<p>ಗಿರೀಶ್ ಕಾಸರವಳ್ಳಿ ಕನ್ನಡದ ಹೊಸಅಲೆಯ ಚಿತ್ರಗಳ ಪ್ರಮುಖ ನಿರ್ದೇಶಕರು. ಅವರು ನಿರ್ದೇಶಿಸಿದ ಹಲವು ಚಿತ್ರಗಳು ಕನ್ನಡದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೂ ಮೈಲುಗಲ್ಲಾಗಿವೆ. <br /> <br /> ಜಾಗತಿಕ ಚಿತ್ರೋದ್ಯಮವೂ ಗುರುತಿಸುವಷ್ಟು ಖ್ಯಾತಿ ಗಳಿಸಿದ ನಿರ್ದೇಶಕ ಅವರು. ತೇಜಸ್ವಿ, ಭೈರಪ್ಪ, ವೈದೇಹಿ ಹೀಗೆ ಕನ್ನಡದ ಪ್ರಮುಖ ಸಾಹಿತಿಗಳ ಮಹತ್ವದ ಕೃತಿಗಳನ್ನು ಅವರು ದೃಶ್ಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. <br /> <br /> ಕಾಸರವಳ್ಳಿ ಅವರಿಗೆ ಪದ್ಮಶ್ರೀ ಮತ್ತು 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೆ.ವಿ. ಸುಬ್ಬಣ್ಣ ಆಪ್ತ ಸಮೂಹ, ಸುಚಿತ್ರ ಫಿಲಂ ಸೊಸೈಟಿ, ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಜೂನ್ 16ರ ವರೆಗೆ `ಗಿರೀಶ್ ಕಾಸರವಳ್ಳಿ ಚಲನಚಿತ್ರೋತ್ಸವ~ ನಡೆಯುತ್ತಿದೆ.<br /> <br /> ಶನಿವಾರ ಸಂಜೆ 6.30ಕ್ಕೆ `ಆಕ್ರಮಣ~, ಭಾನುವಾರ ಬೆಳಿಗ್ಗೆ 11ಕ್ಕೆ `ತಬರನ ಕತೆ~, ಸಂಜೆ 6.30ಕ್ಕೆ `ಮನೆ~ ಮತ್ತು ಸೋಮವಾರ ಸಂಜೆ 6.30ಕ್ಕೆ `ಕ್ರೌರ್ಯ~ ಚಿತ್ರ ಪ್ರದರ್ಶನ.<br /> <br /> <strong>ಸ್ಥಳ:</strong> ಕೆ..ವಿ. ಸುಬ್ಬಣ್ಣ ಆಪ್ತ ರಂಗ ಮಂದಿರ, 151, 7ನೇ ಅಡ್ಡರಸ್ತೆ, ಟೀಚರ್ಸ್ ಕಾಲೋನಿ 1ನೇ ಹಂತ, ದಯಾನಂದ ಸಾಗರ್ ಕಾಲೇಜು ಬಳಿ, ವಸುಧಾ ಭವನದ ಎದುರು. ದೂ: 92425 52323 <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಿರೀಶ್ ಕಾಸರವಳ್ಳಿ ಕನ್ನಡದ ಹೊಸಅಲೆಯ ಚಿತ್ರಗಳ ಪ್ರಮುಖ ನಿರ್ದೇಶಕರು. ಅವರು ನಿರ್ದೇಶಿಸಿದ ಹಲವು ಚಿತ್ರಗಳು ಕನ್ನಡದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೂ ಮೈಲುಗಲ್ಲಾಗಿವೆ. <br /> <br /> ಜಾಗತಿಕ ಚಿತ್ರೋದ್ಯಮವೂ ಗುರುತಿಸುವಷ್ಟು ಖ್ಯಾತಿ ಗಳಿಸಿದ ನಿರ್ದೇಶಕ ಅವರು. ತೇಜಸ್ವಿ, ಭೈರಪ್ಪ, ವೈದೇಹಿ ಹೀಗೆ ಕನ್ನಡದ ಪ್ರಮುಖ ಸಾಹಿತಿಗಳ ಮಹತ್ವದ ಕೃತಿಗಳನ್ನು ಅವರು ದೃಶ್ಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. <br /> <br /> ಕಾಸರವಳ್ಳಿ ಅವರಿಗೆ ಪದ್ಮಶ್ರೀ ಮತ್ತು 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೆ.ವಿ. ಸುಬ್ಬಣ್ಣ ಆಪ್ತ ಸಮೂಹ, ಸುಚಿತ್ರ ಫಿಲಂ ಸೊಸೈಟಿ, ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಜೂನ್ 16ರ ವರೆಗೆ `ಗಿರೀಶ್ ಕಾಸರವಳ್ಳಿ ಚಲನಚಿತ್ರೋತ್ಸವ~ ನಡೆಯುತ್ತಿದೆ.<br /> <br /> ಶನಿವಾರ ಸಂಜೆ 6.30ಕ್ಕೆ `ಆಕ್ರಮಣ~, ಭಾನುವಾರ ಬೆಳಿಗ್ಗೆ 11ಕ್ಕೆ `ತಬರನ ಕತೆ~, ಸಂಜೆ 6.30ಕ್ಕೆ `ಮನೆ~ ಮತ್ತು ಸೋಮವಾರ ಸಂಜೆ 6.30ಕ್ಕೆ `ಕ್ರೌರ್ಯ~ ಚಿತ್ರ ಪ್ರದರ್ಶನ.<br /> <br /> <strong>ಸ್ಥಳ:</strong> ಕೆ..ವಿ. ಸುಬ್ಬಣ್ಣ ಆಪ್ತ ರಂಗ ಮಂದಿರ, 151, 7ನೇ ಅಡ್ಡರಸ್ತೆ, ಟೀಚರ್ಸ್ ಕಾಲೋನಿ 1ನೇ ಹಂತ, ದಯಾನಂದ ಸಾಗರ್ ಕಾಲೇಜು ಬಳಿ, ವಸುಧಾ ಭವನದ ಎದುರು. ದೂ: 92425 52323 <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>