<p><strong>ಗದಗ:</strong> ಕನ್ನಡ ಸಾಹಿತ್ಯದ ದೇಸಿ ಸೊಗಡನ್ನು ಅತ್ಯಂತ ಸಶಕ್ತವಾಗಿ ಬಳಸಿಕೊಂಡು ಭಾಷೆಯನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ಮುಸ್ಲಿಮರಿಗೂ ಸಲ್ಲುತ್ತದೆ ಎಂದು ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.<br /> <br /> ಗದಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಸಾಪ ಆಜೀವ ಸದಸ್ಯತ್ವದ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ನಿತ್ಯೋತ್ಸವದ ಹಿರಿಮೆ ಗರಿಮೆಯನ್ನು ನೀಡಿದ ಶ್ರೇಯಸ್ಸು ಕೆ.ಎಸ್.ನಿಸಾರ್ ಅಹ್ಮದ್ ಅವರಿಗೆ ಸಲ್ಲುತ್ತದೆ ಎಂದರು.<br /> <br /> ಸಂತ ಶಿಶುನಾಳ ಶರೀಫರು ದೇಶ ಮತ್ತು ಭಾಷೆಯ ಸೊಗಡನ್ನು ಅರ್ಥಗರ್ಭಿತವಾಗಿ ತಮ್ಮ ತತ್ವ ಪದಗಳಲ್ಲಿ ಬಳಸಿಕೊಂಡು ಜನಸಾಮಾನ್ಯರನ್ನೂ ತಲುಪಿದ್ದಾರೆ. ಅದೇ ಪರಂಪರೆಯಲ್ಲಿ ಸೂಫಿ ಸಂತರು, ಬಂದೇ ನವಾಜರು ಉರ್ದುವಿನಲ್ಲಿ ಬರೆದ ತತ್ವ ಪದಗಳು ಕನ್ನಡಕ್ಕೂ ಸ್ಪರ್ಷತೆ ನೀಡಿವೆ ಎಂದರು.<br /> <br /> ಮಂಗಳೂರಿನ `ಶಾಂತಿ ಪ್ರಕಾಶನ~ ಕನ್ನಡದಲ್ಲಿ 200ಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿದೆ. ಈ ಕಾರ್ಯವನ್ನೆಲ್ಲ ಮುಸ್ಲಿಂ ಸಾಹಿತಿಗಳು, ವಿದ್ವಾಂಸರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿದ್ದು ಅಭಿನಂದನೀಯ ಎಂದರು.<br /> ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಎಚ್.ಬೇಲೂರ, ಗದಗ ಜಿಲ್ಲಾ ಜಮಾತೆ ಇಸ್ಲಾಮ್ ಹಿಂದ್ ಸಂಘಟನೆಯ ಅಧ್ಯಕ್ಷ ಕೆ.ಐ.ಶೇಖ್ ಮಾತನಾಡಿದರು.<br /> <br /> ಪ್ರಾಚ್ಯವಸ್ತು ಸಂಶೋಧಕ ಅ.ದ.ಕಟ್ಟಿಮನಿ ಸ್ವಾಗತಿಸಿದರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕವಿತಾ ದಂಡಿನ ನಿರೂಪಿಸಿದರು, ಶಶಿಕಾಂತ ಕೊರ್ಲಹಳ್ಳಿ ವಂದಿಸಿದರು. <br /> <br /> ಆರ್.ಜಿ.ಚಿಕ್ಕಮಠ, ಎಂ.ಎನ್ ತಮ್ಮನಗೌಡ್ರ, ಎ.ಎಸ್.ಖವಾಸ, ಜುನೇದ್ ಉಮಚಗಿ, ಬಿ.ಎಸ್.ಇಂಡಿ, ಬಿ.ಜಿ.ಹಿರೇಮಠ, ಜಿ.ಎಸ್.ಯತ್ನಟ್ಟಿ, ಡಿ.ಎಸ್.ತಳವಾರ, ಎಂ.ಎಂ.ಶಿರಹಟ್ಟಿ ಮುಂತಾದವರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ಕನ್ನಡ ಸಾಹಿತ್ಯದ ದೇಸಿ ಸೊಗಡನ್ನು ಅತ್ಯಂತ ಸಶಕ್ತವಾಗಿ ಬಳಸಿಕೊಂಡು ಭಾಷೆಯನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ಮುಸ್ಲಿಮರಿಗೂ ಸಲ್ಲುತ್ತದೆ ಎಂದು ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.<br /> <br /> ಗದಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಸಾಪ ಆಜೀವ ಸದಸ್ಯತ್ವದ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ನಿತ್ಯೋತ್ಸವದ ಹಿರಿಮೆ ಗರಿಮೆಯನ್ನು ನೀಡಿದ ಶ್ರೇಯಸ್ಸು ಕೆ.ಎಸ್.ನಿಸಾರ್ ಅಹ್ಮದ್ ಅವರಿಗೆ ಸಲ್ಲುತ್ತದೆ ಎಂದರು.<br /> <br /> ಸಂತ ಶಿಶುನಾಳ ಶರೀಫರು ದೇಶ ಮತ್ತು ಭಾಷೆಯ ಸೊಗಡನ್ನು ಅರ್ಥಗರ್ಭಿತವಾಗಿ ತಮ್ಮ ತತ್ವ ಪದಗಳಲ್ಲಿ ಬಳಸಿಕೊಂಡು ಜನಸಾಮಾನ್ಯರನ್ನೂ ತಲುಪಿದ್ದಾರೆ. ಅದೇ ಪರಂಪರೆಯಲ್ಲಿ ಸೂಫಿ ಸಂತರು, ಬಂದೇ ನವಾಜರು ಉರ್ದುವಿನಲ್ಲಿ ಬರೆದ ತತ್ವ ಪದಗಳು ಕನ್ನಡಕ್ಕೂ ಸ್ಪರ್ಷತೆ ನೀಡಿವೆ ಎಂದರು.<br /> <br /> ಮಂಗಳೂರಿನ `ಶಾಂತಿ ಪ್ರಕಾಶನ~ ಕನ್ನಡದಲ್ಲಿ 200ಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿದೆ. ಈ ಕಾರ್ಯವನ್ನೆಲ್ಲ ಮುಸ್ಲಿಂ ಸಾಹಿತಿಗಳು, ವಿದ್ವಾಂಸರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿದ್ದು ಅಭಿನಂದನೀಯ ಎಂದರು.<br /> ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಎಚ್.ಬೇಲೂರ, ಗದಗ ಜಿಲ್ಲಾ ಜಮಾತೆ ಇಸ್ಲಾಮ್ ಹಿಂದ್ ಸಂಘಟನೆಯ ಅಧ್ಯಕ್ಷ ಕೆ.ಐ.ಶೇಖ್ ಮಾತನಾಡಿದರು.<br /> <br /> ಪ್ರಾಚ್ಯವಸ್ತು ಸಂಶೋಧಕ ಅ.ದ.ಕಟ್ಟಿಮನಿ ಸ್ವಾಗತಿಸಿದರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕವಿತಾ ದಂಡಿನ ನಿರೂಪಿಸಿದರು, ಶಶಿಕಾಂತ ಕೊರ್ಲಹಳ್ಳಿ ವಂದಿಸಿದರು. <br /> <br /> ಆರ್.ಜಿ.ಚಿಕ್ಕಮಠ, ಎಂ.ಎನ್ ತಮ್ಮನಗೌಡ್ರ, ಎ.ಎಸ್.ಖವಾಸ, ಜುನೇದ್ ಉಮಚಗಿ, ಬಿ.ಎಸ್.ಇಂಡಿ, ಬಿ.ಜಿ.ಹಿರೇಮಠ, ಜಿ.ಎಸ್.ಯತ್ನಟ್ಟಿ, ಡಿ.ಎಸ್.ತಳವಾರ, ಎಂ.ಎಂ.ಶಿರಹಟ್ಟಿ ಮುಂತಾದವರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>