<p>ಹನುಮಸಾಗರ: ಬೇಸಿಗೆ, ಮಳೆಗಾಲ ಹಾಗೂ ಚಳಿಗಾಲದಲ್ಲಿ ಬೆಳೆಯುವುದಕ್ಕೆ ಸೈ ಎನಿಸಿಕೊಂಡ ರೇಷ್ಮೆ ಬೆಳೆ ಎಂತಹ ಕಾಲದಲ್ಲೂ ರೈತನ ಕೈಹಿಡಿಯುವ ಬೆಳೆ ಎನಿಸಕೊಂಡಿದೆ ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಚಂದಪ್ಪ ತಳವಾರ ಹೇಳಿದರು.<br /> <br /> ಸಮೀಪದ ಮಾವಿನಇಟಗಿ ಗ್ರಾಮದ ಗಂಗೂಬಾಯಿ ಜೋಷಿಯವರ ಹಿಪ್ಪೆನೇರಳೆ ತೋಟದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.<br /> <br /> ಕಡಿಮೆ ಭೂಮಿ ಹಾಗೂ ಕಡಿಮೆ ಖರ್ಚಿನಲ್ಲಿ ಅಧಿಕ ಪ್ರಮಾಣದ ಇಳುವರಿ ಪಡೆದು ಲಾಭದಾಯಕವೆನಿಸುವ ಬೆಳೆ ಇದಾಗಿದ್ದು ರೈತರು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆಯಲು ಮುಂದೆ ಬರಬೇಕು ಎಂದು ಅವರು ಹೇಳಿದರು.<br /> <br /> ರೇಷ್ಮೆ ಬೆಳೆಯ ಸಂಶೋಧಕ ಡಾ. ವೈ.ಎನ್.ಸನತಕುಮಾರ ಮಾತನಾಡಿದರು. ರೇಷ್ಮೆ ಕೃಷಿ ಅಧಿಕಾರಿ ಬಿ.ಆರ್.ಗೌಡರ ರೈತರಿಗೆ ರೇಷ್ಮೆ ಬೆಳೆಯುವ ಕ್ರಮ, ನಾಟಿ ವಿಧಾನ, ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದರು.<br /> ಯರಗೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪ್ಪ ತೆಳಗಡೆ ಕಾರ್ಯಕ್ರಮ ಉದ್ಘಾಟಿಸಿದರು.<br /> <br /> ರೇಷ್ಮೆ ಕೃಷಿ ಅಧಿಕಾರಿಗಳಾದ ಸಿ.ಎಚ್.ಮುದಗಲ್, ರೈತ ಮಹಿಳೆ ಗಂಗೂಬಾಯಿ ಜೋಷಿ, ತಾಲ್ಲೂಕು ಪಂಚಾಯಿತಿ ಸದಸ್ಯ ಯಲ್ಲಪ್ಪ ಯರಗೇರಿ, ಗ್ರಾಮ ಪಂಚಾಯಿತಿ ಸದಸ್ಯೆ ಹುಲಿಗೆಮ್ಮ ಗೊಲ್ಲರ, ರೇಷ್ಮೆ ಪ್ರದರ್ಶಕ ಎಸ್.ಬಿ.ಗಣಾಚಾರಿ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹನುಮಸಾಗರ: ಬೇಸಿಗೆ, ಮಳೆಗಾಲ ಹಾಗೂ ಚಳಿಗಾಲದಲ್ಲಿ ಬೆಳೆಯುವುದಕ್ಕೆ ಸೈ ಎನಿಸಿಕೊಂಡ ರೇಷ್ಮೆ ಬೆಳೆ ಎಂತಹ ಕಾಲದಲ್ಲೂ ರೈತನ ಕೈಹಿಡಿಯುವ ಬೆಳೆ ಎನಿಸಕೊಂಡಿದೆ ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಚಂದಪ್ಪ ತಳವಾರ ಹೇಳಿದರು.<br /> <br /> ಸಮೀಪದ ಮಾವಿನಇಟಗಿ ಗ್ರಾಮದ ಗಂಗೂಬಾಯಿ ಜೋಷಿಯವರ ಹಿಪ್ಪೆನೇರಳೆ ತೋಟದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.<br /> <br /> ಕಡಿಮೆ ಭೂಮಿ ಹಾಗೂ ಕಡಿಮೆ ಖರ್ಚಿನಲ್ಲಿ ಅಧಿಕ ಪ್ರಮಾಣದ ಇಳುವರಿ ಪಡೆದು ಲಾಭದಾಯಕವೆನಿಸುವ ಬೆಳೆ ಇದಾಗಿದ್ದು ರೈತರು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆಯಲು ಮುಂದೆ ಬರಬೇಕು ಎಂದು ಅವರು ಹೇಳಿದರು.<br /> <br /> ರೇಷ್ಮೆ ಬೆಳೆಯ ಸಂಶೋಧಕ ಡಾ. ವೈ.ಎನ್.ಸನತಕುಮಾರ ಮಾತನಾಡಿದರು. ರೇಷ್ಮೆ ಕೃಷಿ ಅಧಿಕಾರಿ ಬಿ.ಆರ್.ಗೌಡರ ರೈತರಿಗೆ ರೇಷ್ಮೆ ಬೆಳೆಯುವ ಕ್ರಮ, ನಾಟಿ ವಿಧಾನ, ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದರು.<br /> ಯರಗೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪ್ಪ ತೆಳಗಡೆ ಕಾರ್ಯಕ್ರಮ ಉದ್ಘಾಟಿಸಿದರು.<br /> <br /> ರೇಷ್ಮೆ ಕೃಷಿ ಅಧಿಕಾರಿಗಳಾದ ಸಿ.ಎಚ್.ಮುದಗಲ್, ರೈತ ಮಹಿಳೆ ಗಂಗೂಬಾಯಿ ಜೋಷಿ, ತಾಲ್ಲೂಕು ಪಂಚಾಯಿತಿ ಸದಸ್ಯ ಯಲ್ಲಪ್ಪ ಯರಗೇರಿ, ಗ್ರಾಮ ಪಂಚಾಯಿತಿ ಸದಸ್ಯೆ ಹುಲಿಗೆಮ್ಮ ಗೊಲ್ಲರ, ರೇಷ್ಮೆ ಪ್ರದರ್ಶಕ ಎಸ್.ಬಿ.ಗಣಾಚಾರಿ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>