<p><strong>ಶ್ರೀನಗರ (ಐಎಎನ್ಎಸ್</strong>): ಕಾಶ್ಮೀರದ ಕುಪ್ವಾರದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ಸೇನೆಯ ‘ಹೊಂಚುಕಾರ್ಯಾಚರಣೆ’ ಸಂದರ್ಭದಲ್ಲಿ ಗುಂಡು ತಗುಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಇದರ ಬೆನ್ನಲ್ಲೇ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸೇನಾ ಘಟಕದ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.<br /> <br /> ಚೋಗಲ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಸೇನೆಯ ಗುಂಡೇಟಿಗೆ ಬಲಿಯಾದ ಯುವಕನನ್ನು ಮನ್ಸೂರ್ ಅಹ್ಮದ್ ಮ್ಯಾಗ್ರೆ (22) ಎಂದು ಗುರುತಿಸಲಾಗಿದೆ.<br /> <br /> ಮನೆಯಲ್ಲಿದ್ದ ಮ್ಯಾಗ್ರೆಯನ್ನು ಹೊರಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದರಿಂದ ಮೃತಪಟ್ಟಿದ್ದಾನೆ ಎಂದು ಆತನ ಮನೆಯವರು ಆರೋಪಿಸಿದ್ದಾರೆ. <br /> <br /> ಘಟನೆಗೆ ಕಾರಣರಾದ ಸೈನಿಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶವವನ್ನು ಇಟ್ಟುಕೊಂಡು ರಸ್ತೆ ತಡೆ ನಡೆಸಿದರು. ಘಟನೆಗೆ ಕಾರಣವಾಗಿರುವ ಸೇನಾ ಘಟಕದ ವಿರುದ್ಧ ಮೊಕದ್ದಮೆ ಹೂಡುವ ಸ್ಪಷ್ಟ ಭರವಸೆಯನ್ನು ಹಿರಿಯ ಅಧಿಕಾರಿಗಳು ನೀಡಿದ ನಂತರ ಪರಿಸ್ಥಿತಿ ತಿಳಿಯಾಗಿ ಮೃತನ ಅಂತ್ಯಸಂಸ್ಕಾರ ನಡೆಯಿತು. <br /> <br /> ಈ ಮಧ್ಯೆ, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೂಲಕ ಘಟನೆಯ ತನಿಖೆಗೂ ಆದೇಶಿಸಿದ್ದು, ಎರಡು ವಾರಗಳಲ್ಲಿ ವರದಿ ನೀಡಲು ತಿಳಿಸಲಾಗಿದೆ. <br /> <br /> ಪ್ರತ್ಯೇಕತಾವಾದಿಗಳನ್ನು ಮಟ್ಟಹಾಕಲು ಸಿದ್ಧತೆ ನಡೆಸಿ ಸೈನಿಕರು ನಿರ್ದಿಷ್ಟ ಜಾಗವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿದ್ದರು.<br /> <br /> ಈ ಸಂದರ್ಭದಲ್ಲಿ ಇಬ್ಬರು ಆ ಪ್ರದೇಶದಲ್ಲಿ ಚಲಿಸುತ್ತಿದ್ದುದನ್ನು ಗಮನಿಸಿದ ಸೈನಿಕರು ಶರಣಾಗಲು ಸೂಚಿಸಿದರು. ಆದರೆ ಕತ್ತಲಿನಲ್ಲಿ ತಪ್ಪಿಸಿಕೊಳ್ಳಲು ಅವರು ಯತ್ನಿಸಿದಾಗ ಹಾರಿಸಿದ ಗುಂಡಿಗೆ ಮ್ಯಾಗ್ರೆ ಬಲಿಯಾದ ಎಂದು ಸೇನಾ ಮೂಲಗಳು ತಿಳಿಸಿವೆ.<br /> <br /> ಈ ವರ್ಷ ನಡೆದ ಮೊದಲ ಪ್ರಕರಣ ಇದಾಗಿದ್ದು, ಕಳೆದ ವರ್ಷ 100 ನಾಗರಿಕರು ಸೈನಿಕರ ಕಾರ್ಯಾಚರಣೆಗೆ ಬಲಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ (ಐಎಎನ್ಎಸ್</strong>): ಕಾಶ್ಮೀರದ ಕುಪ್ವಾರದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ಸೇನೆಯ ‘ಹೊಂಚುಕಾರ್ಯಾಚರಣೆ’ ಸಂದರ್ಭದಲ್ಲಿ ಗುಂಡು ತಗುಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಇದರ ಬೆನ್ನಲ್ಲೇ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸೇನಾ ಘಟಕದ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.<br /> <br /> ಚೋಗಲ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಸೇನೆಯ ಗುಂಡೇಟಿಗೆ ಬಲಿಯಾದ ಯುವಕನನ್ನು ಮನ್ಸೂರ್ ಅಹ್ಮದ್ ಮ್ಯಾಗ್ರೆ (22) ಎಂದು ಗುರುತಿಸಲಾಗಿದೆ.<br /> <br /> ಮನೆಯಲ್ಲಿದ್ದ ಮ್ಯಾಗ್ರೆಯನ್ನು ಹೊರಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದರಿಂದ ಮೃತಪಟ್ಟಿದ್ದಾನೆ ಎಂದು ಆತನ ಮನೆಯವರು ಆರೋಪಿಸಿದ್ದಾರೆ. <br /> <br /> ಘಟನೆಗೆ ಕಾರಣರಾದ ಸೈನಿಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶವವನ್ನು ಇಟ್ಟುಕೊಂಡು ರಸ್ತೆ ತಡೆ ನಡೆಸಿದರು. ಘಟನೆಗೆ ಕಾರಣವಾಗಿರುವ ಸೇನಾ ಘಟಕದ ವಿರುದ್ಧ ಮೊಕದ್ದಮೆ ಹೂಡುವ ಸ್ಪಷ್ಟ ಭರವಸೆಯನ್ನು ಹಿರಿಯ ಅಧಿಕಾರಿಗಳು ನೀಡಿದ ನಂತರ ಪರಿಸ್ಥಿತಿ ತಿಳಿಯಾಗಿ ಮೃತನ ಅಂತ್ಯಸಂಸ್ಕಾರ ನಡೆಯಿತು. <br /> <br /> ಈ ಮಧ್ಯೆ, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೂಲಕ ಘಟನೆಯ ತನಿಖೆಗೂ ಆದೇಶಿಸಿದ್ದು, ಎರಡು ವಾರಗಳಲ್ಲಿ ವರದಿ ನೀಡಲು ತಿಳಿಸಲಾಗಿದೆ. <br /> <br /> ಪ್ರತ್ಯೇಕತಾವಾದಿಗಳನ್ನು ಮಟ್ಟಹಾಕಲು ಸಿದ್ಧತೆ ನಡೆಸಿ ಸೈನಿಕರು ನಿರ್ದಿಷ್ಟ ಜಾಗವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿದ್ದರು.<br /> <br /> ಈ ಸಂದರ್ಭದಲ್ಲಿ ಇಬ್ಬರು ಆ ಪ್ರದೇಶದಲ್ಲಿ ಚಲಿಸುತ್ತಿದ್ದುದನ್ನು ಗಮನಿಸಿದ ಸೈನಿಕರು ಶರಣಾಗಲು ಸೂಚಿಸಿದರು. ಆದರೆ ಕತ್ತಲಿನಲ್ಲಿ ತಪ್ಪಿಸಿಕೊಳ್ಳಲು ಅವರು ಯತ್ನಿಸಿದಾಗ ಹಾರಿಸಿದ ಗುಂಡಿಗೆ ಮ್ಯಾಗ್ರೆ ಬಲಿಯಾದ ಎಂದು ಸೇನಾ ಮೂಲಗಳು ತಿಳಿಸಿವೆ.<br /> <br /> ಈ ವರ್ಷ ನಡೆದ ಮೊದಲ ಪ್ರಕರಣ ಇದಾಗಿದ್ದು, ಕಳೆದ ವರ್ಷ 100 ನಾಗರಿಕರು ಸೈನಿಕರ ಕಾರ್ಯಾಚರಣೆಗೆ ಬಲಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>