<p>ಕಾರವಾರ: ನಗರಸಭೆ ಕಳಪೆ ಕಾಮಗಾರಿ ಮಂಗಳವಾರ ಅನಾವರಣಗೊಂಡಿತು. ನಗರದ ಕಾಜುಭಾಗ ಆಕಾಶವಾಣಿ ಕೇಂದ್ರದ ಪಕ್ಕದಲ್ಲಿರುವ ಗಟಾರಿನ ಮೇಲೆ ಮುಚ್ಚಿದ ಲಿಂಟಲ್ಗಳು ಮರಿದು ಲಗೇಜ್ ಟೆಂಪೋ ಹಾಗೂ ರಾಜಹಂಸ ಬಸ್ಸಿನ ಚಕ್ರಗಳು ಗಟಾರಿನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಮಂಗಳವಾರ ನಡೆಯಿತು.<br /> <br /> ದಾವಣಗೆರೆಯಿಂದ ಬಂದ ರಾಜಹಂಸ ಬಸ್ ರಸ್ತೆ ಬದಿಯಲ್ಲಿ ನಿಲ್ಲಿಸಲು ಹೋದಾಗ ಬಸ್ನ ಮುಂದಿನ ಚಕ್ರ ಗಟಾರಿಗೆ ಅಳವಡಿಸಿದ್ದ ಲಿಂಟಲ್ ಮೇಲೇರುತ್ತಿದ್ದಂತೆ ಲಿಂಟಲ್ ಮುರಿದು ಚಕ್ರ ಗಟಾರಿಗೆ ಇಳಿಯಿತು.<br /> ಗಟಾರಿನಲ್ಲಿ ಸಿಕ್ಕುಹಾಕಿಕೊಂಡ ಬಸ್ಸನ್ನು ಮೇಲೆತ್ತಬೇಕಾದರೆ ಬಸ್ಸಿನ ಚಾಲಕ, ನಿರ್ವಾಹಕರು ಹರಸಾಹರ ಪಡೆಬೇಕಾಯಿತು.<br /> <br /> ಈ ಘಟನೆ ನಡೆದ ಕೇಲವೇ ಕ್ಷಣದಲ್ಲಿ ಸಿಮೆಂಟ್ ಬ್ಲಾಕ್ ತುಂಬಿದ ಗೂಡ್ಸ್ ಟೆಂಪೋ ರಸ್ತೆ ಬದಿಯಲ್ಲಿ ನಿಲ್ಲಿಸಲು ಹೋದಾಗ ಲಿಂಟಲ್ ತುಂಡಾಗಿ ಹಿಂದಿನ ಚಕ್ರ ಗಟಾರಿನಲ್ಲಿ ಸಿಕ್ಕಿಹಾಕಿಕೊಂಡಿತು.<br /> <br /> ಗಟಾರಿನ ಮೇಲೆ ಹಾಕಿರುವ ಲಿಂಟಲ್ಗಳು ಗಟ್ಟಿಯಾಗಿರಬಹುದು ಎನ್ನುವ ಕಾರಣದಿಂದ ಚಾಲಕರು ವಾಹನವನ್ನು ನಿಲ್ಲಿಸಲು ಹೋದರು. ಆದರೆ, ಭಾರ ತಾಳಲಾರದೇ ಮುರಿದು ಬಿತ್ತು. ಇದು ಕಾಮಗಾರಿಯ ಗುಣಮಟ್ಟಕ್ಕೆ ಕನ್ನಡಿಯಂತಾಗಿತ್ತು.<br /> <br /> ಕಾಜುಭಾಗ ಕ್ರಾಸ್ನಿಂದ ಗುರುಮಠದ ವರೆಗೆ ಒಂದು ತಿಂಗಳ ಅವಧಿಯಲ್ಲಿ ಒಟ್ಟು ಹತ್ತಕ್ಕೂ ಹೆಚ್ಚು ವಾಹನಗಳು ಈ ರೀತಿ ಪ್ರಕರಣಗಳು ನಡೆದಿವೆ ಎಂದು ಸ್ಥಳೀಯರು `ಪ್ರಜಾವಾಣಿ~ಗೆ ತಿಳಿಸಿದರು. <br /> <br /> ಬಸ್ ಹಾಗೂ ಟೆಂಪೋದ ಚಕ್ರಗಳು ಗಟಾರಿನಲ್ಲಿ ಸಿಕ್ಕಿಹಾಕಿಕೊಂಡ ಬಗ್ಗೆ ವೇದಿಕೆಯ ಪದಾಧಿಕಾರಿಯೊಬ್ಬರು ನಗರಸಭೆ ಸಿವಿಲ್ ವಿಭಾಗದ ಎಂಜಿನಿಯರ್ಗೆ ದೂರವಾಣಿ ಕರೆ ಮಾಡಿದರು.<br /> <br /> ಎಂಜಿನಿಯರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವ ಬದಲು ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಕರೆ ಮಾಡಿ, ವೇದಿಕೆ ಪದಾಧಿಕಾರಿಯ ಮೊಬೈಲ್ ನಂಬರ್ ನೀಡಿ ಹೊಂದಾಣಿಕೆ ಮಾಡಿಸಲು ಮುಂದಾದರೇ ಹೊರತು ಪರಿಶೀಲನೆ ನಡೆಸುವ ಗೋಜಿಗೆ ಹೋಗಲೇ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರವಾರ: ನಗರಸಭೆ ಕಳಪೆ ಕಾಮಗಾರಿ ಮಂಗಳವಾರ ಅನಾವರಣಗೊಂಡಿತು. ನಗರದ ಕಾಜುಭಾಗ ಆಕಾಶವಾಣಿ ಕೇಂದ್ರದ ಪಕ್ಕದಲ್ಲಿರುವ ಗಟಾರಿನ ಮೇಲೆ ಮುಚ್ಚಿದ ಲಿಂಟಲ್ಗಳು ಮರಿದು ಲಗೇಜ್ ಟೆಂಪೋ ಹಾಗೂ ರಾಜಹಂಸ ಬಸ್ಸಿನ ಚಕ್ರಗಳು ಗಟಾರಿನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಮಂಗಳವಾರ ನಡೆಯಿತು.<br /> <br /> ದಾವಣಗೆರೆಯಿಂದ ಬಂದ ರಾಜಹಂಸ ಬಸ್ ರಸ್ತೆ ಬದಿಯಲ್ಲಿ ನಿಲ್ಲಿಸಲು ಹೋದಾಗ ಬಸ್ನ ಮುಂದಿನ ಚಕ್ರ ಗಟಾರಿಗೆ ಅಳವಡಿಸಿದ್ದ ಲಿಂಟಲ್ ಮೇಲೇರುತ್ತಿದ್ದಂತೆ ಲಿಂಟಲ್ ಮುರಿದು ಚಕ್ರ ಗಟಾರಿಗೆ ಇಳಿಯಿತು.<br /> ಗಟಾರಿನಲ್ಲಿ ಸಿಕ್ಕುಹಾಕಿಕೊಂಡ ಬಸ್ಸನ್ನು ಮೇಲೆತ್ತಬೇಕಾದರೆ ಬಸ್ಸಿನ ಚಾಲಕ, ನಿರ್ವಾಹಕರು ಹರಸಾಹರ ಪಡೆಬೇಕಾಯಿತು.<br /> <br /> ಈ ಘಟನೆ ನಡೆದ ಕೇಲವೇ ಕ್ಷಣದಲ್ಲಿ ಸಿಮೆಂಟ್ ಬ್ಲಾಕ್ ತುಂಬಿದ ಗೂಡ್ಸ್ ಟೆಂಪೋ ರಸ್ತೆ ಬದಿಯಲ್ಲಿ ನಿಲ್ಲಿಸಲು ಹೋದಾಗ ಲಿಂಟಲ್ ತುಂಡಾಗಿ ಹಿಂದಿನ ಚಕ್ರ ಗಟಾರಿನಲ್ಲಿ ಸಿಕ್ಕಿಹಾಕಿಕೊಂಡಿತು.<br /> <br /> ಗಟಾರಿನ ಮೇಲೆ ಹಾಕಿರುವ ಲಿಂಟಲ್ಗಳು ಗಟ್ಟಿಯಾಗಿರಬಹುದು ಎನ್ನುವ ಕಾರಣದಿಂದ ಚಾಲಕರು ವಾಹನವನ್ನು ನಿಲ್ಲಿಸಲು ಹೋದರು. ಆದರೆ, ಭಾರ ತಾಳಲಾರದೇ ಮುರಿದು ಬಿತ್ತು. ಇದು ಕಾಮಗಾರಿಯ ಗುಣಮಟ್ಟಕ್ಕೆ ಕನ್ನಡಿಯಂತಾಗಿತ್ತು.<br /> <br /> ಕಾಜುಭಾಗ ಕ್ರಾಸ್ನಿಂದ ಗುರುಮಠದ ವರೆಗೆ ಒಂದು ತಿಂಗಳ ಅವಧಿಯಲ್ಲಿ ಒಟ್ಟು ಹತ್ತಕ್ಕೂ ಹೆಚ್ಚು ವಾಹನಗಳು ಈ ರೀತಿ ಪ್ರಕರಣಗಳು ನಡೆದಿವೆ ಎಂದು ಸ್ಥಳೀಯರು `ಪ್ರಜಾವಾಣಿ~ಗೆ ತಿಳಿಸಿದರು. <br /> <br /> ಬಸ್ ಹಾಗೂ ಟೆಂಪೋದ ಚಕ್ರಗಳು ಗಟಾರಿನಲ್ಲಿ ಸಿಕ್ಕಿಹಾಕಿಕೊಂಡ ಬಗ್ಗೆ ವೇದಿಕೆಯ ಪದಾಧಿಕಾರಿಯೊಬ್ಬರು ನಗರಸಭೆ ಸಿವಿಲ್ ವಿಭಾಗದ ಎಂಜಿನಿಯರ್ಗೆ ದೂರವಾಣಿ ಕರೆ ಮಾಡಿದರು.<br /> <br /> ಎಂಜಿನಿಯರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವ ಬದಲು ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಕರೆ ಮಾಡಿ, ವೇದಿಕೆ ಪದಾಧಿಕಾರಿಯ ಮೊಬೈಲ್ ನಂಬರ್ ನೀಡಿ ಹೊಂದಾಣಿಕೆ ಮಾಡಿಸಲು ಮುಂದಾದರೇ ಹೊರತು ಪರಿಶೀಲನೆ ನಡೆಸುವ ಗೋಜಿಗೆ ಹೋಗಲೇ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>