<p><strong>ಬೆಂಗಳೂರು:</strong> ಕಳೆದ ಋತುವಿನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಗಾಲ್ಫ್ ಸ್ಪರ್ಧಿ ಅನಿರ್ಬನ್ ಲಾಹಿರಿ, ಈ ವರ್ಷ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಬ್ರಿಟಿಷ್ ಓಪನ್ ಗಾಲ್ಫ್ ಚಾಂಪಿಯನ್ಷಿಪ್ಗೆ ಅರ್ಹತೆ ಪಡೆದಿರುವ ಅವರು ಬಾಲ್ಯಕಾಲದ ಕನಸು ನನಸಾದ ಸಂಭ್ರಮದಲ್ಲಿದ್ದಾರೆ.<br /> <br /> ಕೆಲ ದಿನಗಳ ಹಿಂದೆ ಥಾಯ್ಲೆಂಡ್ನಲ್ಲಿ ನಡೆದ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಲಾಹಿರಿ ಬ್ರಿಟಿಷ್ ಓಪನ್ನಲ್ಲಿ ಆಡುವ ಅವಕಾಶ ಪಡೆದಿದ್ದರು. ಈ ಯಶಸ್ಸಿಗೆ `ಧ್ಯಾನ~ ಕಾರಣ ಎಂದು ಅವರು ಹೇಳಿದ್ದಾರೆ. <br /> <br /> ಲೂಯಿಸ್ ಫಿಲಿಪ್ ಕಪ್ ಗಾಲ್ಫ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಲಾಹಿರಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡುತ್ತಾ, `ಫೆಬ್ರುವರಿಯ ಆರಂಭದಲ್ಲಿ ಹೈದರಾಬಾದ್ನ ವಿಪಾಸನಾ ಧ್ಯಾನ ಕೇಂದ್ರದಲ್ಲಿ 10 ದಿನಗಳ ಶಿಬಿರದಲ್ಲಿ ಪಾಲ್ಗೊಂಡಿದ್ದೆ. ಅದೊಂದು ಶಿಸ್ತಿನಿಂದ ಕೂಡಿದ್ದ ಶಿಬಿರ. ಇದು ಸಾಕಷ್ಟು ನೆರವು ನೀಡಿದೆ~ ಎಂದು ಹೇಳಿದರು.<br /> <br /> `ಕಳೆದ ವರ್ಷ ಉತ್ತಮ ಆರಂಭದ ಬಳಿಕ ನಿರಾಸೆ ಅನುಭವಿಸಿದ್ದೆ. ಆದರೆ ಈ ಬಾರಿ ಎಲ್ಲ ಸವಾಲುಗಳನ್ನು ಮೆಟ್ಟಿನಿಲ್ಲುವ ವಿಶ್ವಾಸ ಹೊಂದಿದ್ದೇನೆ~ ಎಂದರು.<br /> <br /> ಮಂಗಳವಾರ ಆರಂಭವಾಗಲಿರುವ ಲೂಯಿ ಫಿಲಿಪ್ ಗಾಲ್ಫ್ ಚಾಂಪಿಯನ್ಷಿಪ್ನಲ್ಲಿ ಲಾಹಿರಿ ಅಲ್ಲದೆ ದೇಶದ ಪ್ರಮಖ ಸ್ಪರ್ಧಿಗಳಾದ ಜೀವ್ ಮಿಲ್ಖಾ ಸಿಂಗ್, ಜ್ಯೋತಿ ರಾಂಧವ, ಗಗನ್ಜೀತ್ ಭುಲ್ಲರ್, ಎಸ್ಎಸ್ಪಿ ಚೌರಾಸಿಯಾ, ಗೌರವ್ ಘಾಯ್ ಮತ್ತು ಶಿವ್ ಕಪೂರ್ ಪಾಲ್ಗೊಳ್ಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕಳೆದ ಋತುವಿನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಗಾಲ್ಫ್ ಸ್ಪರ್ಧಿ ಅನಿರ್ಬನ್ ಲಾಹಿರಿ, ಈ ವರ್ಷ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಬ್ರಿಟಿಷ್ ಓಪನ್ ಗಾಲ್ಫ್ ಚಾಂಪಿಯನ್ಷಿಪ್ಗೆ ಅರ್ಹತೆ ಪಡೆದಿರುವ ಅವರು ಬಾಲ್ಯಕಾಲದ ಕನಸು ನನಸಾದ ಸಂಭ್ರಮದಲ್ಲಿದ್ದಾರೆ.<br /> <br /> ಕೆಲ ದಿನಗಳ ಹಿಂದೆ ಥಾಯ್ಲೆಂಡ್ನಲ್ಲಿ ನಡೆದ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಲಾಹಿರಿ ಬ್ರಿಟಿಷ್ ಓಪನ್ನಲ್ಲಿ ಆಡುವ ಅವಕಾಶ ಪಡೆದಿದ್ದರು. ಈ ಯಶಸ್ಸಿಗೆ `ಧ್ಯಾನ~ ಕಾರಣ ಎಂದು ಅವರು ಹೇಳಿದ್ದಾರೆ. <br /> <br /> ಲೂಯಿಸ್ ಫಿಲಿಪ್ ಕಪ್ ಗಾಲ್ಫ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಲಾಹಿರಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡುತ್ತಾ, `ಫೆಬ್ರುವರಿಯ ಆರಂಭದಲ್ಲಿ ಹೈದರಾಬಾದ್ನ ವಿಪಾಸನಾ ಧ್ಯಾನ ಕೇಂದ್ರದಲ್ಲಿ 10 ದಿನಗಳ ಶಿಬಿರದಲ್ಲಿ ಪಾಲ್ಗೊಂಡಿದ್ದೆ. ಅದೊಂದು ಶಿಸ್ತಿನಿಂದ ಕೂಡಿದ್ದ ಶಿಬಿರ. ಇದು ಸಾಕಷ್ಟು ನೆರವು ನೀಡಿದೆ~ ಎಂದು ಹೇಳಿದರು.<br /> <br /> `ಕಳೆದ ವರ್ಷ ಉತ್ತಮ ಆರಂಭದ ಬಳಿಕ ನಿರಾಸೆ ಅನುಭವಿಸಿದ್ದೆ. ಆದರೆ ಈ ಬಾರಿ ಎಲ್ಲ ಸವಾಲುಗಳನ್ನು ಮೆಟ್ಟಿನಿಲ್ಲುವ ವಿಶ್ವಾಸ ಹೊಂದಿದ್ದೇನೆ~ ಎಂದರು.<br /> <br /> ಮಂಗಳವಾರ ಆರಂಭವಾಗಲಿರುವ ಲೂಯಿ ಫಿಲಿಪ್ ಗಾಲ್ಫ್ ಚಾಂಪಿಯನ್ಷಿಪ್ನಲ್ಲಿ ಲಾಹಿರಿ ಅಲ್ಲದೆ ದೇಶದ ಪ್ರಮಖ ಸ್ಪರ್ಧಿಗಳಾದ ಜೀವ್ ಮಿಲ್ಖಾ ಸಿಂಗ್, ಜ್ಯೋತಿ ರಾಂಧವ, ಗಗನ್ಜೀತ್ ಭುಲ್ಲರ್, ಎಸ್ಎಸ್ಪಿ ಚೌರಾಸಿಯಾ, ಗೌರವ್ ಘಾಯ್ ಮತ್ತು ಶಿವ್ ಕಪೂರ್ ಪಾಲ್ಗೊಳ್ಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>