<p><strong>ದಾವಣಗೆರೆ: </strong>‘ಕಲಾವಿದರ ತವರೂರು’ ಎಂದೇ ಖ್ಯಾತಿ ಪಡೆದಿದ್ದ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಬಹುನಿರೀಕ್ಷೆಯ ಕಲಾಗ್ಯಾಲರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಈ ಗ್ಯಾಲರಿಯ ಉದ್ಘಾಟನೆ ಮಾತ್ರ ಇನ್ನೂ ಆಗಿಲ್ಲ.<br /> <br /> ದಾವಣಗೆರೆಯಲ್ಲೇ ರಾಜ್ಯದ ಮೊದಲ ಕಲಾ (ಫೈನ್ ಆರ್ಟ್ಸ್) ಕಾಲೇಜು 1964ರಲ್ಲಿ ನಿರ್ಮಾಣ ವಾಗಿತ್ತು. ಕಳೆದ ವರ್ಷ ವಿದ್ಯಾನಗರದಲ್ಲಿರುವ ಈ ಕಾಲೇಜು ಸುವರ್ಣಮಹೋತ್ಸವ ಆಚರಿಸಿತ್ತು. ಇದೇ ಕಲಾ ಕಾಲೇಜು ಆವರಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಲಾ ಗ್ಯಾಲರಿ ನಿರ್ಮಾಣವಾಗಿದೆ. ಆದರೆ ಈ ಗ್ಯಾಲರಿಯ ಉದ್ಘಾಟನೆ ವಿಳಂಬವಾಗುತ್ತಿರುವುದು ಕಲಾವಿದರಲ್ಲಿ ನಿರಾಶೆ ಮೂಡಿಸಿದೆ.<br /> <br /> ರಾಜ್ಯದ ಬೆಂಗಳೂರು, ಮೈಸೂರು, ಧಾರವಾಡ, ಮಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕಲಾ ಪ್ರದರ್ಶನಕ್ಕೆ ಕಲಾ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಇಲ್ಲೂ ಈಗ ಗ್ಯಾಲರಿ ನಿರ್ಮಾಣಕಾರ್ಯ ಬಹುತೇಕ ಪೂರ್ಣಗೊಂಡರೂ ಉದ್ಘಾ ಟನೆ ವಿಳಂಬದ ಹಿಂದಿನ ಕಾರಣಗಳು ಅರ್ಥವಾಗುತ್ತಿಲ್ಲ ಎನ್ನುವುದು ಕಲಾವಿದರ ಅಳಲು.<br /> <br /> ಕಲಾ ಗ್ಯಾಲರಿ ಈವರೆಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಈ ಗ್ಯಾಲರಿ ಉದ್ಘಾಟನೆ ಆದರೆ ಕಲಾಸಕ್ತಿರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಗಲಿದೆ ಎನ್ನುತ್ತಾರೆ ಲಲಿತಾ ಕಲಾ ಕಾಲೇಜಿನ ವಾಣಿಜ್ಯ ಕಲಾ ವಿಭಾಗದ ನಿವೃತ್ತ ವಿಭಾಗ ಮುಖ್ಯಸ್ಥರಾದ ಮಲ್ಲಿಕಾರ್ಜುನ್ ಜಾಧವ್.<br /> <br /> ಜಿಲ್ಲೆಯಲ್ಲಿ ಕಲಾ ಪ್ರದರ್ಶನ ಮಾಡಬೇಕಾದರೆ, ಕನ್ನಡ ಭವನ, ರಂಗ ಮಂದಿರ, ರೋಟರಿ ಭವನಗಳ ಆಶ್ರಯ ಪಡೆಯಬೇಕಾಗಿದೆ. ಆದರೆ ಈ ಉದ್ದೇಶಕ್ಕೆಂದೇ ಇರುವ ಗ್ಯಾಲರಿಗಳಿಲ್ಲದೇ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲಾಗದೇ ಪರದಾಡುವಂತಾಗಿದೆ.<br /> <br /> <strong>ನೆರೆ ಜಿಲ್ಲೆಗಳ ಆಶ್ರಯ: </strong>ರಾಜ್ಯ, ರಾಷ್ಟ್ರಮಟ್ಟದ ಕಲಾ ಪ್ರದರ್ಶನ ಸಮಾರಂಭ ಮಾಡಬೇಕಾದರೆ ನೆರೆ ಜಿಲ್ಲೆಯ ಆಶ್ರಯ ಪಡೆಯಬೇಕಿದೆ. ನಗರದಲ್ಲಿ ಕಲಾ ಗ್ಯಾಲರಿ ಇಲ್ಲದೇ ಇರುವುದರಿಂದ ಮುಂದಿನ ತಿಂಗಳು ಫೆಬ್ರುವರಿ 17ರಿಂದ 19ರ ವರೆಗೆ ದಾವಣಗೆರೆಯಲ್ಲಿ ನಡೆಯಬೇಕಿದ್ದ 44ನೇ ರಾಜ್ಯ ಮಟ್ಟದ ಕಲಾ ಪ್ರದರ್ಶನ ಬಾಗಲಕೋಟೆಯಲ್ಲಿ ನಡೆಯುತ್ತಿದೆ.<br /> <br /> ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ನಡೆಯಬೇಕೆಂದರೆ ಸರ್ಕಾರಿ ಕಲಾ ಕಾಲೇಜಿನಲ್ಲಿ ನಿರ್ಮಾಣ ಆಗುತ್ತಿರುವ ಕಲಾ ಗ್ಯಾಲರಿ ಶೀಘ್ರ ಉದ್ಘಾಟನೆಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಲಲಿತಾ ಕಲಾ ಅಕಾಡೆಮಿ ಸದಸ್ಯ ಎ.ಮಹಾಲಿಂಗಪ್ಪ.<br /> <br /> ರಾಜ್ಯದಲ್ಲಿ 75ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಕಲಾ ಕಾಲೇಜುಗಳಿದ್ದು, ಅಲ್ಲಿನ ಕಲಾಸಕ್ತರಿಗೆ ಕಲಾ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಆದರೆ, ಇಲ್ಲಿನ ಕಲಾವಿದರು ಅದರಿಂದ ವಂಚಿತರಾಗಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.<br /> <br /> ಜಿಲ್ಲೆಯ ಕಲಾವಿದರನ್ನು ಬೆಳೆಸಬೇಕಾದರೆ ಕಲಾ ಗ್ಯಾಲರಿ ಅವಶ್ಯಕತೆ ಇದೆ. ದಾವಣಗೆರೆ ವಿಶ್ವವಿದ್ಯಾಲಯ ಸಿಂಡಿಕೇಟ್ ಹಾಗೂ ಅಕಾಡೆಮಿ ಸದಸ್ಯರು ಗ್ಯಾಲರಿ ಉದ್ಘಾಟಿಸುವ ವಿಷಯದಲ್ಲಿ ಮುತುವರ್ಜಿ ವಹಿಸಬೇಕು ಎನ್ನುವುದು ಅವರ ಒತ್ತಾಸೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>‘ಕಲಾವಿದರ ತವರೂರು’ ಎಂದೇ ಖ್ಯಾತಿ ಪಡೆದಿದ್ದ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಬಹುನಿರೀಕ್ಷೆಯ ಕಲಾಗ್ಯಾಲರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಈ ಗ್ಯಾಲರಿಯ ಉದ್ಘಾಟನೆ ಮಾತ್ರ ಇನ್ನೂ ಆಗಿಲ್ಲ.<br /> <br /> ದಾವಣಗೆರೆಯಲ್ಲೇ ರಾಜ್ಯದ ಮೊದಲ ಕಲಾ (ಫೈನ್ ಆರ್ಟ್ಸ್) ಕಾಲೇಜು 1964ರಲ್ಲಿ ನಿರ್ಮಾಣ ವಾಗಿತ್ತು. ಕಳೆದ ವರ್ಷ ವಿದ್ಯಾನಗರದಲ್ಲಿರುವ ಈ ಕಾಲೇಜು ಸುವರ್ಣಮಹೋತ್ಸವ ಆಚರಿಸಿತ್ತು. ಇದೇ ಕಲಾ ಕಾಲೇಜು ಆವರಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಲಾ ಗ್ಯಾಲರಿ ನಿರ್ಮಾಣವಾಗಿದೆ. ಆದರೆ ಈ ಗ್ಯಾಲರಿಯ ಉದ್ಘಾಟನೆ ವಿಳಂಬವಾಗುತ್ತಿರುವುದು ಕಲಾವಿದರಲ್ಲಿ ನಿರಾಶೆ ಮೂಡಿಸಿದೆ.<br /> <br /> ರಾಜ್ಯದ ಬೆಂಗಳೂರು, ಮೈಸೂರು, ಧಾರವಾಡ, ಮಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕಲಾ ಪ್ರದರ್ಶನಕ್ಕೆ ಕಲಾ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಇಲ್ಲೂ ಈಗ ಗ್ಯಾಲರಿ ನಿರ್ಮಾಣಕಾರ್ಯ ಬಹುತೇಕ ಪೂರ್ಣಗೊಂಡರೂ ಉದ್ಘಾ ಟನೆ ವಿಳಂಬದ ಹಿಂದಿನ ಕಾರಣಗಳು ಅರ್ಥವಾಗುತ್ತಿಲ್ಲ ಎನ್ನುವುದು ಕಲಾವಿದರ ಅಳಲು.<br /> <br /> ಕಲಾ ಗ್ಯಾಲರಿ ಈವರೆಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಈ ಗ್ಯಾಲರಿ ಉದ್ಘಾಟನೆ ಆದರೆ ಕಲಾಸಕ್ತಿರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಗಲಿದೆ ಎನ್ನುತ್ತಾರೆ ಲಲಿತಾ ಕಲಾ ಕಾಲೇಜಿನ ವಾಣಿಜ್ಯ ಕಲಾ ವಿಭಾಗದ ನಿವೃತ್ತ ವಿಭಾಗ ಮುಖ್ಯಸ್ಥರಾದ ಮಲ್ಲಿಕಾರ್ಜುನ್ ಜಾಧವ್.<br /> <br /> ಜಿಲ್ಲೆಯಲ್ಲಿ ಕಲಾ ಪ್ರದರ್ಶನ ಮಾಡಬೇಕಾದರೆ, ಕನ್ನಡ ಭವನ, ರಂಗ ಮಂದಿರ, ರೋಟರಿ ಭವನಗಳ ಆಶ್ರಯ ಪಡೆಯಬೇಕಾಗಿದೆ. ಆದರೆ ಈ ಉದ್ದೇಶಕ್ಕೆಂದೇ ಇರುವ ಗ್ಯಾಲರಿಗಳಿಲ್ಲದೇ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲಾಗದೇ ಪರದಾಡುವಂತಾಗಿದೆ.<br /> <br /> <strong>ನೆರೆ ಜಿಲ್ಲೆಗಳ ಆಶ್ರಯ: </strong>ರಾಜ್ಯ, ರಾಷ್ಟ್ರಮಟ್ಟದ ಕಲಾ ಪ್ರದರ್ಶನ ಸಮಾರಂಭ ಮಾಡಬೇಕಾದರೆ ನೆರೆ ಜಿಲ್ಲೆಯ ಆಶ್ರಯ ಪಡೆಯಬೇಕಿದೆ. ನಗರದಲ್ಲಿ ಕಲಾ ಗ್ಯಾಲರಿ ಇಲ್ಲದೇ ಇರುವುದರಿಂದ ಮುಂದಿನ ತಿಂಗಳು ಫೆಬ್ರುವರಿ 17ರಿಂದ 19ರ ವರೆಗೆ ದಾವಣಗೆರೆಯಲ್ಲಿ ನಡೆಯಬೇಕಿದ್ದ 44ನೇ ರಾಜ್ಯ ಮಟ್ಟದ ಕಲಾ ಪ್ರದರ್ಶನ ಬಾಗಲಕೋಟೆಯಲ್ಲಿ ನಡೆಯುತ್ತಿದೆ.<br /> <br /> ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ನಡೆಯಬೇಕೆಂದರೆ ಸರ್ಕಾರಿ ಕಲಾ ಕಾಲೇಜಿನಲ್ಲಿ ನಿರ್ಮಾಣ ಆಗುತ್ತಿರುವ ಕಲಾ ಗ್ಯಾಲರಿ ಶೀಘ್ರ ಉದ್ಘಾಟನೆಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಲಲಿತಾ ಕಲಾ ಅಕಾಡೆಮಿ ಸದಸ್ಯ ಎ.ಮಹಾಲಿಂಗಪ್ಪ.<br /> <br /> ರಾಜ್ಯದಲ್ಲಿ 75ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಕಲಾ ಕಾಲೇಜುಗಳಿದ್ದು, ಅಲ್ಲಿನ ಕಲಾಸಕ್ತರಿಗೆ ಕಲಾ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಆದರೆ, ಇಲ್ಲಿನ ಕಲಾವಿದರು ಅದರಿಂದ ವಂಚಿತರಾಗಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.<br /> <br /> ಜಿಲ್ಲೆಯ ಕಲಾವಿದರನ್ನು ಬೆಳೆಸಬೇಕಾದರೆ ಕಲಾ ಗ್ಯಾಲರಿ ಅವಶ್ಯಕತೆ ಇದೆ. ದಾವಣಗೆರೆ ವಿಶ್ವವಿದ್ಯಾಲಯ ಸಿಂಡಿಕೇಟ್ ಹಾಗೂ ಅಕಾಡೆಮಿ ಸದಸ್ಯರು ಗ್ಯಾಲರಿ ಉದ್ಘಾಟಿಸುವ ವಿಷಯದಲ್ಲಿ ಮುತುವರ್ಜಿ ವಹಿಸಬೇಕು ಎನ್ನುವುದು ಅವರ ಒತ್ತಾಸೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>