<p><span style="font-size:36px;">ಕ</span>ನ್ನಡದ ಹಿರಿಯ ಕವಿ ಬಿ.ಎ. ಸನದಿ ಅವರ ಆಯ್ದ ಕಥೆಗಳ ಸಂಗ್ರಹವನ್ನು ಕಥೆಗಾರ ಬಿ.ಪಿ. ಶಿವಾನಂದರಾವ್ ಸಂಪಾದಿಸಿದ್ದಾರೆ. ಪ್ರಮುಖವಾಗಿ ಕಾವ್ಯವನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮ ಆಗಿಸಿಕೊಂಡಿರುವ ಸನದಿ ಆಗಾಗ ಕಥೆಗಳನ್ನು ಬರೆದುದ್ದಲ್ಲದೆ, ಉತ್ತಮ ಕಥೆಗಳನ್ನು ಅನುವಾದಿಸಿಕೊಂಡು ಬಂದಿದ್ದಾರೆ.</p>.<p>ಅವರು ಈವರೆಗೆ ಮಾಡಿದ ಅನುವಾದಗಳೂ ಸೇರಿದಂತೆ ಪ್ರಕಟಿಸಿದ ನಾಲ್ಕು ಕಥಾಸಂಗ್ರಹಗಳಿಂದ ಆಯ್ದುಕೊಂಡ ಕಥೆಗಳು ಇಲ್ಲಿವೆ.<br /> ಬದುಕಿನ ದ್ವಂದ್ವಗಳನ್ನು ಹಿಡಿಯುತ್ತಲೇ ಸರಳವಾಗಿ ತಮ್ಮ ಅನುಭವವನ್ನು ಮಂಡಿಸುವುದು ಸನದಿ ಅವರ ಕಥೆಗಳ ಶೈಲಿ.</p>.<p>ಯಾವುದೇ ತಂತ್ರಗಾರಿಕೆಯನ್ನು ಅವಲಂಬಿಸದ ಅವರ ಕಥೆಗಳು ಓದುಗರೊಂದಿಗೆ ಮುಖಾಮುಖಿಯಾಗಿ ತಮ್ಮ ಅನುಭವವನ್ನು ನೇರವಾಗಿ ಹೇಳಿಕೊಳ್ಳುತ್ತವೆ. ಈ ಸರಳ ರಚನೆಗಳ ಹಿಂದಿರುವುದು ಬದುಕನ್ನು ಮುಕ್ತವಾಗಿ ನೋಡುವ, ಅದನ್ನು ಶಕ್ತವಾಗಿ ಓದುಗರಿಗೆ ದಾಟಿಸುವ ರೀತಿ.</p>.<p>`ನೀರಿಲ್ಲದ ನಲ್ಲಿ', `ಅನುಭವ', `ಸಾವಿನ ಸುಂಟರಗಾಳಿ', `ಕರ್ನಾಟಕ ಕೇಸರಿ', `ಸಂಚಾರಿ' ಕಥೆಗಳು ಸನದಿಯವರ ಬರವಣಿಗೆಯ ಕುಶಲತೆಯನ್ನು, ಕಥೆಗಳ ಕಟ್ಟುವಿಕೆಯನ್ನು ಪರಿಚಯಿಸುತ್ತವೆ. ಆಧುನಿಕ ಕನ್ನಡದ ಕಥೆಗಳ ಸಂದರ್ಭದಲ್ಲಿ ಸನದಿಯವರ ಕಾವ್ಯಮಯ, ಧ್ವನಿಶಕ್ತಿಯುಳ್ಳ ಕಥೆಗಳು ವಿಶಿಷ್ಟವಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size:36px;">ಕ</span>ನ್ನಡದ ಹಿರಿಯ ಕವಿ ಬಿ.ಎ. ಸನದಿ ಅವರ ಆಯ್ದ ಕಥೆಗಳ ಸಂಗ್ರಹವನ್ನು ಕಥೆಗಾರ ಬಿ.ಪಿ. ಶಿವಾನಂದರಾವ್ ಸಂಪಾದಿಸಿದ್ದಾರೆ. ಪ್ರಮುಖವಾಗಿ ಕಾವ್ಯವನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮ ಆಗಿಸಿಕೊಂಡಿರುವ ಸನದಿ ಆಗಾಗ ಕಥೆಗಳನ್ನು ಬರೆದುದ್ದಲ್ಲದೆ, ಉತ್ತಮ ಕಥೆಗಳನ್ನು ಅನುವಾದಿಸಿಕೊಂಡು ಬಂದಿದ್ದಾರೆ.</p>.<p>ಅವರು ಈವರೆಗೆ ಮಾಡಿದ ಅನುವಾದಗಳೂ ಸೇರಿದಂತೆ ಪ್ರಕಟಿಸಿದ ನಾಲ್ಕು ಕಥಾಸಂಗ್ರಹಗಳಿಂದ ಆಯ್ದುಕೊಂಡ ಕಥೆಗಳು ಇಲ್ಲಿವೆ.<br /> ಬದುಕಿನ ದ್ವಂದ್ವಗಳನ್ನು ಹಿಡಿಯುತ್ತಲೇ ಸರಳವಾಗಿ ತಮ್ಮ ಅನುಭವವನ್ನು ಮಂಡಿಸುವುದು ಸನದಿ ಅವರ ಕಥೆಗಳ ಶೈಲಿ.</p>.<p>ಯಾವುದೇ ತಂತ್ರಗಾರಿಕೆಯನ್ನು ಅವಲಂಬಿಸದ ಅವರ ಕಥೆಗಳು ಓದುಗರೊಂದಿಗೆ ಮುಖಾಮುಖಿಯಾಗಿ ತಮ್ಮ ಅನುಭವವನ್ನು ನೇರವಾಗಿ ಹೇಳಿಕೊಳ್ಳುತ್ತವೆ. ಈ ಸರಳ ರಚನೆಗಳ ಹಿಂದಿರುವುದು ಬದುಕನ್ನು ಮುಕ್ತವಾಗಿ ನೋಡುವ, ಅದನ್ನು ಶಕ್ತವಾಗಿ ಓದುಗರಿಗೆ ದಾಟಿಸುವ ರೀತಿ.</p>.<p>`ನೀರಿಲ್ಲದ ನಲ್ಲಿ', `ಅನುಭವ', `ಸಾವಿನ ಸುಂಟರಗಾಳಿ', `ಕರ್ನಾಟಕ ಕೇಸರಿ', `ಸಂಚಾರಿ' ಕಥೆಗಳು ಸನದಿಯವರ ಬರವಣಿಗೆಯ ಕುಶಲತೆಯನ್ನು, ಕಥೆಗಳ ಕಟ್ಟುವಿಕೆಯನ್ನು ಪರಿಚಯಿಸುತ್ತವೆ. ಆಧುನಿಕ ಕನ್ನಡದ ಕಥೆಗಳ ಸಂದರ್ಭದಲ್ಲಿ ಸನದಿಯವರ ಕಾವ್ಯಮಯ, ಧ್ವನಿಶಕ್ತಿಯುಳ್ಳ ಕಥೆಗಳು ವಿಶಿಷ್ಟವಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>