<p><strong>ಬೈಂದೂರು:</strong> 16ನೇ ಶತಮಾನದ ಕವಿ ಕನಕದಾಸರು ತಮ್ಮ ಬದುಕಿನಲ್ಲಿ ಜಾತಿ ವ್ಯವಸ್ಥೆ ನೀಡಿದ ನೋವನ್ನು ಅನುಭವಿಸಿದವರು. ಅವರ ಕಾವ್ಯ ಮತ್ತು ಕೀರ್ತನೆಗಳಲ್ಲಿ ಆ ನೋವಿನ ಆಳದ ದರ್ಶನವಾಗುತ್ತದೆ. ಆದ್ದರಿಂದಲೇ ಅವರು ಮಾನವ ಪ್ರೀತಿ, ಅಧ್ಯಾತ್ಮದ ಮಹತ್ವವನ್ನು ಪ್ರತಿಪಾದಿಸುತ್ತ ಜಾತಿ ವ್ಯವಸ್ಥೆಯ ವಿರುದ್ಧ ನಿಲುವು ತಳೆದರು ಎಂದು ಖ್ಯಾತ ವಿಮರ್ಶಕ ಡಾ.ಜಮೀರುಲ್ಲಾ ಷರೀಫ್ ಹೇಳಿದರು.<br /> <br /> ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಬೈಂದೂರಿನ ಸುರಭಿ ಸಾಂಸ್ಕೃತಿಕ ಸೇವಾ ಪ್ರತಿಷ್ಠಾನದ ಸಹಕಾರದೊಂದಿಗೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನಕದಾಸ ಉಪನ್ಯಾಸ–ವಾಚನ–ಗಾಯನದಿಂದ ಕೂಡಿದ ’ಮುತ್ತು ಬಂದಿದೆ ಕೇರಿಗೆ’ ರಸಗ್ರಹಣ ಶಿಬಿರದಲ್ಲಿ ಉಪನ್ಯಾಸ ಮಾಡಿದರು.<br /> <br /> ಕನಕದಾಸರು ದಂಡನಾಯಕರಾಗಿ ಯುದ್ಧದ ಹಿಂಸೆ, ದುರಂತವನ್ನು ಕಂಡು, ಶಾಂತಿಯ ಅಗತ್ಯ ಅರಿತು ಸಂತರಾಗಿ, ದಾಸರಾಗಿ ಪರಿವರ್ತಿತರಾದರು. ಅವರ ಕಾವ್ಯ ಅವೆಲ್ಲದರ ಪ್ರತಿಬಿಂಬ ಎಂದು ಅವರು ಹೇಳಿದರು.<br /> <br /> ಕಾಲೇಜಿನ ಪ್ರಾಚಾರ್ಯ ಪ್ರೊ.ಅನಿಲ್ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯಂ ಶಿಬಿರವನ್ನು ಉದ್ಘಾಟಿಸಿದರು. ಸಮೂಹ ಶಿಕ್ಷಣ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣ ದೇವಾಡಿಗ ಸ್ವಾಗತಿಸಿದರು. ಸುರಭಿಯ ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತನಾಡಿದರು. ಬಾಲಸುಬ್ರಹ್ಮಣ್ಯಂ ತಂಡದಿಂದ ಕನಕ ಕೀರ್ತನೆಗಳ ಗಾಯನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೈಂದೂರು:</strong> 16ನೇ ಶತಮಾನದ ಕವಿ ಕನಕದಾಸರು ತಮ್ಮ ಬದುಕಿನಲ್ಲಿ ಜಾತಿ ವ್ಯವಸ್ಥೆ ನೀಡಿದ ನೋವನ್ನು ಅನುಭವಿಸಿದವರು. ಅವರ ಕಾವ್ಯ ಮತ್ತು ಕೀರ್ತನೆಗಳಲ್ಲಿ ಆ ನೋವಿನ ಆಳದ ದರ್ಶನವಾಗುತ್ತದೆ. ಆದ್ದರಿಂದಲೇ ಅವರು ಮಾನವ ಪ್ರೀತಿ, ಅಧ್ಯಾತ್ಮದ ಮಹತ್ವವನ್ನು ಪ್ರತಿಪಾದಿಸುತ್ತ ಜಾತಿ ವ್ಯವಸ್ಥೆಯ ವಿರುದ್ಧ ನಿಲುವು ತಳೆದರು ಎಂದು ಖ್ಯಾತ ವಿಮರ್ಶಕ ಡಾ.ಜಮೀರುಲ್ಲಾ ಷರೀಫ್ ಹೇಳಿದರು.<br /> <br /> ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಬೈಂದೂರಿನ ಸುರಭಿ ಸಾಂಸ್ಕೃತಿಕ ಸೇವಾ ಪ್ರತಿಷ್ಠಾನದ ಸಹಕಾರದೊಂದಿಗೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನಕದಾಸ ಉಪನ್ಯಾಸ–ವಾಚನ–ಗಾಯನದಿಂದ ಕೂಡಿದ ’ಮುತ್ತು ಬಂದಿದೆ ಕೇರಿಗೆ’ ರಸಗ್ರಹಣ ಶಿಬಿರದಲ್ಲಿ ಉಪನ್ಯಾಸ ಮಾಡಿದರು.<br /> <br /> ಕನಕದಾಸರು ದಂಡನಾಯಕರಾಗಿ ಯುದ್ಧದ ಹಿಂಸೆ, ದುರಂತವನ್ನು ಕಂಡು, ಶಾಂತಿಯ ಅಗತ್ಯ ಅರಿತು ಸಂತರಾಗಿ, ದಾಸರಾಗಿ ಪರಿವರ್ತಿತರಾದರು. ಅವರ ಕಾವ್ಯ ಅವೆಲ್ಲದರ ಪ್ರತಿಬಿಂಬ ಎಂದು ಅವರು ಹೇಳಿದರು.<br /> <br /> ಕಾಲೇಜಿನ ಪ್ರಾಚಾರ್ಯ ಪ್ರೊ.ಅನಿಲ್ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯಂ ಶಿಬಿರವನ್ನು ಉದ್ಘಾಟಿಸಿದರು. ಸಮೂಹ ಶಿಕ್ಷಣ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣ ದೇವಾಡಿಗ ಸ್ವಾಗತಿಸಿದರು. ಸುರಭಿಯ ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತನಾಡಿದರು. ಬಾಲಸುಬ್ರಹ್ಮಣ್ಯಂ ತಂಡದಿಂದ ಕನಕ ಕೀರ್ತನೆಗಳ ಗಾಯನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>