<p>ಕಠ್ಮಂಡು (ಐಎಎನ್ಎಸ್): ಕಠ್ಮಂಡುವಿನ ತ್ರಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಟಿಐಎ) ಶನಿವಾರ ಇಳಿದ ತತ್ ಕ್ಷಣವೇ ಇಂಡಿಗೋ ಏರ್ ಲೈನ್ಸ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತು .<br /> <br /> ಆದರೆ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ಏರ್ ಬಸ್ ಎ 320 ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಕ್ಸಿನ್ ಹುವಾ ವರದಿ ಮಾಡಿದೆ.<br /> <br /> ವಿಮಾನವು ನಿಲ್ದಾಣದಲ್ಲಿ ನೆಲಕ್ಕೆ ಇಳಿದ ತತ್ ಕ್ಷಣವೇ ಬೆಂಕಿ ಕಾಣಿಸಿಕೊಂಡಿತು ಎಂದು ವರದಿ ತಿಳಿಸಿದೆ.<br /> <br /> ಬೆಂಕಿಯನ್ನು ತತ್ ಕ್ಷಣವೇ ನಿಯಂತ್ರಿಸಲಾಯಿತು ಎಂದು ಟಿಎಎ ಜನರಲ್ ಮ್ಯಾನೇಜರ್ ರಿಷಿಕೇಶ ಶರ್ಮಾ ಮಾಧ್ಯಮಗಳಿಗೆ ತಿಳಿಸಿದರು. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದನ್ನು ಇನ್ನಷ್ಟೇ ಪತ್ತೆ ಮಾಡ ಬೇಕಾಗಿದೆ.<br /> <br /> ನೇಪಾಳ ಏರ್ ಲೈನ್ಸ್ ಗೆ ಸೇರಿದ್ದ ಟ್ವಿನ್ ಒಟ್ಟೇರ್ ವಿಮಾನ ಎಂಜಿನ್ನಿನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮವಾಗಿ ಕಠ್ಮಂಡು ವಿಮಾನದಲ್ಲಿ ತುರ್ತಾಗಿ ಇಳಿದ ಘಟನೆ ಶುಕ್ರವಾರವಷ್ಟೇ ಸಂಭವಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಠ್ಮಂಡು (ಐಎಎನ್ಎಸ್): ಕಠ್ಮಂಡುವಿನ ತ್ರಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಟಿಐಎ) ಶನಿವಾರ ಇಳಿದ ತತ್ ಕ್ಷಣವೇ ಇಂಡಿಗೋ ಏರ್ ಲೈನ್ಸ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತು .<br /> <br /> ಆದರೆ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ಏರ್ ಬಸ್ ಎ 320 ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಕ್ಸಿನ್ ಹುವಾ ವರದಿ ಮಾಡಿದೆ.<br /> <br /> ವಿಮಾನವು ನಿಲ್ದಾಣದಲ್ಲಿ ನೆಲಕ್ಕೆ ಇಳಿದ ತತ್ ಕ್ಷಣವೇ ಬೆಂಕಿ ಕಾಣಿಸಿಕೊಂಡಿತು ಎಂದು ವರದಿ ತಿಳಿಸಿದೆ.<br /> <br /> ಬೆಂಕಿಯನ್ನು ತತ್ ಕ್ಷಣವೇ ನಿಯಂತ್ರಿಸಲಾಯಿತು ಎಂದು ಟಿಎಎ ಜನರಲ್ ಮ್ಯಾನೇಜರ್ ರಿಷಿಕೇಶ ಶರ್ಮಾ ಮಾಧ್ಯಮಗಳಿಗೆ ತಿಳಿಸಿದರು. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದನ್ನು ಇನ್ನಷ್ಟೇ ಪತ್ತೆ ಮಾಡ ಬೇಕಾಗಿದೆ.<br /> <br /> ನೇಪಾಳ ಏರ್ ಲೈನ್ಸ್ ಗೆ ಸೇರಿದ್ದ ಟ್ವಿನ್ ಒಟ್ಟೇರ್ ವಿಮಾನ ಎಂಜಿನ್ನಿನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮವಾಗಿ ಕಠ್ಮಂಡು ವಿಮಾನದಲ್ಲಿ ತುರ್ತಾಗಿ ಇಳಿದ ಘಟನೆ ಶುಕ್ರವಾರವಷ್ಟೇ ಸಂಭವಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>