<p><strong>ಸಿಂದಗಿ:</strong> ನಗರದ ವಿವೇಕಾನಂದ ವೃತ್ತ ದಲ್ಲಿ ಮಂಗಳವಾರ ಟಿಪ್ಪುಸುಲ್ತಾನ್ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲುತೂರಾಟ, ಸಾರ್ವಜನಿಕ ಆಸ್ತಿ–ಪಾಸ್ತಿಗಳು ಹಾನಿಯಾಗಿ ತ್ವೇಷ ಮಯ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿ ಸಲಾಗಿತ್ತು.<br /> <br /> ಬುಧವಾರ ಬೆಳಿಗ್ಗೆಯಿಂದ ಪೊಲೀಸರು ನಗರದ ಎಲ್ಲ ಅಂಗಡಿ ಗಳನ್ನು ಒತ್ತಾಯದಿಂದ ಮುಚ್ಚಿಸಿದ್ದ ರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.<br /> <br /> ನಗರದ ಎಲ್ಲ ರಸ್ತೆಗಳು ಜನರ ಸಂಚಾರವಿಲ್ಲದೇ ಬಿಕೋ ಎನ್ನುವ ದೃಶ್ಯ ಕಂಡು ಬಂದಿತು. ಪೋಲಿಸರು ನಿಷೇಧಾ ಜ್ಞೆಯನ್ನು ಕರ್ಫೂ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡು ಒಬ್ಬೊಬ್ಬ ವ್ಯಕ್ತಿ ಸಂಚರಿಸಿದರೂ ಲಾಠಿ ಏಟಿನ ರುಚಿ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.<br /> <br /> ನಗರದ ತುಂಬೆಲ್ಲ ಭಯದ ವಾತಾ ವರಣ ನಿರ್ಮಾಣವಾಗಿದೆ. ಶಾಲಾ–ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ತಮ್ಮೂರುಗಳಿಗೆ ಮರಳಲು ತುಂಬಾ ತೊಂದರೆ ಅನುಭವಿಸುವುದು ಕಂಡು ಬಂದಿತು.<br /> <br /> ಚಹಾದ ಅಂಗಡಿಗಳ ಮಾಲೀಕರು ಇಡೀ ದಿನಕ್ಕಾಗುವ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಇಟ್ಟುಕೊಂಡಿರು ವುದು ಹಾಳಾಗಿದೆ ಎಂದು ದೂರಿದ್ದಾರೆ.<br /> <br /> ಈ ನಿಷೇಧಾಜ್ಞೆ ಇದೇ 20ರವರೆಗೆ ಮುಂದುವರೆಯುತ್ತಿರುವುದರಿಂದ ಜನ ಜೀವನ ಮೂರು ದಿನಗಳ ಕಾಲ ಇನ್ನಷ್ಟು ಅಸ್ತವ್ಯಸ್ತಗೊಳ್ಳುವ ಸಂಭವವಿದೆ.<br /> <br /> 15 ಜನರು ಪೊಲೀಸರ ವಶಕ್ಕೆ: ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಗುಂಪಿನಿಂದ ಒಟ್ಟು 15 ಜನರನ್ನು ವಿಚಾರಣೆಗೆ ಎಂದು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೋಲಿಸ್ ಮೂಲದಿಂದ ತಿಳಿದು ಬಂದಿದೆ.<br /> <br /> ಅಮಾಯಕರನ್ನು ಶಿಕ್ಷಿಸಿದಿರಿ: ವಿಚಾರ ಣೆಗೆ ಎಂದು ಕರೆದೊಯ್ದದವರಲ್ಲಿ ಕೆಲ ವರು ಅಮಾಯಕರು ಇದ್ದಾರೆ. ಅಂಥ ವರನ್ನು ಶಿಕ್ಷಿಸದಿರಿ ಎಂದು ಸಾರ್ವ ಜನಿಕರು ವಿನಂತಿಸಿಕೊಂಡಿದ್ದಾರೆ.<br /> <br /> ಇಡೀ ನಗರದಲ್ಲಿ ಪೊಲೀಸ್ ಸರ್ಪ ಗಾವಲು ಇದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ನಗರದಲ್ಲಿ ಬೀಡು ಬಿಟ್ಟಿದ್ದಾರೆ.<br /> <strong>ಪತ್ರಕರನಿಗೆ ಲಾಠಿ ಏಟು: </strong>ಏತನ್ಮಧ್ಯೆ ವರದಿ ಮಾಡಲು ತೆರಳುತ್ತಿದ್ದ ಪತ್ರಕರ್ತ ಪಂಡಿತ ಯಂಪೂರೆಗೆ ಸ್ಥಳೀಯ ಟಿಪ್ಪುಸುಲ್ತಾನ್ ವೃತ್ತದಲ್ಲಿ ಪೊಲೀಸರು ಲಾಠಿಯಿಂದ ಹೊಡೆದಿ ರುವ ಘಟನೆ ನಡೆದಿದೆ.<br /> <br /> ಈ ಕುರಿತು ಪತ್ರಕರ್ತರು ಡಿ.ವೈ. ಎಸ್.ಪಿ ಡಾ.ಶಿವಕುಮಾರ ಗುಣಾರೆ ಅವರಿಗೆ ಮನವಿ ಪತ್ರ ಸಲ್ಲಿಸಿ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ:</strong> ನಗರದ ವಿವೇಕಾನಂದ ವೃತ್ತ ದಲ್ಲಿ ಮಂಗಳವಾರ ಟಿಪ್ಪುಸುಲ್ತಾನ್ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲುತೂರಾಟ, ಸಾರ್ವಜನಿಕ ಆಸ್ತಿ–ಪಾಸ್ತಿಗಳು ಹಾನಿಯಾಗಿ ತ್ವೇಷ ಮಯ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿ ಸಲಾಗಿತ್ತು.<br /> <br /> ಬುಧವಾರ ಬೆಳಿಗ್ಗೆಯಿಂದ ಪೊಲೀಸರು ನಗರದ ಎಲ್ಲ ಅಂಗಡಿ ಗಳನ್ನು ಒತ್ತಾಯದಿಂದ ಮುಚ್ಚಿಸಿದ್ದ ರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.<br /> <br /> ನಗರದ ಎಲ್ಲ ರಸ್ತೆಗಳು ಜನರ ಸಂಚಾರವಿಲ್ಲದೇ ಬಿಕೋ ಎನ್ನುವ ದೃಶ್ಯ ಕಂಡು ಬಂದಿತು. ಪೋಲಿಸರು ನಿಷೇಧಾ ಜ್ಞೆಯನ್ನು ಕರ್ಫೂ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡು ಒಬ್ಬೊಬ್ಬ ವ್ಯಕ್ತಿ ಸಂಚರಿಸಿದರೂ ಲಾಠಿ ಏಟಿನ ರುಚಿ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.<br /> <br /> ನಗರದ ತುಂಬೆಲ್ಲ ಭಯದ ವಾತಾ ವರಣ ನಿರ್ಮಾಣವಾಗಿದೆ. ಶಾಲಾ–ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ತಮ್ಮೂರುಗಳಿಗೆ ಮರಳಲು ತುಂಬಾ ತೊಂದರೆ ಅನುಭವಿಸುವುದು ಕಂಡು ಬಂದಿತು.<br /> <br /> ಚಹಾದ ಅಂಗಡಿಗಳ ಮಾಲೀಕರು ಇಡೀ ದಿನಕ್ಕಾಗುವ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಇಟ್ಟುಕೊಂಡಿರು ವುದು ಹಾಳಾಗಿದೆ ಎಂದು ದೂರಿದ್ದಾರೆ.<br /> <br /> ಈ ನಿಷೇಧಾಜ್ಞೆ ಇದೇ 20ರವರೆಗೆ ಮುಂದುವರೆಯುತ್ತಿರುವುದರಿಂದ ಜನ ಜೀವನ ಮೂರು ದಿನಗಳ ಕಾಲ ಇನ್ನಷ್ಟು ಅಸ್ತವ್ಯಸ್ತಗೊಳ್ಳುವ ಸಂಭವವಿದೆ.<br /> <br /> 15 ಜನರು ಪೊಲೀಸರ ವಶಕ್ಕೆ: ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಗುಂಪಿನಿಂದ ಒಟ್ಟು 15 ಜನರನ್ನು ವಿಚಾರಣೆಗೆ ಎಂದು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೋಲಿಸ್ ಮೂಲದಿಂದ ತಿಳಿದು ಬಂದಿದೆ.<br /> <br /> ಅಮಾಯಕರನ್ನು ಶಿಕ್ಷಿಸಿದಿರಿ: ವಿಚಾರ ಣೆಗೆ ಎಂದು ಕರೆದೊಯ್ದದವರಲ್ಲಿ ಕೆಲ ವರು ಅಮಾಯಕರು ಇದ್ದಾರೆ. ಅಂಥ ವರನ್ನು ಶಿಕ್ಷಿಸದಿರಿ ಎಂದು ಸಾರ್ವ ಜನಿಕರು ವಿನಂತಿಸಿಕೊಂಡಿದ್ದಾರೆ.<br /> <br /> ಇಡೀ ನಗರದಲ್ಲಿ ಪೊಲೀಸ್ ಸರ್ಪ ಗಾವಲು ಇದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ನಗರದಲ್ಲಿ ಬೀಡು ಬಿಟ್ಟಿದ್ದಾರೆ.<br /> <strong>ಪತ್ರಕರನಿಗೆ ಲಾಠಿ ಏಟು: </strong>ಏತನ್ಮಧ್ಯೆ ವರದಿ ಮಾಡಲು ತೆರಳುತ್ತಿದ್ದ ಪತ್ರಕರ್ತ ಪಂಡಿತ ಯಂಪೂರೆಗೆ ಸ್ಥಳೀಯ ಟಿಪ್ಪುಸುಲ್ತಾನ್ ವೃತ್ತದಲ್ಲಿ ಪೊಲೀಸರು ಲಾಠಿಯಿಂದ ಹೊಡೆದಿ ರುವ ಘಟನೆ ನಡೆದಿದೆ.<br /> <br /> ಈ ಕುರಿತು ಪತ್ರಕರ್ತರು ಡಿ.ವೈ. ಎಸ್.ಪಿ ಡಾ.ಶಿವಕುಮಾರ ಗುಣಾರೆ ಅವರಿಗೆ ಮನವಿ ಪತ್ರ ಸಲ್ಲಿಸಿ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>