<p><strong>ಲಖನೌ (ಐಎಎನ್ಎಸ್):</strong> ರಾಷ್ಟ್ರ ಮಟ್ಟದ ಫುಟ್ಬಾಲ್ ಹಾಗೂ ವಾಲಿಬಾಲ್ ಆಟಗಾರ್ತಿ ಸೋನು ಸಿನ್ಹಾ ಅವರು ರೈಲ್ವೆ ಅಪಘಾತದಲ್ಲಿ ತಮ್ಮ ಎಡಗಾಲು ಕಳೆದುಕೊಂಡಿದ್ದಾರೆ.<br /> ಸೋಮವಾರ ಪರೀಕ್ಷೆಗೆಂದು ನವದೆಹಲಿಗೆ ತೆರಳುತ್ತಿದ್ದಾಗ ಚೆನಾಟಿ-ಬರೇಲಿ ರೈಲು ನಿಲ್ದಾಣದ ನಡುವೆ ದುಷ್ಕರ್ಮಿಗಳು ಸೋನು ಅವರನ್ನು ಪದ್ಮಾವತಿ ಎಕ್ಸ್ಪ್ರೆಸ್ ರೈಲಿನಿಂದ ತಳ್ಳಿದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರ್ಯಾಕ್ನಲ್ಲಿ ಬಿದ್ದಾಗ ಇನ್ನೊಂದು ರೈಲು ಅವರ ಕಾಲಿನ ಮೇಲೆ ಹಾದು ಹೋಗಿದೆ.<br /> </p>.<p>ದುಷ್ಕರ್ಮಿಗಳು ರೈಲಿನಲ್ಲಿ ದರೋಡೆ ನಡೆಸಲು ಯತ್ನಿಸಿದಾಗ ಅದನ್ನು ಸೋನು ತಡೆಯಲು ಮುಂದಾದರು ಎನ್ನಲಾಗಿದೆ. 25 ವರ್ಷ ವಯಸ್ಸಿನ ಸೋನು ಲಖನೌದಲ್ಲಿ ರೈಲು ಹತ್ತಿದ್ದರು. ಅವರಿಗೆ ಕೇಂದ್ರ ಕ್ರೀಡಾ ಸಚಿವ 25 ಸಾವಿರ ರೂ. ಹಣ ಘೋಷಿಸಿದ್ದಾರೆ. ಅಷ್ಟು ಮಾತ್ರವಲ್ಲದೇ, ಈ ಸಂಬಂಧ ತನಿಖೆ ನಡೆಸುವಂತೆ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. <br /> ಗೌತಮಬುದ್ಧ ನಗರದ ಸೋನು ಕಾನೂನು ಪದವೀಧರೆ. ಅವರು ಸಿಐಎಸ್ಎಫ್ ಪರೀಕ್ಷೆ ಬರೆಯಲು ನವದೆಹಲಿಗೆ ತೆರಳುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ (ಐಎಎನ್ಎಸ್):</strong> ರಾಷ್ಟ್ರ ಮಟ್ಟದ ಫುಟ್ಬಾಲ್ ಹಾಗೂ ವಾಲಿಬಾಲ್ ಆಟಗಾರ್ತಿ ಸೋನು ಸಿನ್ಹಾ ಅವರು ರೈಲ್ವೆ ಅಪಘಾತದಲ್ಲಿ ತಮ್ಮ ಎಡಗಾಲು ಕಳೆದುಕೊಂಡಿದ್ದಾರೆ.<br /> ಸೋಮವಾರ ಪರೀಕ್ಷೆಗೆಂದು ನವದೆಹಲಿಗೆ ತೆರಳುತ್ತಿದ್ದಾಗ ಚೆನಾಟಿ-ಬರೇಲಿ ರೈಲು ನಿಲ್ದಾಣದ ನಡುವೆ ದುಷ್ಕರ್ಮಿಗಳು ಸೋನು ಅವರನ್ನು ಪದ್ಮಾವತಿ ಎಕ್ಸ್ಪ್ರೆಸ್ ರೈಲಿನಿಂದ ತಳ್ಳಿದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರ್ಯಾಕ್ನಲ್ಲಿ ಬಿದ್ದಾಗ ಇನ್ನೊಂದು ರೈಲು ಅವರ ಕಾಲಿನ ಮೇಲೆ ಹಾದು ಹೋಗಿದೆ.<br /> </p>.<p>ದುಷ್ಕರ್ಮಿಗಳು ರೈಲಿನಲ್ಲಿ ದರೋಡೆ ನಡೆಸಲು ಯತ್ನಿಸಿದಾಗ ಅದನ್ನು ಸೋನು ತಡೆಯಲು ಮುಂದಾದರು ಎನ್ನಲಾಗಿದೆ. 25 ವರ್ಷ ವಯಸ್ಸಿನ ಸೋನು ಲಖನೌದಲ್ಲಿ ರೈಲು ಹತ್ತಿದ್ದರು. ಅವರಿಗೆ ಕೇಂದ್ರ ಕ್ರೀಡಾ ಸಚಿವ 25 ಸಾವಿರ ರೂ. ಹಣ ಘೋಷಿಸಿದ್ದಾರೆ. ಅಷ್ಟು ಮಾತ್ರವಲ್ಲದೇ, ಈ ಸಂಬಂಧ ತನಿಖೆ ನಡೆಸುವಂತೆ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. <br /> ಗೌತಮಬುದ್ಧ ನಗರದ ಸೋನು ಕಾನೂನು ಪದವೀಧರೆ. ಅವರು ಸಿಐಎಸ್ಎಫ್ ಪರೀಕ್ಷೆ ಬರೆಯಲು ನವದೆಹಲಿಗೆ ತೆರಳುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>