<p>ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಕಲಾತಪಸ್ವಿ ಕೆ. ವೆಂಕಟಪ್ಪ (1886-1965) ಒಬ್ಬರು. ತಮ್ಮ ಬಾಳನ್ನೇ ಕಲಿಕೆಗಾಗಿ ಮೀಸಲಿಟ್ಟ ಅವರು ಅಕ್ಷರಶಃ ಕಲಾತಪಸ್ವಿ. ಚಿತ್ರಕಲೆಯೊಂದಿಗೆ ಸಂಗೀತದಲ್ಲೂ ಅವರಿಗೆ ಪರಿಣತಿಯಿತ್ತು. ವೆಂಕಟಪ್ಪನವರ ವ್ಯಕ್ತಿತ್ವ ಅವರ ಕಲೆಯಷ್ಟೇ ಸ್ವಾರಸ್ಯವಾದುದು. ಮೂಗಿನ ತುದಿಯಲ್ಲೇ ಕೋಪ ಹೊಂದಿದ್ದ ಅವರನ್ನು ‘ಬೆಂಕಿ ನವಾಬ’ ಎನ್ನಲಾಗುತ್ತಿತ್ತು.<br /> <br /> ‘ಕಲೆಯೆ ಅವನಿಗೆ ಮಡದಿ, ಕಲೆಯೆ ಅವನಿಗೆ ಮಕ್ಕಳು’ ಎಂದು ಗುರು ಅವನೀಂದ್ರನಾಥರು ವೆಂಕಟಪ್ಪನವರ ವಿಚಾರವಾಗಿ ಹೇಳುತ್ತಿದ್ದರಂತೆ. ಮದುವೆಯಾದರೆ ಸಂಸಾರದ ನಿರ್ವಹಣೆಯಲ್ಲಿ ಕಲೆಯ ಕಡೆ ಗಮನ ಕಡಿಮೆಯಾದೀತೆಂಬ ಭಯದಿಂದ ಅವರು ಮದುವೆಯಾಗಲೇ ಇಲ್ಲ. ‘ನಾನು ಕಲಾವಿದನಲ್ಲ, ಕಲಾವಿದ್ಯಾರ್ಥಿಯಷ್ಟೇ!’ ಎನ್ನುವ ವಿನಯ ವೆಂಕಟಪ್ಪನವರದು. <br /> <br /> ಗೌಳಿಯಾಗಲಿ, ಕೂಲಿಯಾಳಾಗಲಿ, ಬಡಗಿಯಾಗಲಿ ತಮ್ಮ ಕಲಾಕೃತಿಗಳನ್ನು ನೋಡಬಯಸಿದರೆ ಎಲ್ಲವನ್ನೂ ತೋರಿಸಿ ವಿವರಿಸಿ ಕಳುಹಿಸುವ ತಾಳ್ಮೆ ವೆಂಕಟಪ್ಪನವರಿಗೆ ಇತ್ತು. ಶ್ರೀಮಂತಿಕೆಯ ತೋರಿಕೆಗೆ ಒಲಿದವರನ್ನು ಕಂಡರೆ ಅವರಿಗೆ ಆದರವೇನೂ ಇರಲಿಲ್ಲ. ಇಂಥ ವಿಶಿಷ್ಟ- ವಿಕ್ಷಿಪ್ತ ಕಲಾವಿದನ ಸಾಧನೆ-ಬದುಕಿನ ಕುರಿತು ಪ್ರೊ.ಸಾ.ಕೃ.ರಾಮಚಂದ್ರರಾವ್ ‘ಕಲಾತಪಸ್ವಿ ವೆಂಕಟಪ್ಪ’ ಎನ್ನುವ ಒಳ್ಳೆಯ ಪುಸ್ತಕ ಬರೆದಿದ್ದಾರೆ. ವೆಂಕಟಪ್ಪನವರನ್ನು ಭಿನ್ನ ನೆಲೆಯಲ್ಲಿ ಪರಿಚಯಿಸುವ ಮತ್ತೊಂದು ಪುಸ್ತಕ ಕೆ.ವಿ.ಸುಬ್ರಹ್ಮಣ್ಯಂ ಅವರ ‘ವೆಂಕಟಪ್ಪ: ಸಮಕಾಲೀನ ಪುನರವಲೋಕನ’ ಕೃತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಕಲಾತಪಸ್ವಿ ಕೆ. ವೆಂಕಟಪ್ಪ (1886-1965) ಒಬ್ಬರು. ತಮ್ಮ ಬಾಳನ್ನೇ ಕಲಿಕೆಗಾಗಿ ಮೀಸಲಿಟ್ಟ ಅವರು ಅಕ್ಷರಶಃ ಕಲಾತಪಸ್ವಿ. ಚಿತ್ರಕಲೆಯೊಂದಿಗೆ ಸಂಗೀತದಲ್ಲೂ ಅವರಿಗೆ ಪರಿಣತಿಯಿತ್ತು. ವೆಂಕಟಪ್ಪನವರ ವ್ಯಕ್ತಿತ್ವ ಅವರ ಕಲೆಯಷ್ಟೇ ಸ್ವಾರಸ್ಯವಾದುದು. ಮೂಗಿನ ತುದಿಯಲ್ಲೇ ಕೋಪ ಹೊಂದಿದ್ದ ಅವರನ್ನು ‘ಬೆಂಕಿ ನವಾಬ’ ಎನ್ನಲಾಗುತ್ತಿತ್ತು.<br /> <br /> ‘ಕಲೆಯೆ ಅವನಿಗೆ ಮಡದಿ, ಕಲೆಯೆ ಅವನಿಗೆ ಮಕ್ಕಳು’ ಎಂದು ಗುರು ಅವನೀಂದ್ರನಾಥರು ವೆಂಕಟಪ್ಪನವರ ವಿಚಾರವಾಗಿ ಹೇಳುತ್ತಿದ್ದರಂತೆ. ಮದುವೆಯಾದರೆ ಸಂಸಾರದ ನಿರ್ವಹಣೆಯಲ್ಲಿ ಕಲೆಯ ಕಡೆ ಗಮನ ಕಡಿಮೆಯಾದೀತೆಂಬ ಭಯದಿಂದ ಅವರು ಮದುವೆಯಾಗಲೇ ಇಲ್ಲ. ‘ನಾನು ಕಲಾವಿದನಲ್ಲ, ಕಲಾವಿದ್ಯಾರ್ಥಿಯಷ್ಟೇ!’ ಎನ್ನುವ ವಿನಯ ವೆಂಕಟಪ್ಪನವರದು. <br /> <br /> ಗೌಳಿಯಾಗಲಿ, ಕೂಲಿಯಾಳಾಗಲಿ, ಬಡಗಿಯಾಗಲಿ ತಮ್ಮ ಕಲಾಕೃತಿಗಳನ್ನು ನೋಡಬಯಸಿದರೆ ಎಲ್ಲವನ್ನೂ ತೋರಿಸಿ ವಿವರಿಸಿ ಕಳುಹಿಸುವ ತಾಳ್ಮೆ ವೆಂಕಟಪ್ಪನವರಿಗೆ ಇತ್ತು. ಶ್ರೀಮಂತಿಕೆಯ ತೋರಿಕೆಗೆ ಒಲಿದವರನ್ನು ಕಂಡರೆ ಅವರಿಗೆ ಆದರವೇನೂ ಇರಲಿಲ್ಲ. ಇಂಥ ವಿಶಿಷ್ಟ- ವಿಕ್ಷಿಪ್ತ ಕಲಾವಿದನ ಸಾಧನೆ-ಬದುಕಿನ ಕುರಿತು ಪ್ರೊ.ಸಾ.ಕೃ.ರಾಮಚಂದ್ರರಾವ್ ‘ಕಲಾತಪಸ್ವಿ ವೆಂಕಟಪ್ಪ’ ಎನ್ನುವ ಒಳ್ಳೆಯ ಪುಸ್ತಕ ಬರೆದಿದ್ದಾರೆ. ವೆಂಕಟಪ್ಪನವರನ್ನು ಭಿನ್ನ ನೆಲೆಯಲ್ಲಿ ಪರಿಚಯಿಸುವ ಮತ್ತೊಂದು ಪುಸ್ತಕ ಕೆ.ವಿ.ಸುಬ್ರಹ್ಮಣ್ಯಂ ಅವರ ‘ವೆಂಕಟಪ್ಪ: ಸಮಕಾಲೀನ ಪುನರವಲೋಕನ’ ಕೃತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>