<p><strong>ಬೆಂಗಳೂರು</strong>: ಆರಂಭಿಕ ಬ್ಯಾಟ್ಸ್ಮನ್ ಮಯಂಕ್ ಅಗರವಾಲ್ (116; 101 ಎಸೆತ) ಅವರ ಅಮೋಘ ಶತಕದ ನೆರವಿನಿಂದ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಗೋವಾ ವಿರುದ್ಧ 71 ರನ್ಗಳ ಗೆಲುವು ಸಾಧಿಸಿದ್ದಾರೆ.<br /> <br /> ನಗರ ಸಮೀಪದ ಆಲೂರು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ನಿಗದಿತ 45 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿತು. ಸವಾಲಿನ ಗುರಿ ಎದುರು ಗೋವಾ ತಂಡ 43.2 ಓವರ್ಗಳಲ್ಲಿ 241 ರನ್ಗಳಿಗೆ ಆಲೌಟಾಯಿತು. ಭಾನುವಾರ ಸುರಿದ ಮಳೆಯ ಕಾರಣ ಓವರ್ಗಳನ್ನು ಕಡಿತಗೊಳಿಸಲಾಗಿತ್ತು.<br /> <br /> ಆರ್.ವಿನಯ್ ಕುಮಾರ್ ಸಾರಥ್ಯದ ತಂಡ ನಾಲ್ಕು ಪಂದ್ಯಗಳಿಂದ 14 ಪಾಯಿಂಟ್ ಹೊಂದಿದೆ. ತಮಿಳುನಾಡು ತಂಡ ಮೂರು ಪಂದ್ಯಗಳಿಂದ 14 ಪಾಯಿಂಟ್ ಹೊಂದಿದೆ. ಉಭಯ ತಂಡಗಳು ಬುಧವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿವೆ. ಈ ಪೈಪೋಟಿಯಲ್ಲಿ ಗೆಲ್ಲುವ ತಂಡ ದಕ್ಷಿಣ ವಲಯ ಚಾಂಪಿಯನ್ ಆಗಲಿದೆ.<br /> <br /> ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ಎದುರು ಆಂಧ್ರಾ ತಂಡ ಆರು ವಿಕೆಟ್ಗಳ ಗೆಲುವು ಸಾಧಿಸಿತು. ಆದರೆ ಆದಿತ್ಯ ಗ್ಲೋಬಲ್ ಕ್ರೀಡಾಂಗಣದ ಪಿಚ್ ಒದ್ದೆಯಾಗಿದ್ದ ಕಾರಣ ತಮಿಳುನಾಡು ಹಾಗೂ ಕೇರಳ ನಡುವಿನ ಪಂದ್ಯವನ್ನು ರದ್ದುಮಾಡಲಾಯಿತು.<br /> <br /> <strong>ಸಂಕ್ಷಿಪ್ತ ಸ್ಕೋರ್: ಕರ್ನಾಟಕ</strong>: 45 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 312 (ರಾಬಿನ್ ಉತ್ತಪ್ಪ 27, ಮಯಂಕ್ ಅಗರವಾಲ್ 116, ಕೆ.ಎಲ್.ರಾಹುಲ್ 40, ಮನೀಷ್ ಪಾಂಡೆ 45; ಶದಾಬ್ ಜಕಾತಿ 52ಕ್ಕೆ2, ಅಮಿತ್ ಯಾದವ್ 54ಕ್ಕೆ3); ಗೋವಾ: 43.2 ಓವರ್ಗಳಲ್ಲಿ 241 (ಅಮೋಘ್ ದೇಸಾಯಿ 30, ಶಗುಣ್ ಕಾಮತ್ 63, ದರ್ಶನ್ ಮಿಸಾಲ್ 42; ಅಬ್ರಾರ್ ಕಾಜಿ 49ಕ್ಕೆ4, ಆರ್.ವಿನಯ್ ಕುಮಾರ್ 47ಕ್ಕೆ3). ಫಲಿತಾಂಶ: ಕರ್ನಾಟಕ ತಂಡಕ್ಕೆ 71 ರನ್ಗಳ ಗೆಲುವು. ಪಾಯಿಂಟ್: 4.<br /> <br /> <strong>ಹೈದರಾಬಾದ್:</strong> 47.5 ಓವರ್ಗಳಲ್ಲಿ 166 (ಜಿ.ಹನುಮಾ ವಿಹಾರಿ 43, ಹಬೀದ್ ಅಹ್ಮದ್ ಔಟಾಗದೆ 44; ಡಿ.ಸ್ವರೂಪ್ ಕುಮಾರ್ 21ಕ್ಕೆ4, ಪಿ.ವಿಜಯ್ ಕುಮಾರ್ 37ಕ್ಕೆ2); ಆಂಧ್ರಾ: 40.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 167 (ಕೆ.ಎಸ್.ಭರತ್ 60, ಜ್ಯೋತಿ ಸಾಯಿ ಕೃಷ್ಣ 36; ಪ್ರಗ್ಯಾನ್ ಓಜಾ 46ಕ್ಕೆ2). ಫಲಿತಾಂಶ: ಆಂಧ್ರಾಕ್ಕೆ ಆರು ವಿಕೆಟ್ ಜಯ. ಪಾಯಿಂಟ್: 4</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಆರಂಭಿಕ ಬ್ಯಾಟ್ಸ್ಮನ್ ಮಯಂಕ್ ಅಗರವಾಲ್ (116; 101 ಎಸೆತ) ಅವರ ಅಮೋಘ ಶತಕದ ನೆರವಿನಿಂದ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಗೋವಾ ವಿರುದ್ಧ 71 ರನ್ಗಳ ಗೆಲುವು ಸಾಧಿಸಿದ್ದಾರೆ.<br /> <br /> ನಗರ ಸಮೀಪದ ಆಲೂರು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ನಿಗದಿತ 45 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿತು. ಸವಾಲಿನ ಗುರಿ ಎದುರು ಗೋವಾ ತಂಡ 43.2 ಓವರ್ಗಳಲ್ಲಿ 241 ರನ್ಗಳಿಗೆ ಆಲೌಟಾಯಿತು. ಭಾನುವಾರ ಸುರಿದ ಮಳೆಯ ಕಾರಣ ಓವರ್ಗಳನ್ನು ಕಡಿತಗೊಳಿಸಲಾಗಿತ್ತು.<br /> <br /> ಆರ್.ವಿನಯ್ ಕುಮಾರ್ ಸಾರಥ್ಯದ ತಂಡ ನಾಲ್ಕು ಪಂದ್ಯಗಳಿಂದ 14 ಪಾಯಿಂಟ್ ಹೊಂದಿದೆ. ತಮಿಳುನಾಡು ತಂಡ ಮೂರು ಪಂದ್ಯಗಳಿಂದ 14 ಪಾಯಿಂಟ್ ಹೊಂದಿದೆ. ಉಭಯ ತಂಡಗಳು ಬುಧವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿವೆ. ಈ ಪೈಪೋಟಿಯಲ್ಲಿ ಗೆಲ್ಲುವ ತಂಡ ದಕ್ಷಿಣ ವಲಯ ಚಾಂಪಿಯನ್ ಆಗಲಿದೆ.<br /> <br /> ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ಎದುರು ಆಂಧ್ರಾ ತಂಡ ಆರು ವಿಕೆಟ್ಗಳ ಗೆಲುವು ಸಾಧಿಸಿತು. ಆದರೆ ಆದಿತ್ಯ ಗ್ಲೋಬಲ್ ಕ್ರೀಡಾಂಗಣದ ಪಿಚ್ ಒದ್ದೆಯಾಗಿದ್ದ ಕಾರಣ ತಮಿಳುನಾಡು ಹಾಗೂ ಕೇರಳ ನಡುವಿನ ಪಂದ್ಯವನ್ನು ರದ್ದುಮಾಡಲಾಯಿತು.<br /> <br /> <strong>ಸಂಕ್ಷಿಪ್ತ ಸ್ಕೋರ್: ಕರ್ನಾಟಕ</strong>: 45 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 312 (ರಾಬಿನ್ ಉತ್ತಪ್ಪ 27, ಮಯಂಕ್ ಅಗರವಾಲ್ 116, ಕೆ.ಎಲ್.ರಾಹುಲ್ 40, ಮನೀಷ್ ಪಾಂಡೆ 45; ಶದಾಬ್ ಜಕಾತಿ 52ಕ್ಕೆ2, ಅಮಿತ್ ಯಾದವ್ 54ಕ್ಕೆ3); ಗೋವಾ: 43.2 ಓವರ್ಗಳಲ್ಲಿ 241 (ಅಮೋಘ್ ದೇಸಾಯಿ 30, ಶಗುಣ್ ಕಾಮತ್ 63, ದರ್ಶನ್ ಮಿಸಾಲ್ 42; ಅಬ್ರಾರ್ ಕಾಜಿ 49ಕ್ಕೆ4, ಆರ್.ವಿನಯ್ ಕುಮಾರ್ 47ಕ್ಕೆ3). ಫಲಿತಾಂಶ: ಕರ್ನಾಟಕ ತಂಡಕ್ಕೆ 71 ರನ್ಗಳ ಗೆಲುವು. ಪಾಯಿಂಟ್: 4.<br /> <br /> <strong>ಹೈದರಾಬಾದ್:</strong> 47.5 ಓವರ್ಗಳಲ್ಲಿ 166 (ಜಿ.ಹನುಮಾ ವಿಹಾರಿ 43, ಹಬೀದ್ ಅಹ್ಮದ್ ಔಟಾಗದೆ 44; ಡಿ.ಸ್ವರೂಪ್ ಕುಮಾರ್ 21ಕ್ಕೆ4, ಪಿ.ವಿಜಯ್ ಕುಮಾರ್ 37ಕ್ಕೆ2); ಆಂಧ್ರಾ: 40.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 167 (ಕೆ.ಎಸ್.ಭರತ್ 60, ಜ್ಯೋತಿ ಸಾಯಿ ಕೃಷ್ಣ 36; ಪ್ರಗ್ಯಾನ್ ಓಜಾ 46ಕ್ಕೆ2). ಫಲಿತಾಂಶ: ಆಂಧ್ರಾಕ್ಕೆ ಆರು ವಿಕೆಟ್ ಜಯ. ಪಾಯಿಂಟ್: 4</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>