<p><strong>ಹರಪನಹಳ್ಳಿ (ದಾವಣಗೆರೆ ಜಿಲ್ಲೆ):</strong> ಕಳಪೆ ಗುಣಮಟ್ಟದ ಬಿಸಿಯೂಟ ಪೂರೈಕೆ ಹಾಗೂ ಶಿಕ್ಷಕರ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ತಾಲ್ಲೂಕಿನ ಯಡಿಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಪೋಷಕರು ಮತ್ತು ಮಕ್ಕಳು ಬುಧವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.<br /> <br /> ಮಧ್ಯಾಹ್ನದ ಬಿಸಿಯೂಟಕ್ಕೆ ಆಹಾರ ಧಾನ್ಯವನ್ನು ಶುಚಿಗೊಳಿಸದೆ ಅಡುಗೆ ತಯಾರಿಸುತ್ತಿರುವುದರಿಂದ ಊಟದಲ್ಲಿ ಎಷ್ಟೋ ಬಾರಿ ಹುಳುಗಳು ಕಾಣಿಸಿಕೊಂಡಿವೆ. <br /> <br /> ಸಾಂಬಾರ್ ತಯಾರಿಸಲು ಅಗತ್ಯಕ್ಕೆ ಅನುಗುಣವಾಗಿ ತರಕಾರಿ, ಎಣ್ಣೆ ಹಾಗೂ ದಿನಸಿಗಳನ್ನು ಪೂರೈಸುತ್ತಿಲ್ಲ. ಇಂತಹ ಕಳಪೆ ಆಹಾರ ಸೇವಿಸಲು ಹಿಂದೇಟು ಹಾಕುತ್ತಿರುವ ಮಕ್ಕಳು ಮನೆಯಲ್ಲಿನ ದನಗಳಿಗೆ ತಂದು ಸುರಿಯುತ್ತಾರೆ. <br /> <br /> ಕುಡಿಯುವ ನೀರು ಸಂಗ್ರಹಾಗಾರ (ಸಿಂಟೆಕ್ಸ್ ಟ್ಯಾಂಕ್)ಅನ್ನು ತೊಳೆಯದೆ ಇರುವುದರಿಂದ ಅದರಲ್ಲಿ ಹಲ್ಲಿಗಳು ಸತ್ತು ಬಿದ್ದಿವೆ. ಕಸ-ಕಡ್ಡಿ ಹಾಗೂ ಚಪ್ಪಲಿ ತುಂಬಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.<br /> <br /> ಇಲ್ಲಿನ ಬಹುತೇಕ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲ. ತಮ್ಮ ಇಚ್ಛಾನುಸಾರ ಶಾಲೆಗೆ ಬರುತ್ತಾರೆ. ಕರ್ತವ್ಯದ ಅವಧಿಯಲ್ಲಿಯೇ ಶಿಕ್ಷಕರೊಬ್ಬರು ಮಕ್ಕಳಿಂದ ಸಿಗರೇಟ್, ತಾಂಬೂಲ ಇತ್ಯಾದಿ ತರಿಸಿಕೊಳ್ಳುತ್ತಾರೆ. ಶಾಲಾ ಆವರಣದಲ್ಲಿಯೇ ಧೂಮಪಾನ ಮಾಡುತ್ತ, ಮೊಬೈಲ್ನಲ್ಲಿನ ಹಾಡು ಕೇಳುತ್ತಾ ಕಾಲ ಕಳೆಯುತ್ತಾರೆ ಎಂದು ದೂರಿದರು.<br /> <br /> ಶಾಲೆಯಲ್ಲಿ ಸರಿ ಇರುವ ಏಕೈಕ ಶೌಚಾಲಯವನ್ನು ಶಿಕ್ಷಕರು ಉಪಯೋಗಿಸುತ್ತಿರುವುದರಿಂದ ಮಕ್ಕಳು ರಸ್ತೆ ಬದಿ ಅವಲಂಬಿಸಬೇಕಾಗಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಅಪಘಾತವಾಗುವ ಸಂಭವವಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು. <br /> <br /> ಎಚ್. ಸಂತೋಷ್, ಎ. ಮಂಜಪ್ಪ, ಎಚ್. ಕಿರಣ್ಕುಮಾರ್, ಬಸಪ್ಪ, ಸಿದ್ದೇಶ್, ಹನುಮಂತಪ್ಪ, ಆನಂದ, ಪರಶುರಾಮಪ್ಪ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ (ದಾವಣಗೆರೆ ಜಿಲ್ಲೆ):</strong> ಕಳಪೆ ಗುಣಮಟ್ಟದ ಬಿಸಿಯೂಟ ಪೂರೈಕೆ ಹಾಗೂ ಶಿಕ್ಷಕರ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ತಾಲ್ಲೂಕಿನ ಯಡಿಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಪೋಷಕರು ಮತ್ತು ಮಕ್ಕಳು ಬುಧವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.<br /> <br /> ಮಧ್ಯಾಹ್ನದ ಬಿಸಿಯೂಟಕ್ಕೆ ಆಹಾರ ಧಾನ್ಯವನ್ನು ಶುಚಿಗೊಳಿಸದೆ ಅಡುಗೆ ತಯಾರಿಸುತ್ತಿರುವುದರಿಂದ ಊಟದಲ್ಲಿ ಎಷ್ಟೋ ಬಾರಿ ಹುಳುಗಳು ಕಾಣಿಸಿಕೊಂಡಿವೆ. <br /> <br /> ಸಾಂಬಾರ್ ತಯಾರಿಸಲು ಅಗತ್ಯಕ್ಕೆ ಅನುಗುಣವಾಗಿ ತರಕಾರಿ, ಎಣ್ಣೆ ಹಾಗೂ ದಿನಸಿಗಳನ್ನು ಪೂರೈಸುತ್ತಿಲ್ಲ. ಇಂತಹ ಕಳಪೆ ಆಹಾರ ಸೇವಿಸಲು ಹಿಂದೇಟು ಹಾಕುತ್ತಿರುವ ಮಕ್ಕಳು ಮನೆಯಲ್ಲಿನ ದನಗಳಿಗೆ ತಂದು ಸುರಿಯುತ್ತಾರೆ. <br /> <br /> ಕುಡಿಯುವ ನೀರು ಸಂಗ್ರಹಾಗಾರ (ಸಿಂಟೆಕ್ಸ್ ಟ್ಯಾಂಕ್)ಅನ್ನು ತೊಳೆಯದೆ ಇರುವುದರಿಂದ ಅದರಲ್ಲಿ ಹಲ್ಲಿಗಳು ಸತ್ತು ಬಿದ್ದಿವೆ. ಕಸ-ಕಡ್ಡಿ ಹಾಗೂ ಚಪ್ಪಲಿ ತುಂಬಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.<br /> <br /> ಇಲ್ಲಿನ ಬಹುತೇಕ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲ. ತಮ್ಮ ಇಚ್ಛಾನುಸಾರ ಶಾಲೆಗೆ ಬರುತ್ತಾರೆ. ಕರ್ತವ್ಯದ ಅವಧಿಯಲ್ಲಿಯೇ ಶಿಕ್ಷಕರೊಬ್ಬರು ಮಕ್ಕಳಿಂದ ಸಿಗರೇಟ್, ತಾಂಬೂಲ ಇತ್ಯಾದಿ ತರಿಸಿಕೊಳ್ಳುತ್ತಾರೆ. ಶಾಲಾ ಆವರಣದಲ್ಲಿಯೇ ಧೂಮಪಾನ ಮಾಡುತ್ತ, ಮೊಬೈಲ್ನಲ್ಲಿನ ಹಾಡು ಕೇಳುತ್ತಾ ಕಾಲ ಕಳೆಯುತ್ತಾರೆ ಎಂದು ದೂರಿದರು.<br /> <br /> ಶಾಲೆಯಲ್ಲಿ ಸರಿ ಇರುವ ಏಕೈಕ ಶೌಚಾಲಯವನ್ನು ಶಿಕ್ಷಕರು ಉಪಯೋಗಿಸುತ್ತಿರುವುದರಿಂದ ಮಕ್ಕಳು ರಸ್ತೆ ಬದಿ ಅವಲಂಬಿಸಬೇಕಾಗಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಅಪಘಾತವಾಗುವ ಸಂಭವವಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು. <br /> <br /> ಎಚ್. ಸಂತೋಷ್, ಎ. ಮಂಜಪ್ಪ, ಎಚ್. ಕಿರಣ್ಕುಮಾರ್, ಬಸಪ್ಪ, ಸಿದ್ದೇಶ್, ಹನುಮಂತಪ್ಪ, ಆನಂದ, ಪರಶುರಾಮಪ್ಪ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>