದಿಗೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ದೆಹಲಿ ಪತ್ರಕರ್ತರ ಸಂಘವು, ಈ ಪ್ರಕರಣದಲ್ಲಿ ನ್ಯಾಯಸಮ್ಮತ ಹಾಗೂ ಪಾರದರ್ಶಕ ತನಿಖೆ ನಡೆಯಬೇಕೆಂದು ಆಗ್ರಹಿಸಿದೆ.<br /> `ನನ್ನ ಅಪ್ಪ ನಿರಪರಾಧಿ. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಇರಾಕ್ ಯುದ್ಧದ ವರದಿ ಮಾಡಿದ್ದ ಅವರು ರಾಷ್ಟ್ರೀಯ ನಾಯಕ. ಪೊಲೀಸರು ಅವರಿಗೆ ಮಾನಸಿಕ ಯಾತನೆ ನೀಡುತ್ತಿದ್ದಾರೆ~ ಎಂದು ಅಜ್ಮಿ ಪುತ್ರ ಶಾಜಾಬ್ ಆರೋಪಿಸಿದರು.<br /> <br /> `ದೆಹಲಿ ಪೊಲೀಸ್ ವಿಶೇಷ ಘಟಕವು ನಮ್ಮಿಬ್ಬರಿಂದ ಬಲವಂತವಾಗಿ ಬಂಧನ ವಾರೆಂಟ್ಗೆ ಸಹಿ ಹಾಕಿಸಿಕೊಂಡಿದೆ. ಇದೀಗ ತನಿಖೆಗಾಗಿ ಸಂಬಂಧಿಕರನ್ನೆಲ್ಲ ಕರೆಸಿಕೊಳ್ಳುತ್ತಿದೆ~ ಎಂದೂ ಅವರು ದೂರಿದರು.<br /> ನಿರಪರಾಧಿ ಕಜ್ಮಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಪಾಂಡೆ ಹೇಳಿದರು.<br /> <br /> `ನಾವು ಕಜ್ಮಿ ಬಂಧನವನ್ನು ವಿರೋಧಿಸುತ್ತೇವೆ. ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಇದೊಂದು ಉದಾಹರಣೆ~ ಎಂದು ದೂರಿದರು.ನಮ್ಮ ಮನೆಯಲ್ಲಿ ಯಾವತ್ತೂ ಇರಾನ್ ಪ್ರಜೆಗಳು ಉಳಿದುಕೊಂಡಿಲ್ಲ. ಪೊಲೀಸರು ವಶಪಡಿಸಿಕೊಂಡ ಸ್ಕೂಟಿ ಎರಡು ವರ್ಷಗಳಿಂದ ನಮ್ಮ ಮನೆಯಲ್ಲಿ ದೂಳು ತಿನ್ನುತ್ತಿತ್ತು. ಈ ಹಿಂದೆ ಮೀರತ್ನ ಚಿಕ್ಕಪ್ಪ ಇದನ್ನು ಬಳಸುತ್ತಿದ್ದರು~ ಎಂದು ಶಾಬಾಜ್ ಹೇಳಿದರು.<br /> <br /> `ಗುರುವಾರ ನಾನು ಅಪ್ಪನನ್ನು ಭೇಟಿಯಾಗಿದ್ದೆ. ಅಲ್ಲಿ 8-10 ಪೊಲೀಸ್ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿ ಅವರಿಗೆ ಮಾನಸಿಕ ಚಿತ್ರಹಿಂಸೆ ಕೊಡುತ್ತಿದ್ದರು~ ಎಂದು ತಂದೆಯ ಅವಸ್ಥೆಯನ್ನು ನೆನೆದು ಕಣ್ಣೀರು ಸುರಿಸಿದರು.<br /> ಸಣ್ಣ ಗಲಾಟೆ: ಸುದ್ದಿಗೋಷ್ಠಿ ಸ್ಥಳದಲ್ಲಿ ಕೆಲವು ಪತ್ರಕರ್ತರು ಹಾಗೂ ವ್ಯಕ್ತಿಯೊಬ್ಬನ ನಡುವೆ ಸಣ್ಣ ಗಲಾಟೆ ನಡೆಯಿತು. ಈ ವ್ಯಕ್ತಿಯು ಪೊಲೀಸ್ ಇರಬಹುದು ಎಂಬ ಶಂಕೆಯಿಂದ ಕೆಲವು ಪತ್ರಕರ್ತರು ಆತನನ್ನು ಕೆಲ ಸಮಯ ತಡೆದಿದ್ದರು.<br /> <br /> ಫೆ.13ರಂದು ನಡೆದ ಸ್ಫೋಟವು ಅಂತರ ರಾಷ್ಟ್ರೀಯ ಭಯೋತ್ಪಾದನಾ ಪ್ರಕರಣ ಎಂದಿದ್ದ ದೆಹಲಿ ಪೊಲೀಸರು, ಇಸ್ರೇಲ್ ರಾಯಭಾರ ಕಚೇರಿ ಪತ್ತೇದಾರಿಕೆಯಲ್ಲಿ ದಾಳಿಕೋರನಿಗೆ ನೆರವು ನೀಡಿದ ಆರೋಪದಲ್ಲಿ ಕಜ್ಮಿ ಅವರನ್ನು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಇಸ್ರೇಲ್ ರಾಯಭಾರಿ ಕಾರು ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಹವ್ಯಾಸಿ ಪತ್ರಕರ್ತ ಸೈಯ್ಯದ್ ಮೊಹಮ್ಮದ್ ಕಜ್ಮಿ ನಿರಪರಾಧಿ ಎಂದಿರುವ ಕುಟುಂಬದವರು ಹಾಗೂ ಸ್ನೇಹಿತರು, ಕಜ್ಮಿ ಅವರಿಗೆ ಪೊಲೀಸರು ಮಾನಸಿಕ ಯಾತನೆ ನೀಡುತ್ತಿದ್ದಾರೆ~ ಎಂದು ದೂರಿದ್ದಾರೆ.<br /> <br /> ಕಜ್ಮಿ ಅವರ ಇಬ್ಬರು ಪುತ್ರರೊಂದಿಗೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ದೆಹಲಿ ಪತ್ರಕರ್ತರ ಸಂಘವು, ಈ ಪ್ರಕರಣದಲ್ಲಿ ನ್ಯಾಯಸಮ್ಮತ ಹಾಗೂ ಪಾರದರ್ಶಕ ತನಿಖೆ ನಡೆಯಬೇಕೆಂದು ಆಗ್ರಹಿಸಿದೆ.<br /> `ನನ್ನ ಅಪ್ಪ ನಿರಪರಾಧಿ. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಇರಾಕ್ ಯುದ್ಧದ ವರದಿ ಮಾಡಿದ್ದ ಅವರು ರಾಷ್ಟ್ರೀಯ ನಾಯಕ. ಪೊಲೀಸರು ಅವರಿಗೆ ಮಾನಸಿಕ ಯಾತನೆ ನೀಡುತ್ತಿದ್ದಾರೆ~ ಎಂದು ಅಜ್ಮಿ ಪುತ್ರ ಶಾಜಾಬ್ ಆರೋಪಿಸಿದರು.<br /> <br /> `ದೆಹಲಿ ಪೊಲೀಸ್ ವಿಶೇಷ ಘಟಕವು ನಮ್ಮಿಬ್ಬರಿಂದ ಬಲವಂತವಾಗಿ ಬಂಧನ ವಾರೆಂಟ್ಗೆ ಸಹಿ ಹಾಕಿಸಿಕೊಂಡಿದೆ. ಇದೀಗ ತನಿಖೆಗಾಗಿ ಸಂಬಂಧಿಕರನ್ನೆಲ್ಲ ಕರೆಸಿಕೊಳ್ಳುತ್ತಿದೆ~ ಎಂದೂ ಅವರು ದೂರಿದರು.<br /> ನಿರಪರಾಧಿ ಕಜ್ಮಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಪಾಂಡೆ ಹೇಳಿದರು.<br /> <br /> `ನಾವು ಕಜ್ಮಿ ಬಂಧನವನ್ನು ವಿರೋಧಿಸುತ್ತೇವೆ. ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಇದೊಂದು ಉದಾಹರಣೆ~ ಎಂದು ದೂರಿದರು.ನಮ್ಮ ಮನೆಯಲ್ಲಿ ಯಾವತ್ತೂ ಇರಾನ್ ಪ್ರಜೆಗಳು ಉಳಿದುಕೊಂಡಿಲ್ಲ. ಪೊಲೀಸರು ವಶಪಡಿಸಿಕೊಂಡ ಸ್ಕೂಟಿ ಎರಡು ವರ್ಷಗಳಿಂದ ನಮ್ಮ ಮನೆಯಲ್ಲಿ ದೂಳು ತಿನ್ನುತ್ತಿತ್ತು. ಈ ಹಿಂದೆ ಮೀರತ್ನ ಚಿಕ್ಕಪ್ಪ ಇದನ್ನು ಬಳಸುತ್ತಿದ್ದರು~ ಎಂದು ಶಾಬಾಜ್ ಹೇಳಿದರು.<br /> <br /> `ಗುರುವಾರ ನಾನು ಅಪ್ಪನನ್ನು ಭೇಟಿಯಾಗಿದ್ದೆ. ಅಲ್ಲಿ 8-10 ಪೊಲೀಸ್ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿ ಅವರಿಗೆ ಮಾನಸಿಕ ಚಿತ್ರಹಿಂಸೆ ಕೊಡುತ್ತಿದ್ದರು~ ಎಂದು ತಂದೆಯ ಅವಸ್ಥೆಯನ್ನು ನೆನೆದು ಕಣ್ಣೀರು ಸುರಿಸಿದರು.<br /> ಸಣ್ಣ ಗಲಾಟೆ: ಸುದ್ದಿಗೋಷ್ಠಿ ಸ್ಥಳದಲ್ಲಿ ಕೆಲವು ಪತ್ರಕರ್ತರು ಹಾಗೂ ವ್ಯಕ್ತಿಯೊಬ್ಬನ ನಡುವೆ ಸಣ್ಣ ಗಲಾಟೆ ನಡೆಯಿತು. ಈ ವ್ಯಕ್ತಿಯು ಪೊಲೀಸ್ ಇರಬಹುದು ಎಂಬ ಶಂಕೆಯಿಂದ ಕೆಲವು ಪತ್ರಕರ್ತರು ಆತನನ್ನು ಕೆಲ ಸಮಯ ತಡೆದಿದ್ದರು.<br /> <br /> ಫೆ.13ರಂದು ನಡೆದ ಸ್ಫೋಟವು ಅಂತರ ರಾಷ್ಟ್ರೀಯ ಭಯೋತ್ಪಾದನಾ ಪ್ರಕರಣ ಎಂದಿದ್ದ ದೆಹಲಿ ಪೊಲೀಸರು, ಇಸ್ರೇಲ್ ರಾಯಭಾರ ಕಚೇರಿ ಪತ್ತೇದಾರಿಕೆಯಲ್ಲಿ ದಾಳಿಕೋರನಿಗೆ ನೆರವು ನೀಡಿದ ಆರೋಪದಲ್ಲಿ ಕಜ್ಮಿ ಅವರನ್ನು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>