<p>ಸುವರ್ಣ ವಾಹಿನಿಯ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋನಲ್ಲಿ ಈ ವಾರವಿಡೀ ಕನ್ನಡ ಚಿತ್ರರಂಗದ ನಟ ನಟಿಯರು ಭಾಗವಹಿಸಿದ ಸಂಚಿಕೆಗಳು ಪ್ರಸಾರವಾಗಲಿವೆ. ನಟ ಜಗ್ಗೇಶ್, ನಟಿ ರಮ್ಯೋ ಹಾಗೂ ಬಹುಭಾಷಾ ನಟಿ ಪ್ರಿಯಾಮಣಿ ವಿಶೇಷ ಸಂಚಿಕೆಗಳಲ್ಲಿ ಪಾಲ್ಗೊಂಡಿದ್ದಾರೆ.<br /> <br /> ಇಂದು ಪ್ರಸಾರವಾಗಲಿರುವ(ಜೂ.24) ಸಂಚಿಕೆಯಲ್ಲಿ ಮೊದಲ ಸ್ಪರ್ಧಿಯಾಗಿ ಜಗ್ಗೇಶ್ ಕಾಣಿಸಿಕೊಳ್ಳಲಿದ್ದಾರೆ. ಜಗ್ಗೇಶ್ ಗೆದ್ದ ಮೊತ್ತವನ್ನು ಶಿಕ್ಷಣ ಸಂಸ್ಥೆಯೊಂದಕ್ಕೆ ಕೊಡಲಿದ್ದಾರೆ.<br /> <br /> ಕನ್ನಡದ ಬೋಲ್ಡ್ ನಟಿ ರಮ್ಯೋ ಜಗ್ಗೇಶ್ ನಂತರದ ಸಂಚಿಕೆಗಳಲ್ಲಿ ಕೋಟಿ ಗೆಲ್ಲುವ ಆಟ ಆಡಲಿದ್ದಾರೆ. ರಮ್ಯಾ ಕೋಟ್ಯಾಧಿಪತಿ ಮೊದಲ ಭಾಗದಲ್ಲೂ ಕಾಣಿಸಿಕೊಂಡಿರುತ್ತಾರೆ. ಅಲ್ಲದೆ ಕಾರ್ಯಕ್ರಮದ ನಡುವೆ ರಾಘವೇಂದ್ರ ರಾಜ್ಕುಮಾರ್ ಜೊತೆ `ನಿಜವ ನುಡಿಯಲೇ ನನ್ನಾಣೆ ನಲ್ಲೆ... ಹಾಡಿಗೆ ರಮ್ಯೋ ನೃತ್ಯ ಮಾಡುರುವುದು ಸಂಚಿಕೆಯ ವಿಶೇಷ.<br /> <br /> ರಮ್ಯೋ ಈ ಸರಣಿಯಲ್ಲಿ ಗೆದ್ದ ಹಣವನ್ನು `ವಿಷ್ಣುಪ್ರಿಯೆ' ಎಂಬ ವದ್ಧಾಶ್ರಮಕ್ಕೆ ಚಾರಿಟಿ ನೀಡಲಿದ್ದಾರೆ. ಈ ಸರಣಿ ಇದೇ 26 ರಂದು ಪ್ರಸಾರವಾಗಲಿದೆ. ಪಂಚಭಾಷಾ ತಾರೆ ಪ್ರಿಯಾಮಣಿ ಕೂಡಾ ಭಾಗವಹಿಸಿದ್ದು `ಪರಿಕ್ರಮ ಫೌಂಢೇಷನ್' ಎಂಬ ಅನಾಥಾಶ್ರಮಕ್ಕೆ ಗೆದ್ದ ಮೊತ್ತವನ್ನು ನೀಡಲಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುವರ್ಣ ವಾಹಿನಿಯ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋನಲ್ಲಿ ಈ ವಾರವಿಡೀ ಕನ್ನಡ ಚಿತ್ರರಂಗದ ನಟ ನಟಿಯರು ಭಾಗವಹಿಸಿದ ಸಂಚಿಕೆಗಳು ಪ್ರಸಾರವಾಗಲಿವೆ. ನಟ ಜಗ್ಗೇಶ್, ನಟಿ ರಮ್ಯೋ ಹಾಗೂ ಬಹುಭಾಷಾ ನಟಿ ಪ್ರಿಯಾಮಣಿ ವಿಶೇಷ ಸಂಚಿಕೆಗಳಲ್ಲಿ ಪಾಲ್ಗೊಂಡಿದ್ದಾರೆ.<br /> <br /> ಇಂದು ಪ್ರಸಾರವಾಗಲಿರುವ(ಜೂ.24) ಸಂಚಿಕೆಯಲ್ಲಿ ಮೊದಲ ಸ್ಪರ್ಧಿಯಾಗಿ ಜಗ್ಗೇಶ್ ಕಾಣಿಸಿಕೊಳ್ಳಲಿದ್ದಾರೆ. ಜಗ್ಗೇಶ್ ಗೆದ್ದ ಮೊತ್ತವನ್ನು ಶಿಕ್ಷಣ ಸಂಸ್ಥೆಯೊಂದಕ್ಕೆ ಕೊಡಲಿದ್ದಾರೆ.<br /> <br /> ಕನ್ನಡದ ಬೋಲ್ಡ್ ನಟಿ ರಮ್ಯೋ ಜಗ್ಗೇಶ್ ನಂತರದ ಸಂಚಿಕೆಗಳಲ್ಲಿ ಕೋಟಿ ಗೆಲ್ಲುವ ಆಟ ಆಡಲಿದ್ದಾರೆ. ರಮ್ಯಾ ಕೋಟ್ಯಾಧಿಪತಿ ಮೊದಲ ಭಾಗದಲ್ಲೂ ಕಾಣಿಸಿಕೊಂಡಿರುತ್ತಾರೆ. ಅಲ್ಲದೆ ಕಾರ್ಯಕ್ರಮದ ನಡುವೆ ರಾಘವೇಂದ್ರ ರಾಜ್ಕುಮಾರ್ ಜೊತೆ `ನಿಜವ ನುಡಿಯಲೇ ನನ್ನಾಣೆ ನಲ್ಲೆ... ಹಾಡಿಗೆ ರಮ್ಯೋ ನೃತ್ಯ ಮಾಡುರುವುದು ಸಂಚಿಕೆಯ ವಿಶೇಷ.<br /> <br /> ರಮ್ಯೋ ಈ ಸರಣಿಯಲ್ಲಿ ಗೆದ್ದ ಹಣವನ್ನು `ವಿಷ್ಣುಪ್ರಿಯೆ' ಎಂಬ ವದ್ಧಾಶ್ರಮಕ್ಕೆ ಚಾರಿಟಿ ನೀಡಲಿದ್ದಾರೆ. ಈ ಸರಣಿ ಇದೇ 26 ರಂದು ಪ್ರಸಾರವಾಗಲಿದೆ. ಪಂಚಭಾಷಾ ತಾರೆ ಪ್ರಿಯಾಮಣಿ ಕೂಡಾ ಭಾಗವಹಿಸಿದ್ದು `ಪರಿಕ್ರಮ ಫೌಂಢೇಷನ್' ಎಂಬ ಅನಾಥಾಶ್ರಮಕ್ಕೆ ಗೆದ್ದ ಮೊತ್ತವನ್ನು ನೀಡಲಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>