<p><strong>ಮೊಳಕಾಲ್ಮುರು:</strong> ಉತ್ತಮ ಶಿಕ್ಷಕರಾಗಲು ಪ್ರಶಿಕ್ಷಣಾರ್ಥಿಗಳು ನಿರಂತರ ಕಲಿಕೆ ಮೈಗೂಡಿಸಿಕೊಳ್ಳಬೇಕು ಎಂದು ಶಿಕ್ಷಣ ಸಂಯೋಜಕ ಪಿ. ಮಂಜುನಾಥ್ ಸಲಹೆ ಮಾಡಿದರು.<br /> ತಾಲ್ಲೂಕಿನ ರಾಂಪುರದ ಲಕ್ಷ್ಮೀ ನರಸಿಂಹಸ್ವಾಮಿ ಡಿ.ಇಡಿ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ಚೈತನ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.<br /> ಕಲಿಕಾ ಅವಧಿಯಲ್ಲಿ ಆಯೋಜಿಸುವ ಕಾರ್ಯಾಗಾರ, ಸದುಪಯೋಗ ಮಾಡಿಕೊಳ್ಳಬೇಕು. ಶಿಕ್ಷಕರಾಗಿ ಕೆಲಸ ಮಾಡುವಾಗ ಇವುಗಳ ನಿಜವಾದ ಬೆಲೆ ತಿಳಿಯಲಿದೆ ಎಂದು ಹೇಳಿದರು.<br /> <br /> ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಆರ್. ಚಂದ್ರಶೇಖರ್, ಚೈತನ್ಯದಾಯಕ ಬೋಧನೆಗೆ ಆಸಕ್ತಿ, ಉತ್ಸಾಹವನ್ನು ಪ್ರಶಿಕ್ಷಣಾರ್ಥಿಗಳು ಹೊಂದಿರಬೇಕು ಎಂದರು.<br /> ಗುರುಪ್ರಸಾದ್, ಅಜೀಮುಲ್ಲಾ ಷರೀಫ್, ಮುಖ್ಯಶಿಕ್ಷಕ ಎಸ್.ವಿ. ಪ್ರಕಾಶ್, ಜಿ. ಹನುಮಂತರಾಯಪ್ಪ, ಕಾಸಲ ಯರ್ರಿಸ್ವಾಮಿ, ಎನ್. ಶ್ರೀಕಾಂತಮುನಿ, ಸೈಯದ್ ಅಹಮದ್ ಉಪಸ್ಥಿತರಿದ್ದರು.ಎ.ಟಿ. ಶಶಿಕಲಾ ಸ್ವಾಗತಿಸಿದರು, ಬಿ.ಟಿ. ಗೋವಿಂದಸ್ವಾಮಿ ನಿರೂಪಿಸಿದರು. ಎಸ್.ಎಂ. ವೀರೇಂದ್ರ ಕಾರ್ಯಕ್ರಮ ವಂದಿಸಿದರು.<br /> <br /> ರೈತ ಸಭೆ<br /> ಚಳ್ಳಕೆರೆ: ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ಫೆ. 7ರಂದು ಸೋಮವಾರ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ನೇತೃತ್ವದಲ್ಲಿ ರೈತರ ಸಭೆಯನ್ನು ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ಉತ್ತಮ ಶಿಕ್ಷಕರಾಗಲು ಪ್ರಶಿಕ್ಷಣಾರ್ಥಿಗಳು ನಿರಂತರ ಕಲಿಕೆ ಮೈಗೂಡಿಸಿಕೊಳ್ಳಬೇಕು ಎಂದು ಶಿಕ್ಷಣ ಸಂಯೋಜಕ ಪಿ. ಮಂಜುನಾಥ್ ಸಲಹೆ ಮಾಡಿದರು.<br /> ತಾಲ್ಲೂಕಿನ ರಾಂಪುರದ ಲಕ್ಷ್ಮೀ ನರಸಿಂಹಸ್ವಾಮಿ ಡಿ.ಇಡಿ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ಚೈತನ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.<br /> ಕಲಿಕಾ ಅವಧಿಯಲ್ಲಿ ಆಯೋಜಿಸುವ ಕಾರ್ಯಾಗಾರ, ಸದುಪಯೋಗ ಮಾಡಿಕೊಳ್ಳಬೇಕು. ಶಿಕ್ಷಕರಾಗಿ ಕೆಲಸ ಮಾಡುವಾಗ ಇವುಗಳ ನಿಜವಾದ ಬೆಲೆ ತಿಳಿಯಲಿದೆ ಎಂದು ಹೇಳಿದರು.<br /> <br /> ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಆರ್. ಚಂದ್ರಶೇಖರ್, ಚೈತನ್ಯದಾಯಕ ಬೋಧನೆಗೆ ಆಸಕ್ತಿ, ಉತ್ಸಾಹವನ್ನು ಪ್ರಶಿಕ್ಷಣಾರ್ಥಿಗಳು ಹೊಂದಿರಬೇಕು ಎಂದರು.<br /> ಗುರುಪ್ರಸಾದ್, ಅಜೀಮುಲ್ಲಾ ಷರೀಫ್, ಮುಖ್ಯಶಿಕ್ಷಕ ಎಸ್.ವಿ. ಪ್ರಕಾಶ್, ಜಿ. ಹನುಮಂತರಾಯಪ್ಪ, ಕಾಸಲ ಯರ್ರಿಸ್ವಾಮಿ, ಎನ್. ಶ್ರೀಕಾಂತಮುನಿ, ಸೈಯದ್ ಅಹಮದ್ ಉಪಸ್ಥಿತರಿದ್ದರು.ಎ.ಟಿ. ಶಶಿಕಲಾ ಸ್ವಾಗತಿಸಿದರು, ಬಿ.ಟಿ. ಗೋವಿಂದಸ್ವಾಮಿ ನಿರೂಪಿಸಿದರು. ಎಸ್.ಎಂ. ವೀರೇಂದ್ರ ಕಾರ್ಯಕ್ರಮ ವಂದಿಸಿದರು.<br /> <br /> ರೈತ ಸಭೆ<br /> ಚಳ್ಳಕೆರೆ: ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ಫೆ. 7ರಂದು ಸೋಮವಾರ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ನೇತೃತ್ವದಲ್ಲಿ ರೈತರ ಸಭೆಯನ್ನು ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>