<p>ಅದೊಂದು ಪುಟ್ಟ ಊರು. ಹೆಸರು ಕಲ್ಲಳ್ಳಿ. ಎಲ್ಲಾ ಊರುಗಳ ಕೆಟ್ಟ ಚಾಳಿಗಳು ಇದ್ದೂ ಅಲ್ಲೊಬ್ಬ ಕೆಂಚನೆಂಬ ಅನಾಥ ಬಾಲಕನನ್ನು ಆ ಊರು ಸಾಕಿಕೊಂಡಿತ್ತು. ಅವನು ಊರ ಮುಂದಿನ ಕಲ್ಲೇಶ್ವರ ಗುಡಿಯ ಜಗುಲಿಯ ಮೇಲೆ ಮಲಗಿರುತ್ತಿದ್ದ. <br /> <br /> ಹಸಿವಾದಾಗ ಊರೊಳಗೆ ಭಿಕ್ಷೆ ಬೇಡಿ ಸಿಕ್ಕಿದ್ದನ್ನು ತಿಂದು ಮತ್ತೆ ಗುಡಿಯ ಮುಂದೆ ಬಂದು ಮಲಗುತ್ತಾನೆ. ಭಿಕ್ಷುಕನಾದ್ದರಿಂದ ಊರ ಯಾವ ಮಕ್ಕಳೂ ಅವನೊಂದಿಗೆ ಆಡಲು ಬರುವುದಿಲ್ಲ. ಹಾಗಾಗಿ ಮಲಗುವುದಷ್ಟೆ ಅವನ ಕಾಯಕವಾಗಿತ್ತು.<br /> <br /> ಇದ್ದಕ್ಕಿದ್ದ ಹಾಗೆ ದೀಪಾವಳಿಗೆ ಮುನ್ನ ಒಂದು ಸುಂಟರಗಾಳಿಯು ಬೀಸಿ ಕಲ್ಲಳ್ಳಿಯನ್ನು ಅಲ್ಲಾಡಿಸಿಬಿಟ್ಟಿತು. ಕ್ಷಣ ಹೊತ್ತು ನಿಂತು, ಜನಗಳು ಗಾಬರಿಯಾಗಿದ್ದನ್ನು ಕಂಡು, ಖುಷಿಯಲ್ಲಿ ಕುಣಿದಾಡಿ ರುಮು ರುಮು ಬೀಸಿ ಮುಂದಿನ ಊರಿಗೆ ಓಡಿತು. <br /> <br /> ಓಡುತ್ತಾ ಅದು ಗುಡಿಯ ಮುಂದೆ ಕಾಗೆಮರಿಯ ಎಸೆದು ಹೋಯಿತು. ಈ ರಾದ್ಧಾಂತಕ್ಕೆ ಕೆಂಚನಿಗೆ ಎಚ್ಚರವಾಗಿ ನೋಡಿದರೆ ಕಾಗೆಮರಿಯೊಂದು `ಭೂಮಿಗೆ ಬಂದ್ನಾ..... ಭೂಮಿಗೆ ಬಂದ್ನಾ....~ ಎಂದು ಕನವರಿಸುತ್ತಿತ್ತು. ಕೆಂಚ ಓಡಿಬಂದು ಮರಿಗೆ ನೀರು ಕುಡಿಸಿ ಉಪಚರಿಸಿದನು. <br /> <br /> ಸಲ್ಪ ಹೊತ್ತು ಕಳೆದ ಮೇಲೆ ಕಾಗೆಮರಿಗೆ ಎಚ್ಚರವಾಗಿ ಎದುರಿಗಿದ್ದ ಕೆಂಚನನ್ನು ಕಂಡು ಬೆಚ್ಚಿ, `ಏಯ್, ನೀನು ಯಾವ ಲೋಕದ ಜೀವಿ, ನಾನು ಯಾವ ಲೋಕದಲ್ಲಿದ್ದೇನೆ?~ ಎಂದು ಕೇಳಿತು. ಗಾಳಿಗೆ ತೂರಿಕೊಂಡು ಬಂದ ಮರಿಗೆ ತಲೆತಿರುಗಿರಬೇಕು ಎನಿಸಿ ಕೆಂಚ ಅದನ್ನೆತ್ತಿಕೊಂಡು ಗುಡಿಯ ಜಗುಲಿಗೆ ಬಂದ.<br /> <br /> `ಏಯ್ ಬಡಕಲು ಜೀವಿಯೇ ಹೇಳು ನೀನ್ಯಾರು? ಇದು ಯಾವ ಲೋಕ?~ ಎಂದು ಕಾಗೆಮರಿ ಕಿರುಚಿತು. ಇದು ಸೊಕ್ಕಿನ ಮರಿಯೇ ಇರಬೇಕು ಎಂದುಕೊಂಡ ಕೆಂಚ ಮರಿಯನ್ನು ಬಾಯಿಯ ಹತ್ತಿರ ತಂದು, `ಹೋ...~ ಅಂತ ಕಿರುಚಿದ. ಆ ಬೊಬ್ಬೆಗೆ ಮರಿ ಮತ್ತೆ ಪ್ರಜ್ಞೆ ತಪ್ಪಿ ಬಿತ್ತು. ಕೆಂಚ ನೀರು ತಂದು ಮರಿಯ ತಲೆಗೆ ಹಾಕಿ ನೇವರಿಸಿದ. ಅದಕ್ಕೆ ಪೂರ್ತಿ ಎಚ್ಚರವಾಯಿತು. ಸುತ್ತಲೂ ನೋಡಿ `ನಾನು ಭೂಮಿಗೆ ಬಂದಿದ್ದೇನೆ~ ಎಂದು ಕುಣಿಯತೊಡಗಿತು.<br /> <br /> ಕಾಗೆಮರಿಯ ನಡವಳಿಕೆ ಕಂಡು ಕೆಂಚನಿಗೆ ಆಶ್ಚರ್ಯವಾಯಿತು. ಇದಕ್ಕೆಲ್ಲೋ ಹುಚ್ಚು ಹಿಡಿದಿರಬೇಕು. ಇಲ್ಲದಿದ್ರೆ ಭೂಮಿಯ ಮೇಲಿದ್ದೇ ಭೂಮಿಗೆ ಬಂದೆ ಅನ್ನುತ್ತಲ್ಲ, ಅಂದುಕೊಂಡೇ ಮಾತಾಡಿಸಿದ.<br /> <br /> ಕೆಂಚ: ಕಾಗೆಮರಿ ಕಾಗೆಮರಿ ನೀನೆಲ್ಲಿಗೆ ಹೋಗಿದ್ದೆ?<br /> ಕಾಗೆಮರಿ: `ನೀನು ಶಾಲೆಗೆ ಹೋಗ್ತೀಯಾ?<br /> ಕೆಂಚ: ಇಲ್ಲ. ನಾನು ಬೇಡುವ ಹುಡುಗ.<br /> ಕಾಗೆಮರಿ: ಪಾಪ. ನಿಂಗೆ ಬಾಹ್ಯಾಕಾಶ ಅಂದ್ರೆ ಗೊತ್ತಾಗಲ್ಲ ಅಲ್ವಾ?<br /> ಕೆಂಚ: `ಇಲ್ಲ~<br /> <br /> ಕಾಗೆಮರಿ: ಹೌದಲ್ವ, ಇಂಥಾ ಪದಗಳು ಶಾಲೆಗೆ ಹೋದ್ರೆ ಮಾತ್ರ ಅರ್ಥವಾಗೋದು. ಛೆ! ಇವ್ನಿಗೆ ಹೇಗೆ ಹೇಳೋದು? ನಿನ್ನ ಹೆಸರೇನು?~<br /> <br /> ಕೆಂಚ: ನನ್ನ ಹೆಸರು ಕೆಂಚ.<br /> ಕಾಗೆಮರಿ: ಕೆಂಚ, ಆಕಾಶ, ಬಾನು ಗೊತ್ತಲ್ಲ. ನೋಡಲ್ಲಿ ನೀಲಿ ಬಯಲು ಮೇಲೆ. ದೂ....ರ. ಅಲ್ಲಿ ರಾತ್ರಿಗೆ ಚಂದ್ರ ಬರ್ತಾನೆ ಗೊತ್ತಲ್ಲ. ಅವ್ನಿರೋದು ದೂ.....ರ. ಅಮೆರಿಕಾಕಿಂತಾನೂ ದೂ.....ರ. ನಾನು ಅಲ್ಲಿಗೆ ಹೋಗಿದ್ದೆ.<br /> <br /> ಕೆಂಚನಿಗೆ ನಗು ಬಂತು. ಆದರೂ ತಡೆದುಕೊಂಡ. ಮರಿಗೆ ಇನ್ನೂ ರೆಕ್ಕೆ ಬಲಿತಿಲ್ಲ ಚಂದ್ರನ ಹತ್ರಕ್ಕೆ ಹೋಗಿತ್ತಂತೆ! ಕಾಗೆ ಹಾರ್ಸುತ್ತೆ ಕಾಗೆಮರಿ.<br /> <br /> ಕಾಗೆಮರಿ: ಕೆಂಚ, ಏನು ಯೋಚನೆ ಮಾಡ್ತಿದೀಯಾ?~<br /> ಕೆಂಚ: `ಏನಿಲ್ಲ. ಅಷ್ಟು ದೂರಕ್ಕೆ ನೀನೊಬ್ನೆ ಹೋಗಿದ್ದೀಯಾ?~<br /> ಕಾಗೆಮರಿ: ನೀನೊಬ್ನೆ ಅಲ್ಲ ನೀನೊಬ್ಳೆ ಅನ್ನು.<br /> ಕೆಂಚ: ನೀನೊಬ್ಳೆ ಹೇಗೋದೆ?<br /> <br /> ಕಾಗೆಮರಿ: ಅದಾ... ಸುಂಟರಗಾಳಿ ಮತ್ತೆ ನಾನು ಒಂದೇ ಸ್ಕೂಲಲ್ಲಿ ಓದೋದು. ಹಾಗಾಗಿ ಅದು ನನ್ನ ಫ್ರೆಂಡು. ನಾನು ಅದಕ್ಕೆ ಕೇಳ್ದೆ- ಸುಂಟರಗಾಳಿ ಈ ಭೂಮಿಯಲ್ಲಿ ಆಟ ಆಡಿ ಆಡೀ ಬೋರು. ಒಂದ್ಸಾರಿ ಚಂದ್ರಲೋಕಕ್ಕೆ ಹೋಗಿ ಆಟ ಆಡೋಣವಾ ಅಂದೆ. ಆಯ್ತು ಅಂತು. ನನ್ನ ಬೆನ್ನಿಗೆ ಕಟ್ಕೊಂಡು ಆಟ ಆಡೋಣ ಅಂತ ಅಲ್ಲಿಗೆ ಕರಕೊಂಡು ಹೋಯ್ತು. <br /> ಕೆಂಚ: ಆಟ ಆಡೋಕೆ ಚಂದ್ರಲೋಕಕ್ಕೆ ಹೋಗೋದಾ?<br /> <br /> ಕಾಗೆಮರಿ: ಹುಂ ಮತ್ತೆ. ಬೇಕು ಅಂದ್ರೆ ಹೋಗ್ಬೇಕು. ಸುಂಯ್ ಅಂತ ಹೋಗೋದು ಸುಂಯ್ ಅಂತ ಬರೋದು. ನಿಂಗೆ ಸುನೀತಾ ವಿಲಿಯಮ್ಸ ಗೊತ್ತಾ?<br /> ಕೆಂಚ: ಇಲ್ಲಕಾಗೆಮರಿ: `ಅಯ್ಯೋ... ಟ್ಟ್ಟ ಕಣೊ, ನೀನು ಶಾಲೆಗೆ ಹೋಗಿಲ್ಲ ಅಲ್ವಾ. ಅವರ ಬಗ್ಗೆ ನಿಂಗೆ ಗೊತ್ತಿರಲ್ಲ?<br /> <br /> ಎಲಾ ಕಾಗೆಮರಿ! ಏನೇನೋ ತಿಳ್ಕೊಂಡಿದೆಯಲ್ಲ ಇದು. ಆದ್ರೂ ಸುಳ್ಳು ಹೇಳ್ತಿದೆ ಅನ್ನಿಸಿತು ಕೆಂಚನಿಗೆ. ಸಂಶಯದಲ್ಲೇ ಅವನು ಕೇಳಿದ- `ನೀನು ನಿಜವಾಗಲೂ ಚಂದ್ರಲೋಕಕ್ಕೆ ಹೋಗಿದ್ಯಾ?~<br /> <br /> `ಹುಂ. ಬೇಕಿದ್ರೆ ಸುನೀತಾ ಮೇಡಂಗೆ ಕೇಳು. ಅವರು ರಾಕೆಟ್ಟಲ್ಲಿ ಹೋಗಿದ್ರು. ವಾಪಾಸ್ಸು ಬರ್ತಾ ಅವರು ಅಮೆರಿಕಾಕ್ಕೆ ಹೋದ್ರು. ನಾವು ವಾಪಾಸ್ಸು ಬರ್ತಿರಬೇಕಾದ್ರೆ ಈ ತಲೆಹರಟೆ ಸುಂಟರಗಾಳಿ ಯಾರೋ ಸಂಬಂಧಿಕರು ಸಿಕ್ರು ಅಂತ ತಪ್ಪಿಸಿಕೊಳ್ತು. ನಾನು ಇಲ್ಲಿ ಬಿದ್ದೋಗ್ಬಿಟ್ಟೆ~ ಅಂತು ಕಾಗೆಮರಿ.<br /> <br /> ಕೆಂಚ ಜೋರಾಗಿ ನಕ್ಕ. ಕಾಗೆಮರಿಗೆ ಕೋಪಬಂದು `ಅಯ್ಯೋ ಮೂದೇವಿ ಶಾಲೆಗೋಗಿ ನಾಕಕ್ಷರ ಕಲಿ. ಬಾಹ್ಯಾಕಾಶ, ಚಂದ್ರಲೋಕ, ರಾಕೆಟ್ಟು, ಸುನೀತಾ ವಿಲಿಯಮ್ಸ, ಸುಂಟರಗಾಳಿ, ಮತ್ತೆ ನೀನ್ಯಾರೆಂದು ಅರ್ಥವಾಗುತ್ತೆ. ನಗೋದು ನೋಡು~ ಎಂದು ಪುರ್ರನೆ ಹಾರಿಹೋಯಿತು.<br /> <br /> ಕೆಂಚ ಶಾಲೆ ಹುಡುಕಿಕೊಂಡು ಹೊರಟ. ಮೂರೂರ ಮುಂದೆ ಮುಳ್ಳೂರು ಆಚೆಗೆ ತಗಡೂರು, ಅದರಾಚೆಗೆ ದೂರ ದೂರ ಎಂಬೂರಲ್ಲಿ ಶಾಲೆಯಿತ್ತು. ಕುಂಡೆ ಕಾಣುವ ಹರಕಲು ಚಡ್ಡಿಯ ಕೆಂಚ ಶಾಲೆಗೆ ಬಂದರೆ ಅಲ್ಲಿನ ಹುಡುಗರು ಅವನನ್ನು ನೋಡಿ ನಗುತ್ತಿದ್ದವು. ಮೇಸ್ಟ್ರೊಬ್ಬರು ಬಂದು, `ಹೀಗೆಲ್ಲ ಶಾಲೆಗೆ ಬರಬಾರದು ಹೋಗಪ್ಪ~ ಎಂದರು. <br /> <br /> `ಸಾ, ನಾ ಶಾಲೆ ಕಲಿಬೇಕು~ ಎಂದ. <br /> `ನಿನ್ನ ತಂದೆ ತಾಯಿ ಯಾರು? ನಿನ್ನ ಜಾತಿ-ಧರ್ಮ ಯಾವುದು? ನಿನ್ನ ಮನೆ ಎಲ್ಲಿ? ನಿನ್ನ ಊರು ಯಾವುದು?~ ಎಂದೆಲ್ಲ ಕೇಳಿದರೆ ಕೆಂಚನಿಗೆ ಅವು ಯಾವುದೂ ಇರದೆ ಕಲ್ಲಳ್ಳಿಯ ಕಲ್ಲೇಶ್ವರ ಗುಡಿಯ ಜಗುಲಿ ಮಾತ್ರ ನೆನಪಾಗಿ, `ಸಾ ನಂಗೆ ಯಾರೂ ಇಲ್ಲ. ಆದ್ರೆ ನಾ ಅಕ್ಷರ ಕಲಿಬೇಕು~ ಅಂದ. <br /> <br /> `ಕೆಂಚ. ಭಾರತೀಯ~ ಎಂದು ಬರೆದುಕೊಂಡ ಮೇಸ್ಟ್ರು, ಸಮವಸ್ತ್ರ ನೀಡಿ ಕೆಂಚನನ್ನು ಶಾಲೆಗೆ ಸೇರಿಸಿಕೊಂಡರು. ಕೆಂಚ ಕಾಗೆಮರಿಗೆ ಅಲ್ಲಿಂದಲೇ ಕಯ್ಮುಗಿದ. </p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅದೊಂದು ಪುಟ್ಟ ಊರು. ಹೆಸರು ಕಲ್ಲಳ್ಳಿ. ಎಲ್ಲಾ ಊರುಗಳ ಕೆಟ್ಟ ಚಾಳಿಗಳು ಇದ್ದೂ ಅಲ್ಲೊಬ್ಬ ಕೆಂಚನೆಂಬ ಅನಾಥ ಬಾಲಕನನ್ನು ಆ ಊರು ಸಾಕಿಕೊಂಡಿತ್ತು. ಅವನು ಊರ ಮುಂದಿನ ಕಲ್ಲೇಶ್ವರ ಗುಡಿಯ ಜಗುಲಿಯ ಮೇಲೆ ಮಲಗಿರುತ್ತಿದ್ದ. <br /> <br /> ಹಸಿವಾದಾಗ ಊರೊಳಗೆ ಭಿಕ್ಷೆ ಬೇಡಿ ಸಿಕ್ಕಿದ್ದನ್ನು ತಿಂದು ಮತ್ತೆ ಗುಡಿಯ ಮುಂದೆ ಬಂದು ಮಲಗುತ್ತಾನೆ. ಭಿಕ್ಷುಕನಾದ್ದರಿಂದ ಊರ ಯಾವ ಮಕ್ಕಳೂ ಅವನೊಂದಿಗೆ ಆಡಲು ಬರುವುದಿಲ್ಲ. ಹಾಗಾಗಿ ಮಲಗುವುದಷ್ಟೆ ಅವನ ಕಾಯಕವಾಗಿತ್ತು.<br /> <br /> ಇದ್ದಕ್ಕಿದ್ದ ಹಾಗೆ ದೀಪಾವಳಿಗೆ ಮುನ್ನ ಒಂದು ಸುಂಟರಗಾಳಿಯು ಬೀಸಿ ಕಲ್ಲಳ್ಳಿಯನ್ನು ಅಲ್ಲಾಡಿಸಿಬಿಟ್ಟಿತು. ಕ್ಷಣ ಹೊತ್ತು ನಿಂತು, ಜನಗಳು ಗಾಬರಿಯಾಗಿದ್ದನ್ನು ಕಂಡು, ಖುಷಿಯಲ್ಲಿ ಕುಣಿದಾಡಿ ರುಮು ರುಮು ಬೀಸಿ ಮುಂದಿನ ಊರಿಗೆ ಓಡಿತು. <br /> <br /> ಓಡುತ್ತಾ ಅದು ಗುಡಿಯ ಮುಂದೆ ಕಾಗೆಮರಿಯ ಎಸೆದು ಹೋಯಿತು. ಈ ರಾದ್ಧಾಂತಕ್ಕೆ ಕೆಂಚನಿಗೆ ಎಚ್ಚರವಾಗಿ ನೋಡಿದರೆ ಕಾಗೆಮರಿಯೊಂದು `ಭೂಮಿಗೆ ಬಂದ್ನಾ..... ಭೂಮಿಗೆ ಬಂದ್ನಾ....~ ಎಂದು ಕನವರಿಸುತ್ತಿತ್ತು. ಕೆಂಚ ಓಡಿಬಂದು ಮರಿಗೆ ನೀರು ಕುಡಿಸಿ ಉಪಚರಿಸಿದನು. <br /> <br /> ಸಲ್ಪ ಹೊತ್ತು ಕಳೆದ ಮೇಲೆ ಕಾಗೆಮರಿಗೆ ಎಚ್ಚರವಾಗಿ ಎದುರಿಗಿದ್ದ ಕೆಂಚನನ್ನು ಕಂಡು ಬೆಚ್ಚಿ, `ಏಯ್, ನೀನು ಯಾವ ಲೋಕದ ಜೀವಿ, ನಾನು ಯಾವ ಲೋಕದಲ್ಲಿದ್ದೇನೆ?~ ಎಂದು ಕೇಳಿತು. ಗಾಳಿಗೆ ತೂರಿಕೊಂಡು ಬಂದ ಮರಿಗೆ ತಲೆತಿರುಗಿರಬೇಕು ಎನಿಸಿ ಕೆಂಚ ಅದನ್ನೆತ್ತಿಕೊಂಡು ಗುಡಿಯ ಜಗುಲಿಗೆ ಬಂದ.<br /> <br /> `ಏಯ್ ಬಡಕಲು ಜೀವಿಯೇ ಹೇಳು ನೀನ್ಯಾರು? ಇದು ಯಾವ ಲೋಕ?~ ಎಂದು ಕಾಗೆಮರಿ ಕಿರುಚಿತು. ಇದು ಸೊಕ್ಕಿನ ಮರಿಯೇ ಇರಬೇಕು ಎಂದುಕೊಂಡ ಕೆಂಚ ಮರಿಯನ್ನು ಬಾಯಿಯ ಹತ್ತಿರ ತಂದು, `ಹೋ...~ ಅಂತ ಕಿರುಚಿದ. ಆ ಬೊಬ್ಬೆಗೆ ಮರಿ ಮತ್ತೆ ಪ್ರಜ್ಞೆ ತಪ್ಪಿ ಬಿತ್ತು. ಕೆಂಚ ನೀರು ತಂದು ಮರಿಯ ತಲೆಗೆ ಹಾಕಿ ನೇವರಿಸಿದ. ಅದಕ್ಕೆ ಪೂರ್ತಿ ಎಚ್ಚರವಾಯಿತು. ಸುತ್ತಲೂ ನೋಡಿ `ನಾನು ಭೂಮಿಗೆ ಬಂದಿದ್ದೇನೆ~ ಎಂದು ಕುಣಿಯತೊಡಗಿತು.<br /> <br /> ಕಾಗೆಮರಿಯ ನಡವಳಿಕೆ ಕಂಡು ಕೆಂಚನಿಗೆ ಆಶ್ಚರ್ಯವಾಯಿತು. ಇದಕ್ಕೆಲ್ಲೋ ಹುಚ್ಚು ಹಿಡಿದಿರಬೇಕು. ಇಲ್ಲದಿದ್ರೆ ಭೂಮಿಯ ಮೇಲಿದ್ದೇ ಭೂಮಿಗೆ ಬಂದೆ ಅನ್ನುತ್ತಲ್ಲ, ಅಂದುಕೊಂಡೇ ಮಾತಾಡಿಸಿದ.<br /> <br /> ಕೆಂಚ: ಕಾಗೆಮರಿ ಕಾಗೆಮರಿ ನೀನೆಲ್ಲಿಗೆ ಹೋಗಿದ್ದೆ?<br /> ಕಾಗೆಮರಿ: `ನೀನು ಶಾಲೆಗೆ ಹೋಗ್ತೀಯಾ?<br /> ಕೆಂಚ: ಇಲ್ಲ. ನಾನು ಬೇಡುವ ಹುಡುಗ.<br /> ಕಾಗೆಮರಿ: ಪಾಪ. ನಿಂಗೆ ಬಾಹ್ಯಾಕಾಶ ಅಂದ್ರೆ ಗೊತ್ತಾಗಲ್ಲ ಅಲ್ವಾ?<br /> ಕೆಂಚ: `ಇಲ್ಲ~<br /> <br /> ಕಾಗೆಮರಿ: ಹೌದಲ್ವ, ಇಂಥಾ ಪದಗಳು ಶಾಲೆಗೆ ಹೋದ್ರೆ ಮಾತ್ರ ಅರ್ಥವಾಗೋದು. ಛೆ! ಇವ್ನಿಗೆ ಹೇಗೆ ಹೇಳೋದು? ನಿನ್ನ ಹೆಸರೇನು?~<br /> <br /> ಕೆಂಚ: ನನ್ನ ಹೆಸರು ಕೆಂಚ.<br /> ಕಾಗೆಮರಿ: ಕೆಂಚ, ಆಕಾಶ, ಬಾನು ಗೊತ್ತಲ್ಲ. ನೋಡಲ್ಲಿ ನೀಲಿ ಬಯಲು ಮೇಲೆ. ದೂ....ರ. ಅಲ್ಲಿ ರಾತ್ರಿಗೆ ಚಂದ್ರ ಬರ್ತಾನೆ ಗೊತ್ತಲ್ಲ. ಅವ್ನಿರೋದು ದೂ.....ರ. ಅಮೆರಿಕಾಕಿಂತಾನೂ ದೂ.....ರ. ನಾನು ಅಲ್ಲಿಗೆ ಹೋಗಿದ್ದೆ.<br /> <br /> ಕೆಂಚನಿಗೆ ನಗು ಬಂತು. ಆದರೂ ತಡೆದುಕೊಂಡ. ಮರಿಗೆ ಇನ್ನೂ ರೆಕ್ಕೆ ಬಲಿತಿಲ್ಲ ಚಂದ್ರನ ಹತ್ರಕ್ಕೆ ಹೋಗಿತ್ತಂತೆ! ಕಾಗೆ ಹಾರ್ಸುತ್ತೆ ಕಾಗೆಮರಿ.<br /> <br /> ಕಾಗೆಮರಿ: ಕೆಂಚ, ಏನು ಯೋಚನೆ ಮಾಡ್ತಿದೀಯಾ?~<br /> ಕೆಂಚ: `ಏನಿಲ್ಲ. ಅಷ್ಟು ದೂರಕ್ಕೆ ನೀನೊಬ್ನೆ ಹೋಗಿದ್ದೀಯಾ?~<br /> ಕಾಗೆಮರಿ: ನೀನೊಬ್ನೆ ಅಲ್ಲ ನೀನೊಬ್ಳೆ ಅನ್ನು.<br /> ಕೆಂಚ: ನೀನೊಬ್ಳೆ ಹೇಗೋದೆ?<br /> <br /> ಕಾಗೆಮರಿ: ಅದಾ... ಸುಂಟರಗಾಳಿ ಮತ್ತೆ ನಾನು ಒಂದೇ ಸ್ಕೂಲಲ್ಲಿ ಓದೋದು. ಹಾಗಾಗಿ ಅದು ನನ್ನ ಫ್ರೆಂಡು. ನಾನು ಅದಕ್ಕೆ ಕೇಳ್ದೆ- ಸುಂಟರಗಾಳಿ ಈ ಭೂಮಿಯಲ್ಲಿ ಆಟ ಆಡಿ ಆಡೀ ಬೋರು. ಒಂದ್ಸಾರಿ ಚಂದ್ರಲೋಕಕ್ಕೆ ಹೋಗಿ ಆಟ ಆಡೋಣವಾ ಅಂದೆ. ಆಯ್ತು ಅಂತು. ನನ್ನ ಬೆನ್ನಿಗೆ ಕಟ್ಕೊಂಡು ಆಟ ಆಡೋಣ ಅಂತ ಅಲ್ಲಿಗೆ ಕರಕೊಂಡು ಹೋಯ್ತು. <br /> ಕೆಂಚ: ಆಟ ಆಡೋಕೆ ಚಂದ್ರಲೋಕಕ್ಕೆ ಹೋಗೋದಾ?<br /> <br /> ಕಾಗೆಮರಿ: ಹುಂ ಮತ್ತೆ. ಬೇಕು ಅಂದ್ರೆ ಹೋಗ್ಬೇಕು. ಸುಂಯ್ ಅಂತ ಹೋಗೋದು ಸುಂಯ್ ಅಂತ ಬರೋದು. ನಿಂಗೆ ಸುನೀತಾ ವಿಲಿಯಮ್ಸ ಗೊತ್ತಾ?<br /> ಕೆಂಚ: ಇಲ್ಲಕಾಗೆಮರಿ: `ಅಯ್ಯೋ... ಟ್ಟ್ಟ ಕಣೊ, ನೀನು ಶಾಲೆಗೆ ಹೋಗಿಲ್ಲ ಅಲ್ವಾ. ಅವರ ಬಗ್ಗೆ ನಿಂಗೆ ಗೊತ್ತಿರಲ್ಲ?<br /> <br /> ಎಲಾ ಕಾಗೆಮರಿ! ಏನೇನೋ ತಿಳ್ಕೊಂಡಿದೆಯಲ್ಲ ಇದು. ಆದ್ರೂ ಸುಳ್ಳು ಹೇಳ್ತಿದೆ ಅನ್ನಿಸಿತು ಕೆಂಚನಿಗೆ. ಸಂಶಯದಲ್ಲೇ ಅವನು ಕೇಳಿದ- `ನೀನು ನಿಜವಾಗಲೂ ಚಂದ್ರಲೋಕಕ್ಕೆ ಹೋಗಿದ್ಯಾ?~<br /> <br /> `ಹುಂ. ಬೇಕಿದ್ರೆ ಸುನೀತಾ ಮೇಡಂಗೆ ಕೇಳು. ಅವರು ರಾಕೆಟ್ಟಲ್ಲಿ ಹೋಗಿದ್ರು. ವಾಪಾಸ್ಸು ಬರ್ತಾ ಅವರು ಅಮೆರಿಕಾಕ್ಕೆ ಹೋದ್ರು. ನಾವು ವಾಪಾಸ್ಸು ಬರ್ತಿರಬೇಕಾದ್ರೆ ಈ ತಲೆಹರಟೆ ಸುಂಟರಗಾಳಿ ಯಾರೋ ಸಂಬಂಧಿಕರು ಸಿಕ್ರು ಅಂತ ತಪ್ಪಿಸಿಕೊಳ್ತು. ನಾನು ಇಲ್ಲಿ ಬಿದ್ದೋಗ್ಬಿಟ್ಟೆ~ ಅಂತು ಕಾಗೆಮರಿ.<br /> <br /> ಕೆಂಚ ಜೋರಾಗಿ ನಕ್ಕ. ಕಾಗೆಮರಿಗೆ ಕೋಪಬಂದು `ಅಯ್ಯೋ ಮೂದೇವಿ ಶಾಲೆಗೋಗಿ ನಾಕಕ್ಷರ ಕಲಿ. ಬಾಹ್ಯಾಕಾಶ, ಚಂದ್ರಲೋಕ, ರಾಕೆಟ್ಟು, ಸುನೀತಾ ವಿಲಿಯಮ್ಸ, ಸುಂಟರಗಾಳಿ, ಮತ್ತೆ ನೀನ್ಯಾರೆಂದು ಅರ್ಥವಾಗುತ್ತೆ. ನಗೋದು ನೋಡು~ ಎಂದು ಪುರ್ರನೆ ಹಾರಿಹೋಯಿತು.<br /> <br /> ಕೆಂಚ ಶಾಲೆ ಹುಡುಕಿಕೊಂಡು ಹೊರಟ. ಮೂರೂರ ಮುಂದೆ ಮುಳ್ಳೂರು ಆಚೆಗೆ ತಗಡೂರು, ಅದರಾಚೆಗೆ ದೂರ ದೂರ ಎಂಬೂರಲ್ಲಿ ಶಾಲೆಯಿತ್ತು. ಕುಂಡೆ ಕಾಣುವ ಹರಕಲು ಚಡ್ಡಿಯ ಕೆಂಚ ಶಾಲೆಗೆ ಬಂದರೆ ಅಲ್ಲಿನ ಹುಡುಗರು ಅವನನ್ನು ನೋಡಿ ನಗುತ್ತಿದ್ದವು. ಮೇಸ್ಟ್ರೊಬ್ಬರು ಬಂದು, `ಹೀಗೆಲ್ಲ ಶಾಲೆಗೆ ಬರಬಾರದು ಹೋಗಪ್ಪ~ ಎಂದರು. <br /> <br /> `ಸಾ, ನಾ ಶಾಲೆ ಕಲಿಬೇಕು~ ಎಂದ. <br /> `ನಿನ್ನ ತಂದೆ ತಾಯಿ ಯಾರು? ನಿನ್ನ ಜಾತಿ-ಧರ್ಮ ಯಾವುದು? ನಿನ್ನ ಮನೆ ಎಲ್ಲಿ? ನಿನ್ನ ಊರು ಯಾವುದು?~ ಎಂದೆಲ್ಲ ಕೇಳಿದರೆ ಕೆಂಚನಿಗೆ ಅವು ಯಾವುದೂ ಇರದೆ ಕಲ್ಲಳ್ಳಿಯ ಕಲ್ಲೇಶ್ವರ ಗುಡಿಯ ಜಗುಲಿ ಮಾತ್ರ ನೆನಪಾಗಿ, `ಸಾ ನಂಗೆ ಯಾರೂ ಇಲ್ಲ. ಆದ್ರೆ ನಾ ಅಕ್ಷರ ಕಲಿಬೇಕು~ ಅಂದ. <br /> <br /> `ಕೆಂಚ. ಭಾರತೀಯ~ ಎಂದು ಬರೆದುಕೊಂಡ ಮೇಸ್ಟ್ರು, ಸಮವಸ್ತ್ರ ನೀಡಿ ಕೆಂಚನನ್ನು ಶಾಲೆಗೆ ಸೇರಿಸಿಕೊಂಡರು. ಕೆಂಚ ಕಾಗೆಮರಿಗೆ ಅಲ್ಲಿಂದಲೇ ಕಯ್ಮುಗಿದ. </p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>