<p><strong>ಭೋಪಾಲ್:</strong> ಕರ್ನಾಟಕ ತಂಡದ ಡಿಫೆಂಡರ್ ಎಸ್.ಕೆ.ಉತ್ತಪ್ಪ ಅವರು ಇಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಹಾಕಿ ಚಾಂಪಿಯನ್ಷಿಪ್ನಲ್ಲಿ `ಅತ್ಯುತ್ತಮ ಆಟಗಾರ~ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅಷ್ಟು ಮಾತ್ರವಲ್ಲದೇ, ರಾಷ್ಟ್ರೀಯ ಸೀನಿಯರ್ ಆಟಗಾರರ ಶಿಬಿರಕ್ಕೆ ಅವರು ಆಯ್ಕೆ ಆಗಿದ್ದಾರೆ. <br /> <br /> ಭಾನುವಾರ ಕೊನೆಗೊಂಡ ಈ ಚಾಂಪಿಯನ್ಷಿಪ್ನ ಫೈನಲ್ನಲ್ಲಿ ಭಾರತ ಸೋಲು ಕಂಡಿತ್ತು. 2-1 ಗೋಲುಗಳಿಂದ ಗೆದ್ದ ಹರಿಯಾಣ ಚಾಂಪಿಯನ್ ಆಗಿತ್ತು.<br /> <br /> ಆದರೆ ಯುವ ಹಾಗೂ ಪ್ರತಿಭಾವಂತ ಆಟಗಾರರನ್ನು ಒಳಗೊಂಡಿದ್ದ ಅಮರ್ ಅಯ್ಯಮ್ಮ ಸಾರಥ್ಯದ ಕರ್ನಾಟಕ ಅತ್ಯುತ್ತಮ ಪ್ರದರ್ಶನ ತೋರಿದೆ. ಉತ್ತಪ್ಪ ಭಾರತ ಕ್ರೀಡಾ ಪ್ರಾಧಿಕಾರ (ಎಸ್ಎಐ)ದಲ್ಲಿ ತರಬೇತಿ ಪಡೆಯುತ್ತಿದ್ದಾರೆ. <br /> <br /> ಡ್ರ್ಯಾಗ್ ಫ್ಲಿಕರ್ ಕೊಡಗಿನ ವಿ.ಆರ್.ರಘುನಾಥ್ (12 ಗೋಲು) ಚಾಂಪಿಯನ್ಷಿಪ್ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿದರು. ಹರಿಯಾಣ ತಂಡದ ಡ್ರ್ಯಾಗ್ ಫ್ಲಿಕರ್ ಸಂದೀಪ್ ಸಿಂಗ್ (11 ಗೋಲು) ಎರಡನೇ ಸ್ಥಾನ ಪಡೆದರು. <br /> <br /> ಈ ಚಾಂಪಿಯನ್ಷಿಪ್ ವೇಳೆ ರಾಷ್ಟ್ರೀಯ ತಂಡದ ಆಯ್ಕೆದಾರರು ಭೋಪಾಲ್ನಲ್ಲಿಯೇ ಇದ್ದು ಪ್ರತಿ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಅವರು ಈಗಾಗಲೇ ರಾಷ್ಟ್ರೀಯ ಶಿಬಿರಕ್ಕೆ 48 ಮಂದಿ ಹಾಗೂ ಸುಧಾರಣೆ ಗುಂಪಿನಲ್ಲಿ 37 ಮಂದಿಯನ್ನು ಆಯ್ಕೆ ಮಾಡಿದ್ದಾರೆ.<br /> <br /> ಒಪ್ಪಿಗೆಗಾಗಿ ಈ ಪಟ್ಟಿಯನ್ನು ಅವರು ಹಾಕಿ ಇಂಡಿಯಾಕ್ಕೆ ನೀಡಲಿದ್ದಾರೆ. ಶೀಘ್ರದಲ್ಲೇ ರಾಷ್ಟ್ರೀಯ ಕ್ಯಾಂಪ್ ಶುರುವಾಗಲಿದೆ.ಸುಲ್ತಾನ್ ಅಜ್ಲನ್ ಷಾ ಟೂರ್ನಿಯಲ್ಲಿ ಸ್ಥಾನ ಪಡೆಯದ ಸಂದೀಪ್ ಸಿಂಗ್ ಹಾಗೂ ಡಿಫೆಂಡರ್ ಸರ್ದಾರ್ ಸಿಂಗ್ ಅವರು ಕೂಡ ರಾಷ್ಟ್ರೀಯ ಹಾಕಿ ಶಿಬಿರದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೋಪಾಲ್:</strong> ಕರ್ನಾಟಕ ತಂಡದ ಡಿಫೆಂಡರ್ ಎಸ್.ಕೆ.ಉತ್ತಪ್ಪ ಅವರು ಇಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಹಾಕಿ ಚಾಂಪಿಯನ್ಷಿಪ್ನಲ್ಲಿ `ಅತ್ಯುತ್ತಮ ಆಟಗಾರ~ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅಷ್ಟು ಮಾತ್ರವಲ್ಲದೇ, ರಾಷ್ಟ್ರೀಯ ಸೀನಿಯರ್ ಆಟಗಾರರ ಶಿಬಿರಕ್ಕೆ ಅವರು ಆಯ್ಕೆ ಆಗಿದ್ದಾರೆ. <br /> <br /> ಭಾನುವಾರ ಕೊನೆಗೊಂಡ ಈ ಚಾಂಪಿಯನ್ಷಿಪ್ನ ಫೈನಲ್ನಲ್ಲಿ ಭಾರತ ಸೋಲು ಕಂಡಿತ್ತು. 2-1 ಗೋಲುಗಳಿಂದ ಗೆದ್ದ ಹರಿಯಾಣ ಚಾಂಪಿಯನ್ ಆಗಿತ್ತು.<br /> <br /> ಆದರೆ ಯುವ ಹಾಗೂ ಪ್ರತಿಭಾವಂತ ಆಟಗಾರರನ್ನು ಒಳಗೊಂಡಿದ್ದ ಅಮರ್ ಅಯ್ಯಮ್ಮ ಸಾರಥ್ಯದ ಕರ್ನಾಟಕ ಅತ್ಯುತ್ತಮ ಪ್ರದರ್ಶನ ತೋರಿದೆ. ಉತ್ತಪ್ಪ ಭಾರತ ಕ್ರೀಡಾ ಪ್ರಾಧಿಕಾರ (ಎಸ್ಎಐ)ದಲ್ಲಿ ತರಬೇತಿ ಪಡೆಯುತ್ತಿದ್ದಾರೆ. <br /> <br /> ಡ್ರ್ಯಾಗ್ ಫ್ಲಿಕರ್ ಕೊಡಗಿನ ವಿ.ಆರ್.ರಘುನಾಥ್ (12 ಗೋಲು) ಚಾಂಪಿಯನ್ಷಿಪ್ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿದರು. ಹರಿಯಾಣ ತಂಡದ ಡ್ರ್ಯಾಗ್ ಫ್ಲಿಕರ್ ಸಂದೀಪ್ ಸಿಂಗ್ (11 ಗೋಲು) ಎರಡನೇ ಸ್ಥಾನ ಪಡೆದರು. <br /> <br /> ಈ ಚಾಂಪಿಯನ್ಷಿಪ್ ವೇಳೆ ರಾಷ್ಟ್ರೀಯ ತಂಡದ ಆಯ್ಕೆದಾರರು ಭೋಪಾಲ್ನಲ್ಲಿಯೇ ಇದ್ದು ಪ್ರತಿ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಅವರು ಈಗಾಗಲೇ ರಾಷ್ಟ್ರೀಯ ಶಿಬಿರಕ್ಕೆ 48 ಮಂದಿ ಹಾಗೂ ಸುಧಾರಣೆ ಗುಂಪಿನಲ್ಲಿ 37 ಮಂದಿಯನ್ನು ಆಯ್ಕೆ ಮಾಡಿದ್ದಾರೆ.<br /> <br /> ಒಪ್ಪಿಗೆಗಾಗಿ ಈ ಪಟ್ಟಿಯನ್ನು ಅವರು ಹಾಕಿ ಇಂಡಿಯಾಕ್ಕೆ ನೀಡಲಿದ್ದಾರೆ. ಶೀಘ್ರದಲ್ಲೇ ರಾಷ್ಟ್ರೀಯ ಕ್ಯಾಂಪ್ ಶುರುವಾಗಲಿದೆ.ಸುಲ್ತಾನ್ ಅಜ್ಲನ್ ಷಾ ಟೂರ್ನಿಯಲ್ಲಿ ಸ್ಥಾನ ಪಡೆಯದ ಸಂದೀಪ್ ಸಿಂಗ್ ಹಾಗೂ ಡಿಫೆಂಡರ್ ಸರ್ದಾರ್ ಸಿಂಗ್ ಅವರು ಕೂಡ ರಾಷ್ಟ್ರೀಯ ಹಾಕಿ ಶಿಬಿರದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>