<p>ರೂಪಕಗಳ ಮೂಲಕ ಕಾವ್ಯ ಕಟ್ಟುವ ಕಲೆಗಾರಿಕೆಯನ್ನು ಹುಟ್ಟುತ್ತಲೇ ದಕ್ಕಿಸಿಕೊಂಡು ಬಂದವರಂತೆ ಕವಿತೆ ಬರೆದವರು ಎನ್.ಕೆ. ಹನುಮಂತಯ್ಯ. ಅವರು ಕವಿತೆ ಬರೆಯುವ ಹೊತ್ತಿಗೆ ಚಳವಳಿಯ ಅಬ್ಬರ ತುಸು ಕಡಿಮೆಯಾಗಿತ್ತು. ತಣ್ಣಗೆ ಓಡಾಡಿಕೊಂಡಿದ್ದ ಈ ಕವಿಯ ಮೂಲಕ ಕನ್ನಡ ಕಾವ್ಯಲೋಕಕ್ಕೆ ಹೊಸ ಸಂವೇದನೆಯೊಂದು ದಕ್ಕಿದ್ದು ಈಗ ಇತಿಹಾಸ.<br /> <br /> ಎನ್ಕೆ ಅವರ ಇಲ್ಲಿನ ಮೂರು ಕವಿತೆಗಳು ಮತ್ತು ಅವರ ಉಳಿದ ಕವಿತೆಗಳನ್ನು ಗಮನಿಸಿದರೆ, ಅವರು ನಮ್ಮಡನಿಲ್ಲ ಅನಿಸುವುದೇ ಇಲ್ಲ. ಇಲ್ಲೇ ಎಲ್ಲೋ ಹೋಗಿರುವ ಅವರು ಇಂದಲ್ಲಾ ನಾಳೆ ವಾಪಸ್ ಬಂದು ತನ್ನ ಮಹತ್ವಾಕಾಂಕ್ಷೆಯ ಮಹಾಕಾವ್ಯವನ್ನು ಬರೆಯಬಹುದು ಎನ್ನುವಷ್ಟರ ಮಟ್ಟಿಗೆ, `ಸಂಬಂಜ ಅನ್ನೋದು ದೊಡ್ಡದು ಕಣಾ~ ಎನ್ನುವ ಕನಸುಗಳ ನಾಳೆಗಳಲ್ಲಿ ಬದುಕುವ ನಮ್ಮಳಗೆ ತಮ್ಮ ಕವಿತೆಗಳ ಮೂಲಕ ಎನ್ಕೆ ಜೀವಂತವಾಗಿದ್ದಾರೆ. <br /> <br /> ತಣ್ಣನೆಯ ತೀವ್ರತೆಯಿಂದ, ಆರ್ದ್ರ ಮುಗ್ಧತೆಯಿಂದ ಇತರರಿಗಿಂತ ಭಿನ್ನವಾಗಿ ಹೂವಾಗಿ ಅರಳಿದ ಕವಿ ಹನುಮಂತಯ್ಯ. ಇಂತಹ ಕವಿಯನ್ನು ಒಂದು ಕೇರಿಗೆ ಒಂದು ಜನಾಂಗಕ್ಕೆ, ಒಂದು ಕಾಲಕ್ಕೆ ಮಿತಿಗೊಳಿಸುವುದು ಕಾವ್ಯಕ್ಕೆ ಕುಂದುಂಟುಮಾಡಿದಂತಾಗುತ್ತದೆ.<br /> <br /> ಅನ್ಯಾಯಕ್ಕೆ ಮತ್ತು ಅಪಮಾನಕ್ಕೊಳಗಾದ ಎಲ್ಲರ ದುಃಖ ದುಮ್ಮೋನಗಳನ್ನು ಎದೆಯಲ್ಲಿ ಕಾಪಿಟ್ಟುಕೊಂಡ ಅವರು, ಕಾವ್ಯದ ರಸಸಂವೇದನೆಯ ಕನಸುಗಳನ್ನಷ್ಟೇ ಸಮಾಜಕ್ಕೆ ನೀಡಿದ್ದು ಅಕ್ಷರ ಲೋಕದ ಜೀವಂತಿಕೆಯನ್ನು ದಾಖಲಿಸಿದಂತೆ ತೋರುತ್ತದೆ.<br /> <br /> `ಕನ್ನಂಬಾಡಿ ಎಷ್ಟಾದರೂ ನೀರನ್ನು ನಿಲ್ಲಿಸಿಕೊಳ್ಳುತ್ತದೆ. ಆದರೆ ಎನ್ಕೆ ಎದೆಯಲ್ಲಿರುವ ಕವಿತೆಗಳನ್ನು ಯಾರಿಂದಲೂ ತಡೆದು ನಿಲ್ಲಿಸಲು ಸಾಧ್ಯವಿಲ್ಲ~ ಎನ್ನುವ ಸಿಜಿಕೆಯವರ ಮಾತಿನಲ್ಲಿ ಉತ್ಪ್ರೇಕ್ಷೆ ಹೆಚ್ಚೇನಿಲ್ಲ. ಎನ್ಕೆ ಅವರ ಕಾವ್ಯದ ಹಿನ್ನೆಲೆಯಲ್ಲಿನ ಈ ಮಾತು, ಮನುಷ್ಯ ಬಿಡುಗಡೆಯ ಹೋರಾಟದ ಕಿಚ್ಚನ್ನು ಯಾರೂ ನಿಲ್ಲಿಸಲಾರರು ಎಂದು ಹೇಳುವಂತಿದೆ.<br /> <br /> ಗಣಿಗಾರಿಕೆಯ ಕುರಿತು ಎನ್ಕೆ ತಮ್ಮ ಕವಿತೆಯಲ್ಲಿ- `ಅನ್ನದ ಅಗುಳಿನ ಹೊಟ್ಟೆಯನ್ನು ಬಗೆದಂತೆ ಕಾಣುವ~ ಎನ್ನುತ್ತಾರೆ. ಇಲ್ಲಿ, ಸುತ್ತಲ ಬದುಕಿನ ಬಗ್ಗೆ ಹೋರಾಟವನ್ನು ರೂಪಿಸುತ್ತಲೇ ಪ್ರೀತಿಯನ್ನು ಹುಟ್ಟುಹಾಕುವ ಪ್ರೇಮದ ಕವಿಯಾಗಿ ಕವಿ ನಮ್ಮನ್ನು ಮುಟ್ಟುತ್ತಾನೆ. <br /> <br /> `ಬಾ ಗೆಳತಿ~ ಕವಿತೆ ಓದಿದ ಯಾರಾದರೂ ಅದನ್ನು ಬೊಗಸೆಯಲ್ಲಿಟ್ಟು ಧ್ಯಾನಿಸುವಂತಿದೆ. ಇದು ನಾಗರಿಕ ಸಮಾಜಕ್ಕೆ ಕವಿಯೊಬ್ಬ ಕೊಡಬಹುದಾದ ಕಾಣ್ಕೆ.`ಅವ್ವ ನಿಂತೇಯಿದ್ದಾಳೆ~ ಕವಿತೆಯನ್ನು ಕರುಳು ಹಿಂಜಿ ನೂಲು ಮಾಡಿದ ಹಾಗಿದೆ. ಈ ಕವಿತೆ ಕುರಿತು ಸಾಹಿತ್ಯಾಸಕ್ತರೊಬ್ಬರು `ತನ್ನವ್ವನ ಕುರಿತು ಹೀಗೆ ಬರೆಯಬಹುದಾ?~ ಎಂದಿದ್ದಕ್ಕೆ, `ಅದು ಅವರ ಅವ್ವನ ಬಗ್ಗೆ ಬರೆದುದ್ದಲ್ಲ, ಭಾರತ ಮಾತೆಯ ಬಗ್ಗೆ ಬರೆದದ್ದು~ ಎಂದು ದೇವನೂರು ಹೇಳಿದ್ದರಂತೆ. <br /> <br /> `ಇರುವೆ ಗಾತ್ರದಲ್ಲಿ ಚಿಕ್ಕದಿರಬಹುದು, ಆದರೆ ಅದರ ಜೀವ ಕೂಡ ತನ್ನ ಜೀವದಷ್ಟೇ ಅಥವಾ ತನಗಿಂತಲೂ ಅದರ ಜೀವವೇ ಬಹಳ ಮುಖ್ಯ~ ಎನ್ನುವುದನ್ನು ಪ್ರತಿಪಾದಿಸುತ್ತಲೇ ಎನ್ಕೆ ಸಮ ಸಮಾಜದ ಕನಸು ಹಂಚುತ್ತಾರೆ. ಪ್ರಕೃತಿಯಲ್ಲಿ ಮನುಷ್ಯನಿಗಿರುವಷ್ಟೇ ಪಾಲು ಮತ್ತು ಬದುಕುವ ಹಕ್ಕು ಇರುವೆಗೂ ಇದೆ ಎನ್ನುವುದನ್ನು `ಚಿತ್ರದ ಬೆನ್ನು~ ಕವಿತೆ ಧ್ವನಿಪೂರ್ಣವಾಗಿ ಹೇಳುತ್ತದೆ.<br /> <br /> ಕಾವ್ಯದ ಮೂಲ ಧಾತು ದುಃಖ ಮತ್ತು ಪ್ರೀತಿ ಎಂದು ಹೇಳಬಹುದಾದರೂ, ಅವುಗಳನ್ನು ಅಳೆದು ಸುರಿದು ತೂಕ ಮಾಡುವ ಮಾಪನವಿದ್ದಿದ್ದರೆ ದುಃಖದ ಅಳತೆಯನ್ನೂ ಪ್ರೀತಿಯ ಗಾತ್ರವನ್ನೂ ತೋರಿಸಿ ಹೇಳಬಹುದಿತ್ತು.<br /> <br /> ಕಾವ್ಯವನ್ನು ಉತ್ಕಟ ಪ್ರೀತಿಯಿಂದ ದಕ್ಕಿಸಿಕೊಂಡ ಎನ್ಕೆ ಪ್ರೀತಿಯ ಗೋಜಲಿಗೆ ಬಿದ್ದು ಬದುಕನ್ನು ಗೆಲ್ಲಲಾರದೇ ಹೋದರೂ ಸೋಲನ್ನು ಒಪ್ಪಿಕೊಳ್ಳಲಿಲ್ಲ, ಅದನ್ನು ಜಯಿಸಲೂ ಇಲ್ಲ. ಅದೂ ಕೂಡ ಅವನ ಕನಸಾಗಿತ್ತೇ? ಬದುಕಲ್ಲಿ ಕ್ರಮಿಸಿದ್ದಕ್ಕಿಂತಲೂ ಅವರ ಕಾವ್ಯ ಜಲ ಬಹಳ ದೂರ ಹರಿದಿದೆ.<br /> <br /> ಹೊರಗಿನಿಂದ ಬಲ್ಲವರಿಗೆ ಒಬ್ಬ ಕವಿಯಾಗಿ ಕಾಣುವ, ಒಳಗಿನಿಂದ ಬಲ್ಲವರಿಗೆ ತಾಯಿಯಾಗಿ, ನನ್ನಂತಹವರಿಗೆ ಕಾವ್ಯದ ದೊಡ್ಡಕ್ಕನಾಗಿ ಎನ್ಕೆ ಕಾಣಿಸುತ್ತಾರೆ. ಅಕ್ಕನ ಕೈ ಹಿಡಿದು ಪುಟ್ಟ ತಂಗಿಯಾಗಿ ನಾನು ನಿಂತಿದ್ದೇನೆ. ಆಕೆ ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳನ್ನ ತೋರಿಸುತ್ತಿರುವ ಹಾಗೆ...</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರೂಪಕಗಳ ಮೂಲಕ ಕಾವ್ಯ ಕಟ್ಟುವ ಕಲೆಗಾರಿಕೆಯನ್ನು ಹುಟ್ಟುತ್ತಲೇ ದಕ್ಕಿಸಿಕೊಂಡು ಬಂದವರಂತೆ ಕವಿತೆ ಬರೆದವರು ಎನ್.ಕೆ. ಹನುಮಂತಯ್ಯ. ಅವರು ಕವಿತೆ ಬರೆಯುವ ಹೊತ್ತಿಗೆ ಚಳವಳಿಯ ಅಬ್ಬರ ತುಸು ಕಡಿಮೆಯಾಗಿತ್ತು. ತಣ್ಣಗೆ ಓಡಾಡಿಕೊಂಡಿದ್ದ ಈ ಕವಿಯ ಮೂಲಕ ಕನ್ನಡ ಕಾವ್ಯಲೋಕಕ್ಕೆ ಹೊಸ ಸಂವೇದನೆಯೊಂದು ದಕ್ಕಿದ್ದು ಈಗ ಇತಿಹಾಸ.<br /> <br /> ಎನ್ಕೆ ಅವರ ಇಲ್ಲಿನ ಮೂರು ಕವಿತೆಗಳು ಮತ್ತು ಅವರ ಉಳಿದ ಕವಿತೆಗಳನ್ನು ಗಮನಿಸಿದರೆ, ಅವರು ನಮ್ಮಡನಿಲ್ಲ ಅನಿಸುವುದೇ ಇಲ್ಲ. ಇಲ್ಲೇ ಎಲ್ಲೋ ಹೋಗಿರುವ ಅವರು ಇಂದಲ್ಲಾ ನಾಳೆ ವಾಪಸ್ ಬಂದು ತನ್ನ ಮಹತ್ವಾಕಾಂಕ್ಷೆಯ ಮಹಾಕಾವ್ಯವನ್ನು ಬರೆಯಬಹುದು ಎನ್ನುವಷ್ಟರ ಮಟ್ಟಿಗೆ, `ಸಂಬಂಜ ಅನ್ನೋದು ದೊಡ್ಡದು ಕಣಾ~ ಎನ್ನುವ ಕನಸುಗಳ ನಾಳೆಗಳಲ್ಲಿ ಬದುಕುವ ನಮ್ಮಳಗೆ ತಮ್ಮ ಕವಿತೆಗಳ ಮೂಲಕ ಎನ್ಕೆ ಜೀವಂತವಾಗಿದ್ದಾರೆ. <br /> <br /> ತಣ್ಣನೆಯ ತೀವ್ರತೆಯಿಂದ, ಆರ್ದ್ರ ಮುಗ್ಧತೆಯಿಂದ ಇತರರಿಗಿಂತ ಭಿನ್ನವಾಗಿ ಹೂವಾಗಿ ಅರಳಿದ ಕವಿ ಹನುಮಂತಯ್ಯ. ಇಂತಹ ಕವಿಯನ್ನು ಒಂದು ಕೇರಿಗೆ ಒಂದು ಜನಾಂಗಕ್ಕೆ, ಒಂದು ಕಾಲಕ್ಕೆ ಮಿತಿಗೊಳಿಸುವುದು ಕಾವ್ಯಕ್ಕೆ ಕುಂದುಂಟುಮಾಡಿದಂತಾಗುತ್ತದೆ.<br /> <br /> ಅನ್ಯಾಯಕ್ಕೆ ಮತ್ತು ಅಪಮಾನಕ್ಕೊಳಗಾದ ಎಲ್ಲರ ದುಃಖ ದುಮ್ಮೋನಗಳನ್ನು ಎದೆಯಲ್ಲಿ ಕಾಪಿಟ್ಟುಕೊಂಡ ಅವರು, ಕಾವ್ಯದ ರಸಸಂವೇದನೆಯ ಕನಸುಗಳನ್ನಷ್ಟೇ ಸಮಾಜಕ್ಕೆ ನೀಡಿದ್ದು ಅಕ್ಷರ ಲೋಕದ ಜೀವಂತಿಕೆಯನ್ನು ದಾಖಲಿಸಿದಂತೆ ತೋರುತ್ತದೆ.<br /> <br /> `ಕನ್ನಂಬಾಡಿ ಎಷ್ಟಾದರೂ ನೀರನ್ನು ನಿಲ್ಲಿಸಿಕೊಳ್ಳುತ್ತದೆ. ಆದರೆ ಎನ್ಕೆ ಎದೆಯಲ್ಲಿರುವ ಕವಿತೆಗಳನ್ನು ಯಾರಿಂದಲೂ ತಡೆದು ನಿಲ್ಲಿಸಲು ಸಾಧ್ಯವಿಲ್ಲ~ ಎನ್ನುವ ಸಿಜಿಕೆಯವರ ಮಾತಿನಲ್ಲಿ ಉತ್ಪ್ರೇಕ್ಷೆ ಹೆಚ್ಚೇನಿಲ್ಲ. ಎನ್ಕೆ ಅವರ ಕಾವ್ಯದ ಹಿನ್ನೆಲೆಯಲ್ಲಿನ ಈ ಮಾತು, ಮನುಷ್ಯ ಬಿಡುಗಡೆಯ ಹೋರಾಟದ ಕಿಚ್ಚನ್ನು ಯಾರೂ ನಿಲ್ಲಿಸಲಾರರು ಎಂದು ಹೇಳುವಂತಿದೆ.<br /> <br /> ಗಣಿಗಾರಿಕೆಯ ಕುರಿತು ಎನ್ಕೆ ತಮ್ಮ ಕವಿತೆಯಲ್ಲಿ- `ಅನ್ನದ ಅಗುಳಿನ ಹೊಟ್ಟೆಯನ್ನು ಬಗೆದಂತೆ ಕಾಣುವ~ ಎನ್ನುತ್ತಾರೆ. ಇಲ್ಲಿ, ಸುತ್ತಲ ಬದುಕಿನ ಬಗ್ಗೆ ಹೋರಾಟವನ್ನು ರೂಪಿಸುತ್ತಲೇ ಪ್ರೀತಿಯನ್ನು ಹುಟ್ಟುಹಾಕುವ ಪ್ರೇಮದ ಕವಿಯಾಗಿ ಕವಿ ನಮ್ಮನ್ನು ಮುಟ್ಟುತ್ತಾನೆ. <br /> <br /> `ಬಾ ಗೆಳತಿ~ ಕವಿತೆ ಓದಿದ ಯಾರಾದರೂ ಅದನ್ನು ಬೊಗಸೆಯಲ್ಲಿಟ್ಟು ಧ್ಯಾನಿಸುವಂತಿದೆ. ಇದು ನಾಗರಿಕ ಸಮಾಜಕ್ಕೆ ಕವಿಯೊಬ್ಬ ಕೊಡಬಹುದಾದ ಕಾಣ್ಕೆ.`ಅವ್ವ ನಿಂತೇಯಿದ್ದಾಳೆ~ ಕವಿತೆಯನ್ನು ಕರುಳು ಹಿಂಜಿ ನೂಲು ಮಾಡಿದ ಹಾಗಿದೆ. ಈ ಕವಿತೆ ಕುರಿತು ಸಾಹಿತ್ಯಾಸಕ್ತರೊಬ್ಬರು `ತನ್ನವ್ವನ ಕುರಿತು ಹೀಗೆ ಬರೆಯಬಹುದಾ?~ ಎಂದಿದ್ದಕ್ಕೆ, `ಅದು ಅವರ ಅವ್ವನ ಬಗ್ಗೆ ಬರೆದುದ್ದಲ್ಲ, ಭಾರತ ಮಾತೆಯ ಬಗ್ಗೆ ಬರೆದದ್ದು~ ಎಂದು ದೇವನೂರು ಹೇಳಿದ್ದರಂತೆ. <br /> <br /> `ಇರುವೆ ಗಾತ್ರದಲ್ಲಿ ಚಿಕ್ಕದಿರಬಹುದು, ಆದರೆ ಅದರ ಜೀವ ಕೂಡ ತನ್ನ ಜೀವದಷ್ಟೇ ಅಥವಾ ತನಗಿಂತಲೂ ಅದರ ಜೀವವೇ ಬಹಳ ಮುಖ್ಯ~ ಎನ್ನುವುದನ್ನು ಪ್ರತಿಪಾದಿಸುತ್ತಲೇ ಎನ್ಕೆ ಸಮ ಸಮಾಜದ ಕನಸು ಹಂಚುತ್ತಾರೆ. ಪ್ರಕೃತಿಯಲ್ಲಿ ಮನುಷ್ಯನಿಗಿರುವಷ್ಟೇ ಪಾಲು ಮತ್ತು ಬದುಕುವ ಹಕ್ಕು ಇರುವೆಗೂ ಇದೆ ಎನ್ನುವುದನ್ನು `ಚಿತ್ರದ ಬೆನ್ನು~ ಕವಿತೆ ಧ್ವನಿಪೂರ್ಣವಾಗಿ ಹೇಳುತ್ತದೆ.<br /> <br /> ಕಾವ್ಯದ ಮೂಲ ಧಾತು ದುಃಖ ಮತ್ತು ಪ್ರೀತಿ ಎಂದು ಹೇಳಬಹುದಾದರೂ, ಅವುಗಳನ್ನು ಅಳೆದು ಸುರಿದು ತೂಕ ಮಾಡುವ ಮಾಪನವಿದ್ದಿದ್ದರೆ ದುಃಖದ ಅಳತೆಯನ್ನೂ ಪ್ರೀತಿಯ ಗಾತ್ರವನ್ನೂ ತೋರಿಸಿ ಹೇಳಬಹುದಿತ್ತು.<br /> <br /> ಕಾವ್ಯವನ್ನು ಉತ್ಕಟ ಪ್ರೀತಿಯಿಂದ ದಕ್ಕಿಸಿಕೊಂಡ ಎನ್ಕೆ ಪ್ರೀತಿಯ ಗೋಜಲಿಗೆ ಬಿದ್ದು ಬದುಕನ್ನು ಗೆಲ್ಲಲಾರದೇ ಹೋದರೂ ಸೋಲನ್ನು ಒಪ್ಪಿಕೊಳ್ಳಲಿಲ್ಲ, ಅದನ್ನು ಜಯಿಸಲೂ ಇಲ್ಲ. ಅದೂ ಕೂಡ ಅವನ ಕನಸಾಗಿತ್ತೇ? ಬದುಕಲ್ಲಿ ಕ್ರಮಿಸಿದ್ದಕ್ಕಿಂತಲೂ ಅವರ ಕಾವ್ಯ ಜಲ ಬಹಳ ದೂರ ಹರಿದಿದೆ.<br /> <br /> ಹೊರಗಿನಿಂದ ಬಲ್ಲವರಿಗೆ ಒಬ್ಬ ಕವಿಯಾಗಿ ಕಾಣುವ, ಒಳಗಿನಿಂದ ಬಲ್ಲವರಿಗೆ ತಾಯಿಯಾಗಿ, ನನ್ನಂತಹವರಿಗೆ ಕಾವ್ಯದ ದೊಡ್ಡಕ್ಕನಾಗಿ ಎನ್ಕೆ ಕಾಣಿಸುತ್ತಾರೆ. ಅಕ್ಕನ ಕೈ ಹಿಡಿದು ಪುಟ್ಟ ತಂಗಿಯಾಗಿ ನಾನು ನಿಂತಿದ್ದೇನೆ. ಆಕೆ ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳನ್ನ ತೋರಿಸುತ್ತಿರುವ ಹಾಗೆ...</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>