<p>ಹೊಸ ವರ್ಷದ ಸಂಭ್ರಮಾಚರಣೆಯ ವರದಿ ಮಾಡಿ ಸುಸ್ತಾಗಿ ಮಲಗಿದ್ದ ಟೀವಿ ಪತ್ರಕರ್ತ ತೆಪರೇಸಿಗೆ ಕನಸಲ್ಲಿ ದೇವರು ಪ್ರತ್ಯಕ್ಷನಾಗಿ, ‘ಅಯ್ಯಾ ತೆಪರೇಸಿ, ಹೊಸ ವರ್ಷದಲ್ಲಿ ನಿನಗೇನು ವರ ಬೇಕು ಕೇಳಿಕೋ’ ಎಂದಿತು.</p>.<p>‘ನನಗೇನೂ ಬೇಡ ತಂದೆ, ದಿನಾ ಟೀವೀಲಿ ಹೇಳಿದ್ದೇ ಹೇಳಿ ಸಾಕಾಗಿದೆ. ಈ ಸಿಎಂ ಕುರ್ಚಿ ಸಮಸ್ಯೆ ಯಾವಾಗ ಬಗೆಹರಿಸ್ತೀಯ? ವಿಜಯೇಂದ್ರ, ಯತ್ನಾಳ್ ಸಾಹೇಬ್ರನ್ನ ಯಾವಾಗ ಒಂದು ಮಾಡ್ತೀಯ? ರಷ್ಯಾ–ಉಕ್ರೇನ್ ಯುದ್ಧ ಯಾವಾಗ ನಿಲ್ಲಿಸ್ತೀಯ?’ ಎಂದು ಕೇಳಿದ ತೆಪರೇಸಿ.</p>.<p>‘ಜಗಳ ಬಗೆಹರಿಸೋಕೆ, ಯುದ್ಧ ನಿಲ್ಸೋಕೆ ನಾನು ಟ್ರಂಪ್ ಅಲ್ಲ, ಬೇರೇನಾದ್ರು ಕೇಳು...’</p>.<p>‘ಆಯ್ತು, ಈ ಮತ ಚೋರಿ ಆಗಿರೋದು ನಿಜಾನಾ?’</p>.<p>‘ಗೊತ್ತಿಲ್ಲ...’</p>.<p>‘ಡಿಕೆಶಿ ಸಾಹೇಬ್ರಿಗೆ ಎಷ್ಟು ದೇವರ ಬೆಂಬಲ ಇದೆ?’</p>.<p>‘ಗೊತ್ತಿಲ್ಲ...’</p>.<p>‘ಸಂಪುಟ ವಿಸ್ತರಣೆ ಯಾವಾಗ ಆಗಬಹುದು?’</p>.<p>‘ಗೊತ್ತಿಲ್ಲ...’</p>.<p>‘ಈ ರಾಜಕಾರಣಿಗಳು ಈಗ ಹೇಳಿದ್ದನ್ನ ಸ್ವಲ್ಪ ಹೊತ್ತಿಗೆ ನಾನಂಗೆ ಹೇಳೇ ಇಲ್ಲ, ನನ್ನ ಹೇಳಿಕೆ ತಿರುಚಿದಾರೆ ಅಂದುಬಿಡ್ತಾರೆ. ಅವರ ಮಾತಿನ ಒಳಾರ್ಥ, ಗೂಢಾರ್ಥ ತಿಳಿಯೋದು ಹೇಗೆ?’ ಎಂದು ತೆಪರೇಸಿ ಐನಾತಿ ಪ್ರಶ್ನೆ ಕೇಳಿದ.</p>.<p>‘ಅದು ನಿನಗಲ್ಲ, ನನಗೂ ಗೊತ್ತಾಗಲ್ಲ...’ ದೇವರು ಮಾರ್ಮಿಕವಾಗಿ ನಕ್ಕಿತು.</p>.<p>‘ಏನ್ ಕೇಳಿದ್ರೂ ಗೊತ್ತಿಲ್ಲ ಅಂತೀಯ. ಸರಿ, ನನ್ನ ಸ್ವಂತಕ್ಕೊಂದು ಮನೆ ಬೇಕು, ಕೊಡಿಸ್ತೀಯ?’ ತೆಪರೇಸಿ ಬೇಡಿಕೆ ಇಟ್ಟ.</p>.<p>‘ತಥಾಸ್ತು... ಮನೆ ಅರ್ಜೆಂಟ್ ಬೇಕಾ, ನಿಧಾನಕ್ಕಾದ್ರೂ ನಡೆಯುತ್ತಾ?’</p>.<p>‘ಅಂದ್ರೆ? ಏನ್ ನಿನ್ ಮಾತಿನ ಅರ್ಥ?’</p>.<p>‘ಅರ್ಜೆಂಟ್ ಬೇಕಾದ್ರೆ ಕೇಸಿಎಂ ಹತ್ರ ಹೋಗು, ಫಟ್ ಅಂತ ಸಿಗುತ್ತೆ...’</p>.<p>‘ನಂಗೆ ಡಿಸಿಎಂ ಗೊತ್ತು, ಇದ್ಯಾರು ಕೇಸಿಎಂ?’</p>.<p>‘ಕೇರಳ ಸಿಎಂ ಕಣಯ್ಯ, ದಡ್ಡ...’</p>.<p>ತೆಪರೇಸಿಗೆ ಫಕ್ಕನೆ ಎಚ್ಚರವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸ ವರ್ಷದ ಸಂಭ್ರಮಾಚರಣೆಯ ವರದಿ ಮಾಡಿ ಸುಸ್ತಾಗಿ ಮಲಗಿದ್ದ ಟೀವಿ ಪತ್ರಕರ್ತ ತೆಪರೇಸಿಗೆ ಕನಸಲ್ಲಿ ದೇವರು ಪ್ರತ್ಯಕ್ಷನಾಗಿ, ‘ಅಯ್ಯಾ ತೆಪರೇಸಿ, ಹೊಸ ವರ್ಷದಲ್ಲಿ ನಿನಗೇನು ವರ ಬೇಕು ಕೇಳಿಕೋ’ ಎಂದಿತು.</p>.<p>‘ನನಗೇನೂ ಬೇಡ ತಂದೆ, ದಿನಾ ಟೀವೀಲಿ ಹೇಳಿದ್ದೇ ಹೇಳಿ ಸಾಕಾಗಿದೆ. ಈ ಸಿಎಂ ಕುರ್ಚಿ ಸಮಸ್ಯೆ ಯಾವಾಗ ಬಗೆಹರಿಸ್ತೀಯ? ವಿಜಯೇಂದ್ರ, ಯತ್ನಾಳ್ ಸಾಹೇಬ್ರನ್ನ ಯಾವಾಗ ಒಂದು ಮಾಡ್ತೀಯ? ರಷ್ಯಾ–ಉಕ್ರೇನ್ ಯುದ್ಧ ಯಾವಾಗ ನಿಲ್ಲಿಸ್ತೀಯ?’ ಎಂದು ಕೇಳಿದ ತೆಪರೇಸಿ.</p>.<p>‘ಜಗಳ ಬಗೆಹರಿಸೋಕೆ, ಯುದ್ಧ ನಿಲ್ಸೋಕೆ ನಾನು ಟ್ರಂಪ್ ಅಲ್ಲ, ಬೇರೇನಾದ್ರು ಕೇಳು...’</p>.<p>‘ಆಯ್ತು, ಈ ಮತ ಚೋರಿ ಆಗಿರೋದು ನಿಜಾನಾ?’</p>.<p>‘ಗೊತ್ತಿಲ್ಲ...’</p>.<p>‘ಡಿಕೆಶಿ ಸಾಹೇಬ್ರಿಗೆ ಎಷ್ಟು ದೇವರ ಬೆಂಬಲ ಇದೆ?’</p>.<p>‘ಗೊತ್ತಿಲ್ಲ...’</p>.<p>‘ಸಂಪುಟ ವಿಸ್ತರಣೆ ಯಾವಾಗ ಆಗಬಹುದು?’</p>.<p>‘ಗೊತ್ತಿಲ್ಲ...’</p>.<p>‘ಈ ರಾಜಕಾರಣಿಗಳು ಈಗ ಹೇಳಿದ್ದನ್ನ ಸ್ವಲ್ಪ ಹೊತ್ತಿಗೆ ನಾನಂಗೆ ಹೇಳೇ ಇಲ್ಲ, ನನ್ನ ಹೇಳಿಕೆ ತಿರುಚಿದಾರೆ ಅಂದುಬಿಡ್ತಾರೆ. ಅವರ ಮಾತಿನ ಒಳಾರ್ಥ, ಗೂಢಾರ್ಥ ತಿಳಿಯೋದು ಹೇಗೆ?’ ಎಂದು ತೆಪರೇಸಿ ಐನಾತಿ ಪ್ರಶ್ನೆ ಕೇಳಿದ.</p>.<p>‘ಅದು ನಿನಗಲ್ಲ, ನನಗೂ ಗೊತ್ತಾಗಲ್ಲ...’ ದೇವರು ಮಾರ್ಮಿಕವಾಗಿ ನಕ್ಕಿತು.</p>.<p>‘ಏನ್ ಕೇಳಿದ್ರೂ ಗೊತ್ತಿಲ್ಲ ಅಂತೀಯ. ಸರಿ, ನನ್ನ ಸ್ವಂತಕ್ಕೊಂದು ಮನೆ ಬೇಕು, ಕೊಡಿಸ್ತೀಯ?’ ತೆಪರೇಸಿ ಬೇಡಿಕೆ ಇಟ್ಟ.</p>.<p>‘ತಥಾಸ್ತು... ಮನೆ ಅರ್ಜೆಂಟ್ ಬೇಕಾ, ನಿಧಾನಕ್ಕಾದ್ರೂ ನಡೆಯುತ್ತಾ?’</p>.<p>‘ಅಂದ್ರೆ? ಏನ್ ನಿನ್ ಮಾತಿನ ಅರ್ಥ?’</p>.<p>‘ಅರ್ಜೆಂಟ್ ಬೇಕಾದ್ರೆ ಕೇಸಿಎಂ ಹತ್ರ ಹೋಗು, ಫಟ್ ಅಂತ ಸಿಗುತ್ತೆ...’</p>.<p>‘ನಂಗೆ ಡಿಸಿಎಂ ಗೊತ್ತು, ಇದ್ಯಾರು ಕೇಸಿಎಂ?’</p>.<p>‘ಕೇರಳ ಸಿಎಂ ಕಣಯ್ಯ, ದಡ್ಡ...’</p>.<p>ತೆಪರೇಸಿಗೆ ಫಕ್ಕನೆ ಎಚ್ಚರವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>