<p>ಬೀದರ್: ಯಾವುದೇ ಜಾತಿ, ಮತ, ಪಂಥಗಳ ಭೇದ ಭಾವ ಇಲ್ಲದೆ ಬಸವಾಭಿಮಾನಿಗಳು ಹಾಗೂ ಸಾರ್ವಜನಿಕರು ಅಕ್ಟೋಬರ್ 9 ರಿಂದ ಮೂರು ದಿನಗಳ ಕಾಲ ಬಸವಕಲ್ಯಾಣದಲ್ಲಿ ನಡೆಯಲಿರುವ `ಕಲ್ಯಾಣ ಪರ್ವ~ದಲ್ಲಿ ಪಾಲ್ಗೊಳ್ಳಬೇಕು ಎಂದು ಬೆಂಗಳೂರಿನ ಕುಂಬಳಗೋಡದ ಚನ್ನಬಸವೇಶ್ವರ ಜ್ಞಾನಪೀಠದ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.<br /> <br /> ಕಲ್ಯಾಣ ಪರ್ವದ ಪ್ರಚಾರಾರ್ಥವಾಗಿ ಬೀದರ್ ತಾಲ್ಲೂಕಿನ ಸಿರ್ಸಿ (ಎ) ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. <br /> <br /> ಬಸವತತ್ವ ಹಾಗೂ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುವುದಕ್ಕಾಗಿ ಪ್ರತಿ ವರ್ಷ ಕಲ್ಯಾಣ ಪರ್ವ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಮಾತೆ ಮಹಾದೇವಿಯವರ ನೇತೃತ್ವದಲ್ಲಿ ವಿವಿಧ ಗೋಷ್ಠಿಗಳು ಜರುಗಲಿವೆ. ಕರ್ನಾಟಕ ಮಾತ್ರಲ್ಲದೆ, ವಿವಿಧ ರಾಜ್ಯಗಳ ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.<br /> <br /> ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ 108 ಅಡಿ ಎತ್ತರದ ಬಸವೇಶ್ವರರ ಪುತ್ಥಳಿ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಮಾತಾಜಿ ಅವರ ಮುಂದಾಳತ್ವದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.<br /> <br /> ಬಸವಧರ್ಮ ಇಂದು ವಿಶ್ವದಾದ್ಯಂತ ಬೆಳೆಯಬೇಕಿತ್ತು. ಆದರೆ, ವಿರಕ್ತ ಮಠಗಳ ಸ್ವಾರ್ಥದಿಂದಾಗಿ ನಿರೀಕ್ಷಿತ ಪ್ರಚಾರ ಆಗಿಲ್ಲ ಎಂದು ಪ್ರಮುಖರಾದ ಅಣ್ಣೆಪ್ಪ ರೊಡ್ಡಾ ಅಭಿಪ್ರಾಯಪಟ್ಟರು.<br /> <br /> ವಚನ ಸಾಹಿತ್ಯ ನೈತಿಕ ಸಾಹಿತ್ಯವಾಗಿದೆ ಎಂದು ಮನ್ನಳ್ಳಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಮಂಜುಳಾ ಹೇಳಿದರು.<br /> <br /> ನಾಮ ಬೇರೆ ಬೇರೆ ಆಗಿದ್ದರೂ ದೇವರು ಒಬ್ಬನೇ ಆಗಿದ್ದಾನೆ. ಆದ್ದರಿಂದ ಸೃಷ್ಟಿಕರ್ತ ಲಿಂಗದೇವರನ್ನು ಎಲ್ಲರು ಪೂಜಿಸಬೇಕು. ಲಿಂಗ ಧರಿಸಿದವರು ಕಡ್ಡಾಯವಾಗಿ ಮದ್ಯಪಾನ ಮತ್ತು ಧೂಮಪಾನದಿಂದ ದೂರ ಇರಬೇಕು ಎಂದು ಸಲಹೆ ಮಾಡಿದರು.<br /> <br /> ಬಸವಣ್ಣನವರ ವಚನಗಳಲ್ಲಿ ಸರ್ವ ಸಮಸ್ಯೆಗಳಿಗೂ ಪರಿಹಾರ ಇದೆ ಎಂದು ಪ್ರಮುಖರಾದ ಸುರೇಶ ಸ್ವಾಮಿ ನುಡಿದರು.<br /> <br /> ಪ್ರಮುಖರಾದ ಬಸವರಾಜ ಸಂಗಮದ, ರವಿಕಾಂತ ಬಿರಾದಾರ ಉಪಸ್ಥಿತರಿದ್ದರು. ಬಕ್ಕಪ್ಪ ಶೇರಿಕಾರ ಧ್ವಜಾರೋಹಣ ಮಾಡಿದರು. ಬಸವಕುಮಾರ ಚಟ್ನಳ್ಳಿ ವಚನ ಗಾಯನ ಪ್ರಸ್ತುತಪಡಿಸಿದರು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ಯಾವುದೇ ಜಾತಿ, ಮತ, ಪಂಥಗಳ ಭೇದ ಭಾವ ಇಲ್ಲದೆ ಬಸವಾಭಿಮಾನಿಗಳು ಹಾಗೂ ಸಾರ್ವಜನಿಕರು ಅಕ್ಟೋಬರ್ 9 ರಿಂದ ಮೂರು ದಿನಗಳ ಕಾಲ ಬಸವಕಲ್ಯಾಣದಲ್ಲಿ ನಡೆಯಲಿರುವ `ಕಲ್ಯಾಣ ಪರ್ವ~ದಲ್ಲಿ ಪಾಲ್ಗೊಳ್ಳಬೇಕು ಎಂದು ಬೆಂಗಳೂರಿನ ಕುಂಬಳಗೋಡದ ಚನ್ನಬಸವೇಶ್ವರ ಜ್ಞಾನಪೀಠದ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.<br /> <br /> ಕಲ್ಯಾಣ ಪರ್ವದ ಪ್ರಚಾರಾರ್ಥವಾಗಿ ಬೀದರ್ ತಾಲ್ಲೂಕಿನ ಸಿರ್ಸಿ (ಎ) ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. <br /> <br /> ಬಸವತತ್ವ ಹಾಗೂ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುವುದಕ್ಕಾಗಿ ಪ್ರತಿ ವರ್ಷ ಕಲ್ಯಾಣ ಪರ್ವ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಮಾತೆ ಮಹಾದೇವಿಯವರ ನೇತೃತ್ವದಲ್ಲಿ ವಿವಿಧ ಗೋಷ್ಠಿಗಳು ಜರುಗಲಿವೆ. ಕರ್ನಾಟಕ ಮಾತ್ರಲ್ಲದೆ, ವಿವಿಧ ರಾಜ್ಯಗಳ ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.<br /> <br /> ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ 108 ಅಡಿ ಎತ್ತರದ ಬಸವೇಶ್ವರರ ಪುತ್ಥಳಿ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಮಾತಾಜಿ ಅವರ ಮುಂದಾಳತ್ವದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.<br /> <br /> ಬಸವಧರ್ಮ ಇಂದು ವಿಶ್ವದಾದ್ಯಂತ ಬೆಳೆಯಬೇಕಿತ್ತು. ಆದರೆ, ವಿರಕ್ತ ಮಠಗಳ ಸ್ವಾರ್ಥದಿಂದಾಗಿ ನಿರೀಕ್ಷಿತ ಪ್ರಚಾರ ಆಗಿಲ್ಲ ಎಂದು ಪ್ರಮುಖರಾದ ಅಣ್ಣೆಪ್ಪ ರೊಡ್ಡಾ ಅಭಿಪ್ರಾಯಪಟ್ಟರು.<br /> <br /> ವಚನ ಸಾಹಿತ್ಯ ನೈತಿಕ ಸಾಹಿತ್ಯವಾಗಿದೆ ಎಂದು ಮನ್ನಳ್ಳಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಮಂಜುಳಾ ಹೇಳಿದರು.<br /> <br /> ನಾಮ ಬೇರೆ ಬೇರೆ ಆಗಿದ್ದರೂ ದೇವರು ಒಬ್ಬನೇ ಆಗಿದ್ದಾನೆ. ಆದ್ದರಿಂದ ಸೃಷ್ಟಿಕರ್ತ ಲಿಂಗದೇವರನ್ನು ಎಲ್ಲರು ಪೂಜಿಸಬೇಕು. ಲಿಂಗ ಧರಿಸಿದವರು ಕಡ್ಡಾಯವಾಗಿ ಮದ್ಯಪಾನ ಮತ್ತು ಧೂಮಪಾನದಿಂದ ದೂರ ಇರಬೇಕು ಎಂದು ಸಲಹೆ ಮಾಡಿದರು.<br /> <br /> ಬಸವಣ್ಣನವರ ವಚನಗಳಲ್ಲಿ ಸರ್ವ ಸಮಸ್ಯೆಗಳಿಗೂ ಪರಿಹಾರ ಇದೆ ಎಂದು ಪ್ರಮುಖರಾದ ಸುರೇಶ ಸ್ವಾಮಿ ನುಡಿದರು.<br /> <br /> ಪ್ರಮುಖರಾದ ಬಸವರಾಜ ಸಂಗಮದ, ರವಿಕಾಂತ ಬಿರಾದಾರ ಉಪಸ್ಥಿತರಿದ್ದರು. ಬಕ್ಕಪ್ಪ ಶೇರಿಕಾರ ಧ್ವಜಾರೋಹಣ ಮಾಡಿದರು. ಬಸವಕುಮಾರ ಚಟ್ನಳ್ಳಿ ವಚನ ಗಾಯನ ಪ್ರಸ್ತುತಪಡಿಸಿದರು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>