<p>‘ನಿಮಗೆ ಮಂತ್ರಿ ಸ್ಥಾನ ಸಿಗಲೆಂದು ದೇವಸ್ಥಾನದಲ್ಲಿ ಉರುಳುಸೇವೆ ಮಾಡಿ, ಪೂಜೆ ಮಾಡಿಸಿದೆವು’ ಎಂದು ಬೆಂಬಲಿಗರು ಬಂದು ಶಾಸಕರಿಗೆ ಪ್ರಸಾದ ಕೊಟ್ಟರು.</p>.<p>‘ನೀವು ಮಂತ್ರಿಯಾದರೆ ಮುಡಿ ಕೊಡ್ತೀವಿ ಅಂತ ನಾವೆಲ್ಲಾ ದೇವರಲ್ಲಿ ಹರಕೆ ಮಾಡಿಕೊಂಡಿದ್ದೀವಿ ಸಾರ್’ ಎಂದ ಒಬ್ಬ.</p>.<p>ಶಾಸಕರು ನಿಟ್ಟುಸಿರುಬಿಟ್ಟರು. ‘ನಿಮ್ಮ ದೇವರು ಒಪ್ಪಿದರೆ ಸಾಕಾಗುವುದಿಲ್ಲ, ನಮ್ಮ ದೇವರು ಒಲಿದು ವರ ಕೊಡಬೇಕು ಕಣ್ರೋ’ ಅಂದರು.</p>.<p>‘ನಿಮ್ಮ ಕುಲದೇವರು ಯಾವುದು ಸಾರ್?’</p>.<p>‘ಹೈಕಮಾಂಡ್, ದೆಹಲಿ ದೇವರು!’</p>.<p>‘ಮತದಾರರೇ ದೇವರು ಎಂದು ಎಲೆಕ್ಷನ್ ಟೈಮಿನಲ್ಲಿ ಹೇಳಿದ್ರಲ್ಲಾ ಸಾರ್, ಪಕ್ಷ ಬದಲಾಯಿಸುವಂತೆ ಈಗ ದೇವರನ್ನೂ ಬದಲಾಯಿಸಿಬಿಟ್ಟಿರಾ?’</p>.<p>‘ಹಾಗಲ್ವೋ, ಶಾಸಕರಾಗಲು ಮತದಾರ ದೇವರು ಬೇಕು, ಮಂತ್ರಿ–ಮುಖ್ಯಮಂತ್ರಿ ಪದವಿ ಕೊಡೋದು ದೆಹಲಿ ದೇವರು ಕಣ್ರೋ’.</p>.<p>‘ದೆಹಲಿ ದೇವರಿಗೂ ಕಾಯಿ ಒಡೆದು, ಕರ್ಪೂರ ಹಚ್ಚಿ ಮಂಗಳಾರತಿ ಮಾಡಿ ಸಾರ್, ದೇವರು ವರ ಕೊಡ್ತಾರೆ’ ಎಂದ ಇನ್ನೊಬ್ಬ.</p>.<p>‘ದೆಹಲಿ ದೇವರನ್ನು ಕ್ಷೇತ್ರಕ್ಕೆ ಆಹ್ವಾನಿಸಿ ಔತಣ, ಅಭಿಷೇಕ, ಅದ್ದೂರಿ ಉತ್ಸವ ಮಾಡೋಣ’ ಮತ್ತೊಬ್ಬ ಹೇಳಿದ.</p>.<p>‘ಪೂಜೆ, ಉತ್ಸವಕ್ಕೆ ದೆಹಲಿ ದೇವರು ಒಲಿಯುವುದಿಲ್ಲ’ ಶಾಸಕರು ತಲೆ ಅಲ್ಲಾಡಿಸಿದರು.</p>.<p>‘ಹುಂಡಿಗೆ ದುಡ್ಡು ಹಾಕಿ ನಮ್ಮಿಂದ ತಪ್ಪುಗಳಾಗಿದ್ದರೆ ಕ್ಷಮಿಸು ಪರಮಾತ್ಮ ಎಂದು ನಾವು ನಮ್ಮ ದೇವರಿಗೆ ಕೋರಿಕೊಳ್ತೀವಿ. ನೀವೂ ಏನಾದರೂ ಲೋಪ–ಪಾಪ ಮಾಡಿದ್ದರೆ ತಪ್ಪುಕಾಣಿಕೆ, ಕಪ್ಪಕಾಣಿಕೆ ಕೊಟ್ಟು ಪರಿಹಾರ ಮಾಡಿಕೊಳ್ಳಿ ಸಾರ್’.</p>.<p>‘ಸದ್ಯಕ್ಕೆ ನಿತ್ಯ ನಿಷ್ಠೆಯಿಂದ ದೆಹಲಿ ದೇವರ ಧ್ಯಾನ, ಭಜನೆ ಮಾಡುತ್ತಿದ್ದೇನೆ...’</p>.<p>‘ದೆಹಲಿ ದೇವರು ನಿಮಗೆ ಮಂತ್ರಿ ಪದವಿ ಕೊಡದಿದ್ದರೆ ಏನು ಮಾಡ್ತೀರಿ?’</p>.<p>‘ತೆಪ್ಪಗಿರ್ತಿನಿ. ದೆಹಲಿ ದೇವರ ಎದುರು ಹಾಕಿಕೊಂಡು ಬಾಳಲಾಗುತ್ತೇನ್ರೋ... ಕೋಪ ಬಂದರೆ ಶಾಪ ಕೊಟ್ಟು ಬಿಡುತ್ತೆ!’ ಎಂದರು ಶಾಸಕರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಿಮಗೆ ಮಂತ್ರಿ ಸ್ಥಾನ ಸಿಗಲೆಂದು ದೇವಸ್ಥಾನದಲ್ಲಿ ಉರುಳುಸೇವೆ ಮಾಡಿ, ಪೂಜೆ ಮಾಡಿಸಿದೆವು’ ಎಂದು ಬೆಂಬಲಿಗರು ಬಂದು ಶಾಸಕರಿಗೆ ಪ್ರಸಾದ ಕೊಟ್ಟರು.</p>.<p>‘ನೀವು ಮಂತ್ರಿಯಾದರೆ ಮುಡಿ ಕೊಡ್ತೀವಿ ಅಂತ ನಾವೆಲ್ಲಾ ದೇವರಲ್ಲಿ ಹರಕೆ ಮಾಡಿಕೊಂಡಿದ್ದೀವಿ ಸಾರ್’ ಎಂದ ಒಬ್ಬ.</p>.<p>ಶಾಸಕರು ನಿಟ್ಟುಸಿರುಬಿಟ್ಟರು. ‘ನಿಮ್ಮ ದೇವರು ಒಪ್ಪಿದರೆ ಸಾಕಾಗುವುದಿಲ್ಲ, ನಮ್ಮ ದೇವರು ಒಲಿದು ವರ ಕೊಡಬೇಕು ಕಣ್ರೋ’ ಅಂದರು.</p>.<p>‘ನಿಮ್ಮ ಕುಲದೇವರು ಯಾವುದು ಸಾರ್?’</p>.<p>‘ಹೈಕಮಾಂಡ್, ದೆಹಲಿ ದೇವರು!’</p>.<p>‘ಮತದಾರರೇ ದೇವರು ಎಂದು ಎಲೆಕ್ಷನ್ ಟೈಮಿನಲ್ಲಿ ಹೇಳಿದ್ರಲ್ಲಾ ಸಾರ್, ಪಕ್ಷ ಬದಲಾಯಿಸುವಂತೆ ಈಗ ದೇವರನ್ನೂ ಬದಲಾಯಿಸಿಬಿಟ್ಟಿರಾ?’</p>.<p>‘ಹಾಗಲ್ವೋ, ಶಾಸಕರಾಗಲು ಮತದಾರ ದೇವರು ಬೇಕು, ಮಂತ್ರಿ–ಮುಖ್ಯಮಂತ್ರಿ ಪದವಿ ಕೊಡೋದು ದೆಹಲಿ ದೇವರು ಕಣ್ರೋ’.</p>.<p>‘ದೆಹಲಿ ದೇವರಿಗೂ ಕಾಯಿ ಒಡೆದು, ಕರ್ಪೂರ ಹಚ್ಚಿ ಮಂಗಳಾರತಿ ಮಾಡಿ ಸಾರ್, ದೇವರು ವರ ಕೊಡ್ತಾರೆ’ ಎಂದ ಇನ್ನೊಬ್ಬ.</p>.<p>‘ದೆಹಲಿ ದೇವರನ್ನು ಕ್ಷೇತ್ರಕ್ಕೆ ಆಹ್ವಾನಿಸಿ ಔತಣ, ಅಭಿಷೇಕ, ಅದ್ದೂರಿ ಉತ್ಸವ ಮಾಡೋಣ’ ಮತ್ತೊಬ್ಬ ಹೇಳಿದ.</p>.<p>‘ಪೂಜೆ, ಉತ್ಸವಕ್ಕೆ ದೆಹಲಿ ದೇವರು ಒಲಿಯುವುದಿಲ್ಲ’ ಶಾಸಕರು ತಲೆ ಅಲ್ಲಾಡಿಸಿದರು.</p>.<p>‘ಹುಂಡಿಗೆ ದುಡ್ಡು ಹಾಕಿ ನಮ್ಮಿಂದ ತಪ್ಪುಗಳಾಗಿದ್ದರೆ ಕ್ಷಮಿಸು ಪರಮಾತ್ಮ ಎಂದು ನಾವು ನಮ್ಮ ದೇವರಿಗೆ ಕೋರಿಕೊಳ್ತೀವಿ. ನೀವೂ ಏನಾದರೂ ಲೋಪ–ಪಾಪ ಮಾಡಿದ್ದರೆ ತಪ್ಪುಕಾಣಿಕೆ, ಕಪ್ಪಕಾಣಿಕೆ ಕೊಟ್ಟು ಪರಿಹಾರ ಮಾಡಿಕೊಳ್ಳಿ ಸಾರ್’.</p>.<p>‘ಸದ್ಯಕ್ಕೆ ನಿತ್ಯ ನಿಷ್ಠೆಯಿಂದ ದೆಹಲಿ ದೇವರ ಧ್ಯಾನ, ಭಜನೆ ಮಾಡುತ್ತಿದ್ದೇನೆ...’</p>.<p>‘ದೆಹಲಿ ದೇವರು ನಿಮಗೆ ಮಂತ್ರಿ ಪದವಿ ಕೊಡದಿದ್ದರೆ ಏನು ಮಾಡ್ತೀರಿ?’</p>.<p>‘ತೆಪ್ಪಗಿರ್ತಿನಿ. ದೆಹಲಿ ದೇವರ ಎದುರು ಹಾಕಿಕೊಂಡು ಬಾಳಲಾಗುತ್ತೇನ್ರೋ... ಕೋಪ ಬಂದರೆ ಶಾಪ ಕೊಟ್ಟು ಬಿಡುತ್ತೆ!’ ಎಂದರು ಶಾಸಕರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>